ಆಂದೋಲನ ಪುರವಣಿ

ಅರ್ಜಿ ಬರೆದುಕೊಡುತ್ತಾ ಬರಹಗಾರನಾದೆ

 

ಮಧುಕರ ಮಳವಳ್ಳಿ
madhukaramalavalli@gmail.com

ಡಿಗ್ರಿ ಓದುವ ಸಮಯ ಮತ್ತು ಡಿಎಸ್‌ಎಸ್‌ನ ಚಳವಳಿಯ ಕಾವು ನನಗಿತ್ತು. ನಮ್ಮೂರು ಮಳವಳ್ಳಿ. ತಾಲ್ಲೂಕು ಕೇಂದ್ರ ಕೂಡ. ಸುತ್ತಮುತ್ತಲಿನ ಗ್ರಾಮದವರು ತಾಲ್ಲೂಕು ಕಚೇರಿಗೆ ಬರುತ್ತಿದ್ದರು. ಹಾಗೆ ಬಂದವರು ಟೀ-ಕಾಫಿ ಅಂಗಡಿಗೆ ಬಂದು ‘‘ಸ್ವಾಮಿ ಅಪ್ಪ’’ ಎನ್ನುತ್ತ ಜಾತಿ ಪ್ರಮಾಣಪತ್ರ, ಪೊಲೀಸ್ ಠಾಣೆಗೆ ಅರ್ಜಿ, ಪಿಂಚಣಿಗೆ ಇತ್ಯಾದಿಗೆ ಅರ್ಜಿ ಬರೆದುಕೊಡಿ ಎಂದು ಬಹಳ ಭಯ ಭಕ್ತಿಯಿಂದ ಕೇಳ್ತಿದ್ರು. ಇದ್ನೆಲ್ಲ ನೋಡುವಾಗ ಮನದಲ್ಲಿ ಒಂದು ರೀತಿಯ ತಾಕಲಾಟ.
ಒಂದಿನ ಸುಮಾರು ಪ್ರಾಯದ ಹೆಂಗಸು ಬಂದು ಟೀ ಕಂ ಸ್ಟೇಷನರಿ ಅಂಗಡಿಯ ಮುಂದೆ ಕುಳಿತಳು. ಸುಮಾರು ಹೊತ್ತು ಕಳೆದ ನಂತರ ಆ ಹೆಂಗಸು ‘ಅಣ್ಣ ಇಲ್ಲಿ ಅರ್ಜಿ ಬರ್ದು ಕೊಡ್ತಾರಲ್ಲಾ ಅವುತ್ರೃ ಬಂದಿಲ್ವಾ’ ಎಂದಳು. ‘ಯಾಕಮ್ಮ’ ಅಂದೆ. ‘ನಂಗೆ ಮುಂಡೆ ಪಿಂಚಣಿ ಮಾಡುಸ್ಬೇಕು’ ಅಂದಳು. ‘ಅಲ್ಲಮ್ಮ ನೀ ಓದಿಲ್ವಾ. ಒಂದ್ ಅರ್ಜಿ ಬರೆಯೋಕಾಗಲ್ವ’ ಅಂದೆ. ‘‘ಅಯ್ಯೋ ಹೆಣ್ಮಕ್ಳು ಹೆಚ್ಚು ಓದ್ಬಾರ್ದು ಅಂತ ನಮ್ ಮನೇಲಿ ಸ್ಕೂಲ್ ಬಿಡುಸ್ಬುಟ್ರು. ಅದು ಅಲ್ದೆ ನಾವು ತಳ’ ಆ ಜಾತಿಯವುತ್ರೃ. ನಮ್ಗೆ ಯಾಕಪ್ಪ ಓದು ಬರಹ, ನೀನು ಅರ್ಜಿ ಬರೆಯವ್ರ ತೋರ್ಸಪ್ಪ’’ ಅಂದಳು.

ಅರ್ಜಿ ಬರೆದುಕೊಡಲು ಇಪ್ಪತ್ತು ರೂಪಾಯಿ ಕೊಡಬೇಕಾಗುತ್ತೆ ಎಂದೆ. ಆ ಹೆಂಗಸು ‘ಫಸ್ಟ್ ಸರಿ ಬರುವ ಪಿಂಚಣಿಯ ಎಲ್ಲಾ ಅವರೆ ತಕ್ಕಳ್ಲಿ. ಅದು ಬರೋಹಂಗೆ ಮಾಡ್ಲಿ’ ಎನ್ನುತ್ತ ಕಣ್ಣೀರು ಹಾಕಿ ‘ನಂಗೆ ಯಾರು ದಿಕ್ಕುದೆಸೆ ಇಲ್ಲ. ಆ ಮುಂಡೆಮಗ ಏಡ್ ಮಕ್ಕಳ ಕೊಟ್ಬುಟ್ಟು ಮಣ್ ಪಾಲಾದ. ಕೂಲಿನಾಲಿ ಮಾಡಿ ಮಕ್ಕಳ ಸಾಕ್ತೀನಿ. ಸಣ್ಣಪುಟ್ಟ ಸಾಲ ಮಾಡುದ್ರೆ ಈ ದುಡ್ಡಿಂದ ಆ ಸಾಲ ತೀರುಸ್ಬಹುದು’ ಎಂದು ಧೈರ್ಯದಿಂದಲೇ ಹೇಳಿದಳು. ತಕ್ಷಣವೇ ಅಂಗಡಿಯಲ್ಲಿ ಹಾಳೆ ತೆಕ್ಕೊಂಡು ನನಗೆ ತಿಳಿದ ರೀತಿಯಲ್ಲಿ ಅರ್ಜಿ ಬರೆದುಕೊಟ್ಟೆ. ‘ಟೀ ನಾದ್ರು ಕುಡ್ಕಪ್ಪ’ ಎನ್ನುತ್ತ ಐದು ರುಪಾಯಿ ನೋಟ ಕೈಗಿಟ್ಟು ಹೊರಟಳು.

ಆಗ ನಾಲ್ಕು ಸಾಲು ಅರ್ಜಿ ಬರಸ್ಕೋಳೋಕೆ ಜನ ಅಕ್ಷರ ಜ್ಞಾನವಿಲ್ಲದೇ ಯಾಕ್ ಪರ್ದಾಡ್‌ಬೇಕು. ಇದಕ್ಕೆ ಏನಾರ ಮಾಡ್ಬೇಕು. ಅಂತ ಯೋಚನೆ ಶುರುವಾಯ್ತು. ಆಗ ಮನ್ಸಿಗೆ ಮೂಡಿದ್ದು ನಮ್ ಜನಕ್ಕೆ ಶಿಕ್ಷಣದ ಅರಿವು ಮೂಡುಸ್ಬೇಕು. ಅದನ್ನ ಹೇಳೋರೀತಿ ಹೆಂಗೆ ಅಂತ ಯೋಚ್ನೆ ಮಾಡಿ ಕವಿತೆ ಬರಿೋಂಕೆ ಶುರುಮಾಡ್ದೆ. ಒಂದೆರಡು ಕವಿತೆಗಳು ಸ್ಥಳೀಯ ಪತ್ರಿಕೇಲಿ ಪ್ರಕಟವಾದ್ವು. ಮತ್ತೆ ಯೋಚನೆ ಶುರುವಾಯ್ತು. ಓದುಬರಹ ತಿಳಿಯದ ಜನಕ್ಕೆ ಕವಿತೆ ಓದಿ ಹೇಳೋರ್ಯಾರು ಅಂತ. ಆಗ ಬೀದಿ ನಾಟಕಗಳ ಚಳವಳಿ ತುಂಬಾ ಇತ್ತು. ನಾನು ಒಂದ್ ತಂಡ ಸೇರ್ಕಂಡು ನಾಟ್ಕ ಮಾಡ್ತ ಹಳ್ಳಿಗಳಿಗೆ ಹೋದಾಗ ಎಲ್ಲರಿಗೂ ಶಿಕ್ಷಣ ಪಡಿಬೇಕು ಅಂತ ಹೇಳೋಕ್ ಶುರುಮಾಡ್ದೆ. ಇಂತ ಘಟನೆಗಳೇ ನನ್ನೊಳಗಿನ ಬರಹಗಾರನನ್ನು ಉಂಟುಮಾಡಿವೆ.

andolana

Recent Posts

ಸಿದ್ದಾಪುರ | ಕಾಡಾನೆ ದಾಳಿಗೆ ಓರ್ವ ಗಂಭೀರ

ಸಿದ್ದಾಪುರ : ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾಲ್ಕೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯತ್‌ಮಂಗಲ…

43 mins ago

ನೀಟ್-ಯುಜಿ ಪತ್ರಿಕೆ ಸೋರಿಕೆ ಪ್ರಕರಣ : ವೈದ್ಯ ಸೇರಿ ಇಬ್ಬರ ಬಂಧನ

ಹೊಸದಿಲ್ಲಿ : ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಲಾತೂರ್ ಮೂಲದ ವೈದ್ಯರು ಮತ್ತು ಪುಣೆಯ ಕೋಚಿಂಗ್ ಸಂಸ್ಥೆಯ ಭೌತಶಾಸ್ತ್ರ…

1 hour ago

ನಾಳೆ ಸಿಎಂ-ಡಿಸಿಎಂ ಉಪಹಾರ ಸಭೆ!

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…

2 hours ago

ಎಂ.ಬಿ.ನಾಗಣ್ಣಗೌಡ ವಿರುದ್ಧ ಉಪ ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲು

ಮಂಡ್ಯ: ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡ ವಿರುದ್ಧ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ಮಾನಹಾನಿಗೆ ಸಂಬಂಧಿಸಿದಂತೆ…

2 hours ago

ನಾಳೆ ಸಿಎಂ-ಡಿಸಿಎಂ ಉಪಹಾರ ಸಭೆ

ಬೆಂಗಳೂರು : ಮುಖ್ಯಮಂತ್ರಿ ಬದಲಾವಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿರುವ ಮಧ್ಯೆ ಗುರುವಾರ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಿಎಂ…

3 hours ago

ಜೂನ್ 4ರಿಂದ ಚೀತಾಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯ : ಈಶ್ವರ ಖಂಡ್ರೆ

ಬೆಂಗಳೂರು : ಕಳೆದ ಏಪ್ರಿಲ್ 18ರಂದು ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ 4 ಶಿವಂಗಿಗಳ ಕ್ವಾರಂಟೈನ್ ಅವಧಿ ಮುಗಿದಿದ್ದು, ಜೂನ್…

3 hours ago