ರಾಜ್ಯದ ಅಣೆಕಟ್ಟೆಗಳ ಪೈಕಿ ಬಹುತೇಕ ಅಣೆಕಟ್ಟೆಗಳು ನಿರ್ಮಾ ಣಗೊಂಡು 50 ವರ್ಷಗಳ ಮೇಲಾಗಿದ್ದು, ನೂರು ವರ್ಷಗಳನ್ನು ಪೂರೈಸಿರುವ ಅಣೆಕಟ್ಟೆಗಳೂ ಇರುವುದರಿಂದ ಅವು ಗಳನ್ನು ಕಾಲ ಕಾಲಕ್ಕೆ ದುರಸ್ತಿಗೊಳಿಸುವುದು ಅಗತ್ಯ. ತುಂಗಭದ್ರ ಜಲಾಶಯವನ್ನು 1953ರಲ್ಲಿ ನಿರ್ಮಿಸಲಾಗಿದೆ. ಈ ಜಲಾಶಯದ ಒಂದು ಕ್ರಸ್ಟ್ ಗೇಟ್ ಇತ್ತೀಚೆಗೆ ಮುರಿದುಬಿದ್ದು ಆತಂಕ ಸೃಷ್ಟಿಸಿತ್ತು. ಅದೇ ರೀತಿ ಕೆಆರ್ಎಸ್ ಜಲಾಶಯವು ನಿರ್ಮಾಣವಾಗಿ ಈಗಾಗಲೇ ನೂರು ವರ್ಷಗಳನ್ನು ಪೂರೈಸಿದೆ. ವೇದಾವತಿನದಿಗೆವಾಣಿವಿಲಾಸಸಾಗರಜಲಾಶಯನಿರ್ಮಾಣವಾಗಿಯೂ 125 ವರ್ಷಗಳಾಗಿವೆ. ಇನ್ನು ಕಬಿನಿ, ನುಗು, ಹಾರಂಗಿ ಜಲಾಶಯಗಳಿಗೂ ಏನಿಲ್ಲ ಎಂದರೂ 50 ವರ್ಷಗಳಾಗಿವೆ.
ರಾಜ್ಯ ಸರ್ಕಾರವು ಈ ಜಲಾಶಯಗಳನ್ನು ಕಾಲಕಾಲಕ್ಕೆ ದುರಸ್ತಿಗೊಳಿಸಿ ಸರಿಯಾಗಿ ನಿರ್ವಹಿಸಬೇಕಿತ್ತು. ಆದರೆ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಅನಿಸುತ್ತದೆ. ಸದ್ಯ ತುಂಗಭದ್ರ ಜಲಾಶಯದ ಗೇಟ್ ಮುರಿದುಬಿದ್ದಿರುವುದುಹಾಗೂಕಬಿನಿಜಲಾಶಯವುಸೋರುತ್ತಿರುವುದು ಎಚ್ಚರಿಕೆಯ ಘಂಟೆಯಾಗಿದ್ದು, ಅನಾಹುತಗಳು ಸಂಭವಿಸುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಜಲಾಶಯಗಳನ್ನು ದುರಸ್ತಿಗೊಳಿಸಬೇಕಿದೆ.
-ಎನ್.ಆರ್.ಚೇತನ್, ನಗರ್ಲೆ, ನಂಜನಗೂಡು.
ಮೈಸೂರಿನ ಚಾಮರಾಜ ಮೊಹದ ಸೋನಾರ್ ಬೀದಿಯಲ್ಲಿ ಸಾರ್ವಜನಿಕ ನಲ್ಲಿಗೆ ಸಂಪರ್ಕ ಕಲ್ಪಿಸುವ ಪೈಪ್ ಪಡೆದುಹೋಗಿದ್ದು, ಕುಡಿಯುವ ನೀರು ಚರಂಡಿ ಪಾಲಾಗುತ್ತಿದೆ.…
ಪ್ರತಿವರ್ಷ ಆಷಾಢ, ಶ್ರಾವಣ ಮಾಸದ ಸಮಯದಲ್ಲಿ ಎಲ್ಲ ಮಠಾಧೀಶರೂ ಚಾತುರ್ಮಾಸ ವ್ರತವನ್ನು ಆಚರಿಸುವುದು ವಾಡಿಕೆ. ಚಾತುರ್ಮಾಸ ಎಂದರೆ ನಾಲ್ಕು ತಿಂಗಳು.…
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ನಮ್ಮ ನಾಡಿನ ಸಾಂಸ್ಕೃತಿಕ ಅನನ್ಯತೆಯನ್ನು ಎತ್ತಿ ಹಿಡಿಯುತ್ತದೆ. ಕಲೆ, ಸಾಹಿತ್ಯ, ಸಂಸ್ಕೃತಿಯ ಮೂಲಕ…
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯು ಯಶಸ್ವಿಯಾಗಿ ಮೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಆರ್ಥಿಕತೆಗೆ ನವಚೈತನ್ಯ ತುಂಬಿದೆ. ಮಹಿಳೆಯರಿಗೆ ಆರ್ಥಿಕ…
ನವೀನ್ ಡಿಸೋಜ ಶೀತ, ಕೆಮ್ಮು, ಜ್ವರ ಸಂಬಂಧ ೩,೭೬೨ ಪ್ರಕರಣ ದಾಖಲು; ಅಗತ್ಯ ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಮನವಿ ಮಡಿಕೇರಿ:…
ಮಹಾದೇಶ್ ಎಂ.ಗೌಡ ಹನೂರು: ಕುಡಿಯುವ ನೀರು, ಮೇವಿಗೂ ತೀವ್ರ ಹಾಹಾಕಾರ ಹನೂರು: ತಾಲ್ಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು,…