ಇವರು ಬುಡಬುಡಿಕೆಯ ಕುನ್ನಪ್ಪ ಅಲಿಯಾಸ್ ಹನುಮಂತಪ್ಪ. ಕಳೆದ ಎರಡು ಮೂರು ವರ್ಷಗಳಿಂದ ಮೈಸೂರಿನ ಬೀದಿಗಳಲ್ಲಿ ಶಕುನ ಹೇಳುತ್ತ ನಡೆಯುತ್ತಿದ್ದಾರೆ. ಇರುಳ ಹೊತ್ತಲ್ಲಿ ಜಂಟಿಯಾಗಿ ಹಾಲಕ್ಕಿ ಶಕುನ, ಹಗಲು ಹೊತ್ತಲ್ಲಿ ಒಂಟಿಯಾಗಿ ಬುಡಬುಡಿಕೆಯ ಶಾಸ್ತ್ರ ಹೇಳುವುದು ಇವರ ತಲೆತಲಾಂತರದ ವೃತ್ತಿ. ಕಯ್ಯ ತುದಿಯ ಕರ್ಚೀಫಿಗೆ ಕಟ್ಟಿರುವ ಡಮರುಗದಲ್ಲಿ ನೆಲೆಸಿರುವ ತನ್ನ ಕುಲದೇವತೆಯಆಣತಿಯಂತೆ ನಡೆಯುವ ಇವರು ತಮ್ಮ ಶಾಸ್ತ್ರ ಹೇಳುವ ವಿದ್ಯೆಯನ್ನು ಹೊಟ್ಟೆಪಾಡಿಗೆ ಅಂತ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ಜಾನಪದ ವೈದ್ಯರಂತೆ, ಪಾರಂಪರಿಕ ಆಪ್ತ ಮನೋಸಲಹೆಗಾರರಂತೆ ಎಲ್ಲರ ಗೌರವ ಪಡೆದುಕೊಂಡೇ ಬದುಕುತ್ತಿದ್ದ ಇವರು ಈ ಕಾಲದಲ್ಲಿ ಹಲವರಿಗೆ ಪಳೆಯುಳಿಕೆಯಂತೆ, ಭಿಕ್ಷಾಟನೆಯವರಂತೆ ಕಾಣಿಸುತ್ತಾರೆ. ಆದರೆ ಇವರ ಮೂಲ ಇರುವುದು ಮಹಾಭಾರತದ ಕಾಲದ ಕೃಷ್ಣನ ಕಥೆಯಲ್ಲಿ ಎಂದು ಈ ಕಾಲದಲ್ಲಿ ಬದುಕುತ್ತಿರುವ ನಮಗೆ ಗೊತ್ತಿಲ್ಲ. ಬುಡಬುಡಿಕೆಯ ಹನುಮಂತಪ್ಪನವರಿಗೆ ಈ ಕುರಿತು ಬೇಸರವೂ ಇಲ್ಲ.
ಕಠ್ಮಂಡು : ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂತ್ರಸ್ತರಾಗಿರುವ ಭಾರತೀಯ ಪ್ರಜೆಗಳ ನೆರವಿಗಾಗಿ ಭಾರತವು ಸಹಾಯವಾಣಿ ಆರಂಭಿಸಿದೆ.…
ಬೆಂಗಳೂರು : ರಾಜ್ಯದ ಬರ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಯುತ್ತಿದೆ. 102 ತಾಲ್ಲೂಕುಗಳ ಗ್ರೌಂಡ್ ಟ್ರೂಥಿಂಗ್ ವರದಿ ಬಂದಿದ್ದು, ಮುಂದಿನ…
ಮೈಸೂರು : 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರ ಪಾಲಿಕೆಯ ವತಿಯಿಂದ 80 ಜಿವಿಪಿ ನಿರ್ಮೂಲನೆ ಅಭಿಯಾನದಲ್ಲಿ ಮಂಗಳವಾರ ವಲಯ-3ರ ವ್ಯಾಪ್ತಿಗೆ…
ಕಠ್ಮಂಡು : ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರದ ರಸುವಾ ಜಿಲ್ಲೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಹಠಾತ್ ಪ್ರವಾಹಕ್ಕೆ ಕನಿಷ್ಠ…
ಕಠ್ಮಂಡು : ನೆರೆಯ ರಾಷ್ಟ್ರ ನೇಪಾಳದಲ್ಲಿ ಹಿಮಕುಸಿತದ ಪರಿಣಾಮ ಉಂಟಾದ ಭೀಕರ ಆಕಸ್ಮಿಕ ಪ್ರವಾಹ ಜಲಪ್ರಳಯವನ್ನೇ ಸೃಷ್ಟಿಸಿದೆ. ಕೋಶಿ ನದಿಯ…
ಬೆಂಗಳೂರು: ರಾಜೀನಾಮೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿಲ್ಲ. ನನ್ನ ರಾಜೀನಾಮೆ ಬಗ್ಗೆ ಕೇಳಿಬರುತ್ತಿರುವ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಸಚಿವ…