ಒಂದು ಕಾಲದಲ್ಲಿ ಮೈಸೂರಿನ ಸಯ್ಯಾಜಿರಾವ್ ರಸ್ತೆ- ಸರ್ದಾರ್ ಪಟೇಲ್ ರಸ್ತೆಗಳು ಸೇರುವ ಒಂದು ಮೂಲೆಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜನಸಂದಣಿಯನ್ನು ಅಯಸ್ಕಾಂತದಂತೆ ಸೆಳೆಯುತ್ತಿದ್ದ ಶ್ರೀಯುತ ದಿನೇಶ್ ಚಂದ್ರ ಮಿಶ್ರಾ ಅವರಿಗೆ ಈಗ ೮೫ ವರ್ಷ! ಈಗ ಇವರ ಬಾನ್ಸುರಿಯ ಸದ್ದು ಕೇಳಬೇಕಾದರೆ ಅಲ್ಲೇ ಪಕ್ಕದಲ್ಲಿರುವ ಅರಸು ಕಾಂಪ್ಲೆಕ್ಸಿನಲ್ಲಿರುವ ಇವರ ಪೆನ್ನಿನ ಅಂಗಡಿಗೆ ಹೋಗಿ ಒಂದು ಪೇಪರಿನಲ್ಲಿ ಬರೆದು ಇವರ ಬಳಿ ಕೇಳಿಕೊಳ್ಳಬೇಕು. ಏಕೆಂದರೆ ವೋಂಸಹಜ ಕಾರಣಗಳಿಂದಾಗಿ ಇವರ ಶ್ರವಣಶಕ್ತಿ ಮಂದವಾಗಿದೆ. ಇನ್ನೂ ಒಂದು ವಿಷಯವೆಂದರೆ ಕೆಲವು ವರ್ಷಗಳ ಹಿಂದೆ ನಡೆದ ಹೃದಯ ಶಸ್ತ್ರ ಚಿಕಿತ್ಸೆಯಿಂದಾಗಿ ಇವರಿಗೆ ಒಂದು ನಿಮಿಷಕ್ಕಿಂತ ಹೆಚ್ಚು ಬಾನ್ಸುರಿ ನುಡಿಸಲೂ ಆಗುವುದಿಲ್ಲ.

ದಿನೇಶ್ ಚಂದ್ರ ಮಿಶ್ರಾ ಅವರ ಹಿರಿಯರು ಉತ್ತರ ಪ್ರದೇಶದ ಕನೌಜ್ ಪ್ರದೇಶಕ್ಕೆ ಸೇರಿದವರು. ನಂತರ ಕಾರಣಾಂತರಗಳಿಂದಾಗಿ ಕಲಕತ್ತಾಗೆ ವಲಸೆ ಹೋದವರು. ಅಲ್ಲಿ ಅವರಿಗೆ ಒಂದು ಪೆನ್ನಿನ ಕಾರ್ಖಾನೆ ಇತ್ತು. ಆ ಪೆನ್ನು ಮಾರುತ್ತಾ ದೇಶ ಸುತ್ತುತ್ತಿದ್ದ ಮಿಶ್ರಾ ಅವರಿಗೆ ಮೈಸೂರು ಯಾಕೋ ಇಷ್ಟವಾಯಿತು. ಆ ಕಾರಣದಿಂದ ಇಲ್ಲೇ ಉಳಿದುಕೊಂಡರು. ರಸ್ತೆ ಬದಿಯಲ್ಲಿ ಪೆನ್ನು ಮಾರುತ್ತಾ, ಬಾನ್ಸುರಿ ನುಡಿಸುತ್ತಾ ಜೀವನ ಕಟ್ಟಿಕೊಂಡರು. ಈಗ ಇವರ ಮಗ ಖ್ಯಾತ ಬಾನ್ಸುರಿ ವಾದಕ ಮತ್ತು ತಯಾರಕ. ಮಗಳು ಹೆಸರಾಂತ ಮಾಧ್ಯಮ ತಜ್ಞೆ. ಆದರೆ ಈ ಯಾವುದರ ಪರಿವೆಯೂ ಇಲ್ಲದೆ ಮಿಶ್ರಾ ಅವರು ವಾರದ ದಿನಗಳಲ್ಲಿ ಅಪರಾಹ್ನ ಎರಡರಿಂದ ಇರುಳಿನ ತನಕ ತಮ್ಮ ಅಂಗಡಿಯಲ್ಲಿ ಕೂತಿರುತ್ತಾರೆ ಮತ್ತು ಮನಸಾದಾಗ ಸಣ್ಣಗೆ ಬಾನ್ಸುರಿಯನ್ನೂ ಬಾರಿಸುತ್ತಾರೆ.

ಮಿಶ್ರಾ ಅವರು ಮೈಸೂರಿನ ರಾಜಮಾರ್ಗದ ಬದಿ ಬಾನ್ಸುರಿ ನುಡಿಸಲು ತೊಡಗಿ ಐವತ್ತು ವರ್ಷಗಳಾಗುತ್ತಾ ಬಂತು. ಅವರ ‘ಹಾರ್ವೆಸ್ಟ್’ ಪೆನ್ನಿನ ಕಾರ್ಖಾನೆ ನಿಂತು ಹೋಗಿದೆ. ಬಾನ್ಸುರಿ ನುಡಿಸುವ ಶಕ್ತಿಯೂ ಕುಂದುತ್ತಾ ಬಂದಿದೆ. ಆದರೂ ಏನೂ ಗೊಣಗದೆ, ಯಾರನ್ನೂ ದೂರದೆ ಮೈಸೂರನ್ನೂ ಇನ್ನಷ್ಟು ಪ್ರೀತಿಸುತ್ತಿರುವ ಅವರಿಗೆ ನಾವು ಕೃತಜ್ಞರಾಗಬೇಕಾಗಿದೆ.

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago