ನಂಜುಂಡನ ನೆಲೆ ವೀಡು
ರಸ ಬಾಳೆಯ ಬೀಡು
ನಂ ಜನರ ಗೂಡು
ನಮ್ಮ ಹೆಮ್ಮೆಯ ನಂಜನಗೂಡು
ಜುಳು ಜುಳು ಹರಿಯುತ
ತೀರ್ಥಕ್ಷೇತ್ರವಾಗಿಹುದಿಲ್ಲಿ
ಕಪಿಲೆಯ ಮಡಿಲು
ಹಚ್ಚಹಸಿರಾಗಿಹುದು
ಮಾತೆಯ ಒಡಲು!
ಸುತ್ತಮುತ್ತೆಲ್ಲ ಸುಕ್ಷೇತ್ರಗಳ ಲೀಲೆ
ಸುತ್ತೂರು, ದೇವನೂರು
ಸನ್ನಿಧಿಗಳ ಸಂಗಮ
ಮಲ್ಲನಮೂಲೆ
ಸಿನಿ ಕ್ಷೇತ್ರದ ದಿಗ್ಗಜರು
ಎಚ್ ಎಲ್ ಏನ್ ಸಿಂಹ,
ಜಿ. ವಿ. ಅಯ್ಯರು,
ಮರೆಯಲಾದೀತೆ ಪತ್ರಕರ್ತೆ
ಧೀರ ವನಿತೆ ತಿರುಮಲಾಂಬ
ಎಷ್ಟೊಂದು ಪ್ರಸಿದ್ಧಿ
ಗರಳಪುರಿಯ ಗರಿಗರಿ ಪುರಿ!
ಪಾಮರರೂ ಬಳಸುವ
‘ಪಂಡಿತರ’ ಹಲ್ಲು ಪುಡಿ
ಅಬ್ಬಾ ! ಎಂಥ ಹೆಸರು
ನಮ್ಮೂರ ರಸ್ತೆಗಳಿಗೆ ?!
ಒಂದು ರಾಷ್ಟ್ರಪತಿ ರಸ್ತೆ
ಮತ್ತೊಂದು ‘ರಾಷ್ಟ್ರಪಿತ’ನ ರಸ್ತೆ !
ತಲೆಯೆತ್ತಿವೆಯಿಲ್ಲಿ
ನೂರಾರು ಕೈಗಾರಿಕೆಗಳು
ಅಭಿವೃದ್ಧಿ ಮಾತಾಗಿರಲಿ
ಶಾಂತಿಯ ತೋಟದಲಿ
ನಿತ್ಯ ಅರಳುತ್ತಿವೆ
ಜನಮಾನಸದ ಹೂಗಳು!
-ಮ.ಗು.ಬಸವಣ್ಣ, ಜೆ ಎಸ್ ಎಸ್ ಸಂಸ್ಥೆ, ಸುತ್ತೂರು, ಮೈಸೂರು.
ಮೊದಲ ವಿಶ್ವಕನ್ನಡ ಸಮ್ಮೇಳನದ ಸಿದ್ಧತೆಯ ಸಂದರ್ಭ. ಬರಗಾಲದ ವೇಳೆ ದುಬಾರಿ ವೆಚ್ಚದ ಇಂತಹ ಸಮ್ಮೇಳನ ಅಗತ್ಯ ಇಲ್ಲ ಎಂದು ಇದರ…
ಇಂದು ನಮ್ಮ ದೇಶದ ಆರೋಗ್ಯ ಕ್ಷೇತ್ರದಲ್ಲಿ ಒಂದು ‘ನಿಶ್ಯಬ್ದ ಕ್ರಾಂತಿ’ ಸಂಭವಿಸುತ್ತಿದೆ. ಒಂದು ಕಾಲದಲ್ಲಿ ಪ್ಲೇಗ್, ಕಾಲರಾದಂತಹ ಸಾಂಕ್ರಾಮಿಕ ರೋಗಗಳು…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಮಾಜಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಇತಿಹಾಸ ಪದೇ ಪದೇ ಸ್ಮರಿಸುತ್ತದೆ. ಅಂದ ಹಾಗೆ ಮುಖ್ಯಮಂತ್ರಿಗಳಾದವರು…
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…