ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ ಅಂಬಲಿ ಮಾಡಿ ತನ್ನ ಎಂಟು ಮಕ್ಕಳಿಗೂ ಕುಡಿಸಿ ತಾನು ಮಾತ್ರ ಹಸಿದು ಮಲಗಿದಾಕೆ. ಮೈಸೂರು ಸುತ್ತಮುತ್ತ ಹುಟ್ಟು, ಸಾವು, ಮದುವೆ, ಸೀಮಂತಗಳಿಗೆ ಹೋಗಿ ಮದುವೆ ಶಾಸ್ತ್ರದ ಹಾಡು, ಸೂತಕದ ಹಾಡು, ಎಣ್ಣೆ ಎರೆಯುವ ಹಾಡುಗಳನ್ನು ಹಾಡಿ ಅವರು ಇವರು ಕೊಟ್ಟ ಕಾಸು ಕೂಡಿಸಿ ಮೂಗಿಗೆ ಮೂಗುತಿ, ಕಿವಿಗೆ ವಾಲೆ ಮಾಡಿಸಿಕೊಂಡು ಒಂದಿಷ್ಟು ಸಂಭ್ರಮಿಸಿದಾಕೆ. ಬೆಂಗಳೂರು, ರಂಗಾಯಣ, ರಾಮನಗರ ಆಕಾಶವಾಣಿ ಇಲ್ಲೆಲ್ಲ ಹೋಗಿ ಹಾಡು ಹಸೆ ಹೇಳಿ ಒಂದಿಷ್ಟು ಕಾಸು ಕೂಡಿಸಿ ಅದರಲ್ಲೇ ಮಕ್ಕಳು ಮೊಮ್ಮಕ್ಕಳ ಬಾಣಂತನವನ್ನೂ ಮಾಡಿಸಿ ತನ್ನ ಯಜಮಾನಿಕೆ ತೋರಿಸಿದಾಕೆ.
ಈಗ ನಿಂಗಮ್ಮ ಊರು ಬಿಟ್ಟು ನಂಜನಗೂಡು, ಮಾದೇಶ್ವರನ ಬೆಟ್ಟ ಎಂದು ಸಿಟ್ಟಲ್ಲಿ ಕೊರಗಿಕೊಂಡು ಎಲ್ಲೆಲ್ಲೋ ತಿರುಗುತ್ತಿದ್ದಾರೆ. ಸಿಟ್ಟಿಗೆ ಕಾರಣ ಏನು ಎಂದು ಕೇಳಿದರೆ ದೊಡ್ಡ ಕಥೆಯನ್ನೇ ಹೇಳುತ್ತಾರೆ. ಅದು ಬಹಳ ದೊಡ್ಡ ನೋವಿನ ಕತೆ. ನೀವು ಈ ಹಾಡುಗಾರ್ತಿ ತಾಯಿಯನ್ನು ಎಲ್ಲಾದರೂ ದಾರಿಯಲ್ಲಿ ಕಂಡು ಪ್ರೀತಿಯಲ್ಲಿ ಮಾತನಾಡಿಸಿದರೆ ಖುಷಿಪಡುತ್ತಾರೆ. ಮನಸಾರೆ ಅಳುತ್ತಾರೆ ಮತ್ತು ತಮ್ಮ ಬದುಕಿನ ಕಥೆ ಹೇಳಿ ಮುಗಿಸಿ ಸಂಕಟದಲ್ಲಿ ಮುಗುಳ್ನಗುತ್ತಾರೆ.
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…