ಅವ್ವನ ಮಡಿಲಲ್ಲಿ ಅರಸು
‘ನನ್ನ ಬದುಕಿನ ವಿಶೇಷ ಪಂಕ್ತಿಯಲ್ಲಿ ನಿಲ್ಲುವ ವಿಷಯ ಅಂದ್ರೆ ಅವ್ವ. ನಾನು ಊರಿಗೋದ್ರೂ, ಅವ್ವ ಬೆಂಗಳೂರಿಗೆ ಬಂದ್ರೂ ಅವಳ ಕೈ ತುತ್ತೇ ತಿನ್ನೋದು’ ಎಂದು ಸೋಷಲ್ ಮೀಡಿಯಾದಲ್ಲಿ ಬರೆದುಕೊಂಡು ಅವ್ವ ಕೈತುತ್ತು ತಿನ್ನಿಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ ಮಂಡ್ಯ ಮೂಲದ ನಿರ್ದೇಶಕ, ಚಿತ್ರ ಸಾಹಿತಿ ಅರಸು ಅಂತಾರೆ.
ತಾಯಿಯ ಮೇಲಿನ ಪ್ರೀತಿಯನ್ನು ಅತ್ಯಾಪ್ತವಾಗಿ ದಾಖಲಿಸಿ ಒಂದು ಕವಿತೆಯನ್ನೂ ‘ಆಂದೋಲನ’ಕ್ಕೆ ಬರೆದಿದ್ದಾರೆ ಅರಸು ಅಂತಾರೆ.
ಲಾಲಿ ಲಾಲಿ ಲಾಲಿ ಲಾಲಿ
ಲೋಕ ಎಲ್ಲಾ ಈ ತಂಗಾಳಿ
ಗುಡಿಯಲ್ಲಿ ಇವಳಿಲ್ಲ
ಹುಡುಕುವ ಹಾಗಿಲ್ಲ
ನಡೆದಾಡೋ ದೈವ ಅವ್ವ ಅವ್ವ
ಹೊತ್ತುಟ್ಟೋ ಮುಂಚೆನೇ ಏಳೋದು ಇವಳೇನೇ
ಅರ್ಕ ನಿನಗಿಂತಾಲೂ ಮುಂದು ಅವ್ವ
ದಿಕ್ಕು ದಿಕ್ಕಾಪಾಲು ನೀನಿಲ್ಲದೆ
ಹುತ್ತು ಬಿತ್ತೋಳೆ ಜಗವನ್ನೇ
ನೀತಿಯ ಪದ ಹಾಡಿ ಮನಸಿಗೆ ಮುದ ನೀಡಿ
ಬದುಕನ್ನು ಹದ ಮಾಡೋ ವೇದ ಅವ್ವ
ಸೋತು ಗೆದ್ದ ಕರ್ಣ ನಿನ್ನಿಂದಲೇ
ಲೋಕದ ಓಂಕಾರ ತಾಯೇ
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…
ಆರ್ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…
ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…
ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…
ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್ಗೇಟ್ಗಳನ್ನು ಬಂದ್…