ಓದುಗರ ಪತ್ರ
ಓ ನನ್ನ ಒಲವಿನ ‘ಆಂದೋಲನ’
ಓ ನನ್ನ ಒಲವಿನ
ಬೆಳಗಿನ ಆಂದೋಲನ,
ನೋಡ ನೋಡುತ್ತಲೇ ನಿನಗೆ ಈಗ
ತುಂಬಿತು ಬರೋಬ್ಬರಿ ವರ್ಷ ೫೩
ಅದಕ್ಕೆ ನಿನಗೀಗ ಹುಟ್ಟುಹಬ್ಬ
ನನಗೂ ಕಲಿಸಿಕೊಟ್ಟೆಯಲ್ಲ..
ಕಟ್ಟುವುದ ಪುಟ್ಟ ಪುಟ್ಟ ಕಬ್ಬ !
ಎನಿತು ಬಣ್ಣಿಸಲಿ ನಿನ್ನ ಹಾಡು-ಪಾಡು…
ಮೈಸೂರಿನಲ್ಲಿ ಮಲ್ಲಿಗೆಯಂತೆ ಅರಳಿದ
ನಿನ್ನ ವೃತ್ತಿ ಪ್ರೀತಿ..
ದಿನೇ ದಿನೇ ಬೆಳೆದೆ ಮಂಡ್ಯ, ಹಾಸನ,
ಕೊಡಗು ಚಾ. ನಗರ…ಆವೃತ್ತಿಯಾಗಿ!
ದನಿ ಇಲ್ಲದವರಿಗೆ ದನಿಯಾದೆ
ನಿಲ್ದಾಣದಿ ನಿಂತವರಿಗೆ ನೆರಳಾದೆ
ಅಯ್ಯೋ ಎಂದವರಿಗೆ ಆಸರೆಯಾದೆ
ಒಂದೇ ಎರಡೇ..!
ನಿನ್ನ ಸಾರ್ಥಕ ಪಯಣಕ್ಕೆ
ನನ್ನ ಕೋಟಿ ಕೋಟಿ ನಮನ
ಹೇಳು,ನಿನ್ನ ಎಳೆಯ ಗೆಳೆಯ
ನಾನೇನು ಮಾಡಬಲ್ಲೆ ?
ನಿತ್ಯ ಮರೆಯದೆ ನಿನ್ನ ಓದಬಲ್ಲೆ !
– ಮ.ಗು.ಬಸವಣ್ಣ, ಜೆಎಸ್ಎಸ್ ಬಡಾವಣೆ, ಮೈಸೂರು
ಹನೂರು: ತಾಲ್ಲೂಕಿನ ಮಾರ್ಟಳ್ಳಿ ಸಮೀಪದ ವಡ್ಡರದೊಡ್ಡಿ ಗ್ರಾಮದಲ್ಲಿ ಮನೆಯೊಂದರಲ್ಲಿ ಕಳ್ಳತನ ನಡೆದಿರುವ ಕುರಿತು ವರದಿಯಾಗಿದೆ. ಗ್ರಾಮದ ನಿವಾಸಿ ಸೆಲ್ವಂ ಅವರು…
ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ…
ಗುಂಡ್ಲುಪೇಟೆ: ಪಟ್ಟಣದ ಹೊರವಲಯದ ಕಲ್ಯಾಣಿ ಕೊಳದ ಬಳಿ ಸೇತುವೆಯಿಂದ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಮಂಡ್ಯ ಮೂಲದ…
ಸೋಮವಾರಪೇಟೆ: ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮತ್ತೆ ಮುಂದುವರೆದಿದ್ದು, ಬೆಳೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಕಳೆದ ಎರಡು…
ಬೆಂಗಳೂರು: ರಾಜ್ಯದಲ್ಲಿ ಒಂದು ವಾರ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್.28ರವರೆಗೂ ಕರ್ನಾಟಕದಲ್ಲಿ ಮಳೆ…
ನವದೆಹಲಿ: ನೀಟ್ ಮರು ಪರೀಕ್ಷೆ ಅಂಗವಾಗಿ ಭಾರತದಲ್ಲಿ ಟೆಲಿಗ್ರಾಂ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ. ಸದ್ಯ ಪ್ಲೇ ಸ್ಟೋರ್ ಹಾಗೂ…