Andolana originals

ಬಿಸಿಲ ಬೇಗೆ ತಣಿಸಲು ಮಡಕೆಗಳ ಸಾಲು

ಚಿರಂಜೀವಿ ಸಿ.ಹುಲ್ಲಹಳ್ಳಿ

ತಣ್ಣನೆ ನೀರಿಗಾಗಿ ಮಡಕೆಗಳಿಗೆ ಮಾರುಹೋದ ಜನರು 

ಮಣ್ಣಿನ ಮಡಕೆಗಳಿಗೆ ಆಧುನಿಕ ಕಲಾ ಸ್ಪರ್ಶ

ನಲ್ಲಿ ಅಳವಡಿಸಿರುವ ಮಡಕೆಗಳೂ ಲಭ್ಯ

ಗುಜರಾತ್‌ನಿಂದ ೯ ಲೋಡ್ ಮಡಕೆಗಳ ಆಮದು

೨೦೦ ರಿಂದ ೧,೦೦೦ ರೂ.ವರೆಗೆ ಬಿಕರಿ

೪ ಲೀಟರ್‌ನಿಂದ ೨೦ ಲೀಟರ್‌ವರೆಗೆ ಮಡಕೆಗಳು ಮಾರಾಟಕ್ಕೆ ಲಭ್ಯವಿವೆ. ಕನಿಷ್ಠ ೨೦೦ ರೂ.ಗಳಿಂದ ಸಾವಿರ ರೂ.ಗಳವರೆಗೆ ಮಡಕೆಗಳನ್ನು ಬಿಕರಿ ಮಾಡಲಾಗುತ್ತಿದೆ. ಗ್ರಾಹಕರು ಚೌಕಾಸಿ ಮಾಡುತ್ತ ಮಡಕೆಗಳನ್ನು ಖರೀದಿಸುತ್ತಿದ್ದಾರೆ.

ಮೈಸೂರು: ನೆತ್ತಿ ಸುಡುವ ಬಿಸಿಲಿನಿಂದ ಬಸವಳಿದು ಗಂಟಲು ಒಣಗಿದಾಗ ಒಂದಿಷ್ಟು ಕುಡಿಯಲು ನೀರು ಸಿಕ್ಕಿದರೆ ಸಾಕು. ಆ ನೀರು ತಣ್ಣಗೆ ಮಣ್ಣಿನ ಸುವಾಸನೆ ಯಿಂದ ಕೂಡಿದ್ದರೆ ದಣಿದ ದೇಹದಲ್ಲಿ ಅದಮ್ಯ ಚೇತನ ಮೂಡುತ್ತದೆ. ಹಾಗಾಗಿಯೇ ಪ್ರತಿ ವರ್ಷ ಬೇಸಿಗೆ ಬಂದರೆ ಮೈಸೂರಿನ ಹಲವೆಡೆ ಕಲಾಸ್ಪರ್ಶದ ಮಡಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳಿಗೆ ಬೇಡಿಕೆಯೂ ಹೆಚ್ಚು.  ‘ಬಡವರ ಫ್ರಿಜ್’ ಎಂದು ಗುರುತಿಸಿಕೊಂಡಿರುವ ಈ ಮಡಕೆಗಳಿಗೆ ಕೆಲ ವರ್ಷಗಳಿಂದ ಆಧುನಿಕ ಸ್ಪರ್ಶ ಸಿಕ್ಕಿದೆ.

ಉತ್ತರ ಭಾರತದ ಹಲವು ರಾಜ್ಯಗಳಿಂದ ಬಂದಿರುವ ಮಡಕೆ ವ್ಯಾಪಾರಿಗಳು ಬೇಸಿಗೆಯಿಂದ ಭರಪೂರ ಲಾಭ ಪಡೆಯುತ್ತಿದ್ದಾರೆ. ವಿಶೇಷವಾಗಿ, ಮಡಕೆಗಳಿಗೆ ಬಣ್ಣ, ವಿನ್ಯಾಸ ಮತ್ತು ಕಲಾತ್ಮಕ ಚಿತ್ರಗಳ ಮೂಲಕ ಮಣ್ಣಿನ ಗಡಿಗೆಗಳು ಜನರನ್ನು ಆಕರ್ಷಿಸುತ್ತಿವೆ.

ಬಿಸಿಲಿನ ಬೇಗೆಯಿಂದ ಕಂಗೆಟ್ಟ ಜನರು ತಣ್ಣನೆಯ ನೀರಿಗೆ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ ಎಲ್ಲರ ಚಿತ್ತ ಮಡಕೆಯತ್ತ ನೆಟ್ಟಿದೆ. ಇದಕ್ಕೆ ಮಡಕೆಯಲ್ಲಿ ಸಂಗ್ರಹಿಸಿ ಇಡುವ ನೀರು ನೈಸರ್ಗಿಕವಾಗಿಯೇ ಫ್ರಿಜ್ ನೀರಿಗಿಂತಲೂ ಹೆಚ್ಚು ತಂಪಾಗಿರುತ್ತದೆ ಎನ್ನಲಾಗಿದೆ. ಈ ತಂಪು ಪ್ರಮಾಣ ಮನೆಗಳಲ್ಲಿ ಇರುವ ಫ್ರಿಡ್ಜ್‌ಗಳಿಗಿಂತ ಹೆಚ್ಚಾಗಿರುತ್ತದೆ.

ಆಧುನಿಕತೆ ಹಾಗೂ ಜನರ ಬೇಡಿಕೆಗೆ ತಕ್ಕಂತೆ ಮಣ್ಣಿನ ಮಡಕೆಗಳ ತಯಾರಿಕೆಯೂ ಬದಲಾಗಿದೆ. ಸಾಮಾನ್ಯವಾಗಿ ಮಡಕೆ ತಯಾರು ಮಾಡುವಾಗಲೇ ಅದಕ್ಕೆ ನಲ್ಲಿಯನ್ನು ಅಳವಡಿಸಲಾಗಿರುತ್ತದೆ. ಇಂತಹ ಮಡಕೆಗಳಿಗೆ ಬೇಡಿಕೆ ಹೆಚ್ಚಾಗಿದೆ.

ಮೈಸೂರು ಮುಖ್ಯರಸ್ತೆಗಳು, ಪ್ರಮುಖ ವೃತ್ತಗಳಲ್ಲಿ ರಾಜಸ್ಥಾನ, ಗುಜರಾತಿನ ಮಡಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಹುಣಸೂರು ರಸ್ತೆಯ ಹಳೇ ಜಿಲ್ಲಾಧಿಕಾರಿಗಳ ಕಚೇರಿಯ ಉದ್ಯಾನವನ ಸಮೀಪ, ಕಲಾ ಮಂದಿರದ ವೃತ್ತ, ಬಲ್ಲಾಳ್ ವೃತ್ತ, ಬೋಗಾದಿಯ ರಸ್ತೆಯಲ್ಲಿರುವ ಕುಕ್ಕರಹಳ್ಳಿಯ ವೃತ್ತ, ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಸೇರಿದಂತೆ ನಾನಾ ಕಡೆ ಮಡಕೆ ವ್ಯಾಪಾರ ಭರ್ಜರಿಯಾಗಿಯೇ ನಡೆಯುತ್ತಿದೆ.

ಪ್ಲಾಸ್ಟಿಕ್ ಕ್ಯಾನ್ ಆರೋಗ್ಯಕ್ಕೆ ಹಾನಿಕರ: ಆರೋಗ್ಯಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ ಕ್ಯಾನ್, ಪ್ಲಾಸ್ಟಿಕ್ ಬಾಟಲ್ ಬಳಕೆ ನಿಲ್ಲಿಸಿ ನೀರು ಶೇಖರಣೆಗೆ ಮಣ್ಣಿನ ಮಡಕೆ ಬಳಸಬೇಕಿದೆ. ಇದು ಆರೋಗ್ಯಕ್ಕೆ ಪೂರಕ ಎಂಬ ಮಾತುಗಳೂ ಇವೆ. ಆಧುನಿಕ ಬದುಕಿನಿಂದ ನಶಿಸಿರುವ ಸಾಂಪ್ರದಾಯಿಕ ಕುಂಬಾರಿಕೆ ವೃತ್ತಿಗೆ ಮರುಜೀವ ನೀಡಿದಂತಾಗಲಿದೆ.

” ಮೂಲತಃ ರಾಜಸ್ಥಾನದವರಾದ ನಮ್ಮ ಕುಟುಂಬದವರು ಮೈಸೂರಲ್ಲಿ ೩೫ ವರ್ಷಗಳಿಂದ ಮಡಕೆ ವ್ಯಾಪಾರದಲ್ಲಿ ನಿರತರಾಗಿದ್ದಾರೆ. ಈ ವರ್ಷ ಗುಜರಾತಿನಿಂದ ೩ ಲೋಡ್‌ಗಳು ಅಂದರೆ ಒಟ್ಟು ೯ ಸಾವಿರ ಮಡಕೆಗಳನ್ನು ತರಿಸಲಾಗಿದೆ. ಬೇಸಿಗೆಯಲ್ಲಿ ಮಡಕೆಗಳಿಗೆ ಒಂದಷ್ಟು ಬೇಡಿಕೆ ಹೆಚ್ಚಲಿದೆ.”

-ಕೃಷ್ಣ, ಮಡಕೆ ವ್ಯಾಪಾರಿ

ಆಂದೋಲನ ಡೆಸ್ಕ್

Recent Posts

ಹಣಕ್ಕಾಗಿ ವೃದ್ದೆ ಕೊಲೆ ; ಶವವನ್ನು ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಕಿರಾತಕ

ಕೆ.ಆರ್.ನಗರ : ಹಣದಾಸಗೆ ವೃದ್ದೆಯನ್ನು ಕೊಲೆಗೈದು ಶೌಚಾಲಯದ ಯುಜಿಡಿ ಗುಂಡಿಯಲ್ಲಿ ಹೂತು ಹಾಕಿರುವ ಘಟನೆ ತಾಲೂಕಿನ ತಿಪ್ಪೂರು ಗ್ರಾಮದಲ್ಲಿ ನಡೆದಿದೆ.…

2 days ago

ಪಶ್ಚಿಮ ಬಂಗಾಳ | ಸುವೇಂದು ಅಧಿಕಾರಿ ನೂತನ ಮುಖ್ಯಮಂತ್ರಿ

ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಟಿಎಂಸಿ ಆಡಳಿತಕ್ಕೆ ತೆರೆ ಎಳೆದು ಐತಿಹಾಸಿಕ ಗೆಲುವು ಸಾಧಿಸಿರುವ ಬಿಜೆಪಿ, ಮೇ…

2 days ago

ಟಿವಿಕೆಗೆ ಎಡಪಕ್ಷಗಳ ಬೆಂಬಲ : ಬಹುಮತದ ಸೀಟಿ ಊದಿಯೇ ಬಿಟ್ಟ ದಳಪತಿ ವಿಜಯ್‌

ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಟಿವಿಕೆ ಸರ್ಕಾರ ರಚಿಸಲು…

2 days ago

ತಮಿಳುನಾಡಿನಲ್ಲಿ ವಿಜಯ್‌ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ : ಕೇಂದ್ರ ಸಚಿವ ಎಚ್‌ಡಿಕೆ

ಹಾಸನ : ಮಾಧ್ಯಮಗಳಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವರದಿಗಳು ಹರಿದಾಡುತ್ತಿದ್ದವು. ಆದರೆ ವಿಜಯ್‌ ಅವರ ಈಗಿನ ಸಾಧನೆಯನ್ನು…

2 days ago

ಹೊರ್ಮುಜ್‌ ಜಲಸಂಧಿಯಿಂದ ನುಗ್ಗಿಬಂದ ಅಮೆರಿಕದ ಯುದ್ಧನೌಕೆಗಳು : ಇರಾನ್‌ನಿಂದ ದಾಳಿ

ವಾಷಿಂಗ್ಟನ್ : ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಮೂರು ಯುದ್ಧನೌಕೆಗಳ ಮೇಲೆ ಇರಾನ್ ಕ್ಷಿಪಣಿ, ಡ್ರೋನ್ ಮತ್ತು ಸಣ್ಣ ದೋಣಿಗಳ ಮೂಲಕ…

2 days ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ದೇಶದ ಪ್ರವಾಸೋದ್ಯಮವೂ, ಚಲನಚಿತ್ರ ಪ್ರವಾಸೋದ್ಯಮವೂ

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅವರ ಈ ಪ್ರವಾಸದ ಹಿಂದೆ ತಮ್ಮ ರಾಜ್ಯದ ಪ್ರವಾಸೋದ್ಯಮವನ್ನು…

2 days ago