ಚಿತ್ರ ಮಂಜರಿ

ನಾನು ರಿಲ್ಯಾಕ್ಸ್‌ ಆಗಿ ಕೂತಿಲ್ಲ; ಯಶ್‌ 19 ಚಿತ್ರದ ಅಪ್‌ಡೇಟ್‌ ಬಗ್ಗೆ ವೇದಿಕೆ ಮೇಲೆ ಮಾತನಾಡಿದ ಯಶ್‌

ಕೆಜಿಎಫ್‌ ಚಿತ್ರ ಸರಣಿಯ ಬೃಹತ್‌ ಸಕ್ಸಸ್‌ ಬಳಿಕ ರಾಕಿಂಗ್‌ ಸ್ಟಾರ್‌ ಯಶ್‌ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದೆ. ಕಳೆದ ವರ್ಷ ಏಪ್ರಿಲ್‌ 14ರಂದು ಕೆಜಿಎಫ್‌ ಚಾಪ್ಟರ್‌ 2 ಬಿಡುಗಡೆಯಾದ ಬಳಿಕ ಯಶ್‌ ನಟನೆಯ ಯಾವ ಚಿತ್ರವೂ ತೆರೆಗೆ ಬಂದಿಲ್ಲ. ವರ್ಷದ ಮೇಲೆ ಏಳು ತಿಂಗಳು ಕಳೆದಿದ್ದರೂ ಯಶ್‌ ತಾವು ಮುಂದೆ ಯಾವ ಚಿತ್ರದಲ್ಲಿ ನಟಿಸುತ್ತೇನೆ ಎಂಬ ಮಾಹಿತಿಯನ್ನೂ ಸಹ ಬಿಟ್ಟುಕೊಟ್ಟಿಲ್ಲ.

ಯಶ್‌ ಶ್ರೀಲಂಕಾ, ಇಂಗ್ಲೆಂಡ್‌ ಸೇರಿದಂತೆ ವಿವಿಧ ದೇಶಗಳ ಪ್ರಯಾಣ ಕೈಗೊಂಡಿರುವ ಸುದ್ದಿಗಳು ಹೊರಬೀಳುತ್ತಿವೆಯೇ ಹೊರತು ಮುಂದಿನ ಚಿತ್ರ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಕುರಿತು ವಾರಕ್ಕೊಂದು ಹೊಸ ಅಂತೆಕಂತೆಗಳು ಹರಿದಾಡುತ್ತಿದ್ದು ಯಶ್‌ 19 ಚಿತ್ರ ಆ ನಿರ್ದೇಶಕರ ಜತೆಯಂತೆ, ಈ ದಿನದಂದು ಚಿತ್ರದ ಘೋಷಣೆಯಾಗಲಿದೆಯಂತೆ ಎಂಬ ಸುದ್ದಿಗಳು ವೈರಲ್ ಆಗುತ್ತಲೇ ಇವೆ.

ಇದೀಗ ಇಂತಹ ಸುದ್ದಿಗಳ ಬಗ್ಗೆ ಹಾಗೂ ತಮ್ಮ ಮುಂದಿನ ಚಿತ್ರದ ಘೋಷಣೆಯ ಬಗ್ಗೆ ಸ್ವತಃ ಯಶ್‌ ಅವರೇ ಬಿಜಿಎಸ್‌ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಹೌದು, ನಿನ್ನೆ ( ನವೆಂಬರ್‌ 23 ) ನಡೆದ ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಯಶ್‌ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್‌ ಅನ್ನು ಸ್ವತಃ ತಾವೇ ನೀಡಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹದ ಸುದ್ದಿಗಳಿಗೂ ತೆರೆ ಎಳೆದಿದ್ದಾರೆ.

“ಒಳ್ಳೊಳ್ಳೆ ಹೊಸ ಕಲಾವಿದರು ಬರುತ್ತಾ ಇದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆನ್ನು ತಟ್ಟಿ. ನಮಗೂ ನೀವು ಬೆನ್ನು ತಟ್ಟಿದ್ದಕ್ಕೆ ನಾನು ಇವತ್ತು ಈ ಸ್ಥಾನದಲ್ಲಿರೋದು. ನೀವೆಲ್ಲಾ ಕೇಳ್ತಾ ಇದೀರ ನನಗೆ ಗೊತ್ತು ಅಪ್‌ಡೇಟ್‌ ಅಂತ. ಒಂದು ವಿಷಯ ಹೇಳ್ತೀನಿ, ನಾನು ಕೂತಿದೀನಿ ಅಂದ್ರೆ ಅದು ನೀವು ಕೊಟ್ಟ ಧೈರ್ಯದಿಂದ. ಹಂಗಂತ ನಾನು ರಿಲ್ಯಾಕ್ಸ್‌ ಆಗಿ ಕೂತಿಲ್ಲ. ನೀವು ಕೊಟ್ಟಿರೋ ಸಕ್ಸಸ್‌ ಜವಾಬ್ದಾರಿ ಅಂತ ತಿಳಿದುಕೊಂಡು ಇನ್ನೂ ಮುಂದೆ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೋಸ್ಕರ ಪ್ರಿಪೇರ್‌ ಆಗ್ತಾ ಇದೀನಿ, ಕೆಲಸ ಮಾಡ್ತೀನಿ. ತಾಳ್ಮೆ ಇಟ್ಟುಕೊಳ್ಳಿ, ನಾನು ಯಾವತ್ತೂ ಅನೌನ್ಸ್‌ಮೆಂಟ್‌ ಅಂತ ಹೇಳಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗಲೂ ಈ ತಿಂಗಳು ಅಪ್‌ಡೇಟ್‌ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಲೆವೆಲ್‌ ಹೋಗ್ತಿದೆ, ಮಿಸ್‌ಗೈಡ್‌ ಆಗ್ತಿದೆ. ನಾನೇ ಹೇಳ್ತೀನಿ, ಅಡುಗೆ ಬೆಂದಮೇಲೆ ಬಡಿಸಬೇಕು, ಮುಂಚೆನೇ ಮಾಡೋಕೆ ನನಗೆ ಇಷ್ಟ ಇಲ್ಲ, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ, ನಿಮಗೆ ಇಷ್ಟವಾಗುವಂತ ಕೆಲಸ ಆಗುತ್ತೆ, ಥ್ಯಾಂಕ್ಯೂ” ಎಂದು ಯಶ್‌ ಹೇಳಿಕೆ ನೀಡಿದರು.

andolana

Recent Posts

ನೂತನ ಸಚಿವರಿಗೆ ಖಾತೆ ಹಂಚಿಕೆ : ಯಾರಿಗೆ ಯಾವ ಹೊಣೆ? ಇಲ್ಲಿದೆ ಮಾಹಿತಿ

ಬೆಂಗಳೂರು : ಹಲವು ಸುತ್ತಿನ ಸಭೆಯ ಬಳಿಕ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಖಾತೆ…

3 hours ago

ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ ಸಾಗಾಟ : ಇಬ್ಬರ ಬಂಧನ

ಗುಂಡ್ಲುಪೇಟೆ : ಬೆಂಗಳೂರಿನಿಂದ ಕೇರಳಕ್ಕೆ ಎಂಡಿಎಂಎ (MDMA) ಮಾದಕವಸ್ತು ಸಾಗಿಸುತ್ತಿದ್ದ ಆರೋಪದ ಮೇರೆಗೆ ಮುತ್ತಂಗ ಚೆಕ್‌ಪೋಸ್ಟ್‌ನಲ್ಲಿ ಇಬ್ಬರನ್ನು ಕೇರಳದ ಪೊಲೀಸರು…

5 hours ago

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

14 hours ago

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ…

14 hours ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

14 hours ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

14 hours ago