• ಸ್ವಾಮಿ ಪೊನ್ನಾಚಿ

ಪೊನ್ನಾಚಿಗೆ ಹೋದಾಗ ನಾನು ಸೋಮಣ್ಣ, ಲಾಳಕ್ಕಿ, ಶಾಂತ, ಸಣ್ಣಕ್ಕಿ ಮುಂತಾದ ಸ್ನೇಹಿತರು ಸೇರಿಕೊಂಡು; ಜೇನುಹಳ್ಳದ ಹತ್ತಿರ ಗೂಳಿಮದ್ದು ತಯಾರಿಸಿ ಕುಡಿದು, ಅಲ್ಲೇ ಸಂಜೆವರೆಗೂ ಮಲಗಿದ್ದು ಈಜಾಡಿ ಬರುತ್ತಿದ್ದೆವು. ಸೋಮಣ್ಣ ಕಾಡುಮೇಡು ಅಲೆದು, ಸರಿಸುವಾರು ತೊಂಬತ್ತೆರಡು ತರಹದ ಬೇರುಗಳನ್ನು ತಂದು, ಒಣಗಿಸಿ ಕುಟ್ಟಿ, ಪುಡಿ ಮಾಡಿಟ್ಟುಕೊಂಡಿರುತ್ತಿದ್ದ. ಐದಾರು ಲೀಟರ್ ಹಸೀ ಹಾಲಿಗೆ ಕಲ್ಲುಸಕ್ಕರೆ, ಕಾಯಿತುರಿ, ಎಳ್ಳು, ಕಾಂಪುವ್ವ ಎಲ್ಲವನ್ನೂ ನುಣ್ಣಗೆ ಅರೆದು ಮಿಕ್ಸ್ ಮಾಡಿ ಈ ತೊಂಬತ್ತೆರಡು ಬೇರಿನ ಪುಡಿಯನ್ನು ಚೆನ್ನಾಗಿ ಕಲಸಿ, ಮೂರು ನಾಲ್ಕು ಲೋಟ ಕುಡಿದು ಬಿಟ್ಟರೆ; ಸಂಜೆ ತನಕ ಹಸಿವೆಯೇ ಆಗುತ್ತಿರಲಿಲ್ಲ. ಢರ್ರೆಂದು ತೇಗು ಮಾತ್ರ ಐದೈದು ನಿಮಿಷಕ್ಕೂ ಬರುತಿತ್ತು… ಹಸಿಹಾಲು, ಎಳ್ಳು, ಈ ಪೌಡರ್ ಎಲ್ಲಾ ಸೇರಿಕೊಂಡು ಹೊಟ್ಟೆಯೊಳಗೆ ಪಲ್ಟೀ ಹೊಡೆಯುವಾಗ ಉಂಟಾಗುವ ತೇಗಿನಿಂದ ವಿಚಿತ್ರವಾದ ವಾಸನೆ ಬಂದು, ವಾಕರಿಕೆ ಬರಿಸುತಿತ್ತು. ಇಡೀ ದಿನ ಮೈ ಹೆಬ್ಬಾವಿನಂತೆ ಜಡವಾಗಿ ಬಿಡುವುದು. ಏನು ಕೆಲಸವಿಲ್ಲದೆ ಸುಮ್ಮನೆ ಇಡೀ ದಿನ ಬಿದ್ದುಕೊಂಡಿರಬೇಕು ಎನ್ನಿಸುತಿತ್ತು. ನಾವು ಕುಡಿದ ಮದ್ದು ಸಂಪೂರ್ಣ ಜೀರ್ಣವಾಗುವವರೆಗೂ ನಡುವೆ ಏನೂ ತಿನ್ನುವಂತಿರಲಿಲ್ಲ. ವಿಶೇಷವಾಗಿ ಹುಳಿ ಪದಾರ್ಥವನ್ನು ಮುಟ್ಟುವ ಹಾಗೇ ಇಲ್ಲ. ಒಂದು ದಿನ ಹೇಗೋ ಕಷ್ಟದಿಂದ ಕಳೆದುಬಿಟ್ಟರೆ; ಮಾರನೇ ದಿನ ಇಡೀ ದೇಹ ಚಿಗುರೆಮರಿಯಂತೆ ಪುಟಿಯುತಿತ್ತು. ಇನ್ನಿಲ್ಲದ ಉತ್ಸಾಹ, ಶಕ್ತಿ, ಹುರುಪು. ಬಲಹೀನರಿಗೆ, ನರದೌರ್ಬಲ್ಯ, ದಮ್ಮು, ಉಬ್ಬಸ ಇರುವವರಿಗೆ ತಲೆ ತಲಾಂತರದಿಂದ ಬಂದ ಸಿದ್ದ ಔಷಧಿ ಇದು. ಸೋಮಣ್ಣನ ತಾತ ಪಟಗಾರ ಮುನಿಯಪ್ಪನವರಿಂದ ಈ ವಿದ್ಯೆ ಮೊಮ್ಮಗನಿಗೆ ಧಾರೆ ಎರೆಯಲ್ಪಟ್ಟಿತ್ತು.

ಮೊದಮೊದಲು ಉಬ್ಬಸ, ಸುಸ್ತು ಸಂಕಟ ಅಂದವರಿಗೆಲ್ಲಾ ಸೋಮಣ್ಣ ಕಾಡಿಗೆ ಹೋಗಿ ಬೇರುಗಳನ್ನು ತಂದು ಗೂಳಿಮದ್ದು ಸಿದ್ದಮಾಡಿ ಕೊಡುತ್ತಿದ್ದ. ಯಾವಾಗೆಂದರೆ ಅವಾಗ ಕಾಡಿಗೆ ಹೋಗುವುದನ್ನು ಫಾರೆಸ್ಟರು ನಿರ್ಬಂಧಿಸಿದ ಮೇಲೆ ತುಂಬಾ ಅಗತ್ಯವಿದ್ದರೆ ವಾತ್ರ ಔಷಧಿ ಮಾಡುತಿದ್ದ. ನಾವು ಮಾತ್ರ ಸಮಯ ಸಿಕ್ಕಾಗಲೆಲ್ಲಾ ಹೀಗೇ ಗುಟ್ಟಾಗಿ, ಒಟ್ಟಾಗಿ ಗೂಳಿಮದ್ದು ಸೇವಿಸಿಕೊಂಡು ಉತ್ಸಾಹದಿಂದ ಓಡಾಡುತಿದ್ದೆವು. ನಮ್ಮನ್ನು ನೋಡಿ ಹಲವರಿಗೆ ಕುತೂಹಲ ಮತ್ತು ಹೊಟ್ಟೆಕಿಚ್ಚು. ಸೋಮಣ್ಣನ ಮೇಲೆ ಕಾಡಿನಲ್ಲಿ ಜನ ಸೇರಿಸಿಕೊಂಡು ಕಳ್ಳಭಟ್ಟಿ ಕಾಯಿಸುತ್ತಾನೆ ಎಂದು ಯಾರೋ ಫಾರೆಸ್ಟರ್‌ಗೆ ದೂರುಕೊಟ್ಟಿದ್ದರು. ಆ ಫಾರೆಸ್ಟರೋ ಕೇಸು ಹಾಕಿಸುವ ಲೆವೆಲ್‌ಗೆ ವಾರ್ನು ವಾಡಿ ಹೋಗಿದ್ದ. ಈ ಸುದ್ದಿ ರೂಪಾಂತರಗೊಂಡು ಏನೇನೋ ಪ್ರಚಾರ ಪಡೆಯಿತು. ಯಾರೋ ಪುಣ್ಯಾತ್ಮನೊಬ್ಬ ಗೂಳಿಮದ್ದು ಸೇವಿಸಿದ ಗಂಡಸು ಗೂಳಿಯಂತಾಗುತ್ತಾನೆಂದೂ ಸುದ್ದಿ ಹಬ್ಬಿಸಿದ ಮೇಲಂತೂ ಈ ಗೂಳಿಮದ್ದಿನ ಸೇವನೆಗೆ ಹಲವು ಮಂದಿ ಹಾತೊರೆಯುತಿದ್ದರು.

ಊರಿನಲ್ಲಿ ಸದಾ ತರ್ಲೆ ಮಾಡುತ್ತಾ ಪೋಕರಿಯಾಗಿ ತಿರುಗಾಡುತಿದ್ದ ಸಿದ್ದರಾಜು ಹೇಗಾದರೂ ಮಾಡಿ ಗೂಳಿಮದ್ದು ಸೇವಿಸಲೇಬೇಕೆಂದು ಹಠ ಹಿಡಿದಿದ್ದ. ʼನೋಡೋಕೆ ಗೂಳಿ ತರ ಇದ್ದಿ. ಕಿಸಿಯೋಕೆ ಮಾತ್ರ ಆಗೋದಿಲ್ಲ ಎದ್ದೋಗು ಮೂದೇವಿʼ ಎಂದು ಅವನ ಗೆಳತಿ ಮೂದಲಿಸಿದ ಮೇಲೆ, ಗೂಳಿಮದ್ದು ತೆಗೆದುಕೊಂಡು ತನ್ನ ಪರಾಕ್ರಮವನ್ನು ತೋರಿಯೇ ಬಿಡಬೇಕೆಂದು ಅವನು ಬಂದಿದ್ದ. ಇವನನ್ನು ಮತ್ತೆ ಪೇಚಿಗೆ ಸಿಕ್ಕಿಸಿ ಮಜಾ ತೆಗೆದುಕೊಳ್ಳಬೇಕೆಂದು ಲಾಳಕ್ಕಿಯು, ಮುದ್ದು ಕುಡಿದ ಮೇಲೆ ಒಂದು ಉಂಡೆ ಹುಣಸೆಹಣ್ಣು ತಿಂದುಬಿಡು ಹೆಚ್ಚಾಗಿ ಶಕ್ತಿ ಬರುತ್ತದೆ. ಈ ವಿಷಯ ಎಲ್ಲೂ ಬಾಯಿ ಬಿಡಬೇಡ ಎಂದು ನಾಲ್ಕು ಲೋಟ ಹಸಿಹಾಲು ಕುಡಿಸಿ ಹುಣಸೆಹಣ್ಣನ್ನು ತಿನ್ನಿಸಿದ್ದ. ಈವತ್ತು ತನ್ನ ಪರಾಕ್ರಮ ನೋಡಿ ಅವಳು ಆಶ್ಚರ್ಯಪಡಬೇಕು ಎಂದು ಎತ್ತಲೂ ತಿರುಗಾಡಲು ಹೋಗದೆ ಗಡದ್ದಾಗಿ ತೋಟದಲ್ಲಿ ನಿದ್ದೆ ಮಾಡಿ ಸಂಜೆಗೆ ಸಿದ್ದವಾಗಿ ಹೋಗಿದ್ದನು. ಕಾಂಪೂವ, ಕಾಯಿತುರಿ, ಜೊತೆ ಹುಳಿ ಸೇರಿಕೊಂಡು ಸಂಜೆ ಹೊತ್ತಿಗೆ ಬಿರುಡೆ ಕಿತ್ತು ಹೋಗುವಂತೆ ಭೇದಿ ಶುರುವಾಗಿತ್ತು. ಇಡೀ ರಾತ್ರಿ ಅವಳಿಗೂ ನೀರು ಕೊಟ್ಟು ಕೊಟ್ಟು ಸಾಕಾಗಿ ʼನಿನ್ನ ಸಹವಾಸವೇ ಸಾಕು ಹೋಗೋ ಮಾರಾಯʼ ಎಂದು ಉಗಿದು ಕಳಿಸಿದ್ದಳು.

lokesh

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

16 mins ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

13 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

14 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

14 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

14 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

14 hours ago