ಆಂದೋಲನ ಪುರವಣಿ

ಸಿನಿಮಾಲ್‌ : ಇಂದು ತೆರೆಗೆ

ʼತನುಜಾ’, ನಟಭಯಂಕರ’ರ ವಾರ
ಈ ವಾರ ಎರಡು ಚಿತ್ರಗಳು ತೆರೆಗೆ ಬರುತ್ತಿವೆ. ವೈದ್ಯಕೀಯ ಪದವಿ ಪಡೆಯಲು ಪೂರ್ವಪರೀಕ್ಷೆ ?ನೀಟ್’ ಬರೆಯಲು ಪತ್ರಿಕೆ, ಸರ್ಕಾರಗಳ ನೆರವಿನಿಂದ ಸಾಧ್ಯವಾದ ವಿದ್ಯಾರ್ಥಿನಿಯೊಬ್ಬಳ ನಿಜಕಥೆಯನ್ನು ಹೇಳುವ ?ತನುಜಾ’ ಮತ್ತು ಕಿರುತೆರೆಯ ಬಿಗ್‌ಬಾಸ್ ರಿಯಾಲಿಟಿ ಕಾರ್ಯಕ್ರಮದ ಮೂಲಕ ಪರಿಚಯವಾದ ಪ್ರಥಮ್ ಅವರ ʼನಟ ಭುಂಂಕರ’ ಈ ವಾರ ತೆರೆಗೆ ಬರುತ್ತಿರುವ ಎರಡು ಚಿತ್ರಗಳು.

ʼತನುಜಾ’
ಬಿಯಾಂಡ್ ವಿಶನ್ ಸಿನಿಮಾಸ್ ಲಾಂಛನದಲ್ಲಿ ಚಂದ್ರಶೇಖರ ಗೌಡ ಮತ್ತು ಮನೋಜ್ ಬಿಜಿ ನಿರ್ಮಿಸಿರುವ ಚಿತ್ರ ʼತನುಜಾ’ ಹರೀಶ್ ಎಂ.ಡಿ.ಹಳ್ಳಿ ರಚನೆ, ನಿರ್ದೇಶನದ ಈ ಚಿತ್ರದ ಶೀರ್ಷಿಕಾ ಪಾತ್ರಧಾರಿ ಸಪ್ತಾ ಪಾವೂರ್. ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ ಅವರು ತಾವೇ ಆಗಿ ಕಾಣಿಸಿಕೊಂಡಿರುವ ಈ ಚಿತ್ರದ ತಾರಾಗಣದಲ್ಲಿ ರಾಜೇಶ್ ನಟರಂಗ, ಚಿತ್ಕಲಾ ಬಿರಾದಾರ್, ಸಂಧ್ಯಾ ಅರಕೆರೆ, ಬೇಬಿ ಶ್ರೀ, ಕೈಲಾಸ್ ರಘುನಂದನ್, ಶಾಲಿನಿ ಷಡಕ್ಷರಿ ಮುಂತಾದವರಿದ್ದಾರೆ. ರವೀಂದ್ರನಾಥ್ ಛಾಯಾಗ್ರಹಣ, ಪ್ರದ್ಯೋತ್ತನ್ ಸಂಗೀತ ಸಂಯೋಜನೆ, ಉಮೇಶ್ ಆರ್ ಬಿ ಸಂಕಲನ ಈ ಚಿತ್ರಕ್ಕಿದೆ.


ʼನಟ ಭಯಂಕರ’
ಸ್ವಾರಸ್ಯ ಸಿನಿ ಕ್ರಿಯೇಶನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರ ನಟ ಭಯಂಕರ’. ಇದು ಪ್ರಥಮ್ ಅವರ ಕಲ್ಪನೆತ ಚಿತ್ರ. ರಚನೆ, ನಿರ್ದೇಶನ ಮತ್ತು ಮುಖ್ಯ ಭೂಮಿಕೆ ಅವರದೇ. ಅವರೊಂದಿಗೆ ತಾರಾಗಣದಲ್ಲಿ ಸಾಯಿಕುಮಾರ್, ನೀಹಾರಿಕಾ ಶೆಣೈ, ಸುಶ್ಮಿತಾ ಜೋಶಿ, ಅನುಪಮ ಹೆಗ್ಡೆ, ಶೋಭರಾಜ್, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬಿರಾದಾರ್ ಮುಂತಾದವರಿದ್ದಾರೆ. ಪ್ರದ್ಯೋತ್ತನ್ ಸಂಗೀತ ಸಂಯೋಜನೆ.


ಸೆಟ್ಟೇರಿದ ಹೊಸ ಚಿತ್ರಗಳು ಆದಿತ್ಯ ನಟನೆಯ ʼಟೆರರ್’

ʼಎ’ ಚಿತ್ರ ಖ್ಯಾತಿಯ ಸಿಲ್ಕ್ ಮಂಜು ನಿರ್ಮಿಸುತ್ತಿರುವ ?ಟೆರರ್’ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನಲ್ಲಾಯಿತು. ರಂಜನ್ ಶಿವರಾಮ ಗೌಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಆದಿತ್ಯ ಕೇಂದ್ರಪಾತ್ರಧಾರಿ. ಕೆ. ಆರ್. ಜಿ. ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಮೊದಲ ಚಿತ್ರಿಕೆಗೆ ಆರಂಭ ಫಲಕ ತೋರಿಸಿದರೆ, ಐಪಿಎಸ್ ಅಧಿಕಾರಿ ರವಿಕಾಂತೇಗೌಡ ಕ್ಯಾಮೆರಾ ಚಾಲನೆ ಮಾಡಿದರು. ಹಿರಿಯ ನಿರ್ದೇಶಕ ಎಸ್. ವಿ .ರಾಜೇಂದ್ರ ಸಿಂಗ್ ಬಾಬು, ಲಹರಿ ವೇಲು ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು. ಆದಿತ್ಯ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ಸಂಯೋಜನೆ, ಕಾರ್ತಿಕ್ ಶರ್ಮ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಇರಲಿದೆ. ಧರ್ಮ, ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ.


ಕಡೂರಿನಲ್ಲಿ ʼಕವಡೆ’
ʼಕವಡೆ’ ಹೆಸರಿನ ಹೊಸ ಚಿತ್ರ ಸೆಟೇರಿದೆ. ?ಜಾಡಘಟ್ಟ’ ನಿರ್ದೇಶಿಸಿ, ನಟಿಸಿದ್ದ ರಘು ಎಸ್. ಅವರ ಚಿತ್ರವಿದು. ಇಲ್ಲೂ ಅವರು ನಿರ್ದೇಶಿಸಿ, ನಟಿಸುತ್ತಿದ್ದಾರೆ. ಶಶಿಮಣಿ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಶ್ರೀಕ್ಷೇತ್ರ ದುರ್ಗಾಸ್ಥಳದಲ್ಲಿ ಆರಂಭವಾಯಿತು. ರಘು ಅವರ ಸಹೋದರ ಬೀರೇಶ್ ಎಂ. ಎಸ್. ಕ್ಯಾಮೆರಾ ಚಾಲನೆ ಮಾಡಿದರು. ತಾಯಿ-ಮಗನ ಬಾಂಧವ್ಯದ ಕಥಾಹಂದರ ಇದೆ ಎನ್ನಲಾಗಿರುವ ಈ ಚಿತ್ರಕ್ಕೆ ರಘು ಆವರದೇ ಕಥೆ, ಚಿತ್ರಕಥೆ ಸಂಭಾಷಣೆ ಇದೆ. ಅಭಿಷೇಕ್ ಜಿ ರಾಯ್‌ ಸಂಗೀತ ನಿರ್ದೇಶನ ಹಾಗೂ ಪ್ರದೀಪ್ ಜೈನ್ ಛಾಯಾಗ್ರಹಣದ ?ಕವಡೆ’ಯಲ್ಲಿ ರಘು ಅವರೊಂದಿಗೆ ಜೀವಿತಾ, ನಿಖಿತಾ, ಕೃಷ್ಣಮೂರ್ತಿ (ಚಿನ್ನು), ಶಿವರಾಜ್ (ಮೇಷ್ಟ್ರು) ತಾರಾಗಣದಲ್ಲಿದ್ದಾರೆ.

andolanait

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

2 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

2 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

3 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

3 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

3 hours ago