ಆಂದೋಲನ 50

ಮೌಲ್ಯ, ಸಾಮರಸ್ಯಗಳ ಸಂರಕ್ಷಣೆಯಾಗಲಿ : ಸುತ್ತೂರು ಶ್ರೀ

ʼಆಂದೋಲನ ೫೦ ಸಾರ್ಥಕ ಪಯಣ’ ಸಂತೋಷದ ಸಂಗತಿ. ರಾಜಶೇಖರ ಕೋಟಿ ಅವರು ಸದಾ ಧರಿಸುತ್ತಿದ್ದ ಕೆಂಪು ಟಿ-ಶರ್ಟ್ ಅನ್ನು ಆಹ್ವಾನ ಪತ್ರಿಕೆಯೇ ನೆನಪಿಗೆ ತರುತ್ತಿದೆ. ‘ಆಂದೋಲನ’ ದಿನಪತ್ರಿಕೆ ಮೈಸೂರಿನ ಸಾಕ್ಷಿಪ್ರಜ್ಞೆಯಂತಿರುವ ಒಂದು ಪ್ರಮುಖ ಸುದ್ದಿ ಮಾಧ್ಯಮ. ಅದರ ವಿಶ್ವಾಸಾರ್ಹತೆಯೇ ಅದರ ಜನಪ್ರಿಯತೆಯ ಮಾನದಂಡ, ಹಿಂದಿನ ತಲೆಮಾರಿನ ಪತ್ರಕರ್ತರ ಮೌಲ್ಯಗಳ ಸಾಕಾರ ರೂಪದಂತಿದ್ದ ರಾಜಶೇಖರ ಕೋಟಿ ಅವರು ಪತ್ರಿಕೆಯನ್ನು ಈ ಹಂತಕ್ಕೆ ತರುವಲ್ಲಿ ಪಟ್ಟ ಸಾಹಸ ಅವರ್ಣನೀಯ. ಬಹುತೇಕ ಬರಿಗೈಯಲ್ಲಿ ಪ್ರಾರಂಭವಾದ ಈ ಪತ್ರಿಕಾ ಸಾಹಸ ಸಮಾಜವಾದಿ ಸ್ನೇಹಿತರ ಕೈಯಾಸರೆಯಿಂದ ಬೆಳೆದು ಅಪಾರ  ಜನವಿಶ್ವಾಸವನ್ನು ಗಳಿಸಿರುವುದು ಸರ್ವವಿಧಿತ. ದೀನ ದಲಿತರು, ಬಡಬಗ್ಗರು, ನೊಂದವರ ಧ್ವನಿಯಾದ ಈ ಪತ್ರಿಕೆಯು ಇಂದಿನವರೆಗೂ ತಾನು ನಂಬಿದ ಮೌಲ್ಯಗಳಿಂದ ಹಿಂದೆ ಸರಿದಿಲ್ಲ. ಪತ್ರಿಕೆಯ ಸ್ಥಾಪಕ-ಸಂಪಾದಕರಾದ ರಾಜಶೇಖರ ಕೋಟಿಯವರ ಸರಳತೆ, ಸಾಮಾಜಿಕ ಬದ್ಧತೆ, ವೈಯಕ್ತಿಕ ಪರಿಶುದ್ಧತೆ ಇವುಗಳು ನಿಜಕ್ಕೂ ‘ಆಂದೋಲನ’ ಪತ್ರಿಕೆಯ ರಕ್ಷಾ ಕವಚಗಳು, ನೇರ ನಡೆ-ನುಡಿ, ಸ್ನೇಹಜೀವಿಗಳಾಗಿದ್ದ ಅವರು ತಾತ್ವಿಕ ಭಿನ್ನಾಭಿಪ್ರಾಯಗಳು ವ್ಯಕ್ತಿಗತ ಸ್ನೇಹಕ್ಕೆ ಎರವಾಗದಂತೆ ಜಾಗ್ರತೆ ವಹಿಸುತ್ತಿದ್ದರು. ನಿರ್ಮಲಾ ಕೋಟಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿ, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಸಾಹಿತಿಗಳು, ಕಲಾವಿದರು, ಚಿಂತಕರು – ಹೀಗೆ ಎಲ್ಲರೂ  ಒಟ್ಟಿಗೇ ಭಾಗವಹಿಸಿರುವುದು ಕಾರ್ಯಕ್ರಮದ ಮತ್ತೊಂದು ವಿಶೇಷವೇ ಆಗಿದೆ.

ಯಾವುದೇ ಸಂಸ್ಥೆಯ ವಿಷಯದಲ್ಲಿ ೫೦ ವರ್ಷಗಳೆಂಬುದು ಅತ್ಯಂತ ಸಾರ್ಥಕತೆಯ ಕ್ಷಣ, ನಡೆದು ಬಂದ ದಾರಿಯ ಅವಲೋಕನ ಮಾಡಿಕೊಳ್ಳುತ್ತಲೇ ಹೊಸ ಯೋಜನೆಗಳ ನೀಲನಕ್ಷೆಯನ್ನು ರೂಪಿಸುವ ಕ್ಷಣ. ಜನಸಮುದಾಯದ ಒಳಿತಿಗಾಗಿ ಮರುಸಮರ್ಪಣೆ ಮಾಡಿಕೊಳ್ಳುವ ಕ್ಷಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು, ಸಾಮುದಾಯಿಕ ಸಾಮರಸ್ಯವನ್ನು ಸಂರಕ್ಷಿಸಬೇಕಾದ ಕ್ಷಣ.ಪತ್ರಿಕೆ ಇದೆ ರೀತಿ ಜನರ ಪ್ರೀತಿಯ ಪತ್ರಿಕೆಯಾಗಿ ಪ್ರಕಟವಾಗುತ್ತಿರಲೆಂದು ಆಶಿಸುತ್ತೇವೆ. (ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂದೇಶ )

andolana

Recent Posts

ನಂಜನಗೂಡು | ಹಾಡಹಗಲೇ ಸ್ಕೂಟಿಯಲ್ಲಿದ್ದ ಹಣ ಕಳವು

ನಂಜನಗೂಡು : ಹಾಡಾ ಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಸ್ಕೂಟಿಯಿಂದ ಹಣ ಕದ್ದ ಘಟನೆ ಪಟ್ಟಣದ ಮಿನಿ ವಿಧಾನಸೌಧದ ಬಳಿ…

11 hours ago

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಜಾಗತಿಕ ಸ್ಪರ್ಶ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು : ದಸರಾ ವಸ್ತು ಪ್ರದರ್ಶನವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆಕರ್ಷಣೀಯವಾಗಿಸಲು ಕರ್ನಾಟಕ ಪ್ರದರ್ಶನ ಪ್ರಾಧಿಕಾರವು ವಸ್ತು ಪ್ರದರ್ಶನ ಆವರಣವನ್ನು…

13 hours ago

ಇಂದಿನಿಂದ ಮೂರು ದಿನ ಮಳೆ ಸಾಧ್ಯತೆ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು: ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ರಾಜ್ಯದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ…

16 hours ago

ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ: ನಾಡದೇವಿಗೆ ಮಹಾಲಕ್ಷ್ಮೀ ಅಲಂಕಾರ

ಮೈಸೂರು: ಇಂದು ಆಷಾಢ ಮಾಸದ ಮೊದಲ ಶುಕ್ರವಾರದ ಸಂಭ್ರಮ ಮನೆಮಾಡಿದ್ದು, ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಮಹಾಲಕ್ಷ್ಮೀ ಅಲಂಕಾರ ಮಾಡಲಾಗಿದೆ. ಇಡೀ…

20 hours ago

ಓದುಗರ ಪತ್ರ: ದಸರಾದಲ್ಲಿ ಕಂಬಳಕ್ಕೆ ಹಠವೇಕೆ?

ಈ ವರ್ಷ ನಾಡ ಹಬ್ಬ ದಸರಾದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸಲು ಸರ್ಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ. ಈಗಾಗಲೇ ಸಾರ್ವಜನಿಕರು ಹಾಗೂ…

24 hours ago

ಓದುಗರ ಪತ್ರ: ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿ

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯಲು ಪ್ರತಿ ವರ್ಷ ಆಷಾಢ ಮಾಸದ ಶುಕ್ರವಾರಗಳಂದು…

24 hours ago