Andolana originals

ನಾಗರಹೊಳೆಗೆ ಸ್ತ್ರೀ ಸಂರಕ್ಷಕಿ

ಅರಣ್ಯ, ಕಾಡುಪ್ರಾಣಿಗಳ ಸಂರಕ್ಷಣೆ ಎಂಬುದು ಅಷ್ಟು ಸುಲಭದ ಕೆಲಸವಲ್ಲ. ಸಾಕಷ್ಟು ಸವಾಲುಗಳಿರುತ್ತವೆ. ಸ್ಥಳೀಯ ಜನರ ವಿಶ್ವಾಸ ಗಳಿಸುವುದಲ್ಲದೆ, ಅರಣ್ಯ ಪ್ರದೇಶದ ಇಂಚಿಂಚೂ ಭೂಮಿಯನ್ನು ಕಾಪಾಡಬೇಕು. ಇಂತಹ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಬಹುದು ಎಂಬುದನ್ನು ಸಾಧಿಸಿದ್ದಾರೆ ಉಪ ಅರಣ್ಯ ಸಂರಕ್ಷಕರಾದ ಸೀಮಾ.

ಪ್ರತಿ ಕ್ಷೇತ್ರದಲ್ಲಿಯೂ ಮಹಿಳೆಯರು ಯಶಸ್ವಿಯಾಗುತ್ತಾರೆ ಎಂಬುದಕ್ಕೆ ಸೀಮಾರವರೇ ಉದಾಹರಣೆ. ಹೆಚ್ಚು ಹುಲಿಗಳು, ಆನೆಗಳ ಪ್ರಮುಖ ತಾಣವಾಗಿರುವ 7 ಅಪಾರ ವನ್ಯ ಸಂಪತ್ತನ್ನು ತನ್ನ ಒಡಲಲ್ಲಿಟ್ಟುಕೊಂಡು ಪೋಷಿಸುತ್ತಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೊದಲ ಮಹಿಳಾ ನಿರ್ದೇಶಕರಾಗಿ ಐಎಫ್‌ಎಸ್ ಅಧಿಕಾರಿ ಪಿ.ಎ.ಸೀಮಾ ಅಧಿಕಾರ ವಹಿಸಿಕೊಂಡಿರುವುದು ಅರಣ್ಯ ಸಂರಕ್ಷಣೆಯ ವಿಷಯದಲ್ಲಿಯೂ ಮಹಿಳೆಯರು ಮೇಲುಗೈ ಸಾಧಿಸಿದಂತಾಗಿದೆ.

ರಾಜ್ಯದ ಅರಣ್ಯ ಇಲಾಖೆಯಲ್ಲಿ ಐಎಫ್‌ಎಸ್ ಬಡ್ತಿ ಪಡೆದ ಹಲವು ಮಹಿಳಾ ಅಧಿಕಾರಿಗಳಿಗೆ ಸಾಮಾನ್ಯ ವಿಭಾಗಗಳು ಇಲ್ಲವೆ ಸಾಮಾಜಿಕ ಆರಣ್ಯಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ರಾಷ್ಟ್ರೀಯ ಉದ್ಯಾನ, ಹುಲಿ ಯೋಜನೆಗಳ ನಿರ್ದೇಶಕರು ಹಾಗೂ ಮುಖ್ಯಸ್ಥರ ಹುದ್ದೆಗಳಲ್ಲಿ ಪುರುಷ ಅಧಿಕಾರಿಗಳೇ ಹೆಚ್ಚಾಗಿದ್ದರು. ಆದರೆ ಇದೀಗ ಮಹಿಳಾ ಅಧಿಕಾರಿಯಾಗಿ ಸೀಮಾ ನಾಗರಹೊಳೆಗೆ ನೇಮಕವಾಗಿರುವುದು ಇತಿಹಾಸ ಬರೆದಂತಾಗಿದೆ.

ಕರ್ನಾಟಕದಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷವನ್ನು ತಪ್ಪಿಸಲು ಮೊದಲ ಬಾರಿಗೆ ‘ಆನೆ ಕಾವಲು ಪಡೆ’ಯನ್ನು ರಚಿಸಿದಾಗ ನಾಗರಹೊಳೆ ವಿಭಾಗದ ಆನೆ ಕಾವಲು ಪಡೆಯ ಮುಖ್ಯಸ್ಥರಾಗಿ ಪಿ.ಎ.ಸೀಮಾ ನೇಮಕಗೊಂಡು ಯಶಸ್ವಿಯಾಗಿ ನಿಭಾಯಿಸಿದ್ದರು. ಮೂಲತಃ ಕೊಡಗಿನವರಾದ ಸೀಮಾ ಒಂದೂವರೆ ದಶಕದಿಂದ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಂಡ್ಯ, ಮೈಸೂರು, ಹುಣಸೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಅನೇಕ ಆನೆ, ಚಿರತೆ, ಹುಲಿ ಸೆರೆಯ ಕಾರ್ಯಾಚರಣೆಗಳಲ್ಲಿ ಭಾಗವಹಿಸಿ ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಸಾಲುಸಾಲು ಜವಾಬ್ದಾರಿಗಳ ಇವರ ಮುಂದಿವೆ: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿಯೂ ಸಾಕಷ್ಟು ಸವಾಲುಗಳಿವೆ. ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಹಂಚಿರುವ ಈ ಹು ರಕ್ಷಿತ ಪ್ರದೇಶ ಕೇರಳದವರೆಗೂ ವಿಸ್ತರಿಸಿಹೆ. ಇಲ್ಲಿ ಕಳ್ಳಬೇಟೆ, ಹುಲಿ, ಆನೆಗಳು ಕಾಡಿನಿಂದ ಹೊರಬಂದು ಮಾನವನೊಂದಿಗೆ ಸಂಘರ್ಷಕ್ಕಿಳಿಯುತ್ತವೆ. ಈ ವೇಳೆ ಅದನ್ನು ನಿಭಾಯಿಸಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಣಿಗಳನ್ನು ಸಂರಕ್ಷಿಸುವುದು ಅವರ ಜವಾಬ್ದಾರಿಗಳು. ಅಲ್ಲದೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ನಷ್ಟವಾದಗಲೂ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕೊಡಿಸಬೇಕಿದೆ.

ಹುಲಿ ಯೋಜನೆಯ ಮೊದಲ ಮಹಿಳಾ ನಿರ್ದೇಶಕಿ: ಪುನರ್ವಸತಿ, ಆನೆ ಶಿಬಿರಗಳಲ್ಲಿ ಸಾಕಾನೆಗಳ ಸಾಲು ಸಾಲು ಸಾವು, ಇವೆಲ್ಲ ಘಟನೆಗಳು ನಾಗರಹೊಳೆಯನ್ನು ಸವಾಲುಗಳ ಗೂಡಾಗಿಸಿದೆ. ಈ ಸವಾಲಿನ ಗೂಡಿಗೆ ಮಹಿಳಾ ದಕ್ಷ ಅಧಿಕಾರಿಯಾಗಿ ಮೊದಲ ನಿರ್ದೇಶಕರಾಗಿ ಪಿ.ಎ.ಸೀಮಾ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದೆ ನಾಗರಹೊಳೆಯಲ್ಲಿ ಮಾಲತಿಪ್ರಿಯಾ, ಆನುಷಾ ಮತ್ತಿತರರು ಎಸಿಎಫ್‌ಗಳಾಗಿ ಕೆಲಸ ಮಾಡಿದ್ದರೂ ನಿರ್ದೇಶಕರಾಗಿರಲಿಲ್ಲ. ಮೊದಲ ಬಾರಿಗೆ ಸೀಮಾ ಅವರು ಆ ಸ್ಥಾನವನ್ನು ತುಂಬಿದ್ದು, ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೋ ಕಾದುನೋಡಬೇಕಿದೆ.

ಕೋಟ್ಸ್‌))

ಅರಣ್ಯ ಇಲಾಖೆ ದೊಡ್ಡ ಜವಾಬ್ದಾರಿ ನೀಡಿದ್ದು, ಅದನ್ನು ನಿಭಾಯಿಸುತ್ತೇನೆ ಎಂಬ ವಿಶ್ವಾಸವಿದೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ನಾಗರಹೊಳೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಜನರ ಸಹಕಾರದೊಂದಿಗೆ ಸೇವೆ ಸಲ್ಲಿಸುತ್ತೇನೆ.

-ಪಿ.ಎ.ಸೀಮಾ, ಹುಲಿ ಯೋಜನೆ ನಿರ್ದೇಶಕರು, ನಾಗರಹೊಳೆ.

ಆಂದೋಲನ ಡೆಸ್ಕ್

Recent Posts

ಶಿಕ್ಷಣ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಮಣಿಸಿದ ಜೆನ್ ಝೀ ಚಳವಳಿ

ದೇಶ ಆಳುವ ವರ್ಗದ ಏಕಚಕ್ರಾಧಿಪತ್ಯವನ್ನು ವಿರೋಧಿಸಿ ನಡೆದ ಚಳವಳಿ ಸರ್ಕಾರವನ್ನು ಮಂಡಿಯೂರುವಂತೆ ಮಾಡಿದೆ. ದೇಶಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ…

4 hours ago

ಸಂಪುಟ ವಿಸ್ತರಣೆ ವಿಳಂಬ; ಡಿಕೆಶಿ ಅಸಮಾಧಾನ

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಸರ್ಕಾರ ಟೇಕಾಫ್ ಆಗಲು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಅನಿವಾರ್ಯ ಕಳೆದ ವಾರ…

4 hours ago

ಕೃಷಿಗೆ ನೀರಿಲ್ಲ ಎಂಬ ಆದೇಶದಿಂದ ರೈತರು ಕಂಗಾಲು

ಆನಂದ್ ಹೊಸೂರು ಚುಂಚನಕಟ್ಟೆ ಹೋಬಳಿಯಲ್ಲಿ ಭತ್ತ ಬೆಳೆಯುತ್ತಿದ್ದ ರೈತರಿಗೆ ಈಗ ಸಂಕಷ್ಟದ ಸ್ಥಿತಿ ಹೊಸೂರು: ಕಾವೇರಿ ನೀರು ಕುಡಿಯಲು ಮಾತ್ರ,…

4 hours ago

ರಸ್ತೆ ಬದಿ ಅಗೆದು ಹಾಗೆಯೇ ಬಿಟ್ಟ ಗುತ್ತಿಗೆದಾರರು

ಮಹೇಂದ್ರ ಹಸಗೂಲಿ ಸಂಚಾರಕ್ಕೆ ಅಡಚಣೆ; ಬಿಎಸ್‌ಎನ್‌ಎಲ್ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಗುಂಡ್ಲುಪೇಟೆ: ಬಿಎಸ್‌ಎನ್‌ಎಲ್‌ನಿಂದ ನೇಮಿಸಲ್ಪಟ್ಟಿರುವ ಗುತ್ತಿಗೆದಾರರು ಕೇಬಲ್…

4 hours ago

ಎಕ್ಸ್ ಬಿಟ್ಟು ಇನ್‌ಸ್ಟಾ ಹಿಡಿದ ರಾಜಕಾರಣ : ಮೋದಿಗೆ ಜೆನ್-ಝೀ ಕಾಟ

ನವದೆಹಲಿ : ದೇಶದ ರಾಜಕೀಯದ ಭಾಷೆ ಬದಲಾಗುತ್ತಿದೆ. ಒಮ್ಮೆ ಟ್ವಿಟರ್, ಈಗಿನ ಎಕ್ಸ್‌ನಲ್ಲಿ ನಡೆಯುತ್ತಿದ್ದ ವಾಗ್ವಾದ, ಟ್ರೆಂಡ್‌ಗಳು ಈಗ ಇನ್‌ಸ್ಟಾಗ್ರಾಂ…

16 hours ago