Andolana originals

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ ಹಂತಕ್ಕೆ ಬಂದಿದ್ದು, ಇಷ್ಟರಲ್ಲೇ ಮೇಲ್ಸೇತುವೆ ಕಾಮಗಾರಿ ಪ್ರಾರಂಭ ಆಗುವ ಲಕ್ಷಣ ಕಾಣುತ್ತಿದೆ.

ಮೇಲ್ಸೇತುವೆಗೆ ಗ್ರಾಮದ ಹೆದ್ದಾರಿ ಬದಿಯಲ್ಲಿ ೧.೨೭ ಹೆಕ್ಟೇರ್ ಭೂಮಿಯನ್ನು ಮುಂಚೆ ಸ್ವಾಧಿನ ಮಾಡಲಾಗಿದ್ದು, ಮುಂದು ವರಿದು ಈ ಮಧ್ಯೆ ಇನ್ನೂ ೦.೬ ಹೆಕ್ಟೇರ್ ಸ್ವಾಧಿನ ಆಗಿದೆ. ಬದನಗುಪ್ಪೆ ಎಲ್ಲೆಯ ೩೧, ಮುತ್ತಿಗೆ ಎಲ್ಲೆಯ ೩೯ ಸೇರಿ ಒಟ್ಟು ೭೦ ಮಂದಿಗೆ ಸೇರಿದ ಜಾಗವನ್ನು ಸ್ವಾಧಿನ ಮಾಡಿಕೊಳ್ಳಲಾಗಿದೆ. ೧,೨, ೩ ಹೀಗೆ ಬೆರಳೆಣಿಕೆಯಷ್ಟು ಗುಂಟೆ ಲೆಕ್ಕದಲ್ಲಿ ಬಹುತೇಕ ರೈತರ ಜಮೀನು ಹಾಗೂ ಮನೆಗಳ ಅಲ್ಪಸ್ವಲ್ಪ ಜಾಗ ಮೇಲ್ಸೇತುವೆಗೆ ಸ್ವಾಧಿನ ಆಗಿದೆ.

ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಸ್ವಾಧಿನ ಆಗಿರುವ ಭೂಮಿಗೆ ಪ್ರತಿ ಎಕರೆಗೆ ೭೮ ಲಕ್ಷ ರೂ.ನೀಡಲಾಗಿದ್ದು ಅದೇ ಮಾದರಿಯಲ್ಲಿ ದರ ನಿಗದಿ ಮಾಡಬೇಕು ಎಂಬುದು ಭೂಮಿ ಕಳೆದುಕೊಂಡವರ ಬೇಡಿಕೆ. ಅಷ್ಟು ದರ ನಿಗದಿ ಸಾಧ್ಯವಿಲ್ಲ. ಅದು ಕೈಗಾರಿಕಾ ಪ್ರದೇಶ. ಅಲ್ಲಿಗೂ ಇಲ್ಲಿಗೂ ತಾಳೆ ಮಾಡಲಾಗದು ಎಂಬುದು ಜಿಲ್ಲಾಡಳಿತದ ಅಭಿಪ್ರಾಯ. ಕೈಗಾರಿಕಾ ಪ್ರದೇಶಕ್ಕೂ ಮೇಲ್ಸೇತುವೆ ಸ್ಥಳಕ್ಕೂ ಎರಡ್ಮೂರು ಕಿ.ಮೀ. ಅಂತರವಷ್ಟೇ ಇದ್ದು, ಅಷ್ಟೇ ದರ ನೀಡುವಂತೆ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಯುತ್ತಲೇ ಇದೆ. ದರ ನಿಗದಿಯ ಕಗ್ಗಂಟಿನ ಕಾರಣಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಬಹಳ ದಿನಗಳಿಂದ ಮುಂದೂಡಿಕೆ ಆಗುತ್ತಲೇ ಇದ್ದು ಸದ್ಯದಲ್ಲೇ ಸೂಕ್ತ ದರ ನಿಗದಿ ಮಾಡಿ ಇದಕ್ಕೆ ಸುಖಾಂತ್ಯ ಹಾಡಲಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

” ಭೂಸ್ವಾಧಿನ ಮಾಡಲಾಗಿರುವ ಭೂಮಿಗೆ ಹೆಚ್ಚಿನ ದರ ನೀಡಬೇಕು, ಮೇಲ್ಸೇತುವೆ ಬಳಿ ಅಂಡರ್ ಪಾಸ್ ಮಾಡಿ ಅಲ್ಲಿ ಬಸ್ ತಂಗುದಾಣ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಒತ್ತಾಯ.”

-ಬಸವಣ್ಣ, ರೈತ ಸಂಘದ ಜಿಲ್ಲಾ ಅಧ್ಯಕ್ಷರು

” ಭೂಮಿಗೆ ನಿಗದಿತ ದರಕ್ಕಿಂತ ಹೆಚ್ಚು ಬೆಲೆ ಸೇರಿದಂತೆ ಅಂಡರ್ ಪಾಸ್ ಮತ್ತು ಬಸ್ ನಿಲ್ದಾಣ ನಿರ್ಮಾಣ ಸಂಬಂಧದ ಅವರ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದ್ದು, ಈ ವಾರದಲ್ಲಿ ಈ ಸಂಬಂಧ ಸಭೆ ಮಾಡಲಿದ್ದಾರೆ.

-ಜವರೇಗೌಡ, ಅಪರ ಜಿಲ್ಲಾಧಿಕಾರಿ

ಈ ಮಾರ್ಗದಲ್ಲಿ ೧೩ ಕಿ.ಮೀ. ಡಾಂಬರೀಕರಣ: 

ಚಾ.ನಗರ-ನಂಜನಗೂಡು ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯನ್ನು ಬೆಂಡರವಾಡಿಯಿಂದ ನಗರದ ಸಂತೇಮರಹಳ್ಳಿ ವೃತ್ತದ ತನಕ ಸುಮಾರು ೧೩ ಕಿ.ಮೀ.ವರೆಗೆ ಕೈಗೆತ್ತಿಕೊಳ್ಳಲಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ ದುರಸ್ತಿ ಕಾರ್ಯ ಮಾಡಲಾಗುತ್ತಿದ್ದು, ಬಹುತೇಕ ಡಾಂಬರೀಕರಣ ಮುಗಿದಿದೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ಸ್ಥಳವಾದ ಪಣ್ಯದಹುಂಡಿ ಹಾಗೂ ಆಸುಪಾಸಿನ ಸ್ಥಳದಲ್ಲಿ ಡಾಂಬರೀಕರಣ ಬಾಕಿ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಳವಳ್ಳಿ ಎಇಇ ರೇಣುಕಾ ಮಾಹಿತಿ ನೀಡಿದರು.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

6 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

11 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

15 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

15 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

15 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

18 hours ago