ಹಾಡು ಪಾಡು

ಶತಮಾನ ತುಂಬಿದ ಹರವೆಯ ಕನ್ನಡ ಶಾಲೆ

ಇದು ಚಾಮರಾಜನಗರದ ಬಳಿಯ ಹರವೆಯ ಮಾಧ್ಯಮಿಕ ಶಾಲಾಕಟ್ಟಡದ ಶಿಲಾನ್ಯಾಸ ಫಲಕ. ಆಗಿನ ಮೈಸೂರು ರಾಜ್ಯದ ಪ್ರಥಮ ಪ್ರಧಾನ ಸಚಿವರಾದ(ಮುಖ್ಯಮಂತ್ರಿಗಳಿಗೆ ಅಂದು ಪ್ರಧಾನ ಸಚಿವರೆಂದು ಕರೆಯುತ್ತಿದ್ದರಂತೆ) ಕೆ. ಸಿ. ರೆಡ್ಡಿಯವರೆ ಗ್ರಾಮಕ್ಕೆ ಆಗಮಿಸಿದ್ದು ಇತಿಹಾಸ.

ಹರವೆ ಗ್ರಾಮದ ಸುತ್ತಲಿನ ಇಪ್ಪತ್ತು ಮೂವತ್ತು ಗ್ರಾಮಗಳ ಮಕ್ಕಳು ಓದಿಗಾಗಿ ಮುಖ ಮಾಡಿ ಇತ್ತ ಬರಲಾರಂಭಿಸಿದ್ದರು. ಈ ಶಾಲೆ ಈ ಮೊದಲು ಮಹಾರಾಜರ ಕಾಲದಲ್ಲಿ ಪ್ರಾಥಮಿಕ ಶಾಲೆಯಾಗಿ ಶುರುವಾಗಿತ್ತಂತೆ. ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು ಸದ್ಯ ಹರವೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿರುವ ಕವಿ, ಲೇಖಕ ಮಹೇಶ್ ಹರವೆಯವರು ಶಾಲೆಯಲ್ಲಿನ ತಮ್ಮ ಓದಿನ ದಿನಗಳನ್ನು ಸಂಭ್ರಮದಿಂದ ಹಂಚಿಕೊಳ್ಳುತ್ತಾರೆ.

ಮಕ್ಕಳಿಗೆ ಹರಿಹರನ ರಗಳೆಗಳನ್ನು, ಶರಣರ ಕತೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಹೇಳಿಕೊಡುತ್ತಿದ್ದ ಸೋಮಣ್ಣ ಮೇಷ್ಟ್ರು, ಭೈರಪ್ಪರ ಪರ್ವ, ಗೃಹಭಂಗ ಕಾದಂಬರಿಗಳನ್ನ ಓದಿ ಮಕ್ಕಳಿಗೆ ಕತೆ ಹೇಳುತ್ತಿದ್ದ ಎಚ್. ನಾಗರಾಜು ಮೇಷ್ಟ್ರು, ಇಂಗ್ಲಿಷ್ ಕಲಿಸುತ್ತಿದ್ದ ಪುಟ್ಟಸ್ವಾಮಿ ಮೇಷ್ಟ್ರು ಹೀಗೆ ಸೃಜನಶೀಲ ಗುರು ಪರಂಪರೆಯನ್ನು ಪ್ರೀತಿಯಿಂದ ನೆನೆಯುವ ಮಹೇಶ್ ಹರವೆಯವರು ತಮ್ಮ ಸೃಜನಶೀಲ ನೆಲೆಯ ತಳಪಾಯ ಪ್ರೈಮರಿ ಶಾಲೆಯದ್ದು ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ ಮತ್ತು ಪ್ರಖರ ವೈಚಾರಿಕ ಪ್ರಜ್ಞೆಯ ಲೇಖಕರಾಗಿದ್ದ ದೇವಯ್ಯ ಹರವೆಯವರು ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದವರು ಎಂದು ನೆನಪಿಸಿಕೊಳ್ಳುತ್ತಾರೆ. ಇತ್ತೀಚಿಗೆ ಹಲವು ಕಾರಣದಿಂದಾಗಿ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿಯುತ್ತಿರುವಾಗ ಒಂದೇ ಶೈಕ್ಷಣಿಕ ವರ್ಷದಲ್ಲಿ ಇನ್ನೂರಕ್ಕೂ ಹೆಚ್ಚು ಮಕ್ಕಳು ದಾಖಲಾಗಿರುವ ಇತಿಹಾಸ ಶಾಲೆಯದು.

ಮಾಹಿತಿ: ಅನಿಲ್ ಕುಮಾರ್ ಹೊಸೂರು, ಶಿಕ್ಷಕರು, ಚಾಮರಾಜನಗರ

 

andolana

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

11 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

12 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

13 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

14 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

19 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

19 hours ago