ಇವರು ಮೈಸೂರಿನೊಳಗೇ ಸೇರಿಕೊಂಡಿರುವ ಬನ್ನೂರು ರಸ್ತೆ ಯರಗನಹಳ್ಳಿಯ ಸೋಬಾನೆ ಹಾಡುಗಾರ್ತಿ ನಿಂಗಮ್ಮ. ಉಸಿರೆತ್ತಿದರೆ ಇವರ ಬಾಯಿಂದ ಹಾಡುಗಳು ಬರುತ್ತವೆ. ಒಂದು ಕಾಲದಲ್ಲಿ ಮೈಸೂರಿನ ಸಾರೋಟು ಕುದುರೆಗಳಿಗೆ ಬೇಕಾದ ಹುಲ್ಲು ಕತ್ತರಿಸಿ ಮಾರಿ ಅದರಿಂದ ಬಂದ ಕಾಸಲ್ಲಿ ಭತ್ತ ರಾಗಿ ಕೊಂಡು ಅನ್ನ ಅಂಬಲಿ ಮಾಡಿ ತನ್ನ ಎಂಟು ಮಕ್ಕಳಿಗೂ ಕುಡಿಸಿ ತಾನು ಮಾತ್ರ ಹಸಿದು ಮಲಗಿದಾಕೆ. ಮೈಸೂರು ಸುತ್ತಮುತ್ತ ಹುಟ್ಟು, ಸಾವು, ಮದುವೆ, ಸೀಮಂತಗಳಿಗೆ ಹೋಗಿ ಮದುವೆ ಶಾಸ್ತ್ರದ ಹಾಡು, ಸೂತಕದ ಹಾಡು, ಎಣ್ಣೆ ಎರೆಯುವ ಹಾಡುಗಳನ್ನು ಹಾಡಿ ಅವರು ಇವರು ಕೊಟ್ಟ ಕಾಸು ಕೂಡಿಸಿ ಮೂಗಿಗೆ ಮೂಗುತಿ, ಕಿವಿಗೆ ವಾಲೆ ಮಾಡಿಸಿಕೊಂಡು ಒಂದಿಷ್ಟು ಸಂಭ್ರಮಿಸಿದಾಕೆ. ಬೆಂಗಳೂರು, ರಂಗಾಯಣ, ರಾಮನಗರ ಆಕಾಶವಾಣಿ ಇಲ್ಲೆಲ್ಲ ಹೋಗಿ ಹಾಡು ಹಸೆ ಹೇಳಿ ಒಂದಿಷ್ಟು ಕಾಸು ಕೂಡಿಸಿ ಅದರಲ್ಲೇ ಮಕ್ಕಳು ಮೊಮ್ಮಕ್ಕಳ ಬಾಣಂತನವನ್ನೂ ಮಾಡಿಸಿ ತನ್ನ ಯಜಮಾನಿಕೆ ತೋರಿಸಿದಾಕೆ.
ಈಗ ನಿಂಗಮ್ಮ ಊರು ಬಿಟ್ಟು ನಂಜನಗೂಡು, ಮಾದೇಶ್ವರನ ಬೆಟ್ಟ ಎಂದು ಸಿಟ್ಟಲ್ಲಿ ಕೊರಗಿಕೊಂಡು ಎಲ್ಲೆಲ್ಲೋ ತಿರುಗುತ್ತಿದ್ದಾರೆ. ಸಿಟ್ಟಿಗೆ ಕಾರಣ ಏನು ಎಂದು ಕೇಳಿದರೆ ದೊಡ್ಡ ಕಥೆಯನ್ನೇ ಹೇಳುತ್ತಾರೆ. ಅದು ಬಹಳ ದೊಡ್ಡ ನೋವಿನ ಕತೆ. ನೀವು ಈ ಹಾಡುಗಾರ್ತಿ ತಾಯಿಯನ್ನು ಎಲ್ಲಾದರೂ ದಾರಿಯಲ್ಲಿ ಕಂಡು ಪ್ರೀತಿಯಲ್ಲಿ ಮಾತನಾಡಿಸಿದರೆ ಖುಷಿಪಡುತ್ತಾರೆ. ಮನಸಾರೆ ಅಳುತ್ತಾರೆ ಮತ್ತು ತಮ್ಮ ಬದುಕಿನ ಕಥೆ ಹೇಳಿ ಮುಗಿಸಿ ಸಂಕಟದಲ್ಲಿ ಮುಗುಳ್ನಗುತ್ತಾರೆ.

andolana

Recent Posts

ಕೆಕೆಆರ್‌ಗೆ ಮುಖಭಂಗ ; ಮೊದಲ ಗೆಲುವು ದಾಖಲಿಸಿದ ಎಸ್‌ಆರ್‌ಎಚ್‌

ಕೋಲ್ಕತ್ತಾ : ಹೆನ್ರಿಚ್ ಕ್ಲಾಸೆನ್ ಅರ್ಧಶತಕದಾಟ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡರ್ ಆಟದ ನೆರವಿನಿಂದ ಅತಿಥೇಯ ಕೋಲ್ಕತ್ತಾ…

3 hours ago

ಮೈಸೂರು ಫಾಲ್ಕನ್ ಟೈರ್ಸ್‌ನ ಮಾಜಿ ಮಾಲೀಕ ರುಹಿಯಾ ಬಂಧನ

315 ಕೋಟಿ ಸೈಬರ್ ವಂಚನೆ ಪ್ರಕರಣದಲ್ಲಿ ಬಂಧನ ಕೋಲ್ಕತ್ತಾ : ಶೆಲ್‌ ಕಂಪನಿಗಳು ಮತ್ತು ಕ್ರಿಪ್ಟೋಕರೆನ್ಸಿ ಆಧಾರಿತ ಹಣ ವರ್ಗಾವಣೆಯ…

5 hours ago

ಹೊರ್ಮುಜ್ ಕುರಿತು ಬ್ರಿಟನ್ ನೇತೃತ್ವದ ಸಭೆಯಲ್ಲಿ ಭಾರತ ಭಾಗವಹಿಸಲಿದೆ

ಲಂಡನ್‌ : ಇರಾನ್-ಅಮೆರಿಕ-ಇಸ್ರೇಲ್ ಸಂಘರ್ಷದ ನಡುವೆ ಫೆಬ್ರವರಿ 28ರಿಂದ ಮುಚ್ಚಲ್ಪಟ್ಟಿರುವ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಚರ್ಚಿಸಲು ಬ್ರಿಟನ್…

5 hours ago

ಸಂವಿಧಾನ ಬದಲಾವಣೆ ಅಸಾಧ್ಯ : ಮುಖ್ಯಮಂತ್ರಿ ಚಂದ್ರು

ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…

6 hours ago

KSOU | ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…

6 hours ago

ನಕ್ಸಲ್ ಮುಕ್ತ ಮಾಡಿದ ಮೊದಲ ರಾಜ್ಯ ಕರ್ನಾಟಕ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…

7 hours ago