ಗೋಪಾಲಸ್ವಾಮಿ ಬೆಟ್ಟದ ಕಡೆಗೆ ಪ್ರಯಾಣ
ಮನಸ್ಸು ಮತ್ತೆ ಮತ್ತೆ ನಿನ್ನನೇ ಬೇಡಿದೆ. ಎಷ್ಟು ಬೇಗ ನಿನ್ನೊಡಲ ಸೇರಿ ತಣ್ಣಗೆ ಮಲಗಲಿ ಎನ್ನಿಸುತ್ತಿದೆ. ಹೀಗೆಲ್ಲಾ ಹೇಳಿದ ತಕ್ಷಣ ವಿವಿಧ ಭಾವಗಳು ಮೂಡುವುದು ಸಹಜ. ಅದಕ್ಕೆ ಮೊದಲೇ ಬ್ರೇಕ್ ಹಾಕಬೇಕು ಎಂದೇ ನಾನು ಹೇಳುತ್ತಿರುವುದು ಚಾರಣದ ಬಗ್ಗೆ ಎಂದು ಖಚಿತಪಡಿಸುತ್ತೇನೆ.
ತಿಂಗಳಿಗೆ ಒಮ್ಮೆಯಾದರೂ ಗೆಳೆಯರೊಡನೆಯೊ, ಏಕಾಂಗಿಯಾಗಿಯೋ ಚಾರಣ ಹೋಗಬೇಕು, ಬೆಟ್ಟ ಹತ್ತಿ ಇಳಿಯಬೇಕು, ಗಾಳಿಗೆ ಮೈ ಒಡ್ಡಿ, ಹಸಿರ ರಾಶಿಯನ್ನು ಕಣ್ಣಿಗೆ ತುಂಬಬೇಕು. ಇಲ್ಲದೇ ಇದ್ದರೆ ಮನಸ್ಸು ಮತ್ತೆ ಮತ್ತೆ ತಿವಿಯುತ್ತಲೇ ಇರುತ್ತದೆ. ಜೇಬಿನ ತೂಕ, ಕಷ್ಟ, ನಷ್ಟಗಳ, ಕಮೀಟ್ ಮೆಂಟ್ ಗಳ ಗೊಡವೆ ಅದಕ್ಕೆ ಬೇಕಿಲ್ಲ. ಚಂದದ ಚಾರಣ ಒಂದು ದೊರೆತರೆ ಮುಂದಿನ ದಿನಗಳೆಲ್ಲಾ ಹರುಷಮಯ. ಇದೊಂದು ರೀತಿಯ ರೀಫ್ರೆಶ್ಮೆಂಟ್.
ಹಿಂದೆ ಹತ್ತಾರ ಬಾರಿ ವಿವಿಧ ಸ್ಥಳಗಳಿಗೆ ಚಾರಣ ಹೋಗಿದ್ದೇನೆ. ಒಮ್ಮೊಮ್ಮೆ ಒಬ್ಬನೇ, ಕೆಲವೊಮ್ಮೆ ಗೆಳೆಯರು, ಫ್ಯಾಮಿಲಿ ಜೊತೆಗೆ. ಒಂದೊಂದೂ ರೋಚಕ ಅನುಭವ. ಕೆಲವರಲ್ಲಿ ಕಹಿಯೂ ಇದೆ. ಆದರೆ ಒಟ್ಟಾಗಿ ಸೇರಿಸಿ ಅರೆದರೆ ಅದೊಂದು ರಸಪಾಕವೇ ಸೈ. ಅದಕ್ಕಾಗಿಯೇ ಬೆಟ್ಟ ಸುತ್ತುವುದು, ಕಾಡಲ್ಲಿ ಅಲೆಯುವುದು, ನೀರ ತಟದಲ್ಲಿ ಮೌನವಾಗಿ ಕೂತುಬಿಡುವುದು ನನಗೆ ಇಷ್ಟ. ಈ ಇಷ್ಟಕ್ಕಾಗಿಯೇ ಮನ ತುಡಿಯುವುದು. ಸಂತೋಷದ ಕಡೆಗೆ ಜೀವ ಜೀಕುವುದು ಎಂದರೆ ಇದೆನಾ? ಎಂದು ಹಲವಾರು ಬಾರಿ ಅನ್ನಿಸಿದೆ. ಅದು ನಿಜವೋ ಸುಳ್ಳೋ ಆದರೆ ನನ್ನ ಪಾಲಿಗೆ ಬರಿದಾದ ಬ್ಯಾಟರಿಗೆ ಕಾಡು, ಮೇಡು ಜಾರ್ಜಿಂಗ್ ಪಾಯಿಂಟ್.
ಈಗ ತಿಂಗಳು ತುಂಬುತ್ತಾ ಬಂದಿದೆ ಕಡೆಯ ಸಾವನದುರ್ಗದ ಚಾರಣಕ್ಕೆ. ಮುಂದೆ ಎಲ್ಲಿಗೆ ಹೋಗಬೇಕು ಎನ್ನುವ ಪಟ್ಟಿಯಲ್ಲಿ ನೂರಾರು ಸ್ಥಳಗಳಿವೆ. ಆದರೆ ಈ ಮಳೆಗಾಲದಲ್ಲಿ ಎಲ್ಲೆಲ್ಲೊ ಪ್ಲ್ಯಾನ್ ಬೇಡ ಎಂಬುದು ಕುಟುಂಬದವರ, ಸ್ನೇಹಿತರ ಸಲಹೆ. ಅದಕ್ಕಾಗಿಯೇ ನಾನು ಅಳೆದು ತೂಗಿ ಚಾಮರಾಜನಗರದ, ಗುಂಡ್ಲುಪೇಟೆ ತಾಲ್ಲೂಕಿನ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವ ಮನಸ್ಸು ಮಾಡಿರುವೆ. ಅಲ್ಲಿ ಚಾರಣಕ್ಕೆ ಅವಕಾಶ ಇಲ್ಲ. ಸರ್ಕಾರಿ ಬಸ್ಸಿನಲ್ಲೇ ಬೆಟ್ಟಕ್ಕೆ ಹೋಗಬೇಕು ಎಂಬುದು ಗೊತ್ತಿದೆ. ಅದು ಸಣ್ಣ ಬೇಸರ. ಆದರೂ ಹೊಸ ಅನುಭವ ಇರಲಿ ಅಲ್ಲವೇ. ಬಸ್ಸಿನಲ್ಲಿಯೇ ಬೆಟ್ಟವೇರಿದರೂ ಬೆಟ್ಟದ ತುದಿಯಲ್ಲಿನ ತಂಪು, ಹಿತವಾದ ಗಾಳಿ, ಹಸಿರು ಹೊದ್ದ ಬೆಟ್ಟಗಳನ್ನು ಎಷ್ಟೊತ್ತಿಗೆ ನೋಡಲಿ ಎನ್ನುವ ತವಕ. ಅದೃಷ್ಟವಿದ್ದರೆ ಜಿಂಕೆ, ಆನೆಗಳ ಹಿಂಡು ಕಾಣುತ್ತವೆಯಂತೆ. ಆ ಅದೃಷ್ಟ ನನ್ನದಾಗಲಿ. ಹಿಮವನ್ನೇ ಹೊದ್ದಿರುವ ಗೋಪಾಲಸ್ವಾಮಿ ಮೈ ಮೇಲಿನ ಹಿಮ ನನ್ನನ್ನೂ ತುಸು ಸ್ಪರ್ಶಿಸಲಿ ಎನ್ನುವ ತುಡಿತ.
– ದೀಕ್ಷಿತ್ ಬಿ.ಎಸ್., ಎಸ್.ಬಿ.ಎಂ.ಲೇಔಟ್, ಮೈಸೂರು
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…