ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ ಅಂಬಲಿ ಮಾಡಿ ತನ್ನ ಎಂಟು ಮಕ್ಕಳಿಗೂ ಕುಡಿಸಿ ತಾನು ಮಾತ್ರ ಹಸಿದು ಮಲಗಿದಾಕೆ. ಮೈಸೂರು ಸುತ್ತಮುತ್ತ ಹುಟ್ಟು, ಸಾವು, ಮದುವೆ, ಸೀಮಂತಗಳಿಗೆ ಹೋಗಿ ಮದುವೆ ಶಾಸ್ತ್ರದ ಹಾಡು, ಸೂತಕದ ಹಾಡು, ಎಣ್ಣೆ ಎರೆಯುವ ಹಾಡುಗಳನ್ನು ಹಾಡಿ ಅವರು ಇವರು ಕೊಟ್ಟ ಕಾಸು ಕೂಡಿಸಿ ಮೂಗಿಗೆ ಮೂಗುತಿ, ಕಿವಿಗೆ ವಾಲೆ ಮಾಡಿಸಿಕೊಂಡು ಒಂದಿಷ್ಟು ಸಂಭ್ರಮಿಸಿದಾಕೆ. ಬೆಂಗಳೂರು, ರಂಗಾಯಣ, ರಾಮನಗರ ಆಕಾಶವಾಣಿ ಇಲ್ಲೆಲ್ಲ ಹೋಗಿ ಹಾಡು ಹಸೆ ಹೇಳಿ ಒಂದಿಷ್ಟು ಕಾಸು ಕೂಡಿಸಿ ಅದರಲ್ಲೇ ಮಕ್ಕಳು ಮೊಮ್ಮಕ್ಕಳ ಬಾಣಂತನವನ್ನೂ ಮಾಡಿಸಿ ತನ್ನ ಯಜಮಾನಿಕೆ ತೋರಿಸಿದಾಕೆ.
ಈಗ ನಿಂಗಮ್ಮ ಊರು ಬಿಟ್ಟು ನಂಜನಗೂಡು, ಮಾದೇಶ್ವರನ ಬೆಟ್ಟ ಎಂದು ಸಿಟ್ಟಲ್ಲಿ ಕೊರಗಿಕೊಂಡು ಎಲ್ಲೆಲ್ಲೋ ತಿರುಗುತ್ತಿದ್ದಾರೆ. ಸಿಟ್ಟಿಗೆ ಕಾರಣ ಏನು ಎಂದು ಕೇಳಿದರೆ ದೊಡ್ಡ ಕಥೆಯನ್ನೇ ಹೇಳುತ್ತಾರೆ. ಅದು ಬಹಳ ದೊಡ್ಡ ನೋವಿನ ಕತೆ. ನೀವು ಈ ಹಾಡುಗಾರ್ತಿ ತಾಯಿಯನ್ನು ಎಲ್ಲಾದರೂ ದಾರಿಯಲ್ಲಿ ಕಂಡು ಪ್ರೀತಿಯಲ್ಲಿ ಮಾತನಾಡಿಸಿದರೆ ಖುಷಿಪಡುತ್ತಾರೆ. ಮನಸಾರೆ ಅಳುತ್ತಾರೆ ಮತ್ತು ತಮ್ಮ ಬದುಕಿನ ಕಥೆ ಹೇಳಿ ಮುಗಿಸಿ ಸಂಕಟದಲ್ಲಿ ಮುಗುಳ್ನಗುತ್ತಾರೆ.
ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…
ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…
ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…
ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…
ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್ವಾಶ್ ಮಾಡಲಾಗಿದೆ ಎಂಬ…
ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…