ನವೀನ್ ಡಿಸೋಜ
ಚಾರಣಿಗರ ಸುರಕ್ಷತೆ, ಪ್ರಕೃತಿ ಸಂಪತ್ತಿನ ಉಳಿವಿಗೆ ಹೊಸ ಮಾರ್ಗಸೂಚಿ ಸಹಕಾರಿ; ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತಾಯ
ಮಡಿಕೇರಿ: ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಚಾರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೊಡಗು ಜಿಲ್ಲೆಗೆ ಸಂಬಂಽಸಿದಂತೆ ಈ ಬಗ್ಗೆ ಚಾರಣಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪ್ರಕೃತಿ ಸಂಪತ್ತು ಉಳಿವಿಗೆ ಮತ್ತು ಚಾರಣದ ನಿಜವಾದ ಸವಿಯನ್ನು ಸವಿಯಲು ಇಂತಹ ಮಾರ್ಗಸೂಚಿ ಅನಿವಾರ್ಯವೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಹಿಂದೆ ಹಲವು ಟ್ರಕ್ಕಿಂಗ್ ಪ್ರದೇಶ ಗಳಿದ್ದವು. ಆದರೆ, ಈಗ ಅಧಿಕೃತವಾಗಿ ೬-೭ ಪ್ರದೇಶಗಳು ಮಾತ್ರ ಇವೆ. ಅಲ್ಲಿಗೆ ವಾರಂತ್ಯದಲ್ಲಿ ಒಂದೇ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಲ್ಲದೆ, ಪ್ರಮುಖ ಟ್ರಕ್ಕಿಂಗ್ ಪಾಯಿಂಟ್ ತಡಿಯಂಡ ಮೋಳ್ ಸೇರಿದಂತೆ ಕೆಲವೆಡೆ ಮಾನವ ಸಂಚಾರದಿಂದ ಹಸಿರು ಮಾಯವಾಗಿದ್ದು, ರಸ್ತೆಗಳ ದರ್ಶನವಾಗುತ್ತಿದೆ. ಮುಖ್ಯವಾಗಿ ಚಾರಣಕ್ಕೆ ತೆರಳಬೇಕಾದರೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ತಲೆಗೆ ಕ್ಯಾಪ್, ನೀರು, ಆಹಾರ ಪದಾರ್ಥ ಇರುವ ಬ್ಯಾಗ್ ಕೊಂಡೊಯ್ಯಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕೊಂಡೊಯ್ಯುವ ವಸ್ತುಗಳಿಂದ ಅರಣ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ. ಆದರೆ, ಜಿಲ್ಲೆಗೆ ಇತರ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು, ಯಾವುದೇ ಸಿದ್ಧತೆ ಇಲ್ಲದೆಯೂ ಚಾರಣ ತಾಣಗಳಿಗೆ ತೆರಳಿ ತಾವು ಸಮಸ್ಯೆಗೊಳಗಾಗುವುದಲ್ಲದೆ, ಸ್ಥಳೀಯರಿಗೂ ಸಮಸ್ಯೆ ಸೃಷ್ಟಿಸುತ್ತಿದ್ದಾರೆ.
ಅರಣ್ಯ ಪ್ರದೇಶಗಳಲ್ಲಿ ಚಾರಣಕ್ಕೆ ತೆರಳುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಆವಾಸ ಸ್ಥಾನಕ್ಕೆ ತೆರಳುತ್ತಿದ್ದೇವೆ ಎಂಬ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕಾಗುತ್ತದೆ. ಯಾವುದೇ ಶಬ್ದ ಮಾಡದೆ ಅಲ್ಲಿನ ರಮಣೀಯ ಸೌಂದರ್ಯವನ್ನು ಸವಿಯಬೇಕು. ಆದರೆ, ಈಗ ಚಾರಣಕ್ಕೆ ತೆರಳುವ ಕೆಲವರಲ್ಲಿ ಆ ಪರಿಕಲ್ಪನೆಯೇ ಇಲ್ಲ. ಬೊಬ್ಬೆ ಹೊಡೆಯುವುದು, ಬಂಡೆ ಕಲ್ಲುಗಳ ಮೇಲೆ ಹತ್ತುವುದು ಹೀಗೆ ಒಂದಿಲ್ಲೊಂದು ಸಮಸ್ಯೆ ಸೃಷ್ಟಿಸುವವರೇ ಹೆಚ್ಚಾಗಿದ್ದಾರೆ.
ಚಾರಣಕ್ಕೆ ಸಣ್ಣ ಗುಂಪಿನಲ್ಲಿ ತೆರಳಿದರೆ ಅಲ್ಲಿನ ಸೊಗಸಾದ ವಾತಾವರಣವನ್ನು ಸವಿಯಲು ಸಾಧ್ಯವಾಗುತ್ತದೆ. ಹೆಚ್ಚಿನ ಜನ ತೆರಳಿದಾಗ ಅಲ್ಲಿನ ಸೌಂದರ್ಯವನ್ನು ಸರಿಯಾಗಿ ಸವಿ ಯಲು ಸಾಧ್ಯವಾಗುವುದಿಲ್ಲ. ಜೊತೆಗೆ ಅಲ್ಲಿನ ಅರಣ್ಯದ ಬಗ್ಗೆ ಮಾಹಿತಿ ಇರುವವರು ಜೊತೆಗೆ ಇದ್ದರೆ ಚಾರಣಕ್ಕೆ ತೆರಳುವವರಿಗೆ ಯಾವ ಸಮಸ್ಯೆ ಯೂ ಆಗುವುದಿಲ್ಲ. ಈ ಎಲ್ಲ ಕಾರಣಗಳಿಂದ ಅರಣ್ಯ ಸಚಿವರು ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಗೆ ಮೆಚ್ಚುಗೆ ವ್ಯಕ್ತವಾಗಿದೆ.
” ಜಾತ್ರೆಗೆ ಹೋದಂತೆ ಸಾವಿರಾರು ಸಂಖ್ಯೆಯಲ್ಲಿ ಚಾರಣಕ್ಕೆ ತೆರಳಿದರೆ ಅಲ್ಲಿನ ಸೌಂದರ್ಯವನ್ನು ಸವಿಯಲು ಸಾಧ್ಯವಾಗುವುದಿಲ್ಲ. ಕೊಡಗಿನ ಎಲ್ಲ ಚಾರಣ ಪ್ರದೇಶಕ್ಕೆ ತೆರಳುತ್ತೇವೆ. ಹಿಂದೆ ಇದ್ದಷ್ಟು ಸೌಂದರ್ಯ ಈಗ ಕಾಣ ಸಿಗುವುದಿಲ್ಲ. ಹಸಿರು ಮಾಯವಾಗುತ್ತಿದ್ದು, ಒಣ ರಸ್ತೆ ಮಾದರಿಯ ಚಿತ್ರಣ ಕಂಡುಬರುತ್ತಿದೆ. ಪ್ರಕೃತಿ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಸಚಿವರ ಈ ನೂತನ ಮಾರ್ಗಸೂಚಿ ಶ್ಲಾಘನೀಯವಾಗಿದೆ.”
-ಮಹೇಶ್, ಆರೋಹಣ ಕೊಡಗು ಚಾರಣ ತಂಡದ ಪ್ರಮುಖ
” ಅರಣ್ಯ ಇಲಾಖೆ ವ್ಯಾಪ್ತಿಗೊಳಪಡುವ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಹೊಸ ಮಾರ್ಗಸೂಚಿ ಅನ್ವಯವಾಗಲಿದ್ದು, ಕೊಡಗು ಜಿಲ್ಲೆಗೂ ಅನ್ವಯವಾಗಲಿದೆ. ಹೊಸ ಮಾರ್ಗಸೂಚಿಯ ಅನುಷ್ಠಾನ ಸಂಬಂಧ ಸಿದ್ಧತೆಯಲ್ಲಿದ್ದು, ಶೀಘ್ರದಲ್ಲೇ ಎಲ್ಲಾ ಚಾರಣ ಪ್ರದೇಶಗಳಲ್ಲಿ ನೂತನ ಮಾರ್ಗಸೂಚಿಯನ್ನು ಪಾಲಿಸಲಾಗುತ್ತದೆ.”
-ಅಭಿಷೇಕ್, ಉಪಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ
೨೦೨೫-೨೬ನೇ ಸಾಲಿಗೆ ಕನ್ನಡ ಪುಸ್ತಕ ಪ್ರಾಧಿಕಾರವು ಅರ್ಹ ಸಾಹಿತಿಗಳಿಗೆ ಪ್ರಶಸ್ತಿಯನ್ನು ಪ್ರಕಟಿಸಿದ್ದು ಅದರಲ್ಲಿ ಇದೇ ಮೊದಲ ಬಾರಿಗೆ ಚುಟುಕು ಸಾಹಿತ್ಯಕ್ಕೂ…
ಎಚ್.ಹಾಲಪ್ಪ ಅಸಮಾನತೆ, ಶೋಷಣೆ, ಅಂಧಶ್ರದ್ಧೆ ವಿರುದ್ಧ ವಚನ ರಚಿಸಿದ ಹಡಪದ ಅಪ್ಪಣ್ಣ ಜಯಂತಿ ಇಂದು ೧೨ನೇ ಶತಮಾನದ ವಚನ ಚಳವಳಿ…
ಶ್ರೇಯಸ್ ದೇವನೂರು, ವನ್ಯಜೀವಿ ಛಾಯಾಗ್ರಾಹಕ ಜುಲೈ ೨೯ರಂದು ವಿಶ್ವ ಹುಲಿ ದಿನವನ್ನು ಆಚರಿಸುವಾಗ, ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ನಾವು…
‘ಸಪೋರ್ಟ್ ಅವರ್ ಹೀರೋಸ್’ ಸರ್ಕಾರೇತರ ಸಂಸ್ಥೆ ಸ್ಥಾಪನೆ ೩೬ವರ್ಷ ಪ್ರಾಯದ ಗೌರವ್ ಶುಕ್ಲಾ(ಕುಳಿತವರಲ್ಲಿ ಎಡ ಬದಿ)ರ ತಂದೆ ೨೮ ವರ್ಷಗಳ…
ಲಕ್ಷ್ಮೀಕಾಂತ್ ಕೊಮಾರಪ್ಪ ಸೋಮವಾರಪೇಟೆ: ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಮಲ್ಲಳ್ಳಿ ಜಲಪಾತದಲ್ಲಿ ಬಹುನಿರೀಕ್ಷಿತ ರೋಪ್ವೇ ಯೋಜನೆಗೆ ವೇಗ ದೊರೆತಿದೆ.…
ಕೆ.ಬಿ.ರಮೇಶನಾಯಕ ಮೈಸೂರು: ಹಲವು ರೋಗಗಳಿಗೆ ರಾಮಬಾಣವಾದ ಹಾಗೂ ಆರೋಗ್ಯಕ್ಕೆ ಹಿತಕರ ಎನ್ನಲಾಗಿರುವ ಮೀನು ಆಹಾರವನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲು…