ಓದುಗರ ಪತ್ರ
ಮೈಸೂರಿನ ದಟ್ಟಗಳ್ಳಿ ೩ ನೇ ಹಂತದ ಕನಕದಾಸನಗರವು, ಬಡಾವಣೆ ನಿರ್ಮಾಣವಾದ ಆರಂಭದಲ್ಲಿ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಗೆ ಸೇರಿತ್ತು. ಹಾಗಾಗಿ ಬಡಾವಣೆಯ ಎಲ್ಲರೂ ಪಿನ್ ಕೋಡ್ ೫೭೦೦೨೨ ಎಂದೇ ಬಳಸುತ್ತಿದ್ದಾರೆ.
ಅಂಚೆ ಇಲಾಖೆಯವರು ಈ ಹಿಂದೆ ಇದ್ದ ರಾಮಕೃಷ್ಣ ನಗರ ಉಪ ಅಂಚೆ ಕಚೇರಿಯ ಪಿನ್ ಕೋಡ್ ೫೭೦೦೨೨ ಅನ್ನು ರಾಮಕೃಷ್ಣ ನಗರಕ್ಕೆ ಮಾತ್ರ ಸೀಮಿತಗೊಳಿಸಿ, ದಟ್ಟಗಳ್ಳಿಗೆ ಹೊಸ ಪಿನ್ ಕೋಡ್ ೫೭೦೦೩೩ ಎಂದು ಬದಲಾವಣೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗಿತ್ತು. ಆದರೆ ಬಡಾವಣೆಯ ಬಹುತೇಕ ನಿವಾಸಿಗಳಿಗೆ ಈ ಬದಲಾವಣೆ ಗಮನಕ್ಕೆ ಬಂದಿಲ್ಲ. ಬಂದಿದ್ದರೂ ಈಗಾಗಲೇ ತಮ್ಮ ಆಧಾರ್ ಸೇರಿದಂತೆ ಮನೆ ವಿಳಾಸವೆಲ್ಲವೂ ಹಳೆಯ ಪಿನ್ ೫೭೦೦೨೨ ಎಂದು ಇರುವುದರಿಂದ ಈಗಲೂ ದಾಖಲೆ, ವಿಳಾಸದಲ್ಲಿ ಅದೇ ಸಂಖ್ಯೆಯನ್ನು ನಮೂದಿಸಿ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಈಗ ಪಿನ್ ಕೋಡ್ ಬದಲಾವಣೆಯಾಗಿರುವುದರಿಂದ ಅದನ್ನು ಪಾಸ್ ಪೋರ್ಟ್, ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಮೈಸೂರು ಒನ್ ಕೇಂದ್ರದಲ್ಲಿ ಕೇಳಿದರೆ ಅದು ಅಪ್ ಡೇಟ್ ಆಗಿಲ್ಲ ಎನ್ನುತ್ತಾರೆ. ಗ್ಯಾಸ್ ಏಜೆನ್ಸಿಯವರನ್ನು ಪಿನ್ ಕೋಡ್ ಬದಲಾವಣೆ ಮಾಡುವುದು ಅಂಚೆ ಕಚೇರಿಯವರ ಕೆಲಸ ಎಂದು ಹೇಳುತ್ತಿದ್ದಾರೆ. ಈ ಸಂಬಂಧ ಮೈಸೂರು ವಿಭಾಗೀಯ ಅಂಚೆ ಕಚೇರಿಗೆ ದೂರವಾಣಿ ಕರೆ ಮಾಡಿದರೆ ದಟ್ಟಗಳ್ಳಿಯ ಪಿನ್ ಕೋಡ್ ಬದಲಾವಣೆಯ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಾರೆ.
ಇನ್ನು ಗ್ಯಾಸ್ ಏಜೆನ್ಸಿಯವರನ್ನು ವಿಳಾಸದಲ್ಲಿ ಪಿನ್ ಕೋಡ್ ಬದಲಾವಣೆ ಮಾಡಲು ಕೋರಿದರೆ ಬದಲಾವಣೆಯನ್ನು ಸಿಸ್ಟಮ್ ತೆಗೆದುಕೊಳ್ಳುತ್ತಿಲ್ಲ, ಅದು ಪೋಸ್ಟ್ ಆಫೀಸ್, ಕೇಂದ್ರ ಸರ್ಕಾರದ ಕಡೆಯಿಂದ ಅಪ್ ಡೇಟ್ ಆಗಬೇಕು ಎನ್ನುತ್ತಾರೆ. ಒಂದು ಸಣ್ಣ ಸಮಸ್ಯೆಯನ್ನು ಪರಿಹಾರ ಮಾಡಲು ಇಲಾಖೆಗಳು ಹೇಗೆ ಜನರನ್ನು ಸತಾಯಿಸುತ್ತವೆ ಎನ್ನುವುದಕ್ಕೆ ಇದು ಒಂದು ನಿದರ್ಶನವಷ್ಟೇ. ಸಂಬಂಧಟ್ಟವರು ಈಗಲಾದರೂ ಪಿನ್ಕೋಡ್ ಸಮಸ್ಯೆಯನ್ನು ನಿವಾರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
-ಪ್ರಕಾಶ್ ಮುಳ್ಳೂರು, ಕನಕದಾಸನಗರ, ಮೈಸೂರು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಸಣಾಪುರ ಚಾಟಿಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರದ ಫಲಕಕ್ಕೆ ಕಿಡಿಗೇಡಿಗಳು ಅಪಮಾನ…
ಭಾರತೀಯ ಅಂಚೆ ಹಾಗೂ ಕರ್ನಾಟಕ ಅಂಚೆ ಚೀಟಿ ಸಂಗ್ರಹಣಾ ಸಂಘವು ಆಧುನಿಕ ಮೈಸೂರು ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿರುವ ಮೈಸೂರು…
ಪುನೀತ್ ಮಡಿಕೇರಿ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ; ಅಗತ್ಯವಿರುವಷ್ಟು ವಿದ್ಯುತ್ ಕಂಬಗಳು, ಪರಿವರ್ತಕಗಳು, ವಾಹಕಗಳ ದಾಸ್ತಾನು ಮಡಿಕೇರಿ: ಗುಡ್ಡಗಾಡು ಪ್ರದೇಶವಾಗಿರುವ ಕೊಡಗು…
ಮಹೇಶ್ ಕರೋಠಿ ಮುಚ್ಚಿರುವ ರಸ್ತೆಯನ್ನು ಪುನಃ ತೆರೆದು ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರ ಒತ್ತಾಯ ಕಿಕ್ಕೇರಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ದೇಶದ ಭದ್ರತೆಗಾಗಿ…
ಮಂಜು ಕೋಟೆ ಕೋಟೆ: ಕಾಂಗ್ರೆಸ್, ಬಿಜೆಪಿ, ಜಾ.ದಳ ಪಕ್ಷಗಳಲ್ಲಿ ಪೈಪೋಟಿ; ಮುಖಂಡರಿಗೆ ಪ್ರತಿ ಎಚ್.ಡಿ.ಕೋಟೆ: ಕ್ಷೇತ್ರದ ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆ…
ಭೇರ್ಯ ಮಹೇಶ್ ಭೇರ್ಯ: ಶಿಥಿಲಗೊಂಡಿರುವ ಕಾರಣದಿಂದ ವಾಸಿಸಲು ಹಿಂಜರಿಯುವ ವೈದ್ಯರು, ದಾದಿಯರು, ಸಹಾಯಕಿಯರು ಭೇರ್ಯ: ಭೇರ್ಯ ಗ್ರಾಮದ ಪ್ರಾಥಮಿಕ ಆರೋಗ್ಯ…