Andolana originals

ರಸ್ತೆಗಳಲ್ಲಿ ಸಂಚರಿಸುವವರಿಗೆ ಮುದ ನೀಡುವ ಮೇ ಫ್ಲವರ್‌

ಕೆ. ಆರ್. ನಗರದಿಂದ ಭೇರ್ಯ ಗ್ರಾಮದವರೆಗೆ ಹಾಸನ- ಮೈಸೂರು ಹೆದ್ದಾರಿಯಲ್ಲಿ ಕೆಂಬಣ್ಣದ ಹೂಗಳ ಚಿತ್ತಾರ

ಭೇರ್ಯ ಮಹೇಶ್

ಕೆ. ಆರ್. ನಗರ: ಬೇಸಿಗೆಯ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಮೋಡಗಳು. . . ಭೂಮಿಗೆ ತಂಪೆರೆಯುವ ಮಳೆ ಹನಿಗಳು. . . ಇವೆಲ್ಲದಕ್ಕೂ ಜತೆಯಾಗಿ ಪಳಪಳ ಹೊಳೆಯುವ ಕೆಂಪನೆ ಹೂಗಳು. . . ದೂರ ದೂರಕ್ಕೂ ಕಣ್ಸೆಳೆಯುವ, ಹತ್ತಿರ ಬಂದರೆ ಆಹ್ಲಾದಕರ ಅನುಭವ ನೀಡುವ ಅಪೂರ್ವ ಮೇ ಫ್ಲವರ್ ಮರಗಳು ರಸ್ತೆಯಲ್ಲಿ ಸಂಚರಿಸುವವರ ಗಮನ ಸೆಳೆಯುತ್ತಿವೆ.

ಕೆ. ಆರ್. ನಗರದಿಂದ ಭೇರ್ಯ ಗ್ರಾಮ ದವರೆಗೆ ಹಾಸನ- ಮೈಸೂರು ಹೆದ್ದಾರಿಯಲ್ಲಿ ಬರುವ ಚಿಕ್ಕವಡ್ಡರಗುಡಿ, ಹೊಸ ಅಗ್ರಹಾರ, ರೈಲ್ವೆ ನಿಲ್ದಾಣ ಹಾಗೂ ಭೇರ್ಯ ಗ್ರಾಮದ ಆಸ್ಪತ್ರೆ ಆವರಣ ಮುಂತಾದ ಕಡೆಗಳಲ್ಲಿ ಮೇ ಫ್ಲವರ್ ಮರಗಳು ಹೂಗಳಿಂದ ತುಂಬಿ ಆಕರ್ಷಿಸುತ್ತಿವೆ.

ಬಣ್ಣ ಬಣ್ಣದ ಅಪರೂಪದ ಹೂವುಗಳು ಅರಳಿ ನಿಲ್ಲುವ ಕಾಲವಿದು. ಈ ತಿಂಗಳಲ್ಲಿ ಅರಳುವ ಮೇ ಫ್ಲವರ್ ಕಣ್ಮನ ಸೆಳೆಯುತ್ತಿವೆ. ಹಲವು ರಸ್ತೆ ಬದಿಗಳಲ್ಲೂ ಇವುಗಳ ಅಂದ ಮೈದಳೆದಿದೆ. ಅಂತೆಯೇ, ಈ ತಿಂಗಳಲ್ಲಷ್ಟೇ ಬಿಡುವ ಮತ್ತೊಂದು ಹೂವು ‘ಬಾಲ್ ಲಿಲ್ಲಿ’. ರಾಕೆಟ್ ನಂತೆ ಚಿಮ್ಮಲು ತಯಾರಾದಂತೆ ಭಾಸವಾಗುವ ಕೆಂಪು ಬಣ್ಣದ ಈ ಹೂವು ಕಂಗೊಳಿಸುತ್ತಿದೆ. ಜತೆಗೆ ತರಹೇವಾರಿ ಸಾಮಾನ್ಯ ಲಿಲ್ಲಿ ಹೂಗಳೂ ಆಕರ್ಷಿಸುತ್ತಿವೆ.

ಮನೆಗಳ ಮುಂದೆ ಅಲಂಕಾರಕ್ಕಾಗಿ ಪಾಟ್ ಗಳಲ್ಲಿ ಬೆಳೆಸಿರುವ ಲಿಲ್ಲಿ ಹೂ, ಕಣಿವೆ ಲಲ್ಲಿ ಹೂ, ಬಾಲ್ ಲಿಲ್ಲಿ ಹೂಗಳು ಮನಸ್ಸಿಗೆ ಮುದ ನೀಡುತ್ತಿವೆ. ಮೇ ತಿಂಗಳಲ್ಲಿ ಬಿಡುವ ಇತರ ಹೂ ಗಳು ಮೇ ಫ್ಲವರ್ (ಡೆಲೊನಿಕ್ಸ್ ರೆಜಿಯಾ), ಕ್ಯಾಷಿಯಾ ಜವಾನಿಕ, ಲೆಜಿಸ್ತೋನಿಯಾ, ಫ್ಲಮೇರಿಯಾ (ದೇವಕಣಿಗಲು), ರೈನ್ ಟ್ರೇ ಮತ್ತು ಕಾಪರ್ ಪಾಡ್ನ ಎಂಬ ಹಳದಿ ಬಣ್ಣದ ಹೂವುಗಳು ಮೇ ತಿಂಗಳಲ್ಲಿ ಕಾಣಸಿಗುತ್ತವೆ.

ಈಗಾಗಲೇ ಹಲವೆಡೆ ಹೂವು ಬಿಟ್ಟಿವೆ. ಇವುಗಳಲ್ಲಿ ಕೆಲವು ಹೂವು ಬಿಟ್ಟ ನಂತರ ಎರಡರಿಂದ ಮೂರು ತಿಂಗಳುಗಳ ಕಾಲವೂ ತಮ್ಮ ಸೊಬಗನ್ನು ಬೀರುತ್ತವೆ. ಮರದಲ್ಲಿ ಹೂ ಗೊಂಚಲುಗಳು ನಗೆ ಬೀರಿದರೆ, ಉದುರಿದ ದಳಗಳು ನೆಲದಲ್ಲಿ ಹೂ ಹಾಸಿಗೆಯಂತೆ ಕಂಗೊಳಿಸುತ್ತವೆ.

ಮೇ ಫ್ಲವರ್‌ಗಳನ್ನು ನಮ್ಮ ಪೂರ್ವಿಕರ ಕಾಲದಲ್ಲಿ ಮದುವೆ ಸಮಾರಂಭಕ್ಕೆ ಚಪ್ಪರಕ್ಕೆ ಹಾಗೂ ಹಬ್ಬಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಕಾಲ ಬದಲಾದಂತೆ ಈ ಮರದ ಸಂತತಿ ಕಡಿಮೆಯಾಗಿ ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶದ ಪಾರ್ಕ್‌ಗಳಲ್ಲಿ ನೋಡುಗರ ಕಣ್ಮನ ಸೆಳೆಯುತ್ತಿವೆ. -ಜೆ. ಎಂ. ಕುಮಾರ್, ಗೌರವಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಪರ್ವ ಸಂಘ

ಆಂದೋಲನ ಡೆಸ್ಕ್

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

5 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

9 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

9 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

9 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

12 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

12 hours ago