ಚಿತ್ರ ಮಂಜರಿ

‘ಸೀತಾ ಭಾರತದ ಮಗಳು’ ಡೈಲಾಗ್‌ಗೆ ‘ಆದಿಪುರುಷ್’ ವಿರುದ್ಧ ನೇಪಾಳದಲ್ಲಿ ಭಾರೀ ಆಕ್ರೋಶ

‘ಆದಿಪುರುಷ್‌’ ಸಿನಿಮಾವು 7000 ಪರದೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಹಿಂದೆ ಈ ಸಿನಿಮಾವು ಕೆಲ ವಿವಾದಗಳನ್ನು ಎದುರಿಸಿತ್ತು. ಈಗ ಈ ಸಿನಿಮಾ ವಿಚಾರವಾಗಿ ನೇಪಾಳದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ‘ಆದಿಪುರುಷ್‌’ ಸಿನಿಮಾದಲ್ಲಿ ಸೀತೆಯ ಕುರಿತಂತೆ ಇರುವ ಡೈಲಾಗ್‌ವೊಂದು ನೇಪಾಳದಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸಿಟಿ ಮೇಯರ್ ಬಲೆನ್ ಶಾ ಸೋಶಿಯಲ್ ಮೀಡಿಯಾ ಪೋಸ್ಟ್
ಕಠ್ಮಂಡು ಮೆಟ್ರೊಪೊಲಿಟನ್ ಸಿಟಿ ಮೇಯರ್ ಬಲೆನ್ ಶಾ ಅವರು “ಆದಿಪುರುಷ್ ಸಿನಿಮಾದಲ್ಲಿ ಸೀತಾ ಡೈಲಾಗ್ ಬಗ್ಗೆ ಹೇಳಿದ್ದ ಡೈಲಾಗ್ ಸರಿ ಮಾಡಿಲ್ಲ ಎಂದರೆ ದೇಶದಲ್ಲಿ ಓಂ ರಾವುತ್ ಅವರ ಮುಂದಿನ ಸಿನಿಮಾಗಳು ಇಲ್ಲಿ ರಿಲೀಸ್ ಮಾಡೋದಿಲ್ಲ” ಎಂದು ಹೇಳಿದ್ದಾರೆ.

ಹಿಂದಿ ಸಿನಿಮಾ ರಿಲೀಸ್ ಮಾಡಲ್ಲ ಎಂದು ಎಚ್ಚರಿಕೆ
“ಜಾನಕಿ ಭಾರತದ ಮಗಳು ಎಂದು ಸಿನಿಮಾದಲ್ಲಿದೆ. ಇದು ಸತ್ಯವಲ್ಲ, ಜಾನಕಿ ನೇಪಾಳದ ಮಗಳು. ಆದಿಪುರುಷ್ ಸಿನಿಮಾದಲ್ಲಿರುವ ಈ ತಪ್ಪನ್ನು ಸರಿ ಮಾಡಿಲ್ಲ ಎಂದರೆ ಕಠ್ಮಂಡುವಿನಲ್ಲಿ ಹಿಂದಿ ಸಿನಿಮಾ ರಿಲೀಸ್ ಮಾಡೋದಿಲ್ಲ” ಎಂದು ಬಲೆನ್ ಶಾ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಮಾಯಣದ ಪ್ರಕಾರ ಸೀತೆ ಹುಟ್ಟಿದ್ದು ಎಲ್ಲಿ?
ಇದೇ ಕಾರಣಕ್ಕೆ ನೇಪಾಳದ ಸೆನ್ಸಾರ್ ಬೋರ್ಡ್ ಕೂಡ ಈ ಚಿತ್ರವನ್ನು ಹೋಲ್ಡ್ ಮಾಡಿಡಲು ನಿರ್ಧಾರ ಮಾಡಿದೆಯಂತೆ. ಇನ್ನು ‘ಆದಿಪುರುಷ್ ಟ್ರೇಲರ್‌ನಲ್ಲಿ ಸೀತೆ ಭಾರತದ ಮಗಳು ಎಂದಿದೆ. ರಾಮಾಯಣದ ಪ್ರಕಾರ ನೇಪಾಳದ ಜನಕಪುರದಲ್ಲಿ ಸೀತೆ ಜನಿಸುತ್ತಾಳೆ. ಆಮೇಲೆ ಅವಳನ್ನು ರಾಮ ಮದುವೆ ಆಗುತ್ತಾನೆ’ ಎಂದಿದೆ.

ಯಾರು ಯಾವ ಚಿತ್ರದಲ್ಲಿ ನಟಿಸಿದ್ದಾರೆ?
‘ಆದಿಪುರುಷ್’ ಸಿನಿಮಾವನ್ನು ಸುಮಾರು 500 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಶ್ರೀರಾಮನ ಪಾತ್ರವನ್ನು ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನ ಪಾತ್ರವನ್ನು ನಟ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ಹನುಮಂತನಾಗಿ ದೇವದತ್ತ ನಾಗೆ ಅವರು ಕಾಣಿಸಿಕೊಂಡಿದ್ದಾರೆ. ಓಂ ರಾವುತ್ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅಜಯ್ ಅತುಲ್, ಸಚೇತ್ ಪರಂಪರಾ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಆದಿಪುರುಷ್ ಸಿನಿಮಾ ಹೇಗಿದೆಯಂತೆ?
ಈ ಸಿನಿಮಾದಲ್ಲಿ ಪ್ರಭಾಸ್, ಕೃತಿ ಸನೋನ್ ನಟನೆಗೆ ದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ. ಸಾಕಷ್ಟು ಜನರು ಈ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ವಿಎಫ್‌ಎಕ್ಸ್ ಚೆನ್ನಾಗಿಲ್ಲ ಎಂದು ದೂರಿದ್ದಾರೆ.

ಫ್ರೀ ಟಿಕೆಟ್ ವಿತರಣೆ

ನಟ ರಾಮ್ ಚರಣ್ ತೇಜ, ರಣಬೀರ್ ಕಪೂರ್, ಅಭಿಷೇಕ್ ಅಗರ್‌ವಾಲ್ ಸೇರಿದಂತೆ ಕೆಲವರು 10 ಸಾವಿರ ಟಿಕೆಟ್‌ಗಳನ್ನು ಅಸಹಾಯಕರಿಗೆ, ಮಕ್ಕಳಿಗೆ ನೀಡುತ್ತೇವೆ ಎಂದು ಹೇಳಿದ್ದರು. ಈ ಸಿನಿಮಾ ಕಲೆಕ್ಷನ್ ಬಗ್ಗೆ ಭಾರೀ ಕುತೂಹಲ ಶುರುವಾಗಿದೆ.

ಬಿಗ್ ಬಾಸ್ ಪ್ರಥಮ್ ಪೋಸ್ಟ್ ಏನು?
“ನನ್ನ ನಿಶ್ಚಿತಾರ್ಥ ಅರ್ಥಪೂರ್ಣವಾಗಿರಲಿ ಎಂಬ ಕಾರಣಕ್ಕೆ 200 ಜನ ಅಶಕ್ತರನ್ನು ಗುರುತಿಸಿ ಆದಿಪುರುಷ್ ಟಿಕೆಟ್ ಕೊಡ್ತಾ ಇದೀನಿ, ರಾಮ ಬರೀ ದೇವರಷ್ಟೇ ಅಲ್ಲ..ನನ್ನ ಪೂರ್ವಜರು. ಭಾರತೀಯರೆಲ್ಲರಿಗೂ ರಾಮನೇ ಪೂರ್ವಜ, ರಾಮನೇ ದೇವರು, ಆದಿಪುರುಷ್ ನಮ್ಮ ಹೆಮ್ಮೆ. ದಯವಿಟ್ಟು ಥಿಯೇಟರ್‌ಲ್ಲಿ ನೋಡಿ. ಕೈಮುಗಿದು ಪ್ರಾರ್ಥನೆ.‌.” ಎಂದು ಒಳ್ಳೆ ಹುಡ್ಗ ಪ್ರಥಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

andolanait

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

12 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

12 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

13 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

13 hours ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

1 day ago