Andolana originals

ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ | ಐನ್‌ಸ್ಟೀನ್‌ ಕಂಡಂತೆ ಮಹಾತ್ಮ ಗಾಂಧೀಜಿ

ಗಾಂಧಿ ಮಹಾತ್ಮನ ಆತ್ಮಕಥೆಗೆ ಶತಮಾನೋತ್ಸವದ ಸಂದರ್ಭದಲ್ಲಿ ಆಂದೋಲನ ದಿನಪತ್ರಿಕೆಯ ಗಾಂಧಿ ಅಭಿಯಾನ

ಆಲ್ಬರ್ಟ್ ಐನ್‌ಸ್ಟೀನ್ ಗಾಂಧೀಜಿಯವರನ್ನು ಕುರಿತು ಬರೆಯುತ್ತಾ, ‘ಗಾಂಧಿ ತಮ್ಮದೇ ಆದ ಸಿದ್ಧಾಂತ ಅಹಿಂಸಾ ತತ್ವಕ್ಕೆ ಬಲಿಯಾದರು. ತಮ್ಮ ದೇಶದಲ್ಲಿ ಅವ್ಯವಸ್ಥೆ, ಅಶಾಂತಿಗಳ ಸಮಯದಲ್ಲಿ ಅವರು ಯಾವುದೇ ವೈಯಕ್ತಿಕ ರಕ್ಷಣೆಯನ್ನು ನಿರಾಕರಿಸಿದರು. ನ್ಯಾಯವಾಗಿ ಹೋರಾಡುವವರು ಬಲ ಪ್ರಯೋಗವನ್ನು ಪೂರ್ಣವಾಗಿ ತ್ಯಜಿಸಬೇಕೆಂಬುದು ಅವರ ಅಚಲ ನಂಬಿಕೆಯಾಗಿತ್ತು. ಈ ನಂಬಿಕೆಗೆ ಅವರು ತಮ್ಮ ಇಡೀ ಬದುಕನ್ನು ಸಮರ್ಪಿಸಿದರು. ಈ ನಂಬಿಕೆಯನ್ನು ಹೃದಯ ಮತ್ತು ಮನಸ್ಸುಗಳಲ್ಲಿ ತುಂಬಿಕೊಂಡು ಮಹಾನ್ ರಾಷ್ಟ್ರವೊಂದನ್ನು ಸ್ವಾತಂತ್ರ್ಯದ ಕಡೆಗೆ ನಡೆಸಿದರು. ಜನರ ನಿಷ್ಠೆಯನ್ನು ಗೆಲ್ಲುವುದು ಕೇವಲ ರಾಜಕೀಯ ತಂತ್ರ ಮತ್ತು ಉಪಾಯಗಳಿಂದಲ್ಲ, ನೈತಿಕವಾಗಿ ಹಾಗೂ ಉದಾತ್ತವಾದ ಜೀವನ ಮಾರ್ಗದ ಜೀವಂತ ನಿದರ್ಶನದ ಮೂಲಕ ಎಂಬುದನ್ನವರು ತೋರಿಸಿಕೊಟ್ಟರು. ‘ನೈತಿಕ ಮೌಲ್ಯಗಳು ಕ್ಷೀಣಿಸುತ್ತಿರುವ ಈ ಯುಗದಲ್ಲಿ, ನಾವು ಆದರ್ಶವಾಗಿಟ್ಟುಕೊಳ್ಳಬೇಕಾದ ಮಾನವ ಸಂಬಂಧಗಳ ಕಲ್ಪನೆಯನ್ನು ಪ್ರತಿನಿಧಿಸಿದ ಏಕೈಕ ವ್ಯಕ್ತಿ ಗಾಂಧೀಜಿ’.

ಗಾಂಧೀಜಿ ನಮ್ಮ ಕಾಲದ ರಾಜಕೀಯ ವ್ಯಕ್ತಿಗಳಲ್ಲೆಲ್ಲಾ ಅತ್ಯಂತ ತೀಕ್ಷ್ಣ ದೃಷ್ಟಿಯುಳ್ಳವರೆಂಬುದು ನನ್ನ ನಂಬಿಕೆ. ಅವರ ತತ್ವಗಳಿಗನುಗುಣವಾಗಿ ಕೆಲಸ ಮಾಡಲು ನಾವು ಪ್ರಯತ್ನಿಸಬೇಕು. ನಮ್ಮ ಉದ್ದೇಶಕ್ಕಾಗಿ ಹೋರಾಡುವ ಹಿಂಸೆಯನ್ನು ಬಳಸಕೂಡದು. ಕೆಟ್ಟದ್ದೆಂದು ನಾವು ನಂಬಿರುವ ಯಾವುದರಲ್ಲಿಯೂ ಭಾಗವಹಿಸಬಾರದು ಎಂದು ನಂಬಿ ಬದುಕಿದವರು. ಅತ್ಯಂತ ಶ್ರೇಷ್ಠವೇತ್ತರನ್ನೂ, ವಿಜ್ಞಾನಿಗಳನ್ನೂ, ರಾಜ್ಯಶಾಸಜ್ಞರನ್ನೂ ಪಡೆದಿದ್ದರೂ ನಮ್ಮ ಕಾಲದ ರಾಜ್ಯಶಾಸ, ಆರ್ಥಿಕ ಮತ್ತು ಸಾಮಾ ಜಿಕ ಸಮಸ್ಯೆಗಳ ಪರಿಹಾರ ಕಾರ್ಯದಲ್ಲಿ ವಿಫಲವಾಗಿದ್ದೇವೆ.

ವಿಶ್ವಶಾಂತಿ ಮತ್ತು ಅಂತಾರಾಷ್ಟ್ರೀಯ ಸೌಹಾರ್ದಯುತ ಸಹಕಾರಕ್ಕೆ ಬುನಾದಿಯಾಗುವ ರಾಜಕೀಯ ಮತ್ತು ಆರ್ಥಿಕ ರಚನೆಗಳನ್ನು ರೂಪಿಸಿಕೊಳ್ಳಲು ಅಸಮರ್ಥರಾಗಿದ್ದೇವೆ. ನಮ್ಮ ಕಾಲದ ಎಲ್ಲಾ ರಾಜ ನೀತಿಜ್ಞರಲ್ಲಿ ಮಹಾತ್ಮ ಗಾಂಧಿಯವರ ವಿಚಾರಗಳೇ ಅತ್ಯಂತ ಪ್ರಜ್ಞಾಪೂರ್ವಕ ನಿಲುವು ಅನಿಸುತ್ತದೆ. ಅವರು ಸೂಚಿಸಿರುವ ರೀತಿಯಲ್ಲಿ ಅವರ ನಿಷ್ಠೆಗಳನ್ನು ಅಂಗೀಕರಿಸಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕು.

ಹಿಂಸಾರಹಿತ ಕ್ರಾಂತಿ, ಗಾಂಧಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವಿಧಾನ. ಅಂತರರಾಷ್ಟ್ರೀಯ ಬುನಾದಿಯ ಮೇಲೆ ವಿಶ್ವಕ್ಕೆ ಶಾಂತಿಯನ್ನು ದೊರಕಿಸುವುದು. ಇಂತಹ ಗಾಂಧಿ ಮಾರ್ಗದ ಬಳಕೆಯಿಂದ ಮಾತ್ರವೇ ವಿಶ್ವದ ಸಮಸ್ಯೆಗಳು ಪರಿಹಾರವಾಗುವುದೆಂಬುದು ನನ್ನ ನಂಬಿಕೆ. ಆಲ್ಬರ್ಟ್ ಐನ್‌ಸ್ಟೀನ್ ತಾನು ೧೯೩೫ರಲ್ಲಿ ಅಮೆರಿಕದಲ್ಲಿ ಖರೀದಿಸಿದ್ದ ಹೊಸಮನೆಗೆ ಯಾವ ಅಲಂಕಾರಕ್ಕೂ ಒಪ್ಪಲಿಲ್ಲ. ಆದರೆ, ಅವರ ಕೊಠಡಿಯಲ್ಲಿ ಗಾಂಧೀಜಿ ಅವರ ಭಾವಚಿತ್ರವನ್ನು ಮಾತ್ರ ತೂಗುಹಾಕಲಾಗಿತ್ತು.

ಈ ಕುರಿತು ಸ್ನೇಹಿತರು ಐನ್‌ಸ್ಟೀನ್ ಅವರನ್ನು ಕೇಳಿದಾಗ ‘ಗಾಂಧೀಜಿ ಈ ಜಗತ್ತು ಕಂಡ ಶ್ರೇಷ್ಠ ಮಾನವತಾವಾದಿ. ಹಾಗೆಯೇ, ಜಗತ್ತಿನ ಸಕಲ ಜೀವಿಗಳ ರಕ್ಷಣೆಗೆ ಮತ್ತು ಒಳಿತಿಗಾಗಿ ಹಂಬಲಿಸುವ ವ್ಯಕ್ತಿ’ ಎಂದಿದ್ದರಂತೆ. ನಿಜಕ್ಕೂ ಈ ಹೇಳಿಕೆ ಆಶ್ಚರ್ಯಕರವಾದದ್ದು ಮತ್ತು ಗಾಂಧೀಜಿಯವರ ವ್ಯಕ್ತಿತ್ವದ ಹಿರಿಮೆಯನ್ನು ಹೇಳುವಂತಹದ್ದಾಗಿದೆ.

ಡಾ.ಎಂ.ಡಿ.ಉಮೇಶ
(ಲೇಖಕರು ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸಕರು) drumeshmd@yahoo.in

ಆಂದೋಲನ ಡೆಸ್ಕ್

Recent Posts

ಸ್ಕ್ಯಾನಿಂಗ್‌ ಸೆಂಟರ್‌ ಪರಿಶೀಲನೆಗೆ ಸಮಿತಿ ; ಪಿಸಿಪಿಎನ್‌ಡಿಟಿ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ಕ್ರಮ : ಡಿಸಿ ಎಚ್ಚರಿಕೆ

ಮಂಡ್ಯ : ಇತ್ತೀಚೆಗೆ ಕೆ.ಆರ್.ಪೇಟೆ ಪಟ್ಟಣದ ಎರಡು ಖಾಸಗಿ ಡಯಾಗ್ನಾಸ್ಟಿಕ್ (ಸ್ಕ್ಯಾನಿಂಗ್) ಸೆಂಟರ್‌ಗಳಲ್ಲಿ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿರುವುದನ್ನು ಲೋಕಾಯುಕ್ತ…

13 mins ago

ಕರ ಭಾರದ ನಡುವೆ ಘನ ತ್ಯಾಜ್ಯ ವಿಲೇವಾರಿಗೂ ಸೆಸ್‌

ಜನಪ್ರತಿನಿಧಿಗಳ ಆಡಳಿತವಿಲ್ಲದ ನಗರಪಾಲಿಕೆಯಲ್ಲಿ ಅಧಿಕಾರಿಗಳ ಅಂಧ ದರ್ಬಾರ್‌ ಮೈಸೂರು : ಗ್ಯಾಸ್ ದರ ಹೆಚ್ಚಳ..., ವಿದ್ಯುತ್ ದರ ಹೆಚ್ಚಳ..., ನೀರಿನ…

39 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏಪ್ರಿಲ್‌ 25 ಶನಿವಾರ

1 hour ago

ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕ್ರಮ: ಸಚಿವ ಸುಧಾಕರ್‌

ಬೆಂಗಳೂರು: ಸಿಇಟಿ ಕೇಂದ್ರದಲ್ಲಿ ಜನಿವಾರ ತೆಗೆಸಿದ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌…

11 hours ago

ರಾಜ್ಯ ಸಂಚಾರ ಪೊಲೀಸರ ಆರೋಗ್ಯ ರಕ್ಷಣೆಗೆ ಕ್ರಮ: ಮಾಸ್ಕ್‌ ನೀರು, ನೆರಳಿನ ವ್ಯವಸ್ಥೆಗೆ ಸೂಚನೆ

ಬೆಂಗಳೂರು: ರಾಜ್ಯದ ವಿವಿಧ ನಗರಗಳಲ್ಲಿ ಸುಡುತ್ತಿರುವ ಬಿಸಿಲು ಮತ್ತು ಹೆಚ್ಚುತ್ತಿರುವ ಧೂಳಿನ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಪೊಲೀಸರ ನೆರವಿಗೆ…

11 hours ago

ಚಲುವಾಂಬ ಆಸ್ಪತ್ರೆಯಲ್ಲಿ ಮಗು ಸಾವು ಪ್ರಕರಣ: ಸಂಸದ ಯದುವೀರ್‌ ಒಡೆಯರ್‌ ಪ್ರತಿಕ್ರಿಯೆ.!

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ…

11 hours ago