Andolana originals

ದಾನಿಗಳು ನೀಡಿದ ಉತ್ಸವಮೂರ್ತಿಗಳಿಗೆ ದಿಗ್ಬಂಧನ!

ಆನಂದ್ ಹೊಸೂರು

ಚುಂಚನಕಟ್ಟೆ ಶ್ರೀರಾಮ ದೇವಾಲಯದ ಕೊಠಡಿಯಲ್ಲಿ ವರ್ಷದಿಂದಲೂ ಇರಿಸಲಾಗಿರುವ ವಿಗ್ರಹಗಳನ್ನು ಬಳಸಲು ಆಗ್ರಹ 

ಹೊಸೂರು: ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಪುರಾಣ ಪ್ರಸಿದ್ಧ ಶ್ರೀಕೋದಂಡರಾಮ ದೇಗುಲದಲ್ಲಿ ದಾನಿಗಳು ಮಾಡಿಸಿಕೊಟ್ಟ ಅಂದಾಜು ೪.೫ ಲಕ್ಷ ರೂ. ವೆಚ್ಚದ ಶ್ರೀರಾಮ, ಸೀತಾ ಮತ್ತು ಲಕ್ಷ ಣ ಮೂರ್ತಿಗಳಿಗೆ ಒಂದು ವರ್ಷದಿಂದಲೂ ಪೂಜೆ ಮಾಡಿ, ಪ್ರಾಣ ಪ್ರತಿಷ್ಠಾಪನಾ ಕಾರ್ಯ ಗಳನ್ನು ಮಾಡದೆ ಕೊಠಡಿಯಲ್ಲಿ ಇಟ್ಟಿರುವುದಕ್ಕೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.

ಶ್ರೀ ಕೋದಂಡರಾಮ ದೇಗುಲದ ಉತ್ಸವಮೂರ್ತಿಗಳು ಕೆ.ಆರ್.ನಗರದ ಲಕ್ಷ್ಮೀನಾರಾಯಣ ದೇವಾಲಯ ಹಾಗೂ ಚುಂಚನಕಟ್ಟೆಯ ದೇವಾಲಯಗಳಲ್ಲಿ ಬಳಕೆಯಾಗುತ್ತಿದ್ದು, ಇದನ್ನು ಮನಗಂಡ ಹಿಂದಿನ ಇಒ ರಘು ಅವರು ದೇವಾಲಯಕ್ಕೆ ಹೊಸದಾಗಿ ಮೂರ್ತಿಗಳನ್ನು ಪಡೆಯಲು ಹಲವು ದಾನಿಗಳನ್ನು ಹುಡುಕಿ ಒಟ್ಟುಗೂಡಿಸಿ ಮೂರು ವಿಗ್ರಹಗಳನ್ನು ಮಾಡಿಸಿದ್ದರು.  ಆದರೆ ಕಳೆದ ಜನವರಿಯಿಂದಲೂ ವಿಗ್ರಹಗಳನ್ನು ಆಡಳಿತ ಕಚೇರಿಯಲ್ಲಿ ಬಟ್ಟೆ ಯಿಂದ ಮುಚ್ಚಿಟ್ಟಿರುವುದು ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಿಗ್ರಹಗಳಿಗೆ ಆಗಮಶಾಸ್ತ್ರದ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವಾಲಯದ ಕಾರ್ಯಗಳಿಗೆ ಬಳಸಲು ಏನು ಅಡ್ಡಿ ಎಂಬ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. ಈ ಮೂರ್ತಿಗಳಿಂದಲೇ ಭಕ್ತಾದಿಗಳು ಗರುಡೋತ್ಸವ, ರಥೋತ್ಸವ,ನೇಮೋತ್ಸವಗಳನ್ನು ಮಾಡಿ ಮೆರವಣಿಗೆ ಮಾಡುವ ಕೆಲಸ ಮಾಡಬೇಕಿದೆ. ನಿತ್ಯ ದೂರದ ಊರುಗಳಿಂದ ದೇವರ ಸೇವೆಗೆ ಬರುವ ಭಕ್ತರು ಉತ್ಸವಾದಿಗಳು ಬಂದ್ ಆಗಿರುವುದರಿಂದ ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ. ದೇವಾಲಯದ ಆದಾಯಕ್ಕೂ ಹೊಡೆತ ಬಿದ್ದಿದೆ.

ಈ ಬಗ್ಗೆ ದೇವಾಲಯದ ಆಡಳಿತವನ್ನು ಪ್ರಶ್ನಿಸಿದರೆ ಶೀಘ್ರದಲ್ಲೇ ಕಾರ್ಯ ನೆರವೇರಿಸುವುದಾಗಿ ಹೇಳುತ್ತಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ದೇವಾಲಯದ ಪೂಜಾ ಕೈಂಕರ್ಯಗಳಿಗೆ ಕಳಶಪ್ರಾಯವಾಗಿರುವ ಉತ್ಸವಮೂರ್ತಿಗಳಿಲ್ಲದೇ ವಿವಿಧ ಸೇವಾ ಕಾರ್ಯಗಳು ನಿಂತು ಹೋಗಿದ್ದು, ಜನವರಿ ತಿಂಗಳಲ್ಲಿ ಬ್ರಹ್ಮರಥೋತ್ಸವ ಇರುವ ಕಾರಣ ಶಾಸಕರು, ಮುಜರಾಯಿ ಇಲಾಖೆ ಅಧಿಕಾರಿಗಳು ರಥೋತ್ಸವದ ಒಳಗೆ ಉತ್ಸವ ಮೂರ್ತಿಗಳಿಗೆ ಪೂಜಾ ಭಾಗ್ಯ ಕರುಣಿಸಬೇಕಿದೆ.

” ದೇವಾಲಯಕ್ಕೆ ಭಕ್ತರು ನೀಡಿರುವ ಉತ್ಸವಮೂರ್ತಿಗಳನ್ನು ಕೊಠಡಿಯಲ್ಲಿ ಮುಚ್ಚಿಟ್ಟಿರುವುದು ಖಂಡನೀಯ. ಕೂಡಲೇ ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಬೇಕು.”

-ಅಂಗಡಿ ಕುಮಾರ್, ವ್ಯಾಪಾರಿ

” ಈ ವಿಚಾರ ನನ್ನ ಗಮನಕ್ಕೆ ಬಂದಿದ್ದು ಪೂಜೆಗಾಗಿ ದಿನಾಂಕ ನಿಗದಿ ಮಾಡಿದ್ದು, ಅಂದೇ ಈದ್‌ಮಿಲಾದ್ ಹಬ್ಬವೂ ಬಂದ ಕಾರಣ ಬೇರೆ ದಿನಾಂಕ ನಿಗದಿ ಮಾಡಬೇಕಿದೆ. ಶೀಘ್ರದಲ್ಲಿ ಪೂಜೆ ನೆರವೇರಿಸಿ ವಿಗ್ರಹಗಳನ್ನು ದೇವತಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು.”

-ರುಖಿಯಾ ಬೇಗಂ, ತಹಸಿಲ್ದಾರ್, ಸಾಲಿಗ್ರಾಮ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂದೂಕು ಹಿಡಿದಿರುವ ನಾಯಕನ ಚಿತ್ರದ ಜಾಹೀರಾತಿಗೆ ‘ಇಲ್ಲೂ’ ಪ್ರೋತ್ಸಾಹ ಏಕೆ?

ಇತ್ತೀಚೆಗೆ ಬಿಡುಗಡೆಯಾದ ಟಾಕ್ಸಿಕ್ ಚಲನಚಿತ್ರವು ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಪೋಸ್ಟರ್ ಅನ್ನು…

2 hours ago

ಓದುಗರ ಪತ್ರ: ಒಟಿಟಿ ವೇದಿಕೆಗಳು ಕನ್ನಡ ಭಾಷೆಗೂ ಆದ್ಯತೆ ನೀಡಲಿ

ಇಂದು ಒಟಿಟಿ ವೇದಿಕೆಗಳಾದ ಅಮೆಜನ್ ಪ್ರೈಮ, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್‌ಸ್ಟಾರ್, ಜೀ೫, ಸೋನಿಲಿವ್ ಮುಂತಾದವುಗಳು ನಮ್ಮ ಮನರಂಜನೆಯ ಅವಿಭಾಜ್ಯ ಅಂಗವಾಗಿವೆ. ಮನೆಯಲ್ಲಿಯೇ…

2 hours ago

ಓದುಗರ ಪತ್ರ: ಖಾಸಗಿ ಕಾಲೇಜುಗಳ ಅನಗತ್ಯ ಶುಲ್ಕ ಹೆಚ್ಚಳ ನಿಯಂತ್ರಿಸಿ

ರಾಜ್ಯದಲ್ಲಿ ಸರ್ಕಾರಿ ವಿಶ್ವವಿದ್ಯಾನಿಲಯಗಳ ಸಂಯೋಜಿತ ಕೆಲವು ಖಾಸಗಿ ಕಾಲೇಜುಗಳು ವರ್ಷದಿಂದ ವರ್ಷಕ್ಕೆ ಕಾಲೇಜು ಅಭಿವೃದ್ಧಿಯ ಹೆಸರಿನಲ್ಲಿ, ವಿಶ್ವವಿದ್ಯಾನಿಲಯದ ಸೂಚನೆ ಹೆಸರಿನಲ್ಲಿ…

2 hours ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ ಮೂರಡಿಯ ಮೂರ್ತಿಗೆ ಡಾಕ್ಟರಾದ ಕೀರ್ತಿ

ಕೋರ್ಟ್ ಮೆಟ್ಟಿಲು ಏರಿ ವೈದ್ಯಕೀಯ ಸೀಟು ಪಡೆದ ಸಾಹಸಿ ಗುಜರಾತಿನ ಭಾವನಗರದ ಗೋರ್ಕಿ ಗ್ರಾಮದ ಗಣೇಶ್ ಬರಯ್ಯ ಎಂಟು ಜನ…

2 hours ago

ಬರದಲ್ಲೂ ಜಾನುವಾರುಗಳ ಮೇವಿಗಿಲ್ಲ ಕೊರತೆ

ಕೆ.ಬಿ.ರಮೇಶನಾಯಕ ಹೋಬಳಿಗೊಂದರಂತೆ ೨೯ ಮೇವು ಬ್ಯಾಂಕ್ ತೆರೆಯಲು ಪ್ರಸ್ತಾವನೆ  ಮೈಸೂರು: ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಕೈಕೊಟ್ಟಿದ್ದರಿಂದಾಗಿ ಮಳೆಯಾಶ್ರಿತ…

2 hours ago

ಮಂಜಿನ ನಡುವೆ ಕೇಸರಿ ರೈಲು; ಕಾಗಿನೆರೆ ದೃಶ್ಯ ವೈರಲ್

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಧಾನಿ ಮೋದಿ, ರೈಲ್ವೆ  ಸಚಿವ ಅಶ್ವಿನಿ ವೈಷ್ಣವ್ ಗಮನ ಸೆಳೆದ ಪಶ್ಚಿಮಘಟ್ಟದ ಪ್ರಕೃತಿ ಸೌಂದರ್ಯ ಸೋಮವಾರಪೇಟೆ: ಪಶ್ಚಿಮಘಟ್ಟದ…

2 hours ago