ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವು ಪುಸ್ತಕ ಪ್ರಿಯರನ್ನು ಆಕರ್ಷಿಸುತ್ತಿದೆ.
ಮೈಸೂರು ವಿವಿ ಪ್ರಸಾರಾಂಗದ ವತಿಯಿಂದ ಆಯೋಜಿಸಿರುವ ‘ಪ್ರಸಾರಾಂಗ ಪುಸ್ತಕೋತ್ಸವ-೨೦೨೫’ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳದಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕಗಳು ಮಾರಾ ಟವಾಗುತ್ತಿದ್ದು, ಸಾಹಿತ್ಯ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ, ಕನ್ನಡ ಜಾನಪದ ಪುಸ್ತಕಗಳು, ಕನ್ನಡ ವಿಶ್ವಕೋಶ, ಪಠ್ಯಕ್ರಮ ಮುಗಿದು ಹೋಗಿರುವ ಹಳೆಯ ಪದವಿ ಪೂರ್ವ ಹಾಗೂ ಪದವಿ ಪಠ್ಯ ಪುಸ್ತಕಗಳು, ಪ್ರಕಟಣೆಗೊಂಡು ೪೦ ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಪ್ರಾಚ್ಯ ವಿದ್ಯಾ ಸಂಶೋಧನಾಲಯದ ಹಳೆಯ ಪ್ರಕಟಣೆಗಳು, ಕನ್ನಡ ವಿಶ್ವಕೋಶ, ವಿಷಯ ವಿಶ್ವಕೋಶ ಹಾಗೂ ಎಪಿಗ್ರಾಫಿಯ ಕರ್ನಾಟಕದ ಎಲ್ಲ ಸಂಪುಟಗಳು, ಪ್ರಸಾರಾಂಗದ ದಾಸ್ತಾನಿನಲ್ಲಿರುವ ಎಲ್ಲ ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳು, ಪ್ರಚಾರೋಪ ನ್ಯಾಸ ಮಾಲೆಯ ಪುಸ್ತಕಗಳು ಲಭ್ಯವಿದ್ದು, ಶೇ.೧೦ರಿಂದ ೭೫ರಷ್ಟು ರಿಯಾಯಿತಿ ದರದಲ್ಲಿ ದೊರೆಯಲಿವೆ. ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಮಾತ್ರ ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಹಳೆಯ ನಿಯತಕಾಲಿಕೆಗಳಿಗೆ ವಿಶೇಷ ರಿಯಾಯಿತಿ ದೊರೆಯು ತ್ತಿವೆ. ಇದರೊಂದಿಗೆ ೮೭೦ ಶೀರ್ಷಿಕೆಯ ೯ ಲಕ್ಷಕ್ಕೂ ಹೆಚ್ಚು ವೈವಿಧ್ಯಮಯವಾದ ಪುಸ್ತಕಗಳನ್ನು ಭಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿದೆ.
೫೦ ಸಾವಿರ ರೂ.ಗಳಿಗೆ ಪ್ರಸಾರಾಂಗದ ಎಲ್ಲ ಕೃತಿಗಳನ್ನು ಖರೀದಿಸಬಹುದಾಗಿದ್ದು, ರಿಯಾಯಿತಿ ಮಾರಾಟದಿಂದ ೨೫ಲಕ್ಷ ರೂ. ವ್ಯಾಪಾರದ ನಿರೀಕ್ಷೆಯನ್ನು ಪ್ರಸಾರಾಂಗ ಹೊಂದಿದೆ. ವಿಶ್ವಕೋಶಕ್ಕೆ ಶೇ.೫೦ ರಿಯಾಯಿತಿ: ಇದೇ ಮೊದಲ ಬಾರಿಗೆ ಕನ್ನಡ ವಿಶ್ವಕೋಶಕ್ಕೆ ಶೇ.೫೦ ರಿಯಾಯಿತಿ ನೀಡಲಾಗಿದೆ. ಇದಕ್ಕೂ ಮುನ್ನ ಶೇ.೧೦, ೨೫ಕ್ಕಿಂತ ಹೆಚ್ಚು ರಿಯಾಯಿತಿ ನೀಡಿರಲಿಲ್ಲ. ಇಂಗ್ಲಿಷ್-ಕನ್ನಡ ನಿಘಂಟು ಶೇ.೨೫, ಪ್ರಚಾರೋಪನ್ಯಾಸ ಮಾಲೆ ಶೇ.೧೦, ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಯ ಶತಮಾನೋತ್ಸವ ಸಂಚಿಕೆಗೆ ಶೇ.೫೦ ರಿಯಾಯಿತಿ ನೀಡಲಾಗಿದೆ. ಪದವಿಪೂರ್ವ, ಪದವಿ ಹಳೆಯ ಪಠ್ಯ ಪುಸ್ತಕಗಳಿಗೆ ಶೇ.೭೫, ೪೦ ವರ್ಷ ಮೀರಿದ ಪ್ರಸಾರಾಂಗದಲ್ಲಿ ಮಾರಾಟವಾಗುವ ಎಲ್ಲ ಪ್ರಕಟಣೆಗಳಿಗೆ ಶೇ.೭೫, ಪ್ರಾಚ್ಯವಿದ್ಯಾ ಸಂಶೋಧನಾಲಯದ ಹಳೆಯ ಪ್ರಕಟಣೆ ಗಳಿಗೆ ಶೇ.೭೦, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಳೆಯ ಪ್ರಕಟಣೆಗಳಿಗೆ ಶೇ.೬೦, ಸಾಮಾನ್ಯ ಶೀರ್ಷಿಕೆಯ ಪುಸ್ತಕಗಳಿಗೆ ಶೇ.೫೦ ರಿಯಾಯಿತಿ ಇದೆ.
” ಡಿ.೧೫ ಮತ್ತು ೧೬ರಂದು ಪ್ರಸಾರಾಂಗದ ಆವರಣದಲ್ಲಿ ಪುಸ್ತಕೋತ್ಸವ ಹಮ್ಮಿಕೊಂಡಿದ್ದೇವೆ. ಮೌಲಿಕವಾದ ೮ರಿಂದ ೧೦ ಕೃತಿಗಳ ಕುರಿತು ವಿದ್ವಾಂಸರು ವಿಮರ್ಶೆ ಭಾಷಣ ಮಾಡಲಿದ್ದಾರೆ. ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದವ ರನ್ನು ಗೌರವಿಸಲಾಗುತ್ತದೆ. ಮೈಸೂರು ವಿವಿಗೆ ವರಮಾನ ತಂದುಕೊಡುವ ಏಕೈಕ ಸಂಸ್ಥೆ ಪ್ರಾಸಾರಾಂಗ. ವಾರ್ಷಿಕ ೬೦ರಿಂದ ೭೦ ಲಕ್ಷ ರೂ. ವಹಿವಾಟು ನಡೆಯುತ್ತದೆ.”
-ಪ್ರೊ.ನಂಜಯ್ಯ ಎಂ.ಹೊಂಗನೂರು, ನಿರ್ದೇಶಕರು, ಮೈಸೂರು ವಿವಿ ಪ್ರಸಾರಾಂಗ
ಡಿ.೩೧ ರವರೆಗೂ ಪುಸ್ತಕ ಮೇಳ ‘ಪ್ರಸಾರಾಂಗ: ಪುಸ್ತಕೋತ್ಸವ-೨೦೨೫’ ವಿಶೇಷ ರಿಯಾಯಿತಿ ಪುಸ್ತಕ ಮಾರಾಟ ಮೇಳವು ಡಿ.೩೧ರವರೆಗೆ ಬೆಳಿಗ್ಗೆ ೧೦ರಿಂದ ಸಂಜೆ ೫ ಗಂಟೆವರೆಗೆ ನಡೆಯಲಿದೆ.
ಚಿತ್ರದುರ್ಗ : ದಶಕಗಳಿಂದ ಬರಗಾಲದ ಬೇಗೆಯಲ್ಲಿ ಬೆಂದ ಬಯಲುಸೀಮೆಗೆ ಭದ್ರಾ ಮೇಲ್ದಂಡೆ ಯೋಜನೆ ಹೊಸ ಭರವಸೆ ಮೂಡಿಸಿದೆ. ಅರಣ್ಯ ಇಲಾಖೆ…
ಭಾರತೀಯ ಚಿತ್ರರಂಗದ ಹಲವಾರು ಭಾಷೆಗಳಲ್ಲಿ ಸಹಜ ನಟನೆಯ ಪ್ರಸದ್ಧಿ ಪಡೆದು... ಮೇರುನಟರಾಗಿ ಕಲಾಸೇವೆಗಾಗಿ ತಮನ್ನು ತಾವು ಮುಡಿಪಿಟ್ಟು ಭಾರತೀಯ ಚಿತ್ರರಂಗದ…
ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆಯಲು ಜನರು ಮೈಸೂರು ಮಹಾ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಪದೇ ಪದೇ…
ದೇಶದಾದ್ಯಂತ ಸಣ್ಣ ಪುಟ್ಟ ವ್ಯಾಪಾರಗಳಿಂದ ಹಿಡಿದು ದೇಶದ ಬಹುದೊಡ್ಡ ವ್ಯಾಪಾರ ವಹಿವಾಟಿನವರೆಗೆ ಯುಪಿಐ ಮೂಲಕವೇ ಹಣ ಪಾವತಿಸಲು ಕೇಂದ್ರ ಸರ್ಕಾರ…
ಡಾ. ಬಸವರಾಜ್ ಇಟ್ನಾಳ ಇತ್ತೀಚೆಗೆ ಬ್ರಿಕ್ಸ್ ಶೃಂಗ ಸಭೆ ದೆಹಲಿಯಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳ ಪರಸ್ಪರ ಸಹಕಾರ ಮತ್ತು ಸ್ಥಳೀಯ…
ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ…