Andolana originals

ಅರಮನೆಗಿಂತ ಹೆಚ್ಚು ಅರಳಿಮರದಡಿ ಜೀವಿಸುವ ಧಮ್ಮ

ಮಾನಸಗಂಗೋತ್ರಿಯಲ್ಲಿ ಪೂರ್ಣಿಮೆ ಆಚರಣೆಗೆ ದಶಕ

ಇಂದು ಸಂಜೆ ೫ಗಂಟೆಗೆ ‘ಧಮ್ಮ ಪಯಣ’

ಗೌತಮ ಉದ್ಯಾನವನದಲ್ಲಿ ಧ್ಯಾನ, ಗಾಯನ ಕಾರ್ಯಕ್ರಮ

ಮೈಸೂರು: ಗೌತಮ ಬುದ್ಧರ ಚಿಂತನೆಗಳನ್ನು ಬಿತ್ತಲು ಒಂದು ವೈಭವೋಪೇತ ವಾತಾವರಣಬೇಕಿಲ್ಲ. ಅದು ಸರಳವಾಗಿ ಪ್ರಕೃತಿಯಲ್ಲಿಯೇ ಹರಡುತ್ತದೆ. ಹೆಚ್ಚೆಂದರೆ ನಿಮಗೆ ಕುಳಿತು ಮಾತನಾಡಲು ಒಂದು ಮರದ ನೆರಳು ಸಾಕು. ಅರಳಿಮರವಾದರೆ ಇನ್ನೂ ಸ್ವಾದ. ನೀವು ಗಮನಿಸಿ, ಬುದ್ಧರು ಅರಮನೆಯಿಂದ ಅರಳಿಮರದ ಕಡೆಗೆ ನಡೆದು, ಅರಳಿಮರದ ನೆರಳಿನಲ್ಲಿಯೇ ತಮ್ಮ ಬದುಕಿನ ಬಹುಭಾಗವನ್ನು ಕಳೆದರು. ಗಿಡ ಮರ ಬಳ್ಳಿಗಳ ಆಶ್ರಯದಲ್ಲಿ ಧಮ್ಮ ಬೋಧಿಸುತ್ತಾ ಹೊರಟರು. ಹಾಗಾಗಿ ಧಮ್ಮದಲ್ಲಿ ಅರಮನೆಗಿಂತ ಅರಳಿಮರಕ್ಕೆ ಶ್ರೇಷ್ಠವಾದ ಸ್ಥಾನವನ್ನು ಕಲ್ಪಿಸಲಾಗಿದೆ.

೧೩ ವರ್ಷಗಳ ಹಿಂದೆ ಮಾನಸಗಂಗೋತ್ರಿಯಲ್ಲಿ ಪಿಜಿ ವಿದ್ಯಾರ್ಥಿನಿಲಯದ ಮುಂಭಾಗದಲ್ಲಿರುವ ಅರಳಿಮರದ ಕೆಳಗೆ ನೀರವ ವಾತಾವರಣ ಇತ್ತು. ಆದರೆ, ಈಗ ಅಲ್ಲಿ ಗೌತಮ ಬುದ್ಧ ಮತ್ತು ಆತನ ಧಮ್ಮದ ಬೆಳಕು ಪಸರಿಸುವ ಮೂಲಕ ಮಾನವತೆಯ ಬೆಳದಿಂಗಳು ಹರಡಿದಂತಹ ವಾತಾವರಣ ಇರುತ್ತದೆ. ಇದಕ್ಕೆ ಆಗ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಬಿ.ಬಸವರಾಜು ಅವರ ಪರಿಶ್ರಮ ಕಾರಣ. ಅವರೊಂದಿಗೆ ಹಲವರು ಕೈಜೋಡಿಸಿದ್ದರು.

ಆಂದೋಲನ ಡೆಸ್ಕ್

Recent Posts

ಪ್ರಧಾನ್‌ ರಾಜೀನಾಮೆ : ವಾಂಗ್ಚುಕ್‌ ಫಸ್ಟ್‌ ರಿಯಾಕ್ಷನ್‌

ನವದೆಹಲಿ : ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ಕುರಿತು ಹೋರಾಟಗಾರ ಸೋನಮ್‌ ವಾಂಗ್ಚುಕ್‌ ಮೊದಲ ಪ್ರತಿಕ್ರಿಯೆ…

14 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 25 ಶನಿವಾರ  

23 hours ago

ನೋಟ-ಪ್ರತಿನೋಟ | ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಸರಿಯೇ? ತಪ್ಪೇ?

ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಪ್ರಥಮವಾಗಿ ಕಂಬಳ ಆಯೋಜನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಕಂಬಳಕ್ಕಾಗಿ ಮೈಸೂರಿನಲ್ಲಿ ಸ್ಥಳ ನಿಗದಿಪಡಿಸಿದ್ದು, ಸಿದ್ಧತೆ…

23 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಗೆ ಅಜ್ಜಿ ಒಡವೆ ನೀಡಿದ ಪ್ರಸಂಗ…

ನನ್ನ ಅಜ್ಜಿ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಗಾಂಧಿ ಹಕ್ಕಿಯ ಹಾಗೆ ಇದ್ದರು ಮತ್ತು ನಿರುಪದ್ರವಿ ಎಂದು. ಗಾಂಽಯ ಕಾಲದಲ್ಲಿ…

23 hours ago

ಗಾಂಧಿ ಅಭಿಯಾನ ಅರಿವಿನ ಯಾನ | ಗಾಂಧಿಯ ಉಡುಪು ಯಾಕೆ ಬದಲಾಯಿತು?

  ಡಾ.ಪ್ರಮೀಳಾದೇವಿ ಬಿ.ಕೆ. ಮಹಾತ್ಮಗಾಂಧಿ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಂದ ಹಿಂತಿರುಗಿದಾಗ, ಮತ್ತು ಆರಂಭದ ದಿನಗಳಲ್ಲಿ ಅವರು ಎಲ್ಲಾ ವಿದ್ಯಾವಂತರಂತೆ ಬೆಲೆಬಾಳುವ ಸೂಟುಬೂಟು…

23 hours ago

ಗಾಂಧಿ ಅಭಿಯಾನ ಅರಿವಿನ ಯಾನ ; ಸಜ್ಜನನಾದ ಆಂಗ್ಲನಾಗುವ ಪ್ರಯತ್ನ

ಶಾಕಾಹಾರದಲ್ಲಿ ದಿನದಿನಕ್ಕೂ ನನ್ನ ನಂಬಿಕೆ ಹೆಚ್ಚುತ್ತಲೇ ಹೋಯಿತು. ಸಾಲ್ಟ್‌ರ ಗ್ರಂಥದ ವ್ಯಾಸಂಗದಿಂದ, ಆಹಾರದ ವಿಷಯಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಅಭ್ಯಾಸ ಮಾಡಲು…

23 hours ago