ಇವರು ಬುಡಬುಡಿಕೆಯ ಕುನ್ನಪ್ಪ ಅಲಿಯಾಸ್ ಹನುಮಂತಪ್ಪ. ಕಳೆದ ಎರಡು ಮೂರು ವರ್ಷಗಳಿಂದ ಮೈಸೂರಿನ ಬೀದಿಗಳಲ್ಲಿ ಶಕುನ ಹೇಳುತ್ತ ನಡೆಯುತ್ತಿದ್ದಾರೆ. ಇರುಳ ಹೊತ್ತಲ್ಲಿ ಜಂಟಿಯಾಗಿ ಹಾಲಕ್ಕಿ ಶಕುನ, ಹಗಲು ಹೊತ್ತಲ್ಲಿ ಒಂಟಿಯಾಗಿ ಬುಡಬುಡಿಕೆಯ ಶಾಸ್ತ್ರ ಹೇಳುವುದು ಇವರ ತಲೆತಲಾಂತರದ ವೃತ್ತಿ. ಕಯ್ಯ ತುದಿಯ ಕರ್ಚೀಫಿಗೆ ಕಟ್ಟಿರುವ ಡಮರುಗದಲ್ಲಿ ನೆಲೆಸಿರುವ ತನ್ನ ಕುಲದೇವತೆಯಆಣತಿಯಂತೆ ನಡೆಯುವ ಇವರು ತಮ್ಮ ಶಾಸ್ತ್ರ ಹೇಳುವ ವಿದ್ಯೆಯನ್ನು ಹೊಟ್ಟೆಪಾಡಿಗೆ ಅಂತ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ಜಾನಪದ ವೈದ್ಯರಂತೆ, ಪಾರಂಪರಿಕ ಆಪ್ತ ಮನೋಸಲಹೆಗಾರರಂತೆ ಎಲ್ಲರ ಗೌರವ ಪಡೆದುಕೊಂಡೇ ಬದುಕುತ್ತಿದ್ದ ಇವರು ಈ ಕಾಲದಲ್ಲಿ ಹಲವರಿಗೆ ಪಳೆಯುಳಿಕೆಯಂತೆ, ಭಿಕ್ಷಾಟನೆಯವರಂತೆ ಕಾಣಿಸುತ್ತಾರೆ. ಆದರೆ ಇವರ ಮೂಲ ಇರುವುದು ಮಹಾಭಾರತದ ಕಾಲದ ಕೃಷ್ಣನ ಕಥೆಯಲ್ಲಿ ಎಂದು ಈ ಕಾಲದಲ್ಲಿ ಬದುಕುತ್ತಿರುವ ನಮಗೆ ಗೊತ್ತಿಲ್ಲ. ಬುಡಬುಡಿಕೆಯ ಹನುಮಂತಪ್ಪನವರಿಗೆ ಈ ಕುರಿತು ಬೇಸರವೂ ಇಲ್ಲ.
ಅಮರಾವತಿ: ಆಂಧ್ರಪ್ರದೇಶದಲ್ಲಿ ಮತ್ತೆ ಕೋವಿಡ್ ಸೋಂಕಿನ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಇತ್ತೀಚಿನ ವಾರಗಳಲ್ಲಿ 8 ಸಕ್ರಿಯ ಕೋವಿಡ್…
ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರ ಅಂತ್ಯಕ್ರಿಯೆಯು ತೆಲುಗು ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ನೆರವೇರಿತು. ಜಾನಕಿ ಅವರ ಪುತ್ರ…
ಶನಿವಾರಸಂತೆ: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನೀರುಗುಂದ ಗ್ರಾಮದ ಹೇಮಾವತಿ ನದಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿ ಕಣ್ಮರೆಯಾಗಿದ್ದ ಸ್ಥಳೀಯ…
ಟೆಹರಾನ್: ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಐಆರ್ಜಿಸಿ ಘೋಷಣೆ ಮಾಡಿದೆ. ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಅಮೇರಿಕಾ ತನ್ನ ಹಸ್ತಕ್ಷೇಪವನ್ನು ಕೊನೆಗೊಳಿಸುವವರೆಗೆ ಜಲಮಾರ್ಗವನ್ನು…
ಬೆಂಗಳೂರು: ನೈಋತ್ಯ ಮುಂಗಾರು ಮತ್ತೆ ರಾಜ್ಯದಲ್ಲಿ ದುರ್ಬಲಗೊಂಡಿದ್ದು, ಮಳೆ ಕೊರತೆಯಿಂದಾಗಿ ಬರದ ಛಾಯೆ ತೀವ್ರವಾಗತೊಡಗಿದೆ. ಜುಲೈ ತಿಂಗಳ ಮೊದಲ ವಾರದಲ್ಲಿ…
ಮೈಸೂರು: ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಬೋಗಾದಿ ಬಳಿಯ ಕಣಿಯನಹುಂಡಿ ತೋಟದ ಮನೆಯಲ್ಲಿ ಸಕಲ…