ಹಾಡು ಪಾಡು

ಸಣ್ಣಪುಟ್ಟ ತಾಣ: ಹತ್ವಾಳು ಕಟ್ಟೆ ಕಂಡಿದ್ದೀರಾ?

ಮೈಸೂರಿನಿಂದ ನಂಜನಗೂಡಿನ ಹುಲ್ಲಹಳ್ಳಿ ಕಡೆ ನಲವತ್ತು ನಿಮಿಷ ದೂರ ಹೋದರೆ ಹುಲ್ಲಹಳ್ಳಿಗೂ ಮುನ್ನ ರಾಂಪುರ ಎಂಬ ಸಣ್ಣ ಊರು ಸಿಗುತ್ತದೆ. ಆ ಊರಿನಲ್ಲಿ ಕಪಿಲಾ ನದಿ ನೀರಿಗೆ ಕಟ್ಟಲಾಗಿರುವ ಐತಿಹಾಸಿಕ ಹತ್ವಾಳು ಕಟ್ಟೆಯನ್ನು ನಾವು ನೋಡಬಹುದು.

ಇದನ್ನು ಹುಲ್ಲಹಳ್ಳಿ ಡ್ಯಾಂ ಎಂದೂ ಕರೆಯುತ್ತಾರೆ. ಕಬಿನಿಯ ಬೀಚನಹಳ್ಳಿ ಡ್ಯಾಂನಿಂದ ಇಲ್ಲಿಗೆ ನೀರು ಬರುತ್ತದೆ. ಈ ಡ್ಯಾಂಗೆ ಎರಡು ಗೇಟ್‌ಗಳಿದ್ದು, ಇದನ್ನು ನೋಡಿಕೊಳ್ಳಲೆಂದೇ ಇಬ್ಬರು ಕಾವಲುಗಾರರಿದ್ದಾರೆ. ಹತ್ವಾಳು ಕಟ್ಟೆಯನ್ನು ೧೮೮೯ರಲ್ಲಿ ನಿರ್ಮಿಸಲಾಯಿತು ಎಂಬ ಫಲಕವನ್ನು ನಾವು ಇಲ್ಲಿ ಕಾಣಬಹುದು. ಅಂದರೆ ಇದು ಹತ್ತನೇ ಚಾಮರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣವಾದ ಅಣೆಕಟ್ಟೆ. ಆಗಿನಿಂದ ಈಗಿನವರೆಗೂ ಈ ಅಣೆಕಟ್ಟೆಯನ್ನು ಹಾಗೇ ಕಾಪಾಡಿಕೊಂಡು ಬರಲಾಗುತ್ತಿದೆ.

ಮೈಸೂರಿನಲ್ಲಿ ಇರುವವರು ಅಥವಾ ಮೈಸೂರಿಗೆ ಪ್ರವಾಸಕ್ಕೆಂದು ಬಂದವರು ನಗರದಿಂದ ಕೇವಲ ಮುಕ್ಕಾಲು ಗಂಟೆ ಪ್ರಯಾಣ ಮಾಡಿದರೆ ಈ ಸ್ಥಳ ತಲುಪಬಹುದು. ಹುಲ್ಲಹಳ್ಳಿ ಡ್ಯಾಂ ಐತಿಹಾಸಿಕ ಪ್ರಾಮುಖ್ಯತೆ ಯನ್ನು ಪಡೆದುಕೊಂಡಿದೆ. ಬರೋಬ್ಬರಿ ೧೩೫ ವರ್ಷಗಳ ಹಿಂದೆಯೇ ನಮ್ಮನ್ನಾಳುವವರಿಗೆ ಇಂತಹ ಯೋಜನೆ ರೂಪಿಸುವ ಯೋಚನೆ ಬಂದಿದೆ ಎಂದರೆ ಅಚ್ಚರಿಯಾಗುತ್ತದೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಜೀವನಶೈಲಿಯೆಲ್ಲವೂ ಬಹಳವೇ ಮುಂದುವರಿದಿರುವ ಈ ಕಾಲದಲ್ಲಿ ಏನನ್ನಾದರೂ ಸಾಽಸಬಹುದು. ಆದರೆ ಆಗ ಲಭ್ಯವಿದ್ದ ಸೀಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಕೃಷಿಕರಿಗೆ ಅನುಕೂಲವಾಗುವಂತೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿರುವುದು ಶ್ಲಾಘನೀಯ ಸಂಗತಿ.

ಕಳೆದ ಒಂದು ಶತಮಾನ ದಿಂದಲೂ ಈ ಕಟ್ಟೆ ಇಲ್ಲಿನ ಕೃಷಿಕರಿಗೆ ಜೀವನಾಡಿ ಯಾಗಿದೆ. ಮಳೆಗಾಲದಲ್ಲಿ ಮೈದುಂಬಿ ಹರಿಯುವ ಹತ್ವಾಳು ಕಟ್ಟೆಯನ್ನು ನೋಡುವುದೇ ಒಂದು ಚೆಂದ. ಬೇಸಿಗೆ ಕಾಲದಲ್ಲಿ ನೀರು ಕಡಿಮೆ ಯಾಗಿ ಕೊಂಚ ಖಾಲಿಯಾಗಿ ಕಾಣಿಸಿದರೂ ಕಟ್ಟೆಯ ಅಂದಕ್ಕೇನೂ ಕೊರತೆಯಿಲ್ಲ. ಸುತ್ತಲೂ ಹಸಿರು, ಹಕ್ಕಿಗಳ ಚಿಲಿಪಿಲಿ ಸದ್ದು, ತಂಪಾದ ಗಾಳಿ, ನೀರವ ವಾತಾವರಣ. ಒಂದು ಸುಂದರ ದಿನವನ್ನು ಪ್ರಶಾಂತ ವಾಗಿ ಕಳೆಯಲು ಇದಕ್ಕಿಂತ ಮತ್ತೇನು ಬೇಕು ಹೇಳಿ?

ಮಳೆಗಾಲದಲ್ಲಿ ನೀರು ಹೆಚ್ಚಾಗುವ ಕಾರಣ ಇಲ್ಲಿ ಈಜುವುದು ಯೋಗ್ಯವಲ್ಲ. ಬೇಸಿಗೆ ಕಾಲದಲ್ಲಿ ಈಜಲು ಅಥವಾ ನದಿ ಬದಿಯ ಮರದ ಕೆಳಗೆ ಕುಳಿತು ಪ್ರಶಾಂತವಾಗಿ ಸಮಯ ಕಳೆಯಲು ಇದು ಬಹಳ ಸೂಕ್ತ ಜಾಗ. ಅದರಲ್ಲೂ ಈ ಕಟ್ಟೆ ಪಶ್ಚಿಮ ದಿಕ್ಕಿಗೆ ಇರುವ ಕಾರಣ ಇಲ್ಲಿ ಸೂರ್ಯಾಸ್ತ ಮನಮೋಹಕವಾಗಿ ಕಾಣುತ್ತದೆ. ಮನಸ್ಸಿನಲ್ಲಿರುವ ಒತ್ತಡ, ಬೇಸರ, ದಿನನಿತ್ಯದ ಜಂಜಾಟಗಳೆಲ್ಲವೂ ದೂರವಾಗಿ ನಿರಾಳ ಭಾವ ಮೂಡುತ್ತದೆ

 

andolana

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

4 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

17 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

17 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

17 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

18 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

18 hours ago