ಹಾಡು ಪಾಡು

ಜಾತಿಬೇಲಿಯ ಕಳಚಿಬಿಡುವ ಮಾರಿಹಬ್ಬಗಳು

ಅಜಯ್ ಕುಮಾರ್ ಎಂ.ಗುಂಬಳ್ಳಿ

ಮಾರಿಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿಕೊಂಡು ಹಬ್ಬ ಮಾಡುತ್ತಾರೆ

ಈಗ ಚಾಮರಾಜನಗರದ ಊರುಗಳಲ್ಲಿ ಹಬ್ಬಗಳ ಸುಗ್ಗಿ ಕಾಲ. ಸ್ಥಳೀಯ ದೇವರನ್ನು ಪೂಜಿಸುವ ಅಪಾರಸಾಂಸ್ಕ ತಿಕ ಆಚರಣೆಗಳಿವೆ. ಕೆಲವು ಊರುಗಳಲ್ಲಿ ಕುರುಬನ ಕಟ್ಟೆ ಕಂಡಾಯ ತರಿಸಿ ಹಬ್ಬ ಮಾಡುತ್ತಾರೆ.

ಕೊಂಡೋತ್ಸವ ಸಾಮಾನ್ಯವಾಗಿ ಇದ್ದೇ ಇದೆ. ಕೆಲವರು ಸಿಹಿ ಊಟ, ಮಾಂಸದ ಊಟ, ಕೆಲವು ಕಡೆ ಎರಡನ್ನೂ ಮಾಡಿ ನೆಂಟರಿಷ್ಟರಿಗೆ ಬಡಿಸುತ್ತಾರೆ. ಕುರಿ, ಕೋಳಿ, ಕೋಣ, ಆಡು, ದನದ ಮಾಂಸವೂ ದೇವರಿಗೆ ನೈವೇದ್ಯವಾಗಿ ಸ್ವೀಕರಿಸಲ್ಪಡುತ್ತದೆ. ಮಾರೀರ ಗಂಡ ಎನಿಸಿರುವ ಶ್ರೀ ಮಂಟೇ ಸ್ವಾಮಿಗೆ ಭಕ್ತರು ಇಟ್ಟ ಯಾವುದೇ ಬಗೆಯ ಆಹಾರ ನೈವೇದ್ಯ ಆಗುತ್ತದೆ. ಮೊದಲೆಲ್ಲ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತಾದಿಗಳೇ ಬುತ್ತಿ – ಬಾಡು ಕಟ್ಟಿಕೊಂಡು ಹೋಗುತ್ತಿದ್ದರಂತೆ. ಊಟಕ್ಕೆ ಯಾವುದೇ ಕಟ್ಟಿಲ್ಲ ಎಂದು ಶ್ರೀ ಮಾದಪ್ಪನೆ ಹೇಳಿದ್ದಾನೆ ಎಂದು ಹಿರಿ ತಲೆಗಳು ಹೇಳಿದ್ದನ್ನು ಕೇಳಿದ್ದೇನೆ.

ಚಾಮರಾಜನಗರ ಜಿಲ್ಲೆಯ ಹೆಚ್ಚಿನ ಊರುಗಳಲ್ಲಿ ಯಾವುದೇ ಹಬ್ಬಕ್ಕೆ ಮಾಂಸ ದಡುಗೆ ಕಡ್ಡಾಯ. ಜಿಲ್ಲೆಯಲ್ಲಿ ನೀಲಗಾರರು, ಬಿಳಿಗಿರಿರಂಗನ ದಾಸಯ್ಯನವರು, ಮಾದಪ್ಪನ ಗುಡ್ಡರು, ಪಾರ್ವತಿ ಗುಡ್ಡರು ಅಂತ ಇದ್ದಾರೆ. ಮಂಟೇಸ್ವಾಮಿ ಮತ್ತು ಬಿಳಿಗಿರಿರಂಗಯ್ಯನಿಗೆ ಎಡೆಗೆ ಮಾಂಸ ಇಡಲೇಬೇಕು. ಹೆಂಡ ಬಾಡು, ಭಂಗಿಸೊಪ್ಪು ಪ್ರಿಯ ದೇವರೇ ಇಲ್ಲಿರುವ ಜನರ ಒಕ್ಕಲು ಪಡೆದಿರುವುದು. ಶಿವರಾತ್ರಿಗೆ, ಯುಗಾದಿಗೆ ಮಾತ್ರ ಶಾಖಾಹಾರಿ ಎಡೆ ಸಿದ್ಧವಾಗುತ್ತದೆ. ಅದು ಬಿಟ್ಟರೆ ಗೌರಿ ಹಬ್ಬದ ಹಿಂದಿನ ದಿನವೂ ಇಲ್ಲಿ ಮಾಂಸದೂಟವೇ. ಇಷ್ಟೆಲ್ಲ ಇದ್ದರೂ ಜನರು ಎಂದೂ ಶಿಸ್ತು ತಪ್ಪಿಲ್ಲ.

ಜನಪದದ ಬೇರು ಇರುವುದರಿಂದ ಆಚರಣೆಗಳಿಗೆ ಒಂದು ಅರ್ಥ ಇದೆ. ವೈಜ್ಞಾನಿಕಕಾರಣವೂ ಇದೆ. ಕೆಲವು ಮೂಢ ನಂಬಿಕೆಗಳು ಸಹ ಇವೆ. ಹಬ್ಬವೆಂದರೆ ಎಲ್ಲಾ ಕೋಮಿನ ಜನ ಸೇರಿ ನಡೆಸುತ್ತಾರೆ. ಅವರವರೇ ದೇವರ ಕೈಂಕರ್ಯಗಳನ್ನು ವಿಭಾಗಿಸಿ ಕೊಂಡು ಹಬ್ಬ ಮಾಡುತ್ತಾರೆ. ಜಾತ್ರೆಗೆ ಸೌದೆ ತರುವುದರಿಂದ ಹಿಡಿದು ಬರುವ ಭಕ್ತಾದಿಗಳಿಗೆ ಪ್ರಸಾದ ತಯಾರಿಸುವವರೆಗೆ ಕೆಲಸಗಳು ಹಂಚಿಕೆಯಾಗುತ್ತವೆ.

‘ಮಾರಿಹಬ್ಬ’ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿಯೂ ನಡೆಯುತ್ತದೆ. ಊರನ್ನು ಕಾಯಲು ಇರುವ ದೇವಿಯೇ ಮಾರಮ್ಮ. ಮಂಟೇಸ್ವಾಮಿ ಕತೆಯಲ್ಲಿ ಮಾರೀ ದೇವತೆಗಳ ಬಗ್ಗೆ ಸಾಕಷ್ಟು ಉಲ್ಲೇಖದ ಜೊತೆಗೆ ಆ ದೇವತೆಗಳಿಗೆ ಮಂಟೇಸ್ವಾಮಿ ‘ಹಬ್ಬವನ್ನು ಮಾಡಿಸಿಕೊ ಡುತ್ತೇನೆ’ ಎಂದು ಆಶೀರ್ವಾದ ಮಾಡಿದ್ದಾರೆ. ಅದಕ್ಕೆ ಮಂಟೇಸ್ವಾಮಿಗೆ ‘ಮಾರೀರ ಗಂಡನಾದೆ, ಮನೆಮನೆಗು ದೇವರಾದೆ’ ಎಂದು ಕರೆಯುವರು. ಜಾನ ಪದದ ಒಂದು ಸಾಲಿನಲ್ಲಿ ಮಂಟೇಸ್ವಾಮಿ ‘ನಮಗೆ ಜಾತಿಭೇದ ಇಲ್ಲಾ ಕಾಣೋ, ಆದಿಯೊಳಗಲ ಜ್ಯೋತಿ, ಬೀದಿಯೊಳಗಲ ಜ್ಯೋತಿ, ಹೊನ್ನಯ್ಯನ ಮನೆಯೊಳಗು ಜ್ಯೋತಿ, ಚೆನ್ನಯ್ಯನ ಮನೆಯೊಳಗು ಜ್ಯೋತಿ’ ಎಂದು ನುಡಿಯುತ್ತಾರೆ. ಜಿಲ್ಲೆಯಲ್ಲಿ ಎಲ್ಲಾ ಜಾತಿಗಳ ಜನರು ಮಂಟೇಸ್ವಾಮಿ, ಮಾದೇಶ್ವರ, ಬಿಳಿಗಿರಿರಂಗಯ್ಯ, ನಂಜುಂಡೇ ಶ್ವರ ದೇವರುಗಳನ್ನು ಪೂಜಿಸುವುದಲ್ಲದೇ ಸಾಂಸ್ಕ ತಿಕ ಆಚರಣೆಯಲ್ಲಿ ಸಾಮ್ಯತೆ ಹೊಂದಿದ್ದಾರೆ. ಹಬ್ಬಗಳನ್ನು ಒಟ್ಟಿಗೆ ಮಾಡುತ್ತಾರೆ. ಕುರುಬನ ಕಟ್ಟೆ ಕಂಡಾಯ ಎಲ್ಲ ಜನರ ಮನೆಗಳಿಗೂ ಧಾರಾಳವಾಗಿ ನುಗ್ಗಿ ಬರುತ್ತದೆ. ಆಗ ಯಾರೊಬ್ಬರೂ ಯಾರನ್ನೂ ಜಾತಿಗೀತಿ ಕೇಳುವುದಿಲ್ಲ. ಉಳಿದಂತೆ ಮಾಮೂಲಿ ದಿನಗಳಲ್ಲಿ ಜಾತಿ ಬೇಲಿ ಜೀವಂತವಿರುತ್ತದೆ. ಮಂಟೇಸ್ವಾಮಿ ಹೇಳಿದಂತೆ ಜಾತಿಭೇದ ಅಳಿದರೆ ಇನ್ನೂ ಸೊಗಸು. ಏನೇ ಆಗಲಿ ಇಲ್ಲಿನ ಹಬ್ಬಗಳೇ ಒಂದು ಬಗೆಯ ವಿಶೇಷತೆ ಹೊಂದಿವೆ ಎಂದರೆ ತಪ್ಪಾಗುವುದಿಲ್ಲ.

ಆಂದೋಲನ ಡೆಸ್ಕ್

Recent Posts

ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಟ್ಯಾಂಕರ್ ಮೇಲೆ ದಾಳಿ

ನವದೆಹಲಿ : ಇರಾನ್-ಅಮೆರಿಕ ಉದ್ವಿಗ್ನತೆಯ ನಡುವೆ ಹಾರ್ಮುಝ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊಂದಿರುವ ಸೂಪರ್ ಟ್ಯಾಂಕರ್ ಮೇಲೆ ಇರಾನಿಯನ್ ಗನ್‌ಬೋಟ್‌ಗಳಿಂದ…

9 mins ago

ಮತ್ತೆ ಹೊರ್ಮುಜ್‌ ಬಂದ್‌ ಮಾಡಿದ ಇರಾನ್‌

ಟೆಹ್ರಾನ್ : ಅಮೆರಿಕ ಜೊತೆಗಿನ ಮಾತುಕತೆ ಭಾಗವಾಗಿ ಹೊರ್ಮುಜ್‌ ಜಲಸಂಧಿಯಲ್ಲಿ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದ ಇರಾನ್‌, ತನ್ನ ನಿರ್ಧಾರವನ್ನು…

24 mins ago

ಚಿರತೆಯಿಂದ ಅತ್ತೆ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ : ಸಚಿವೆ ಹೆಬ್ಬಾಳ್ಕರ್‌ ಭರವಸೆ

ಬೆಂಗಳೂರು : ಮೈಸೂರಿನ ಸಿದ್ಧಾರ್ಥನಗರದ ಮನೆಯೊಂದರಲ್ಲಿ ಚಿರತೆ ಮಂಚದಡಿ ಅಡಗಿದ್ದ ವೇಳೆ ಪ್ರಾಣದ ಹಂಗು ತೊರೆದು ವೃದ್ಧ ಅತ್ತೆಯನ್ನು ಸುರಕ್ಷಿತವಾಗಿ…

1 hour ago

ದಕ್ಷಿಣ ಆಫ್ರಿಕಾದಿಂದ ಬನ್ನೇರುಘಟ್ಟ ಮೃಗಾಲಯಕ್ಕೆ ಬಂದ ನಾಲ್ಕು ಚೀತಾ

ಬೆಂಗಳೂರು : ಬನ್ನೇರುಘಟ್ಟ ಮೃಗಾಲಯಕ್ಕೆ ದಕ್ಷಿಣ ಆಫ್ರಿಕಾದಿಂದ ತರಿಸಿಕೊಂಡ 4 ಶಿವಂಗಿ (ಚೀತಾ)ಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ…

2 hours ago

ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧಿಸಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು- ಕಾಂಗ್ರೆಸ್ ಪಕ್ಷ ಮಹಿಳಾ ಮೀಸಲಾತಿಗೆ ವಿರೋಧ ಇಲ್ಲ. ಕೇಂದ್ರ ಸರ್ಕಾರ ಲೋಕಸಭೆಯ ಸ್ಥಾನಗಳ ಸಂಖ್ಯೆ ಹೆಚ್ಚಿಸುವುದನ್ನು ಮಹಿಳಾ ಮೀಸಲಾತಿಯೊಂದಿಗೆ…

4 hours ago

ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ರಾಬರ್ಟ್‌ ವಾದ್ರಾ

ಉಡುಪಿ: ಶ್ರೀಕೃಷ್ಣ ಮಂದಿರಕ್ಕೆ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ಭೇಟಿ ನೀಡಿದರು. ಅವರ ಜನ್ಮದಿನದ ಪ್ರಯುಕ್ತ ಕೆಲವು…

6 hours ago