ಆಂದೋಲನ ಪುರವಣಿ

ಸಿನಿಮಾಲ್‌ : ಇಂದು ತೆರೆಗೆ

ಪರಭಾಷಾ ಚಿತ್ರಗಳ ಅಬ್ಬರದ ನಡುವೆ ಮೂರು ಕನ್ನಡ ಚಿತ್ರಗಳು
ಸಂಕ್ರಾಂತಿಯ ವೇಳೆ ಪರಭಾಷಾ ಚಿತ್ರಗಳದೇ ಕಾರುಬಾರು. ಪ್ರದರ್ಶಕರು, ವಿತರಕರು ಅವುಗಳ ಮೇಲೆ ತೋರಿಸುವ ಅಕ್ಕರೆಯನ್ನು ಕನ್ನಡ ಚಿತ್ರಗಳ ಮೇಲೆ ತೋರಿಸುತ್ತಿಲ್ಲ. ತಮಿಳಿನ ಎರಡು, ತೆಲುಗಿನ ಎರಡು ಅದ್ಧೂರಿ ಚಿತ್ರಗಳು ರಾಜ್ಯದ ಬಹುತೇಕ ಪರದೆಗಳನ್ನು ಇಂದಿನಿಂದ ಆವರಿಸುತ್ತಿದ್ದು (ಮೊನ್ನೆೆಯೇ ತಮಿಳು ಚಿತ್ರಗಳ ಬಿಡುಗಡೆ ಆಗಿದೆ) ಕನ್ನಡ ಚಿತ್ರಗಳ ಎತ್ತಂಗಡಿ ಆಗುತ್ತಿವೆ. ಹೀಗಿದ್ದೂ ಈ ವಾರ ಮೂರುಕನ್ನಡ ಚಿತ್ರಗಳು ಬಿಡುಗಡೆ ಆಗುತ್ತಿವೆ. ಅವುಗಳು ಸಮಾಧಾನ ಸಂಸ್ಥೆಗಾಗಿ ಬಿ.ಎಸ್.ಲಿಂಗದೇವರು ನಿರ್ದೇಶಿಸಿರುವ ‘ವಿರಾಟಪುರವಿರಾಗಿ’, ಮೈಸೂರಿನ ಯುವಕರೇ ಸೇರಿ ನಿರ್ಮಿಸಿರುವ ‘ಆರ್ಕೆಸ್ಟ್ರಾ ಮೈಸೂರು’ ಮತ್ತು ಕಿರುತೆರೆ ರಿಯಾಲಿಟಿ ಕಾರ್ಯಕ್ರಮ ಬಿಗ್‌ಬಾಸ್ ವಿಜೇತ ರೂಪೇಶ್‌ಶೆಟ್ಟಿ ಅಭಿನಯದ‘ಮಂಕುಬಾಯಿ ಫಾಕ್ಸಿರಾಣಿ’ ಈ ಮೂರು ಚಿತ್ರಗಳು.

‘ವಿರಾಟಪುರ ವಿರಾಗಿ’
ಸವಾಧಾನ ಸಂಸ್ಥೆಯ ಮೂಲಕ ತಯಾರಾದ‘ವಿರಾಟಪುರ ವಿರಾಗಿ’ ಚಿತ್ರವನ್ನು ಬಿ.ಎಸ್.ಲಿಂಗದೇವರು ನಿರ್ದೇಶಿಸಿದ್ದಾರೆ. ಆಧುನಿಕ ಬಸವಣ್ಣ ಎಂದೇ ಹೆಸರಾಗಿದ್ದ, 20ನೇ ಶತಮಾನದ ಆರಂಭದಲ್ಲಿಯೇ ಹೊಸ ಮನ್ವಂತರಕ್ಕೆ ಭದ್ರ ಬುನಾದಿ ಹಾಕಿದ ಹಾನಗಲ್ಲ ಶ್ರೀ ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆ ಇದಾಗಿದ್ದು, ಕುಮಾರಸ್ವಾಮಿಗಳ ಪಾತ್ರದಲ್ಲಿ ಸುಚೇಂದ್ರಪ್ರಸಾದ್ ಅವರಿದ್ದು, ಅವರ ಬಾಲ್ಯದ ಪಾತ್ರಗಳಲ್ಲಿ ಮಾಸ್ಟರ್ ಸಮರ್ಥ ಮತ್ತು ಸಮರ್ಥ ಕಾಣಿಸಿಕೊಂಡಿದ್ದಾರೆ. ಕೆಲವು ಮಂದಿ ಸ್ವಾಮೀಜಿಗಳೂ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ. ಮಣಿಕಾಂತ್‌ಕದ್ರಿ ಸಂಗೀತ ಸಂಯೋಜನೆ, ಅಶೋಕ್ ವಿ.ರಾಮನ್‌ಛಾಯಾಗ್ರಹಣ, ಎಸ್.ಗುಣಶೇಖರನ್ ಸಂಕಲನ ಈ ಚಿತ್ರಕ್ಕಿದೆ.

‘ಆರ್ಕೆಸ್ಟ್ರಾ ಮೈಸೂರು’
ಅಶ್ವಿನ್ ಕ್ರಿಯೇಶನ್ಸ್ ಮತ್ತು ದೀಕ್ಷಿತ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾಗಿರುವ ‘ಆರ್ಕೆಸ್ಟ್ರಾ ಮೈಸೂರು’ ವಾದ್ಯವೃಂದ ಸೇರಬೇಕೆಂದು ಹಂಬಲಿಸುವ ಯುವಕನೊಬ್ಬನ ಕಥಾನಕ ಎನ್ನಲಾಗಿದ್ದು, ನಗರದ ಪ್ರತಿಭಾವಂತರೇ ಈ ಚಿತ್ರದಲ್ಲಿದ್ದಾರೆ. ಸುನಿಲ್ ಮೈಸೂರು ನಿರ್ದೇಶನದ ಈ ಚಿತ್ರದ ತಾರಾಗಣದಲ್ಲಿ ಪೂರ್ಣಚಂದ್ರ ಮೈಸೂರು, ರಾಜಲಕ್ಷ್ಮೀ, ದಿಲೀಪ್‌ರಾಜ್, ಮಹೇಶ್‌ಕುಮಾರ್, ರವಿ ಹುಣಸೂರು, ಲಿಂಗರಾಜು, ಮಹದೇವ ಪ್ರಸಾದ್ ಮುಂತಾದವರಿದ್ದಾರೆ. ಜೋಸೆಫ್ ಕೆ.ರಾಜ ಛಾಯಾಗ್ರಹಣ, ಸಂಕಲನದ ಈ ಚಿತ್ರದ ಸಂಗೀತ ಸಂಯೋಜನೆ ನಿರ್ಮಾಪಕರಲ್ಲಿ ಒಬ್ಬರೂ ಆಗಿರುವ ರಘು ದೀಕ್ಷಿತ್.

‘ಮಂಕುಬಾಯಿ ಫಾಕ್ಸಿರಾಣಿ’
ಜೋಶ್ವಾ ಮೀಡಿಯಾ ಸಂಸ್ಥೆಯ ಮೂಲಕ ಜೋಶ್ವಾ ಜೈಶಾನ್ ಕ್ರಾಸ್ತಾ ನಿರ್ಮಿಸಿರುವ ಚಿತ್ರ ‘ಮಂಕುಬಾಯಿಫಾಕ್ಸಿರಾಣಿ’. ಗಗನ್ ಎಂ. ನಿರ್ದೇಶನದ ಈ ಚಿತ್ರ ಯುವಕನೊಬ್ಬ ತನ್ನ ಗೆಳೆಯರಿಗೆ ಇದ್ದ ಹಾಗೆ ತನಗೂ ಒಬ್ಬಾಕೆ ಗೆಳತಿ ಬೇಕು ಎಂದುಕೊಂಡು ಆಕೆಯ ಹುಡುಕಾಟದ ಕಥೆ ಎನ್ನಲಾಗಿದ್ದು, ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಮುಖ್ಯಭೂಮಕೆಯಲ್ಲಿದ್ದಾರೆ. ಅವರೊಂದಿಗೆ ಗೀತಾ ಭಾರತಿ ಭಟ್, ಪಂಚಮಿ ರಾವ್, ಅರುಣ್‌ಕಜೆ, ಪ್ರಕಾಶ್ ತುಮಿನಾಡ್, ಶೈಲಶ್ರೀ ಮುಲ್ಕಿ ಮುಂತಾದವರಿದ್ದಾರೆ. ವಿನ್ಯಾಸ್ ಮಧ್ಯ ಶಮೀರ್ ಮುಡಿಪು ಸಂಗೀತ ಸಂಯೋಜನೆ, ಶಾಜಹಾನ್ ಛಾಯಾಗ್ರಹಣ, ಸುಶಾಂತ್ ಶೆಟ್ಟಿ ಸಂಕಲನ ಚಿತ್ರಕ್ಕಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago