ಚಿತ್ರ ಮಂಜರಿ

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪಾಲಿಸಬೇಕು

ಹೊಸ ವರ್ಷಕ್ಕೆ ಹಿರಿಯ ನಟಿ ಸುಧಾರಾಣಿ ಸಂಕಲ್ಪ, ಅಂದೋಲನ ಓದುಗರಿಗಾಗಿ ವಿಶೇಷ ಬರಹ

ನಮಸ್ಕಾರ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ರೆಸೊಲ್ಯೂಶನ್ಸ್ ಮಾಡಿಕೊಳ್ಳುತ್ತಾರೆ. ಹೊಸ ಕ್ಯಾಲೆಂಡರ್ ವರ್ಷ ಎನ್ನುವ ಕಾರಣಕ್ಕೆ. ಜನವರಿ 1 ಎಂದ ತಕ್ಷಣ, ಇನ್ನು ಮೇಲೆ ನಾನು ಹೀಗಿರ್ತೀನಿ, ಹೀಗೆ ಮಾಡ್ತೀನಿ, ಈ ಕೆಲಸಗಳನ್ನು ಮಾಡಬೇಕು, ಹೀಗೆ ಬೇರೆಬೇರೆ ಜನ ಬೇರೆಬೇರೆ ತರದಲ್ಲಿ ಬೇರೆಬೇರೆ ರೆಸೊಲ್ಯೂಶನ್‌ಗಳನ್ನು ಮಾಡಿಕೊಳ್ಳುತ್ತಾರೆ.

ಆದರೆ ನಮಗೆಲ್ಲರಿಗೂ ಗೊತ್ತಿರುವ ವಿಷಯ ಎಂದರೆ, ಸಾಮಾನ್ಯವಾಗಿ ಒಂದು ವಾರದ ಮೇಲೆ ಈ ನಿರ್ಧಾರಗಳನ್ನು ಪಾಲಿಸುವುದಿಲ್ಲ. ವಿಶೇಷವಾಗಿ ಅದು ಎಲ್ಲಿ ಅಂದರೆ, ನಾನು ವರ್ಕ್‌ಔಟ್ ಮಾಡ್ತೀನಿ, ಆರೋಗ್ಯಕಾಪಾಡಲು ಬೇಕಾದ ಆಹಾರ ತಿನ್ತೀನಿ… ಇಂತಹ ವಿಚಾರಗಳಲ್ಲಿ ಹಳಿ ತಪ್ಪಿ ಹೋಗ್ತೀವಿ.
ವಿಶೇಷವಾಗಿ ಈಗಿನ ಜೀವನಶೈಲಿ, ಜಾಗತೀಕರಣ, ಈ ದಿನಗಳ ಕೊರಳು ಕೊಯ್ಯುವ ಸ್ಪರ್ಧೆ, ಪ್ರತಿಯೊಂದರಲ್ಲೂ ಹೋಲಿಕೆ. ಹೀಗೆ ತುಂಬಾನೆ ನಮ್ಮ ಸುತ್ತ ಈ ನೆಗೆಟಿವಿಟಿ ಇರುವುದರಿಂದ, ಯಾವ ಚೆಂಡು ನಮ್ಮ ಕೈಯಲ್ಲಿದೆ, ಎಷ್ಟು ಚೆಂಡುಗಳಿವೆ, ಯಾವುದು ತುಂಬ ಮುಖ್ಯವಾದದ್ದು, ಯಾವುದನ್ನು ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ನಾವು ಮರೆತು ಹೋಗ್ತಾ ಇದ್ಧೀವಿ. ವಿಶೇಷವಾಗಿ ಯುವಪೀಳಿಗೆ.

ನಾನು ಏನು ಹೇಳಲು ಬಂದೆ ಅಂದರೆ, ಆ ಎರಡು ಚೆಂಡುಗಳಲ್ಲಿ ಒಂದು ನಮ್ಮ ಕೆಲಸ, ಅದು ರಬ್ಬರ್ ಚೆಂಡು. ಇನ್ನೊಂದು ನಮ್ಮ ಇಡೀ ಜೀವನ ಅಂತ ಇಟ್ಟುಕೊಳ್ಳಿ. ಅದು ಗಾಜಿನ ಚೆಂಡು. ಅದರಲ್ಲಿ ನಮ್ಮ ಭಾವನೆಗಳಾಗಿರಬಹುದು, ಸಂಬಂಧಗಳಾಗಿರಬಹುದು, ಮೌಲ್ಯಗಳಾಗಿರಬಹುದು, ಅಥವಾ ನಮಗೆ ಜೀವನದಲ್ಲಿ ಮುಖ್ಯವಾದ ಮನಶ್ಶಾಂತಿ, ಸಂತೋಷ, ಇದೆಲ್ಲ ಕೂಡಿರುವಂತಹದು ಆ ಗಾಜಿನ ಚೆಂಡು. ನಾವು ಈ ಜಗ್ಲರಿಯಲ್ಲಿ ಎಲ್ಲೋ ಒಂದು ಕಡೆ ಆ ರಬ್ಬರ್ ಬಾಲ್ ಅಂದ್ರೆ ನಮ್ಮ ಈ ಕೆಲಸ, ಪ್ರಾಪಂಚಿಕ ಅಗತ್ಯದ ವಸ್ತುಗಳು ಏನಿವೆ, ದುಡ್ಡು, ಕಾಸು, ಸ್ಥಾನ, ಹೆಸರು, ಈ ಸಮಾಜದಲ್ಲಿ ಅಂತಸ್ತು, ಇವೆಲ್ಲ ತುಂಬಿರುವಂತಹದ್ದು ಆ ರಬ್ಬರ್ ಚೆಂಡು. ಬರೀ ಅದರ ಕಡೆಗೇ ಗಮನ ಕೇಂದ್ರೀಕರಿಸುತ್ತಾ, ನಮ್ಮ ಗಾಜಿನ ಚೆಂಡು ಏನಿದೆ ನಮ್ ಒಂದು ಸಹಾನುಭೂತಿ, ಕನಿಕರ, ಅನುಕಂಪ ಇವೆಲ್ಲ ಕೂಡಿರುವುದನ್ನು ಮರೆತುಬಿಡುತ್ತಿದ್ದೇವೆ.

ಆ ರಬ್ಬರ್ ಚೆಂಡನ್ನು ಹಿಡಿಯುವ ಧಾವಂತದಲ್ಲಿ, ನಮ್ಮ ಆರೋಗ್ಯವನ್ನೂ ಒಳಗೊಂಡ ಗಾಜಿನಚೆಂಡು, ಕೈಜಾರಿ ಬೀಳ್ತಾನೇ ಇರುತ್ತೆ. ಬಿದ್ದಾಗ ಕೆಲವೊಮ್ಮೆ ಅದು ಸ್ವಲ್ಪ ಸಿಡಿದುಹೋಗಬಹುದು, ಕೆಲವೊಮ್ಮೆ ಬಿರುಕು ಬಿಡಬಹುದು, ಇನ್ನು ಕೆಲವರ ಜೀವನದಲ್ಲಿ ಅದು ಒಡೆದೇ ಹೋಗಬಹುದು. ಈ ತಪ್ಪನ್ನು ನಾವು ಪದೇಪದೇ ಮಾಡಾ ಇದ್ದೀವಿ.
ಪ್ರತಿ ವರ್ಷದ ನಿರ್ಧಾರ ಇದನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುತ್ತಾ ಹೋಗುವುದಾಗಬೇಕು. ನನ್ನ ಪ್ರಕಾರ ಈ ಒಂದು ಗಾಜಿನ ಚೆಂಡು ಏನಿದೆ, ಅದು ತುಂಬಾ ಮುಖ್ಯ. ಈ ರಬ್ಬರ್ ಚೆಂಡು ಒಂದು ವೇಳೆ ಬಿದ್ದರೂ ಮತ್ತೆ ಮೇಲೆ ಬರುತ್ತದೆ. ನಾವು ಕೆಲಸ ಕಳ್ಕೊಂಡರೆ, ಮತ್ತೆ ಪ್ರಯತ್ನ ಪಟ್ಟರೆ ಇನ್ನೊಂದು ಕೆಲಸ ಸಿಗಬಹುದು. ದುಡ್ಡು ಆವಶ್ಯಕ. ಆದರೆ ಅದೇ ನಮ್ಮ ಜೀವನವಲ್ಲ. ಆದರೆ ಈ ಗಾಜಿನ ಚೆಂಡು ಏನಿದೆ, ಅದು ನಮ್ಮ ಆರೋಗ್ಯ ಆಗಿರಬಹುದು, ಮನಶ್ಶಾಂತಿ, ಸಂತೋಷ, ಕುಟುಂಬ, ಅಥವಾ ನಮ್ಮ ಮೌಲ್ಯಗಳು, ಸಂಬಂಧಗಳು ಇವೆಲ್ಲ ಒಂದು ಚೂರು ಮುಕ್ಕಾದರೆ, ಒಡೆದು ಹೋದರೆ, ಮತ್ತೆ ಯಾವತ್ತಿಗೂ ಅದು ಸರಿ ಮಾಡೋದಕ್ಕೆ ಆಗೋಲ್ಲ. ಹಾಗಾಗಿ ನನ್ನ ಪ್ರತಿ ವರ್ಷದ ನಿರ್ಧಾರ ಏನು ಅಂತ ಹೇಳಿದರೆ, ಆದಷ್ಟು ಮಟ್ಟಿಗೆ ಈ ಗಾಜಿನ ಚೆಂಡನ್ನು ತುಂಬ ಜೋಪಾನವಾಗಿ ನೋಡ್ಕೊಬೇಕು. ಅದರ ಅರ್ಥ ರಬ್ಬರ್ ಚೆಂಡು ಬಿಡಬೇಕು ಅಂತಲ್ಲ. ಅದು ಬಿದ್ದರೂ ಎಲ್ಲೋ ಬೇರೆ ಅವಕಾಶ ಇದೆ.

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಅದನ್ನು ಪಾಲಿಸಬೇಕು. ಹೊಸ ವರ್ಷದಲ್ಲಿ ಇದು ನನ್ನ ನಿರ್ಧಾರ. ಇಂತಹ ಯೋಚನೆ ನಿಮ್ಮದೂ ಆಗಬಹುದಲ್ಲ. ೨೦೨೩ ಎಲ್ಲರಿಗೂ ಶುಭ ತರಲಿ, ಶಾಂತಿ, ನೆಮ್ಮದಿ ಆರೋಗ್ಯ ತರಲಿ ಎಂದು ಹಾರೈಸುತ್ತೇನೆ.

ಎಲ್ಲಕ್ಕಿಂತ ಮುಖ್ಯವಾದ ಅಂಶ, ನನ್ನ ಪ್ರಕಾರ ಜೀವನ ಯಾವತ್ತೂ ಒಂದು ರೀತಿಯ ಜಗ್ಲರಿ. ನಿರಂತರವಾಗಿ ನಾವು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಿರುತ್ತೇವೆ. ನಾವು ಈ ಸರ್ಕಸ್‌ನಲ್ಲಿ ನೋಡಿರುತ್ತೇವಲ್ಲ, ಮೂರುನಾಲ್ಕು ಚೆಂಡುಗಳನ್ನು ಮೇಲಕ್ಕೆ ಎಸೆದು ಹಿಡಿಯುತ್ತಿರುತ್ತಾರಲ್ಲ ಹಾಗೆ. ಅದರಲ್ಲಿ ಯಾವ ಚೆಂಡು ಮುಖ್ಯವಾದುದು ಎಂದು ಮರೆತಿರುತ್ತೇವೆ. ನಾವು ಅದರ ಕಡೆ ಪೂರ್ತಿ ಗಮನಾನೇ ಕೊಡುವುದಿಲ್ಲ.

andolana

Recent Posts

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶವಿಲ್ಲ : ಈಶ್ವರ ಖಂಡ್ರೆ

ಸಫಾರಿ ಕ್ಯಾಂಪರ್ ಗಳಿಗೆ ಕಬ್ಬಿಣದ ಸರಳು, ಒಡೆಯದ ಗಾಜು ಅಳವಡಿಸಲು ಖಂಡ್ರೆ ಸೂಚನೆ ಬೆಂಗಳೂರು :  ರಾಜ್ಯದ ಐದು ಹುಲಿ…

52 mins ago

ಮ.ಬೆಟ್ಟ | ಮರದ ಕೊಂಬೆ ಬಿದ್ದು ಮೂವರಿಗೆ ಗಾಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಮೇಲೆ ಮರದ ಕೊಂಬೆ ಬಿದ್ದು ಮೂವರು ಗಾಯಗೊಂಡಿರುವ…

3 hours ago

ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ

ಬೆಂಗಳೂರು: ಆನ್‍ಲೈನ್‍ನಲ್ಲಿ ಔಷಧಿಗಳ ಮಾರಾಟ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟಗಾರರ ಸಂಘ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ…

6 hours ago

ಯಳಂದೂರು: ಬೋನಿಗೆ ಬಿದ್ದ ಚಿರತೆ

ಯಳಂದೂರು: ಕಳೆದ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ತಾಲ್ಲೂಕಿನ ಗುಂಬಳ್ಳಿ ಗ್ರಾಮದಲ್ಲಿ…

6 hours ago

ಜಿಬಿಎ ಚುನಾವಣೆಗೆ ಕಾಲಾವಕಾಶ ನೀಡಿದ ಸುಪ್ರೀಂಕೋರ್ಟ್‌

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಚುನಾವಣೆ ನಡೆಸಲು ಕಾಲಾವಕಾಶ ಕೋರಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ರಿಲೀಫ್‌ ನೀಡಿದೆ. ಜಿಬಿಎ ಚುನಾವಣೆಗೆ…

8 hours ago

ರಾಜ್ಯದಲ್ಲಿ ಒಂದು ವಾರ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ.20ರಿಂದ 26ರವರೆಗೆ ರಾಜ್ಯದ…

8 hours ago