Andolana originals

ಓದುಗರ ಪತ್ರ:  ಇಸ್ರೇಲ್- ಇರಾನ್ ಯುದ್ಧ ಕೊನೆಗೊಳ್ಳಲಿ

ಇರಾನ್ ಮತ್ತು ಇಸ್ರೇಲ್ ಮಧ್ಯೆ ನಡೆಯುತ್ತಿರುವ ಯುದ್ಧ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಇರಾನಿನ ರಾಜಧಾನಿ ಟೆಹರಾನ್ ಮತ್ತು ಇತರ ನಗರಗಳ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಆತಂಕ ಮೂಡಿಸಿದೆ.

ಇಸ್ರೇಲ್‌ನ ವೈಮಾನಿಕ ಹಾಗೂ ಡ್ರೋನ್ ದಾಳಿಗಳು ವಿಶೇಷವಾಗಿ ಇರಾನಿನ ಅಣು ಸ್ಥಾವರಗಳು, ರಕ್ಷಣಾ ಸ್ಥಾವರಗಳು ಹಾಗೂ ಇರಾನಿನ ಇಸ್ಲಾಂ ನಾಯಕರ ನಿವಾಸಗಳ ಮೇಲೆ ನಡೆಯುತ್ತಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ದಶಕಗಳಿಂದಲೂ ಹೊಗೆಯಾಡುತ್ತಿದ್ದ ವೈರತ್ವ ಈಗ ಸೋಟಗೊಂಡಿದ್ದು, ಇಡೀ ವಿಶ್ವದಲ್ಲೇ ತಲ್ಲಣವನ್ನು ಸೃಷ್ಟಿಸಿದೆ. ಇಸ್ರೇಲ್ ಸಣ್ಣ ರಾಷ್ಟ್ರವಾದರೂ ಅತ್ಯಾಧುನಿಕ ಹಾಗೂ ಸುಸಜ್ಜಿತ ಸೇನೆಯನ್ನು ಒಳಗೊಂಡಿದ್ದು, ಪರಮಾಣು ಅಸ್ತ್ರಗಳನ್ನು ಹೊಂದಿದ ಬಲಿಷ್ಠ ರಾಷ್ಟ್ರವಾಗಿದೆ. ಅದೂ ಅಲ್ಲದೆ ಇಡೀ ವಿಶ್ವದಲ್ಲೇ ಗೆರಿಲ್ಲಾ ಯುದ್ಧ ತಂತ್ರಕ್ಕೆ ಹೆಸರು ವಾಸಿಯಾಗಿದೆ. ಇರಾನ್ ಕೂಡ ಬಲಿಷ್ಠ ರಾಷ್ಟ್ರವಾಗಿದ್ದು ಇಸ್ಲಾಂ ರಾಷ್ಟ್ರಗಳ ಬೆಂಬಲವನ್ನು ಪಡೆದುಕೊಂಡಿದೆ. ಯುದ್ಧ ಇನ್ನೂ ತೀವ್ರ ಸ್ವರೂಪ ಪಡೆದುಕೊಂಡು ಪರಮಾಣು ಯುದ್ಧವಾಗಿ ಕೂಡ ಪರಿಣಮಿಸಬಹುದು. ಅನೇಕ ದೇಶಗಳಲ್ಲಿ ತೈಲ ಬೆಲೆ ಒಂದೇ ಸಮನೇ ಏರುತ್ತಿದೆ. ಅನೇಕ ದೇಶಗಳ ಷೇರುಪೇಟೆಗಳು ಕುಸಿಯಲು ಪ್ರಾರಂಭಿಸಿವೆ. ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಯುದ್ಧವನ್ನು ನಿಲ್ಲಿಸುವಂತೆ ಈ ಎರಡೂ ದೇಶಗಳ ಮೇಲೆ ಒತ್ತಡ ಹಾಕುತ್ತಿವೆ. ವಿಶ್ವಸಂಸ್ಥೆ ಕೂಡ ಯುದ್ಧವನ್ನು ಸ್ಥಗಿತಗೊಳಿಸಲು ಶ್ರಮಿಸುತ್ತಿದೆ. ಇರಾನ್ ಮತ್ತು ಇಸ್ರೇಲ್ ಈಗಲಾದರೂ ಯುದ್ಧವನ್ನು ನಿಲ್ಲಿಸಿ, ತಮ್ಮ ತಮ್ಮ ಸಮಸ್ಯೆಗಳನ್ನು ರಾಜತಾಂತ್ರಿಕ ವಿಧಾನಗಳ ಮೂಲಕ ಪರಿಹರಿಸಿಕೊಳ್ಳುವುದು ಅಗತ್ಯವಾಗಿದೆ.

 -ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅಸಂಘಟಿತ ಕಾರ್ಮಿಕರಿಗೆ ಜೀವನ ಭದ್ರತೆ ಕಲ್ಪಿಸಿ

ದೇಶದ ಸಾವಿರಾರು ಮಂದಿ ಅಸಂಘಟಿತ ಕಾರ್ಮಿಕರು ಹೊಟ್ಟೆಪಾಡಿಗಾಗಿ ಮಾಡುವ ಉದ್ಯೋಗವೇ ಅವರ ಜೀವಕ್ಕೆ ಮುಳುವಾಗುತ್ತಿದೆ. ಭಾನುವಾರ ಉತ್ತರ ಕನ್ನಡ ಜಿಲ್ಲೆಯ…

2 hours ago

ಓದುಗರ ಪತ್ರ: ರೌಂಡ್ ಕ್ಯಾಂಟೀನ್ ಶೀಘ್ರ ಪುನರಾರಂಭವಾಗಲಿ

ಮೈಸೂರಿನ ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟೀನ್ ಕಳೆದ ೫೦ ವರ್ಷಗಳಿಂದ ವಿದ್ಯಾರ್ಥಿಗಳನ್ನು, ಬೋಧಕ -ಬೋಧಕೇತರ ಸಿಬ್ಬಂದಿಗಳನ್ನು ಭಾವನಾತ್ಮಕವಾಗಿ ಬೆಸೆದುಕೊಂಡಿದೆ. ಇದು…

2 hours ago

ಓದುಗರ ಪತ್ರ: ದೇವನೂರರ ಸಲಹೆಗಳು ಅನುಷ್ಠಾನಗೊಳ್ಳಲಿ

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೆ.ಪಿ.ಎಸ್. ಶಾಲೆಗಳ ರೂಪರೇಷೆ ಹಾಗೂ ಸರ್ಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ…

2 hours ago

ಓದುಗರ ಪತ್ರ: ಮಹಿಳೆಯರಿಗೂ ಪ್ರಾತಿನಿಧ್ಯ ದೊರಕಲಿ

ಇತ್ತೀಚಿನ ದಿನಗಳಲ್ಲಿ ನಡೆಯುವ ಸಾರ್ವಜನಿಕ ಸಭೆ ಸಮಾರಂಭಗಳು, ವಿಶ್ವವಿದ್ಯಾನಿಲಯ, ಶಾಲಾ ಕಾಲೇಜು ಮೊದಲಾದ ಕಡೆ ನಡೆಯುವ ಚರ್ಚಾಗೋಷ್ಠಿ , ವಿಚಾರಸಂಕಿರಣಗಳಲ್ಲಿ…

2 hours ago

ಇಂಧನ ಬೆಲೆ ಏರಿಕೆ-ಮೊಸಳೆ ಬಂತು ಮೊಸಳೆ ಕಥೆ!

ರಾಜಾರಾಂ ತಲ್ಲೂರು ಇಂದು ದೇಶ ಅನುಭವಿಸುತ್ತಿರುವ ತೈಲ ಶಾಕ್‌ಗೆ ಸರ್ಕಾರದ ಅನಧಿಕೃತ ಹಸ್ತಕ್ಷೇಪ ಕಾರಣ ಸುವ್ಯವಸ್ಥೆಗೆಂದು ರೂಪಿಸಲಾದ ನಿಯಮಗಳನ್ನು, ಆ…

2 hours ago

‘ಬೇಡು ಹಬ್ಬದ ಹೆಸರಿನಲ್ಲಿ ತೊಂದರೆ ನೀಡಿದಲ್ಲಿ ಕಾನೂನು ಕ್ರಮ’

ನವೀನ್ ಡಿಸೋಜ ಕಂಡ ಕಂಡವರನ್ನು ನಿಂದಿಸಿ, ಹಣ ಸಂಗ್ರಹಿಸುವ ವಿಭಿನ್ನ ಹಬ್ಬ; ಕಾನೂನು ಪಾಲಿಸಲು ಪೊಲೀಸ್ ಇಲಾಖೆ ಸೂಚನೆ  ಮಡಿಕೇರಿ: ಅಶ್ಲೀಲ…

2 hours ago