ಹಾಡು ಪಾಡು

ಮತಾಂಧ ಮಗ, ತಾಯಿ ಹೃದಯದ ಅಪ್ಪ …

ನಾಝಿಯಾ ಬೇಗಂ

ಆ ದಿನ ಮೂರು ಮನೆಗಳ ಗಣತಿ ಕಾರ್ಯ ಮುಗಿಸಿ ನಾಲ್ಕನೆಯ ಮನೆಗೆ ಬಂದೆ. ೩೫ರ ಆಸುಪಾಸಿನ ವಿದ್ಯಾವಂತ ತರುಣ ಮನೆಯೊಳಗಿ ನಿಂದ ಹೊರಬಂದ. ಕೈಯಲ್ಲಿದ್ದ ಸರಂಜಾಮು ಕಂಡು ಆತನಿಗೆ ಗಣತಿಗಾಗಿ ಎಂಬುದು ಗೊತ್ತಿದ್ದರೂ ‘ಏನೆಂದು’ ಕೇಳಿದ. ‘ಸಮೀಕ್ಷೆಗಾಗಿ ಬಂದಿದ್ದೇವೆ, ರೇಷನ್ ಕಾರ್ಡ್ ಬೇಕಿತ್ತು’ ಕೇಳಿದೆ. ಉದಾಸಿನನಾಗಿ ರೇಷನ್ ಕಾರ್ಡ್ ಕೈಗಿಟ್ಟಾಗ ಸರ್ವರ್ ನನ್ನ ಪುಣ್ಯಕ್ಕೆ ಸರಿಯಾಗಿ ಕೆಲಸ ಮಾಡಿತು. ಎರಡ್ಮೂರು ಪ್ರಶ್ನೆಗಳಿಗೆ ಅರೆ ಮನಸ್ಸಿನಿಂದ ಉತ್ತರಿಸಿ ನಂತರ ಆತನೇ ಉದ್ಧಟತನದ ಪ್ರಶ್ನೆಗಳನ್ನು ಕೇಳತೊಡಗಿದ.

‘ನೀವು ಮೊದಲೇ ಮುಸಲ್ಮಾನರು, ನಂಬುವುದು ಕಷ್ಟ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿದರೆ ಆಮೇಲೆ…’ ಹೀಗೆ ಏನೇನೋ ಹೇಳತೊಡಗಿದವನಿಗೆ ಗುರುತಿನ ಚೀಟಿ ತೋರಿಸಿದೆ. ಇಷ್ಟಾದರೂ ಜಗ್ಗದ ಅವನ ಹುಂಬತನ ನನ್ನ ಕಾಲಿನೊಳಗಿನ ನಡೆದ ದಣಿವಿಗೆ ಸಿಟ್ಟು ತರಿಸಿತ್ತು. ‘ಇಷ್ಟವಿಲ್ಲದಿದ್ದರೆ ನಿರಾಕರಣೆ ಪತ್ರ ಬರೆದುಕೊಡಿ’ ಹೇಳಿದೆ. ಅದಕ್ಕೂ ಒಪ್ಪದ ಯುವಕ ಇನ್ನಷ್ಟು ಕೂಗಾಡತೊಡಗಿದಾಗ ಮನೆಯೊಳಗಿನಿಂದ ಆತನ ತಂದೆ ಹೊರಬಂದು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿಫಲವಾಗಿ, ಮಗನನ್ನೇ ಅಲ್ಲಿಂದ ಸಾಗಹಾಕಿ ಉಳಿದ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಕೊಟ್ಟು ಸಹಕರಿಸಿದರು.

ಬಿಸಿಲಿಗೆ ಬಳಲಿದ್ದ ನನ್ನ ಮುಖ ನೋಡಿ ‘ನೀನು ನನ್ನ ಮಗಳಂತೆ, ಬಿಸಿಲಿಗೆ ಓಡಾಡಿ ದಣಿದಿದ್ದೀಯ, ಬಾ ಸ್ವಲ್ಪ ಶರಬತ್ತನ್ನಾದರೂ ಕುಡಿ. ಮಗನಾಡಿದ ಮಾತಿಗೆ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ’ ಎಂದು ಜ್ಯೂಸ್ ಬಾಟಲಿ ಹಿಡಿದು ಎದುರು ಕುಳಿತು ಕ್ಷಮೆಯಾಚಿಸಿದಾಗ, ಹಿರಿಯರ ಅಸಹಾಯಕ ಸ್ಥಿತಿಗೆ ನೊಂದುಕೊಂಡೆ. ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…

ಜಾತಿ, ಮತ ಧರ್ಮಗಳಾಚೆಗೆ ಮಾನವೀಯ ನೆಲೆಯಲ್ಲಿ ಒಗ್ಗಟ್ಟಿನ ಸೂತ್ರವನ್ನು ಮಕ್ಕಳಿಗೆ ಬೋಽಸುವ ನಮ್ಮ ವ್ಯಕ್ತಿತ್ವವನ್ನು ನಡವಳಿಕೆ, ಜ್ಞಾನ, ಪ್ರತಿಭೆಯ ಮೂಲಕ ಗುರುತಿಸದೆ ಹಿಜಾಬ್ ಮೂಲಕವಷ್ಟೇ ಗುರುತಿಸಿ ‘ನಾನು ಮುಸ್ಲಿಂ’ ಎಂಬ ಒಂದೇ ಕಾರಣವನ್ನು ಮುಂದಿಟ್ಟುಕೊಂಡು ಮಗ ಮಾಡಿದ ಅವಮಾನ ಶಿಕ್ಷಿತ ಸಮಾಜದಲ್ಲಿರುವ ಮೂಢತ್ವದ ಪ್ರತಿಬಿಂಬದಂತೆ ಕಂಡಿತು.

ಆಸ್ತಿ ವಿವರ ಕೊಡಲು ಹಿಂಜರಿದವರು ಕೆಲವರಾದರೆ, ವಯಸ್ಕ ಮಕ್ಕಳಿಲ್ಲದ ಮನೆಗಳಲ್ಲಿ ಒಂಟಿತನ ಅನುಭವಿಸುತ್ತಿರುವ ವಯೋವೃದ್ಧರ ಅಸಹಾಯಕತೆ ಇವೆಲ್ಲವೂ ನೋಡಸಿಕ್ಕಿತು. ಸಮೀಕ್ಷೆಗೆಂದು ಬಿಸಿಲು ಮಳೆಯೆನ್ನದೆ ಹಳ್ಳಿ ಪಟ್ಟಣಗಳನ್ನು ಸುತ್ತಿದ, ಸುತ್ತುತ್ತಿರುವ ಪ್ರತಿಯೊಬ್ಬ ಶಿಕ್ಷಕರೂ ಆತಿಥ್ಯ, ಅವಮಾನ ಹೀಗೆ ವಿಭಿನ್ನ ಸನ್ನಿವೇಶಗಳನ್ನು ಎದುರಿಸಿರುವುದಂತೂ ನಿಜ. ಇದು ಶಿಕ್ಷಕಿಯಾಗಿ ನನ್ನೊಬ್ಬಳದ್ದೇ ಅನುಭವವಲ್ಲ, ನನ್ನಂತೆ ಫೈಲು ಹಿಡಿದು ಗಣತಿ ಕಾರ್ಯಕ್ಕೆ ಹೊರಟ ಎಲ್ಲಾ ಶಿಕ್ಷಕರೂ ಎದುರಿಸುವ ಪಾಸಿಟಿವ್ ಮತ್ತು ನೆಗೆಟಿವ್ ಪ್ರತಿಕ್ರಿಯೆಗಳು. ಧನಾತ್ಮಕ ಪ್ರತಿಕ್ರಿಯೆಯನ್ನು ಗೌರವದಿಂದ ಒಪ್ಪಿಕೊಂಡು, ಋಣಾತ್ಮಕ ಮಾತಿನಿಂದ ನೋಯಿಸುವವರ ಅಜ್ಞಾನಕ್ಕೆ ಮರುಕಪಟ್ಟು ಮತ್ತೆ ಮುಂದಿನ ಮನೆಯತ್ತ ಹೆಜ್ಜೆ ಹಾಕಿ ಗಣತಿ ಕಾರ್ಯದಲ್ಲಿ ಭಾಗಿಯಾಗುತ್ತಿದ್ದುದು ನನಗೆ ಅಭ್ಯಾಸವಾಗಿತು.

” ವಿದ್ಯಾವಂತ ಮಗನ ಅಜ್ಞಾನಕ್ಕೆ ಮರುಗಬೇಕೋ ಅಥವಾ ಅಪ್ಪನ ಮಾನವೀಯ ಗುಣ ತುಂಬಿದ ಆತಿಥ್ಯಕ್ಕೆ ಖುಷಿಪಡಬೇಕೋ ಎಂಬ ಗೊಂದಲದಲ್ಲಿ ಆ ಮನೆಯ ಸಮೀಕ್ಷೆ ಮುಗಿಸಿದೆ…”

ಆಂದೋಲನ ಡೆಸ್ಕ್

Recent Posts

ಗಣೇಶ ಮೆರವಣಿಗೆಗೆ ಮುಸ್ಲಿಮರ ಸಾರಥ್ಯ ; ನಾಗಮಂಗಲದಲ್ಲಿ ಕೋಮು ಸೌಹಾರ್ದದ ಮೆರವಣಿಗೆ

ನಾಗಮಂಗಲ : ಎರಡು ವರ್ಷಗಳ ಹಿಂದೆ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪಟ್ಟಣ ಕೋಮು…

8 hours ago

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

21 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

21 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

21 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

21 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

22 hours ago