ಆಂದೋಲನ ಪುರವಣಿ

ಅರವಿಂದನಗರದಲ್ಲೊಂದು ಹಿರಿಯರ ಮನೆ

• ಪ್ರಶಾಂತ್ ಎಸ್.

ಇತ್ತೀಚೆಗೆ ಕುಟುಂಬದೊಳಗಿನ ಮಾನವ ಸಂಬಂಧಗಳ ಮೌಲ್ಯಗಳು ಕಡಿಮೆಯಾಗಿ ಹಿರಿಯ ಜೀವಗಳು ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುವಂತಾಗಿದೆ. ಮುಪ್ಪಾಗುತ್ತಿದ್ದಂತೆ ಬಂಧು-ಬಾಂಧವರಿಂದ ದೂರ, ಸ್ವಂತ ಮಕ್ಕಳಿಂದ ತಾತ್ಸಾರ ಇವುಗಳ ನಡುವೆ ಹಿರಿಯರ ಬದುಕು ಅತಂತ್ರವಾಗುವುದಂತೂ ನಿಜ.

ಆಧುನಿಕತೆ, ಕುಟುಂಬ ವಿಘಟನೆ ಮತ್ತು ಪಾಶ್ಚಿಮಾತ್ಯ ಜೀವನಶೈಲಿಗಳು ಅಳವಡಿಕೆ ಇಂದು ಕುಟುಂಬಗಳನ್ನು ಹೊಡೆಯುತ್ತಿದೆ ಎಂದರೆ ತಪ್ಪಾಗಲಾರದು. ಈ ಪದ್ಧತಿಗಳು ಅನೇಕ ವಯೋವೃದ್ಧರನ್ನು ಒಂಟಿ ಜೀವಿಗಳನ್ನಾಗಿಸಿದೆ.

ಹೀಗೆ ಕುಟುಂಬದಿಂದ ದೂರಾದ, ಮಕ್ಕಳ ಹಾರೈಕೆಯಿಂದ ವಂಚಿತರಾದ ಹಿರಿಯ ನೊಂದ ಜೀವಗಳಿಗೆ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ಜೆಎಸ್ ಎಸ್ ಸಂಸ್ಥೆಯು ‘ಹಿರಿಯರ ಮನೆ’ಯನ್ನು ಆಗಸ್ಟ್ 11, 2000ರಂದು ಮೈಸೂರಿನಲ್ಲಿ ಆರಂಭಿಸಿತು.

ಇದರಲ್ಲಿ ಕುಟುಂಬದಿಂದ ಬೇರ್ಪಟ್ಟ ಹಿರಿಯರಿಗೆ ಉಚಿತ ವಸತಿ, ಬೋರ್ಡಿಂಗ್ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತದೆ. ಅಲ್ಲದೆ ಜೆಎಸ್ ಎಸ್ ಹಿರಿಯರ ಮನೆ ಸುತ್ತೂರು ಶ್ರೀಕ್ಷೇತ್ರದ ಪ್ರಶಾಂತ ಪರಿಸರದಲ್ಲಿ ಎರಡು ಹಿರಿಯ ನಾಗರಿಕರ ಮನೆಗಳನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಒಂದು ಉಚಿತವಾಗಿದೆ. ಇಲ್ಲಿ ಐವತ್ತು ಮಂದಿ ಆಶ್ರಯ ಪಡೆದುಕೊಂಡಿದ್ದು, ತಮ್ಮ ವೃದ್ಧಾಪ್ಯವನ್ನು ನೆಮ್ಮದಿಯಿಂದ ಕಳೆಯುತ್ತಿದ್ದಾರೆ.

1090 ಹಿರಿಯರ ಸಹಾಯವಾಣಿ

ಜೆಎಸ್‌ ಎಸ್ ವೃದ್ಧಾಶ್ರಮ ಸಾಕಷ್ಟು ಸೌಲಭ್ಯಗಳನ್ನು ಈ ಮನೆಗಳಲ್ಲಿ ಹಿರಿಯರಿಗೆ ಕಲ್ಪಿಸಿದೆ. ಈ ವೃದ್ಧಾಶ್ರಮದಲ್ಲಿ ಹಿರಿಯರಿಗಾಗಿ ಉಚಿತ ವಸತಿ, ಗ್ರಂಥಾಲಯ, 24 ಗಂಟೆಗಳ ಕಾಲ ಬ್ರಾಡ್‌ ಬ್ಯಾಂಡ್‌ ಇಂಟರ್ನೆಟ್ ಸಂಪರ್ಕ ಮತ್ತು ಕೇಬಲ್ ಟಿವಿ ಸೌಲಭ್ಯ, ಸುಂದರವಾದ ಉದ್ಯಾನವನ, ವಾರಕ್ಕೊಮ್ಮೆ ವೈದ್ಯಕೀಯ ತಪಾಸಣೆ, ಸಮತೋಲನ ಆಹಾರ, ಆಗಾಗ್ಗೆ ದಾದಿಯರಿಂದ ಭೇಟಿ, ಕ್ರೀಡಾ ಚಟುವಟಿಕೆಗಳು, ನಿಯಮಿತ ಭಜನೆ ಮತ್ತು ಧ್ಯಾನ, ಯೋಗ, ಪ್ರಾಣಾಯಾಮ ಮಾಡಿಸುವ ಜತೆಗೆ ಪ್ರಕೃತಿ ಚಿಕಿತ್ಸೆ ಸೌಲಭ್ಯಗಳು, ಆಗಾಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಎಲ್ಲ ರಾಷ್ಟ್ರೀಯ ಮತ್ತು ಇತರ ಹಬ್ಬಗಳ ಆಚರಣೆ ಮಾಡುವ ಮೂಲಕ ಹಿರಿಯರು ಒಂದಿಷ್ಟು ಸುಂದರ ಕ್ಷಣೆಗಳನ್ನು ಅನುಭವಿಸಲು ಇಲ್ಲಿ ಅವಕಾಶ ನೀಡಲಾಗುತ್ತದೆ.

ಜೆಎಸ್‌ ಎಸ್ ಹಿರಿಯರ ಮನೆಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ: ಜೆಎಸ್ಎಸ್ ವೃದ್ಧಾಶ್ರಮ, ಅರವಿಂದನಗರ, ಮೈಸೂರು. ದೂರವಾಣಿ ಸಂಖ್ಯೆ: 0821-2548252 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ನಿರ್ದೇಶಕರು, ಸಾಮಾನ್ಯ ಅಭಿವೃದ್ಧಿ ವಿಭಾಗ, ಜೆಎಸ್‌ಎಸ್ ಮಹಾವಿದ್ಯಾಪೀಠ, ಮೈಸೂರು- 0821-2548206.

andolana

Recent Posts

ಓದುಗರ ಪತ್ರ: ಮಹಿಳಾ ಪೌರಕಾರ್ಮಿಕರಿಗೆ ರೇಷ್ಮೆ ಸೀರೆ ವಿತರಣೆ ಶ್ಲಾಘನೀಯ

ಮೈಸೂರು ದಸರಾ ನಿಮಿತ್ತ ಪೌರಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಅನುದಾನದಲ್ಲಿ ಮಹಿಳಾ ಪೌರಕಾರ್ಮಿಕರಿಗೆ ಈ ಬಾರಿ ತಲಾ ಎರಡು ಬನಾರಸ್ ರೇಷ್ಮೆ…

9 hours ago

ಓದುಗರ ಪತ್ರ: ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ಖಂಡನೀಯ

ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ಸಂಸತ್ ಚಲೋ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿಪ್ರಹಾರ…

9 hours ago

ಓದುಗರ ಪತ್ರ: ಸದ್ದಿಲ್ಲದೇ ನೀರಿನ ದರ ಏರಿಸಿದ ಪಾಲಿಕೆ

ಮೈಸೂರು ಮಹಾನಗರ ಪಾಲಿಕೆ ಕಳೆದ ತಿಂಗಳಿನಿಂದ ನಗರದ ನೀರು ಬಳಕೆ ಶುಲ್ಕವನ್ನು ಸದ್ದಿಲ್ಲದೇ ಏರಿಸಿದೆ. ಇದರ ಜೊತೆಗೆ ಒಳ ಚರಂಡಿ…

9 hours ago

ಆಧುನೀಕರಣದ ಭರದಲ್ಲಿ ಮೈಸೂರಿನ ಪ್ರಕೃತಿಗೆ ಧಕ್ಕೆ?

ಡಾ.ಎನ್.ಉಷಾ ಅಭಿವೃದ್ಧಿ- ಪರಂಪರೆ ಸಂರಕ್ಷಣೆ ಪರಸ್ಪರ ವಿರೋಧ ಆಗಬೇಕಿಲ್ಲ  ‘ಅರಮನೆಗಳ ನಗರ’ ಮತ್ತು ಕರ್ನಾಟಕದ ಸಾಂಸ್ಕೃತಿಕ ರಾಜ ಧಾನಿ ಎಂದು…

9 hours ago

ದಸರಾ ವೇಳೆಗೆ ಹುರಾ ಭಾಗದ ಕೆರೆಗಳಿಗೆ ನೀರು

ಎಸ್.ಎಸ್.ಭಟ್ ನಂಜನಗೂಡು: ಶಾಸಕ ದರ್ಶನ್ ಧ್ರುವನಾರಾಯಣ ಅವರ ಸಂಕಲ್ಪ  ನಂಜನಗೂಡು: ತಾಲ್ಲೂಕಿನ ೨೬ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಹುರಾ…

9 hours ago