Andolana originals

ಅವಸಾನದಂಚಿನಲ್ಲಿ ಸಂಬಾರ ಪದಾರ್ಥಗಳ ರಾಣಿ

ಅಕಾಲಿಕ ಮಳೆಯಿಂದ ಕಟ್ಟೆರೋಗ, ಕೊಳೆರೋಗ ಬಾಧೆ; ಏಲಕ್ಕಿ ಕೃಷಿಯ ಮೇಲೆ ದುಷ್ಪರಿಣಾಮ

ಸೋಮವಾರಪೇಟೆ: ಸಂಬಾರ ಪದಾರ್ಥಗಳ ರಾಣಿ ಎಂದೇ ಕರೆಸಿಕೊಳ್ಳುವ ಏಲಕ್ಕಿ ರೋಗಬಾಧೆಯಿಂದ ತಾಲ್ಲೂಕಿನಲ್ಲಿ ಅವಸಾನದ ಅಂಚಿನಲ್ಲಿದೆ. ಕಳೆದ ಮೇ ತಿಂಗಳಿನಿಂದ ನಿರಂತರವಾಗಿ ಸುರಿದ ಮುಂಗಾರು ಮಳೆ ಪರಿಣಾಮ ಕಟ್ಟೆ ರೋಗ, ಕೊಳೆರೋಗ ತೋಟಗಳಿಗೆ ವ್ಯಾಪಿಸಿ ಏಲಕ್ಕಿ ಕೃಷಿಯ ಮೇಲೆ ದುಷ್ಪರಿಣಾಮ ಬೀರಿದ್ದು, ರೈತರು ಹೈರಾಣಾಗಿದ್ದಾರೆ.

ವಾರ್ಷಿಕ ಸರಾಸರಿ ೧೫೦ರಿಂದ ೨೫೦ ಇಂಚು ಮಳೆ ಬೀಳುವ ಪ್ರದೇಶದಲ್ಲಿ ಏಲಕ್ಕಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಪುಷ್ಪಗಿರಿ ಬೆಟ್ಟ ತಪ್ಪಲಿನ ಪ್ರದೇಶ, ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕಕ್ಕಬ್ಬೆ, ವಿರಾಜಪೇಟೆ ತಾಲ್ಲೂಕಿನಬಿರುನಾಣಿ, ಬಿ.ಶೆಟ್ಟಿಗೇರಿ ಪ್ರದೇಶದಲ್ಲಿ ಏಲಕ್ಕಿ ಪ್ರಧಾನ ಷಿಯಾಗಿದೆ.

ಎರಡು ದಶಕಗಳ ಹಿಂದೆ ಏಲಕ್ಕಿ ಕಣಜವೆಂದು ಕರೆಸಿಕೊಳ್ಳುತ್ತಿದ್ದ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ, ಪುಷ್ಪಗಿರಿ, ಹಂಚಿನಳ್ಳಿ, ಇನಕನಹಳ್ಳಿ, ಬೆಂಕಳ್ಳಿ, ನಾಡ್ನಳ್ಳಿ, ಹೆಗ್ಗಡಮನೆ, ಕುಡಿಗಾಣ, ಬೀದಳ್ಳಿ, ಕೊತ್ನಳ್ಳಿ, ತಡ್ಡಿಕೊಪ್ಪ, ಮಲ್ಲಳ್ಳಿ, ಹರಗ, ಗರ್ವಾಲೆ, ಸೂರ್ಲಬ್ಬಿ, ಮುಕ್ಕೊಡ್ಲು, ಕುಮಾರಳ್ಳಿ, ಮಾಲ್‌ಮಾನೆ, ಕೂತಿ, ತೋಳೂರುಶೆಟ್ಟಳ್ಳಿ, ಬಿಳಿಗೇರಿ, ತಾಕೇರಿ, ಕಿರಗಂದೂರು, ತಲ್ತಾರೆ ಶೆಟ್ಟಳ್ಳಿ ಗ್ರಾಮಗಳ ಏಲಕ್ಕಿ ಬೆಳೆಗಾರರು ಈಗ ನಷ್ಟವನ್ನು ಅನುಭವಿಸುತ್ತಿದ್ದಾರೆ.

ನಾಲ್ಕೈದು ವರ್ಷಗಳಿಂದ ಸಂಭವಿಸುತ್ತಿರುವ ಅಕಾಲಿಕ ಮಳೆ, ರೋಗಬಾಧೆ, ಕಾರ್ಮಿಕರ ಕೊರತೆ, ಅಧಿಕ ಉತ್ಪಾದನಾ ವೆಚ್ಚ, ಕಡಿಮೆ ಬೆಲೆ, ಕೃಷಿಕರಿಗೆ ಕಾಫಿ ಮೇಲಿನ ವ್ಯಾಮೋಹ ಇನ್ನಿತರೆ ಕಾರಣಗಳಿಂದ ನೂರಾರು ಕೃಷಿಕರು ಏಲಕ್ಕಿ ತೋಟದ ನಿರ್ವಹಣೆ ಮಾಡದೆ ಕೃಷಿಯನ್ನು ಕೈಬಿಟ್ಟಿದ್ದಾರೆ. ಇನ್ನು ಕೆಲವರು ಏಲಕ್ಕಿ ತೋಟವನ್ನು ಕಾಫಿ ತೋಟವನ್ನಾಗಿ ಪರಿವರ್ತಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ೫,೮೦೯ ಹೆಕ್ಟೇರ್‌ನಲ್ಲಿ ಏಲಕ್ಕಿ ಕೃಷಿ ಬೆಳೆಯಲಾಗುತ್ತಿತ್ತು. ಸೋಮವಾರಪೇಟೆ ತಾಲ್ಲೂಕಿನ ೧,೭೩೬ ಹೆಕ್ಟೇರ್ ಪ್ರದೇಶದಲ್ಲಿ ಏಲಕ್ಕಿ ಕೃಷಿ ಮಾಡಲಾಗುತ್ತಿದೆ. ಆದರೆ ಇಳುವರಿಯಲ್ಲಿ ಹಿನ್ನಡೆಯಾಗುತ್ತಿದೆ. ಸರಿಯಾದ ಬೆಲೆಯೂ ಸಿಗುತ್ತಿಲ್ಲ.

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಏಲಕ್ಕಿ ಕೃಷಿ ಲಾಭದಾಯಕ. ರೋಗ ರಹಿತ ಏಲಕ್ಕಿ ಸಸಿಗಳು ನೆಟ್ಟು ಬೆಳೆಸಬೇಕು. ಐಗೂರು ನರ್ಸರಿಯಲ್ಲಿ ರಿಯಾಯಿತಿ ದರದಲ್ಲಿ ಸಸಿಗಳು ದೊರೆಯುತ್ತವೆ. ರೈತರು ಕಟ್ಟೆರೋಗವಿರುವ ತಂಡೆಗಳಿಂದ ಬೀಜಗಳನ್ನು ತೆಗೆದು ನರ್ಸರಿ ಮಾಡಬಾರದು. ರೋಗ ನಿಯಂತ್ರಣದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಂಬಾರ ಮಂಡಳಿ ಅಧಿಕಾರಿ ತಿಳಿಸಿದ್ದಾರೆ.

ಇದನ್ನು ಓದಿ: ಜನಪ್ರತಿನಿಧಿಗಳಿಲ್ಲದ ಸ್ಥಳೀಯ ಸಂಸ್ಥೆ ; ಸುಗಮ ಆಡಳಿತದ ಚಿಂತೆ

” ಅಕಾಲಿಕ ಮಳೆ, ರೋಗಬಾಧೆಯಿಂದ ಶಾಂತಳ್ಳಿ ಹೋಬಳಿಯಲ್ಲಿ ಏಲಕ್ಕಿ ಅವಸಾನದ ಅಂಚಿನಲ್ಲಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಇಳುವರಿ ಕಡಿಮೆಯಿದೆ. ನಾಲ್ಕೈದು ವರ್ಷಗಳಿಂದ ೧ ಕೆ.ಜಿ. ಏಲಕ್ಕಿಗೆ ಒಂದೂವರೆ ಸಾವಿರ ರೂ.ಗಳಷ್ಟು ಬೆಲೆ ಸಿಗುತ್ತಿದೆ. ಕೆ.ಜಿ.ಗೆ ನಾಲ್ಕು ಸಾವಿರ ರೂ.ಗಳಷ್ಟು ಬೆಲೆ ಸಿಕ್ಕರೆ ಮಾತ್ರ ಏಲಕ್ಕಿ ಕೃಷಿ ಮಾಡಬಹುದು. ಸರ್ಕಾರ ರೈತರಿಗೆ ಎಕರೆಗೆ ೫೦ ಸಾವಿರ ರೂ. ಪ್ರೋತ್ಸಾಹ ಧನ ನೀಡಬೇಕು.”

-ಉತ್ತಯ್ಯ, ಏಲಕ್ಕಿ ಕೃಷಿಕ, ಇನಕನಹಳ್ಳಿ ಗ್ರಾಮ

” ಏಲಕ್ಕಿ ಪುನಶ್ಚೇತನಕ್ಕಾಗಿ ೨೦೨೫-೨೬ನೇ ಸಾಲಿಗೆ ಸಂಬಾರ ಮಂಡಳಿ ಅನೇಕ ಸಹಾಯಧನ ಯೋಜನೆಗಳನ್ನು ರೂಪಿಸಿದ್ದು, ಏಲಕ್ಕಿ ಮರುನಾಟಿ, ಏಲಕ್ಕಿ ನರ್ಸರಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಅರ್ಜಿ ಸಲ್ಲಿಸುವ ದಿನಾಂಕ ಸೆ.೩೦ಕ್ಕೆ ಮುಗಿದಿದೆ. ಕಾಳು ಮೆಣಸು ಬಿಡಿಸುವ ಯಂತ್ರ ಖರೀದಿ, ಸ್ಪೈಸ್ ಕ್ಲಿನರ್ ಗ್ರೇಡರ್ ಖರೀದಿಗೆ ಸಹಾಯಧನಕ್ಕಾಗಿ ಅ.೩೦ರವರೆಗೆ ರೈತರು ಅರ್ಜಿ ಸಲ್ಲಿಸಬಹುದು. ಏಲಕ್ಕಿ ಪುನಶ್ಚೇನಕ್ಕೆ ಸಂಬಾರ ಮಂಡಳಿ ಕೃಷಿಕರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಿದ್ದು, ಕೃಷಿಕರು ಉಪಯೋಗಿಸಿಕೊಳ್ಳಬೇಕು.”

-ಎನ್.ಬಿ.ಲೋಕೇಶ್, ಕ್ಷೇತ್ರಾಧಿಕಾರಿ, ಸಂಬಾರ ಮಂಡಳಿ, ಸೋಮವಾರಪೇಟೆ.

ಆಂದೋಲನ ಡೆಸ್ಕ್

Recent Posts

ʼವಿದ್ಯಾವಂತರು ಸಮುದಾಯಕ್ಕೆ ಆಸರೆಯಾಗಬೇಕುʼ

  ಈ ನಡೆ ಶೋಷಿತ ಸಮುದಾಯಗಳ ಪ್ರಗತಿಗೆ ಸಹಕಾರಿ -ಟಿ.ಕೆ.ಹರೀಶ್ ಶಿಕ್ಷಣ ಕೇವಲ ವೈಯಕ್ತಿಕ ಬೆಳವಣಿಗೆಗೆ ಮಾತ್ರ ಸೀಮಿತವಾಗಿರಬಾರದು. ಅದು…

2 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಶಿಕ್ಷಣವೇ ದೇಶ ಕಟ್ಟುವ ಹಾದಿ ಎಂದು ತಿಳಿದಿದ್ದ ದೇಶಪಾಂಡೆಯವರು

ಡಾ.ಎಂ.ಡಿ.ಉಮೇಶ್‌, ಉಪನ್ಯಾಸಕರು, ಗಾಂಧಿ ಅಧ್ಯಯನ ಕೇಂದ್ರ, ಮೈಸೂರು ವಿ.ವಿ ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದಲ್ಲಿ ಬಾಲ ಕೃಷ್ಣ ಮತ್ತು ರಾಧಾಬಾಯಿ…

5 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಇಂಗ್ಲೆಂಡಿನಲ್ಲಿ ಶಾಕಾಹಾರದ ದಿನಗಳು

ಡಾಕ್ಟರ್ ಮೆಹತಾ ಮತ್ತು ನಾನು ಅವರ ಮಿತ್ರನ ಮನೆಗೆ ಹೋದೆವು. ಅವರು ನನ್ನ ವಿಷಯದಲ್ಲಿ ತುಂಬಾ ಕರುಣೆ ಮತ್ತು ಆದರವುಳ್ಳವರಾಗಿದ್ದರು.…

5 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 18 ಶನಿವಾರ

5 hours ago

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

18 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

20 hours ago