ಹಾಡು ಪಾಡು

ಮತಾಂಧ ಮಗ, ತಾಯಿ ಹೃದಯದ ಅಪ್ಪ …

ನಾಝಿಯಾ ಬೇಗಂ

ಆ ದಿನ ಮೂರು ಮನೆಗಳ ಗಣತಿ ಕಾರ್ಯ ಮುಗಿಸಿ ನಾಲ್ಕನೆಯ ಮನೆಗೆ ಬಂದೆ. ೩೫ರ ಆಸುಪಾಸಿನ ವಿದ್ಯಾವಂತ ತರುಣ ಮನೆಯೊಳಗಿ ನಿಂದ ಹೊರಬಂದ. ಕೈಯಲ್ಲಿದ್ದ ಸರಂಜಾಮು ಕಂಡು ಆತನಿಗೆ ಗಣತಿಗಾಗಿ ಎಂಬುದು ಗೊತ್ತಿದ್ದರೂ ‘ಏನೆಂದು’ ಕೇಳಿದ. ‘ಸಮೀಕ್ಷೆಗಾಗಿ ಬಂದಿದ್ದೇವೆ, ರೇಷನ್ ಕಾರ್ಡ್ ಬೇಕಿತ್ತು’ ಕೇಳಿದೆ. ಉದಾಸಿನನಾಗಿ ರೇಷನ್ ಕಾರ್ಡ್ ಕೈಗಿಟ್ಟಾಗ ಸರ್ವರ್ ನನ್ನ ಪುಣ್ಯಕ್ಕೆ ಸರಿಯಾಗಿ ಕೆಲಸ ಮಾಡಿತು. ಎರಡ್ಮೂರು ಪ್ರಶ್ನೆಗಳಿಗೆ ಅರೆ ಮನಸ್ಸಿನಿಂದ ಉತ್ತರಿಸಿ ನಂತರ ಆತನೇ ಉದ್ಧಟತನದ ಪ್ರಶ್ನೆಗಳನ್ನು ಕೇಳತೊಡಗಿದ.

‘ನೀವು ಮೊದಲೇ ಮುಸಲ್ಮಾನರು, ನಂಬುವುದು ಕಷ್ಟ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದರೆ ಆಮೇಲೆ…’ ಹೀಗೆ ಏನೇನೋ ಹೇಳತೊಡಗಿದವನಿಗೆ ಗುರುತಿನ ಚೀಟಿ ತೋರಿಸಿದೆ. ಇಷ್ಟಾದರೂ ಜಗ್ಗದ ಅವನ ಹುಂಬತನ ನನ್ನ ಕಾಲಿನೊಳಗಿನ ನಡೆದ ದಣಿವಿಗೆ ಸಿಟ್ಟು ತರಿಸಿತ್ತು. ‘ಇಷ್ಟವಿಲ್ಲದಿದ್ದರೆ ನಿರಾಕರಣೆ ಪತ್ರ ಬರೆದುಕೊಡಿ’ ಹೇಳಿದೆ. ಅದಕ್ಕೂ ಒಪ್ಪದ ಯುವಕ ಇನ್ನಷ್ಟು ಕೂಗಾಡತೊಡಗಿದಾಗ ಮನೆಯೊಳಗಿನಿಂದ ಆತನ ತಂದೆ ಹೊರಬಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಗಿ, ಮಗನನ್ನೇ ಅಲ್ಲಿಂದ ಸಾಗಹಾಕಿ ಉಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಕೊಟ್ಟು ಸಹಕರಿಸಿದರು.

ಬಿಸಿಲಿಗೆ ಬಳಲಿದ್ದ ನನ್ನ ಮುಖ ನೋಡಿ ‘ನೀನು ನನ್ನ ಮಗಳಂತೆ, ಬಿಸಿಲಿಗೆ ಓಡಾಡಿ ದಣಿದಿದ್ದೀಯ, ಬಾ ಸ್ವಲ್ಪ ಶರಬತ್ತನ್ನಾದರೂ ಕುಡಿ. ಮಗನಾಡಿದ ಮಾತಿಗೆ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಜ್ಯೂಸ್ ಬಾಟಲಿ ಹಿಡಿದು ಎದುರು ಕುಳಿತು ಕ್ಷಮೆಯಾಚಿಸಿದಾಗ, ಹಿರಿಯರ ಅಸಹಾಯಕ ಸ್ಥಿತಿಗೆ ನೊಂದುಕೊಂಡೆ. ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…

ಜಾತಿ, ಮತ ಧರ್ಮಗಳಾಚೆಗೆ ಮಾನವೀಯ ನೆಲೆಯಲ್ಲಿ ಒಗ್ಗಟ್ಟಿನ ಸೂತ್ರವನ್ನು ಮಕ್ಕಳಿಗೆ ಬೋಽಸುವ ನಮ್ಮ ವ್ಯಕ್ತಿತ್ವವನ್ನು ನಡವಳಿಕೆ, ಜ್ಞಾನ, ಪ್ರತಿಭೆಯ ಮೂಲಕ ಗುರುತಿಸದೆ ಹಿಜಾಬ್ ಮೂಲಕವಷ್ಟೇ ಗುರುತಿಸಿ ‘ನಾನು ಮುಸ್ಲಿಂ’ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಮಗ ಮಾಡಿದ ಅವಮಾನ ಶಿಕ್ಷಿತ ಸಮಾಜದಲ್ಲಿರುವ ಮೂಢತ್ವದ ಪ್ರತಿಬಿಂಬದಂತೆ ಕಂಡಿತು.

ಆಸ್ತಿ ವಿವರ ಕೊಡಲು ಹಿಂಜರಿದವರು ಕೆಲವರಾದರೆ, ವಯಸ್ಕ ಮಕ್ಕಳಿಲ್ಲದ ಮನೆಗಳಲ್ಲಿ ಒಂಟಿತನ ಅನುಭವಿಸುತ್ತಿರುವ ವಯೋವೃದ್ಧರ ಅಸಹಾಯಕತೆ ಇವೆಲ್ಲವೂ ನೋಡಸಿಕ್ಕಿತು. ಸಮೀಕ್ಷೆಗೆಂದು ಬಿಸಿಲು ಮಳೆಯೆನ್ನದೆ ಹಳ್ಳಿ ಪಟ್ಟಣಗಳನ್ನು ಸುತ್ತಿದ, ಸುತ್ತುತ್ತಿರುವ ಪ್ರತಿಯೊಬ್ಬ ಶಿಕ್ಷಕರೂ ಆತಿಥ್ಯ, ಅವಮಾನ ಹೀಗೆ ವಿಭಿನ್ನ ಸನ್ನಿವೇಶಗಳನ್ನು ಎದುರಿಸಿರುವುದಂತೂ ನಿಜ. ಇದು ಶಿಕ್ಷಕಿಯಾಗಿ ನನ್ನೊಬ್ಬಳದ್ದೇ ಅನುಭವವಲ್ಲ, ನನ್ನಂತೆ ಫೈಲು ಹಿಡಿದು ಗಣತಿ ಕಾರ್ಯಕ್ಕೆ ಹೊರಟ ಎಲ್ಲಾ ಶಿಕ್ಷಕರೂ ಎದುರಿಸುವ ಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು. ಧನಾತ್ಮಕ ಪ್ರತಿಕ್ರಿಯೆಯನ್ನು ಗೌರವದಿಂದ ಒಪ್ಪಿಕೊಂಡು, ಋಣಾತ್ಮಕ ಮಾತಿನಿಂದ ನೋಯಿಸುವವರ ಅಜ್ಞಾನಕ್ಕೆ ಮರುಕಪಟ್ಟು ಮತ್ತೆ ಮುಂದಿನ ಮನೆಯತ್ತ ಹೆಜ್ಜೆ ಹಾಕಿ ಗಣತಿ ಕಾರ್ಯದಲ್ಲಿ ಭಾಗಿಯಾಗುತ್ತಿದ್ದುದು ನನಗೆ ಅಭ್ಯಾಸವಾಗಿತು.

” ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…”

ಆಂದೋಲನ ಡೆಸ್ಕ್

Recent Posts

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ

ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ ಸಿದ್ದರಾಮಯ್ಯ ಅವರು ತಮ್ಮ ವಿದಾಯದ ಕೊನೇ ಕ್ಷಣದಲ್ಲೂ ಮಹತ್ವದ ಕ್ರಮ ಕೈಗೊಂಡಿದ್ದು,…

4 hours ago

ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ರಾಜ್ಯ ರಾಜಕೀಯದಲ್ಲೇ ಮುಂದುವರಿಯುತ್ತೇನೆ : ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು : ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಿಎಂ…

7 hours ago

ಹೈಕಮಾಂಡ್‌ ಸೂಚನೆಯಂತೆ ರಾಜೀನಾಮೆ : ಸಿದ್ದರಾಮಯ್ಯ ಸುದ್ದಿಗೋಷ್ಠಿಯ ಹೈಲೆಟ್ಸ್‌

ಬೆಂಗಳೂರು : ಹೈಕಮಾಂಡ್‌ ಸೂಚನೆಯಂತೆ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ…

7 hours ago

ಯಾರೇ ಸಿಎಂ ಆದರೂ ಕರ್ನಾಟಕ ಅಭಿವೃದ್ಧಿಯಾಗಲ್ಲ: ವಿಜಯೇಂದ್ರ

ಕೊಪ್ಪಳ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ವಿಚಾರ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ…

9 hours ago

ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್ ನಿರ್ಧಾರ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಬದಲಾವಣೆ ಎನ್ನುವುದು ಹೈಕಮಾಂಡ್‌ ನಿರ್ಧಾರ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರ…

10 hours ago

ಮುಂದೆಯೂ ಇದೇ ರೀತಿ ಸಹಕಾರ ನೀಡಿ: ಮಂತ್ರಿಗಳಿಗೆ ಡಿಸಿಎಂ ಡಿಕೆಶಿ ಮನವಿ

ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಂತ್ರಿಗಳ ಜೊತೆ ಸಹಕಾರವನ್ನು ಕೇಳಿದ್ದಾರೆ. ಸಿಎಂ ಹುದ್ದೆಗೆ ಇಂದು ಸಿದ್ದರಾಮಯ್ಯ ರಾಜೀನಾಮೆ…

11 hours ago