ವಾರದ ಮುಖ
ಕನ್ನಡದ ಕಥೆಗಾರ ಬನ್ನೂರಿನ ಅದೀಬ್ ಅಖ್ತರ್ ಬಳಿ ನೀವು ಈಗ ಯಾಕೆ ಬರೆಯುತ್ತಿಲ್ಲ ಸಾಹೇಬರೇ ಎಂದು ಕೇಳಿದರೆ ‘ಒಂದು ಕಥೆ ಬರೆದಿಟ್ಟಿರುವೆ. ಆದರೆ ಅದಕ್ಕೆ ಇನ್ನೂ ಹೆಸರು ಇಟ್ಟಿಲ್ಲ. ಹಾಗಾಗಿ ಅದು ನನ್ನಲ್ಲೇ ಉಳಿದು ಬಿಟ್ಟಿದೆ’ ಎಂದು ಮಗುವಿನ ಹಾಗೆ ನಗುತ್ತಾರೆ. ಆದರೆ ನಿಜವಾದ ವಿಷಯ ಏನೆಂದರೆ ಮೂರು ವರ್ಷಗಳ ಹಿಂದೆ ಮಿದುಳಿಗೆ ಲಘು ಆಘಾತಗೊಂಡು ಪ್ರಜ್ಞಾಹೀನರಾಗಿದ್ದ ಅದೀಬ್ ಈಗ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಮಡದಿ ರಶೀದಾ ಭಾನು ಪತಿಗೆ ಕಿವಿ ಮತ್ತು ಮಾತಿನ ಹಾಗೆ ಸಾಥ್ ನೀಡುತ್ತಿದ್ದಾರೆ. ಬನ್ನೂರಿನ ಮುಖ್ಯ ರಸ್ತೆಯಲ್ಲಿ ಪುಟ್ಟದೊಂದು ಚಪ್ಪಲಿ ಅಂಗಡಿ ಇಟ್ಟುಕೊಂಡು ಬದುಕುತ್ತಿರುವ ಅದೀಬ್ ಅವರ ನಿಜವಾದ ಹೆಸರು ಇಕ್ಬಾಲ್ ಅಹಮದ್. ಅದೀಬ್ ಅಖ್ತರ್ ಅನ್ನುವುದು ಅವರ ಕಾವ್ಯನಾಮ. ಮೊದಲು ಉರ್ದುವಿನಲ್ಲಿ ಬರೆಯುತ್ತಿದ್ದ ಅದೀಬ್ ತಮ್ಮ ೪೪ ನೆಯ ವಯಸ್ಸಿನಲ್ಲಿ ಕನ್ನಡದ ಅ ಆ ಇ ಈ ಕಲಿತು ಆಮೇಲೆ ಕನ್ನಡದಲ್ಲೇ ಐದು ಪುಸ್ತಕಗಳನ್ನು ಬರೆದರು.
ಇದೀಗ ೬೭ ವರ್ಷ ತಲುಪಿರುವ ಅದೀಬ್ ಅವರಿಗೆ ಕನ್ನಡದಲ್ಲಿ ಇನ್ನೂ ಬರೆಯುವ ಆಸೆ. ಅವರ ಮಡದಿ ರಶೀದಾರಿಗೂ ತನ್ನ ಗಂಡ ಕನ್ನಡದಲ್ಲಿ ಇನ್ನಷ್ಟು ಬರೆದು, ಇನ್ನಷ್ಟು ಖ್ಯಾತರಾಗಬೇಕು ಎನ್ನುವ ಆಸೆ. ಅದೀಬ್ ಇನ್ನೂ ಚೇತರಿಸಿಕೊಂಡು ಕನ್ನಡದಲ್ಲಿ ಮತ್ತಷ್ಟು ಬರೆಯಬೇಕು ಎನ್ನುವುದು ಕನ್ನಡದ ಅವರ ಅಭಿಮಾನಿ ಓದುಗರ ಹಂಬಲ.
ಈ ವರ್ಷ ಬಿಡುಗಡೆಯಾದ ವಿನಯ್ ರಾಜಕುಮಾರ್ ಅಭಿನಯದ ‘ಒಂದು ಸರಳ ಪ್ರೇಮಕಥೆ’ ಚಿತ್ರದ ನಂತರ ಒಂದಿಷ್ಟು ಹೊಸ ಚಿತ್ರದ ಕೆಲಸಗಳಲ್ಲಿ…
ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಂಎಲ್ಸಿ ಟಿಕೆಟ್ಗಾಗಿ…
ಚೆನ್ನೈ: ಹಿಂದಿ ಮಾಸಾಚರಣೆ ನೆಪದಲ್ಲಿ ಕೇಂದ್ರ ಸರ್ಕಾರದಿಂದ ನೇಮಕವಾದ ರಾಜ್ಯಪಾಲರು ದೇಶದ ಏಕತೆಯನ್ನು ಮರೆತು, ಕೇಂದ್ರ ಯೋಜನೆಗಳು ಮತ್ತು ಘೋಷಣೆಗಳಂತೆ…
ಬೆಂಗಳೂರು: ಸಚಿವ ಭೈರತಿ ಸುರೇಶ್ ಅವರು ಮುಡಾದಿಂದ ಫೈಲ್ಗಳನ್ನು ತಂದು ಸುಟ್ಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಸುರೇಶ್ರನ್ನು ತಕ್ಷಣ ಬಂಧಿಸಬೇಕು…
ಮಂಡ್ಯ: ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರು ಕಟ್ಟಿದ ಕೆರೆ-ಕಟ್ಟೆಗಳನ್ನು ಹಣದ ದಾಹಕ್ಕೆ ನುಂಗಿ ಹಾಕಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಕೇಂದ್ರ…
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಆಸ್ಪತ್ರೆಗೆ…