ಆಂದೋಲನ ಪುರವಣಿ

ಅಪರೂಪದ ಹಿರಿಯ ಜೀವ ಪ್ರಭಾವತಿ ಸಂಪತ್ ‘ಕುಮಾರಿ’

• ಕೀರ್ತಿ ಎಸ್.ಬೈಂದೂರು

ಇಳಿ ವಯಸ್ಸಿನಲ್ಲೂ ಮೌತ್ ಆರ್ಗನ್, ಹಾರ್ಮೋನಿಯಂ ನುಡಿಸುತ್ತಾ, ಬತ್ತದ ಉತ್ಸಾಹ ದೊಂದಿಗೆ ಬಾಳುತ್ತಿರುವ ಅಪರೂಪದ ಸಾಧಕಿ, ಪ್ರಭಾವತಿ ಸಂಪತ್ ‘ಕುಮಾರಿ’. ಕುತೂಹಲಕ್ಕೆ ವಯಸ್ಸು ಕೇಳಿದರೆ ‘ಸ್ವೀಟ್ 18+8’ ಎನ್ನುತ್ತಲೇ ತಾವಿನ್ನೂ ಕುಮಾರಿ ಎಂಬಂತೆ ಬದುಕನ್ನು ಆನಂದಿ ಸುವ ಮನೆ ಜನರ ಪ್ರೀತಿಯ ಅಜ್ಜಿ. ತನ್ನ ಮೂರನೇ ತಲೆಮಾರಿಗೂ ಸಂಗೀತ, ಕಲಾ ಪ್ರೀತಿಯನ್ನು ಚಿಗುರೊಡಿಸಿದವರು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬದುಕಿನ ಮೇಲೈಸುವಿಕೆಯನ್ನು ಅವರ ಜೀವನಗಾಥೆಯೇ ಹೇಳುತ್ತದೆ.

ಪ್ರಭಾವತಿ ಅವರ ತಂದೆ ಚರ್ಚ್‌ವೊಂದರಲ್ಲಿ ಹಾರ್ಮೋನಿಯಂ ಮತ್ತು ವಯಲಿನ್ ನುಡಿಸುವ ಕಲಾವಿದರು. ತಾಯಿಯೂ ಶಾಲಾ ಶಿಕ್ಷಕಿಯಾಗಿ, ಸಂಗೀತದ ಜೊತೆಗೆ ಮೌತ್ ಆರ್ಗನ್ ನುಡಿಸುತ್ತಿದ್ದರು. ಸಂಗೀತದ ವಾತಾ ವರಣ ಇದ್ದದ್ದಕ್ಕಾಗಿ ಸಹಜವಾಗಿಯೇ ಅವರಿಗೆ ಕಲೆಯ ಒಲವು ಹೆಚ್ಚಿತು. ಹತ್ತನೇ ತರಗತಿಯಲ್ಲಿ ಸಂಗೀತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ದುಕೊಂ ಡಿದ್ದರು. ಈ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೆ, ಜೂನಿಯರ್ ಪರೀಕ್ಷೆ ಯನ್ನು ಪಾಸ್ ಮಾಡಿಕೊಂಡಂತೆ. ಮನೆಯಲ್ಲಿಯೇ ಅವರಿಗೆ ಸಂಗೀತ ಅಭ್ಯಾಸ. ತಾಯಿಯಿಂದಲೇ ಸ್ವರ ಪರಿಚಯ ಮಾಡಿಸಿಕೊಂಡು, ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ಬಿ.ಎ., ಬಿ.ಎಡ್ ಓದು ಮುಗಿದ ತಕ್ಷಣವೇ ಪ್ರೌಢಶಾಲಾ ವಿಭಾಗದ ಶಿಕ್ಷಕರಾಗಿ ನೇಮಕಗೊಂಡರು. ಹಾಸನದಲ್ಲಿ ವೃತ್ತಿ ಜೀವನ ಆರಂಭ. ಪಠ್ಯ ವಿಷಯದ ಜೊತೆಗೆ ಕಲೆಯನ್ನೂ ಹೇಳಿಕೊಡುವ ಅಪರೂಪದ ಟೀಚರ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ! ಆಗ ನಡೆಯುತ್ತಿದ್ದ ಯುವಜನೋತ್ಸವ ಕಾರ್ಯಕ್ರಮಗಳಿಗೆ ತಾವೇ ಚುಟುಕು ಬರೆದು, ರಾಗ ಸಂಯೋಜಿಸಿ, ಹಾಡಿಗೆ ಹಾರ್ಮೋ ನಿಯಂ ನುಡಿಸುತ್ತಿದ್ದರು. ಜೊತೆಗೆ ತಮ್ಮ ಶಾಲಾ ಮಕ್ಕಳಿಗೆ ತಾವೇ ಸಂಯೋ ಜಿಸಿದ ಹಾಡುಗಳನ್ನು ಹಾಡಿಸುತ್ತಾ, ಸಂಗೀತದ ಅಭಿರುಚಿಯನ್ನು ಹೆಚ್ಚಿಸಿದರು.

ಭಾರತ್ ಸೌಟ್ಸ್ ಮತ್ತು ಗೈಡ್ಸ್ ನಡೆಸಿದ ‘ವರ್ಲ್ಡ್ ಜಾಂಬೂರಿ’ಯ ಗೈಡ್ ನಾಯಕರಾಗಿ ಇಡೀ ತಂಡವನ್ನು ಮುನ್ನಡೆಸಿದ್ದ ಆಗಿನ ಏಕೈಕ ಮಹಿಳೆ. ಮಾತ್ರವಲ್ಲ, ಹತ್ತು ‘ಗೈಡ್ ಲಾ’ಗಳಿಗೆ ಇವರೇ ಸ್ವತಃ ರಾಗ ಸಂಯೋಜಿಸಿದ ಹಾಡು ಇಡೀ ಉತ್ಸವವನ್ನು ತುಂಬಿತ್ತು. ಭೌತಶಾಸ್ತ್ರ ವಿಷಯದ ಪ್ರಾಧ್ಯಾಪಕ ರಾಗಿದ್ದ, ತಮಿಳುನಾಡಿನ ರಾಂಚೀಸ್ ಎಂಬವರನ್ನು ತಮ್ಮ 26ನೇ ವಯಸ್ಸಿಗೆ ಮದುವೆಯಾದರು.

ಪ್ರಭಾವತಿ ಅವರ ಬದುಕಿನ ಆಶ್ಚರ್ಯಕರ ವಿಷಯವೆಂದರೆ ಮದುವೆಯಾಗಿ, ಮೂರು ಮಕ್ಕಳಾಗಿ ಹೆಚ್ಚು ಕಡಿಮೆ ಹತ್ತು ವರ್ಷಗಳೇ ಕಳೆದಿತ್ತು. ನಂತರ ಎಂ.ಎ. ಪದವಿ ಓದಬೇಕೆಂದು ಮೈಸೂರು ವಿಶ್ವವಿದ್ಯಾ ನಿಲಯವನ್ನು ಆಯ್ದುಕೊಂಡಾಗ, ಸಂದರ್ಶನದಲ್ಲಿದ್ದ ದೇ.ಜವರೇಗೌಡ ಅವರು ಕೇಳಿದ್ದ ಮಾತನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ. ‘ಏನು ಮೇಡಂ, ನಿಮಗೆ ಅವಕಾಶ ಕೊಟ್ರೆ ಬೇರೆಯವರಿಗೆ ಅವಕಾಶ ತಪ್ಪುತ್ತೆ. ನಿದ್ದೆ ಹೇಗೆ ಕೊಡೋದು?’ ಪ್ರಭಾವತಿಯವರು ಆತ್ಮವಿಶ್ವಾಸದಿಂದ, ‘ನೀವು ಅವಕಾಶ ಕೊಟ್ರೆ ನಾನು ಸಾಧಿಸಿ ತೋರಿಸ್ತೀನಿ ಸರ್’ ಎಂದಿದ್ದು ಮಾತ್ರವಲ್ಲ, ಅದಕ್ಕೆ ಬದ್ಧರಾಗಿ ನಡೆದುಕೊಂಡರು ಕೂಡ.

ಅಗ್ರಹಾರದಲ್ಲಿದ್ದ ತಮ್ಮ ಮನೆಯಿಂದ ಬೆಳಿಗ್ಗೆ 4 ಗಂಟೆಗೇ ಎದ್ದು, ಮನೆ ಕೆಲಸ ಮುಗಿಸಿ, ತಿಂಡಿ ಕಟ್ಟಿಕೊಂಡು, ಗಂಗೋತ್ರಿಗೆ ಹೊರಡುತ್ತಿದ್ದರು. 10 ಗಂಟೆಯವರೆಗೆ ತರಗತಿ ಕೇಳಿ, ಪಕ್ಕದಲ್ಲಿದ್ದ ಶಾಲೆಗೆ ಪಾಠಕ್ಕೆಂದು ಹೋಗು ತಿದ್ದರು. ಸ್ನಾತಕೋತ್ತರ ಪದವಿಯಲ್ಲಿ ಕುವೆಂಪು ಅವರ ಶಿಷ್ಯಯಾಗಿದ್ದರು. ‘ಶ್ರೀ ರಾಮಾಯಣ ದರ್ಶನಂ’ ಕಾವ್ಯವನ್ನು ಅವರಿಂದಲೇ ಪಾಠವಾಗಿ ಕೇಳಿದರು. ಹಾ.ಮಾ.ನಾಯಕ ಅವರ ವಿದ್ಯಾರ್ಥಿನಿಯಾಗಿ ಮುಂದೆ ಅವರ ವೃತ್ತಿ ಬದುಕಿನ ಸಹೋದ್ಯೋಗಿಯೂ ಆದರು. ಪು.ತಿ.ನರಸಿಂಹಾ ಚಾರ್, ದೇ.ಜವರೇಗೌಡ, ಎಸ್.ವಿ.ಪರಮೇಶ್ವರ ಭಟ್ಟ, ಅನಂತರಂಗಾ ಚಾರ್ ಹೀಗೆ ಸಾಹಿತ್ಯದ ದಿಗ್ಗಜರೆಲ್ಲರನ್ನೂ ಪ್ರಾಧ್ಯಾಪಕರಾಗಿ ಕಂಡವರು.

ಕೆ.ಆರ್.ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ರಾಗಿದ್ದಾಗ ವೃತ್ತಿಯಿಂದ ನಿವೃತ್ತಿ ಹೊಂದಿದರು. ಜೀವನದ ಬಗೆಗೆ ಅವರಿಗಿರುವ ಆಶಾವಾದಿತನ ಖುಷಿಯ ಕ್ಷಣಗಳಂತೇ ಅವಮಾನದ ಕ್ಷಣಗಳನ್ನೂ ಸ್ವೀಕರಿಸುವಂತೆ ಮಾಡಿತು. ಈ ಮಾತಿಗೆ ನಡೆದ ಘಟನೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ. ಮೊದಲಬಾರಿಗೆ ಪ್ರಾಂಶುಪಾಲ ರಾಗಿ ಶಾಲೆಯೊಂದಕ್ಕೆ ಹೋದಾಗ, ‘ಅಲ್ಪಸಂಖ್ಯಾತ ವರ್ಗದ ಮಹಿಳೆಗೆ ಹೇಗೆ ಪ್ರಾಂಶುಪಾಲರ ಹುದ್ದೆಯನ್ನು ನೀಡುತ್ತಾರೆ?’ ಎಂದು ಕೆಲ ಜನರೆಲ್ಲ ಗಲಾಟೆ ಮಾಡಿದ್ದರು. ಪ್ರಾಂಶುಪಾಲರ ಕಚೇರಿಯ ಒಳಗೆ ಕೂರಲೂ ಬಿಡದೆ, ವಾಪಸು ಕಳುಹಿಸಿದ ನೆನಪುಗಳೂ ಅವರ ಬದುಕಿನಲ್ಲಿವೆ!

ಕನ್ನಡ ಎಂ.ಎ ಮುಗಿಸಿದ ಆ ಕಾಲದ ಕೆಲವೇ ಕೆಲವು ಮಹಿಳೆಯರಲ್ಲಿ ಪ್ರಭಾವತಿಯವರೂ ಒಬ್ಬರು. ಅನೇಕ ಸ್ಪರ್ಧೆಗಳಿಗೆ ತೀರ್ಪುಗಾರ ರಾಗಿಯೂ ಇರುತ್ತಿದ್ದರು. ವಿದ್ವಾಂಸರಾದ ತಿಪ್ಪೇರುದ್ರಸ್ವಾಮಿ ಅವರೊಂದಿಗೆ ಚರ್ಚಾ ಸ್ಪರ್ಧೆಯ ತೀರ್ಪುಗಾರಿಕೆಯನ್ನೂ ಮಾಡಿದ ಅನುಭವವಿದೆ.

ಪ್ರಭಾವತಿಯವರ ತಾಯಿಯ ಸಂಬಂಧಿಕರೊಬ್ಬರ ಹೆಸರು ಸಂಪತ್‌ ಕುಮಾರ್ ಎಂದು ಅಪಘಾತದಲ್ಲಿ ತೀರಿದ ಸುದ್ದಿಯಲ್ಲಿ ‘ಸಂಪತ್‌ ಕುಮಾರಿ’ ಎಂದು ಕೇಳಿ, ಶಾಲೆಯಲ್ಲೂ ಸಂತಾಪ ಸೂಚಿಸಿದ್ದರು. ರಾತ್ರಿ ಮನೆಗೆ ಬರುವ ವೇಳೆಯಲ್ಲಿ, ತೀರಿದ ಮನೆಯಲ್ಲಿ ದೀಪವನ್ನು ಕಂಡು ಬರುವ ಶಾಸ್ತ್ರದ ಪ್ರಕಾರ ಆಚೀಚೆಮನೆಯ ಜನರೆಲ್ಲ ಇವರ ಮನೆಯಲ್ಲಿ ಹಾಜರ್. ಸತ್ಯ ತಿಳಿದ ಮೇಲೆ, ಇವರನ್ನು ನೋಡಿಯೇ ಹೋಗಬೇಕೆಂದು ಅಲ್ಲೇ ಕಾದು ಕೂತಿದ್ದರು. ಇದು ಅವರ ಡಬಲ್ ಆಯಸ್ಸಿನ ಜೀವನದ ಕಥೆ.

andolana

Recent Posts

ಮಾಡೆಲ್‌ ಟ್ವಿಶಾ ಶರ್ಮಾ ಸಾವಿನ ಕೇಸ್‌ ತನಿಖೆ ಸಿಬಿಐ ಹೆಗಲಿಗೆ

ನವದೆಹಲಿ : ಮಾಡೆಲ್ ತ್ವಿಶಾ ಶರ್ಮಾ ಸಾವು ಪ್ರಕರಣ ಇದೀಗ ಸುಪ್ರೀಂಕೋರ್ಟ್​ ತಲುಪಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರ ತನಿಖಾ…

12 hours ago

ಮೈಸೂರು | ಪೊಲೀಸರ ಬಲೆಗೆ ಬಿದ್ದ ಸುಪಾರಿ ಗ್ಯಾಂಗ್‌

ಮೈಸೂರು : ಹಲವು ಗಂಭೀರ ಪ್ರಕರಣಗಳಲ್ಲಿ ಆರೋಪಿಯಾಗಿರುವ ಕುಖ್ಯಾತ ರೌಡಿ ಹಬೀದ್ ಪಾಷಾ ಇದೀಗ ಸುಫಾರಿ ಹಂತಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ…

13 hours ago

ಗ್ರಾಹಕರಿಕೆ ಶಾಕ್‌ : ಪೆಟ್ರೋಲ್‌, ಡಿಸೇಲ್‌ ಬೆಲೆ ಮತ್ತೆ ಏರಿಕೆ

ನವದೆಹಲಿ : ದೇಶದಲ್ಲಿ ಮತ್ತೆ ಇಂಧನ ದರ ಏರಿಕೆಯ ಹೊರೆ ಜನರ ಮೇಲೆ ಬಿದ್ದಿದೆ. ಸೋಮವಾರ ಪೆಟ್ರೋಲ್ ದರವನ್ನು ಲೀಟರ್‍ಗೆ…

15 hours ago

ಬಿಜೆಪಿ ಸರ್ಕಾರ ಮಾಡಿದ ಡೀಮ್ಡ್ ಅರಣ್ಯ ತಪ್ಪು ಸರಿಪಡಿಸಲು ಯತ್ನ:ಈಶ್ವರ ಖಂಡ್ರೆ

ಸುಪ್ರೀಂಕೋರ್ಟ್ ಗೆ ಮನವಿ ಸಲ್ಲಿಸಲು ಸಮಿತಿ ರಚನೆ: ಈಶ್ವರ ಖಂಡ್ರೆ ಕಾರ್ಕಳ : ಪರಿಭಾವಿತ (ಡೀಮ್ಡ್) ಅರಣ್ಯ ಪ್ರದೇಶದಲ್ಲಿ ಸರ್ಕಾರಿ…

16 hours ago

ಪಶ್ಚಿಮ ಬಂಗಾಳ : ಒಬಿಸಿ ಪಟ್ಟಿ ಮರುಸಂರಚನೆ

ಆರ್‌ಎಸ್‌ಎಸ್‌ ಕಾರ್ಯಸೂಚಿಗಳು ಜಾರಿ ಬಿ.ಶ್ರೀಪಾದ ಭಟ್‌ 2026ರ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು…

17 hours ago

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ | ಆಳುವ ಸರ್ಕಾರ ಎಚ್ಚರ ತಪ್ಪಿದರೆ ಪ್ರತಿರೋಧ ಖಚಿತ

ಆರ್ಥಿಕ ಸಂಕಷ್ಟದ ಸಮಯದಲ್ಲಿ ಜಾಗ್ರತೆಯಿಂದ ಕಾರ್ಯನಿರ್ವಹಣೆ ಅಗತ್ಯ ಇದು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆ. ಅವತ್ತು ಮುಖ್ಯಮಂತ್ರಿಯಾಗಿದ್ದ ಎಸ್.…

17 hours ago