ಮೈಸೂರು : ‘ಆಂದೋಲನ’ ದಿನಪತ್ರಿಕೆ ಅಪ್ಪಾಜಿಯ ಕನಸಿನ ಕೂಸು. ಅವರ ಅವಿರತ ಪರಿಶ್ರಮದ ಫಲ. ಸಮಾನ ಮನಸ್ಕ ಸಮಾಜವಾದಿ ಗೆಳೆಯರ ಒತ್ತಾಸೆಯ ಫಲಿತಾಂಶ. ಪತ್ರಿಕೆ ಮತ್ತು ಹೋರಾಟವೇ ಅವರ ಜೀವನ ಧರ್ಮವಾಗಿತ್ತು. ಪತ್ರಿಕೆಯನ್ನು ಎಂದೂ ಅವರು ಉದ್ಯಮದಂತೆ ಪರಿಗಣಿಸಿದ್ದೇ ಇಲ್ಲ . ಅದು ಹೋರಾಟದ ಮಾಧ್ಯಮವಾಗಿ, ದನಿಯಿಲ್ಲದವರ ದನಿಯಾಗಿ ಇರಬೇಕೆಂದು ಬಯಸಿದ್ದರು ಎಂದು ‘ಆಂದೋಲನ’ ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ತಿಳಿಸಿದರು.
‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ೨೪ರ ಹರೆಯದಲ್ಲೇ ಆಂದೋಲನ ವಾರಪತ್ರಿಕೆಯನ್ನು ಪ್ರಾರಂಭ ಮಾಡುವ ಸಾಹಸವನ್ನು ಮಾಡಿದರು. ನಂತರ ಅವರ ಕನಸುಗಳ ಮೂಟೆಯನ್ನು ಹೊತ್ತುಕೊಂಡು ಮೈಸೂರಿಗೆ ಬಂದು ‘ಆಂದೋಲನ’ ದಿನಪತ್ರಿಕೆಯಾಗಿ ಈಗ ೫೦ ವರ್ಷಗಳನ್ನು ಪೂರೈಸಿದೆ. ನಿಷ್ಠುರವಾಗಿ ಬರೆಯಬೇಕಾದ ಸಂದರ್ಭದಲ್ಲಿ ಹಿಂಜರಿಯುತ್ತಿರಲಿಲ್ಲ. ಸತ್ಯ, ನಿಖರ, ನಿಷ್ಪಕ್ಷಪಾತ ಸುದ್ದಿಗಳನ್ನು ನೀಡಲು ಸದಾ ಪ್ರಾಮಾಣಿಕ ಪ್ರಯತ್ನ ಮಾಡಿ ಅನೇಕ ಬಾರಿ ಆ ಕಾರಣಕ್ಕಾಗಿ ನಷ್ಟವನ್ನು ಅನುಭವಿಸಿದ್ದಾರೆ. ಅಪ್ಪಾಜಿಯ ಗುರಿ, ಎದೆಗುಂದದೆ ಸಾಧಿಸುವ ಛಲ, ರಾಜಿ ಇಲ್ಲದ ವೃತ್ತಿಪರತೆ, ಕಠಿಣ ಪರಿಶ್ರಮ ‘ಆಂದೋಲ’ ನದ ಈ ಯಶಸ್ಸಿನ ಕಥೆಯನ್ನು ನಿರ್ಮಿ ಸಿದೆ. ಅಪ್ಪಾಜಿಯ ಸಿದ್ಧಾಂತಗಳು ಜಾಗೃತಪ್ರಜ್ಞೆಯಾಗಿ ಸದಾ ನಮ್ಮೊಂದಿಗಿವೆ ಎಂದು ನೆನೆದರು.
‘ಆಂದೋಲನ’ದ ೫೦ ವರ್ಷಗಳ ಈ ಸಾರ್ಥಕ ಪಯಣದಲ್ಲಿ ನಮ್ಮ ಓದುಗರು, ಅನೇಕ ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು ಹೆಗಲು ನೀಡಿದ್ದೀರಿ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕಂತೆ ಪತ್ರಿಕಾ ಕ್ಷೇತ್ರದ ಬದಲಾವಣೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೊಸ ಸ್ವರೂಪಗಳೊಂದಿಗೆ ‘ಆಂದೋಲನ’ ಮುಂದುವರಿಯುತ್ತಿದೆ. ಮುಂದೆಯೂ ಮತ್ತಷ್ಟು ಹೊಸತನಗಳಿಗೆ ತೆರೆದುಕೊಳ್ಳಲು ಬದ್ಧವಾಗಿದೆ.
ಅಪ್ಪಾಜಿ ಆಶಯಗಳನ್ನು, ಕನಸುಗಳನ್ನು ಪತ್ರಿಕೆಯ ಮೂಲಕ ಜೀವಂತವಾಗಿಡಬೇಕೆಂಬುದೇ ಇಡೀ ‘ಆಂದೋಲನ’ ಬಳಗದ ಅಭಿಲಾಷೆಯಾಗಿದೆ ಎಂದು ಹೇಳಿದರು.
ವಿಜಯಪುರ : ಭಾರೀ ಗಾಳಿ ಮತ್ತು ಮಳೆಯಿಂದಾಗಿ ಹಳೆಯ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ದುರ್ಮರಣವನ್ನಪ್ಪಿದ ಘಟನೆ…
ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ 64ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಶುಭ ಹಾರೈಸಲು ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳ ದಂಡೇ…
ನವದೆಹಲಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ಗೆ ಸುಪ್ರೀಂ ಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗಿದ್ದು, ಇನ್ನು ಒಂದು…
ನವದೆಹಲಿ : ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ‘ನೀಟ್-ಯುಜಿ 2026’ ವೈದ್ಯಕೀಯ ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ ಜೂನ್…
ಉತ್ಸವಗಳ ಉತ್ಸವ ಎಂದೇ ಪ್ರತೀತಿ ಪಡೆದಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವ ಫ್ರಾನ್ಸ್ನ ಕಾನ್ನದು. ಇದೀಗ ಮೊನ್ನೆ ಅದರ ೭೯ನೇ ಆವೃತ್ತಿಗೆ ಚಾಲನೆ…
ಎಚ್.ಎಸ್.ದಿನೇಶ್ ಕುಮಾರ್ ಮೈಸೂರು : ಕಳೆದ ವರ್ಷ ಗಗನಕ್ಕೇರಿದ್ದ ತೆಂಗಿನಕಾಯಿ ಬೆಲೆ ಇದೀಗ ಶೇ. ೫೦ರಷ್ಟು ದರ ಇಳಿದಿದೆ. ಇದರಿಂದಾಗಿ…