ಆಂದೋಲನ 50

ಜಾತಿ, ಧರ್ಮದ ಕಾಲಂನಲ್ಲಿ ‘ಮಾನವೀಯ’ ಅಂತ ಬರೆಸಲೇ… ಎಂದಿದ್ದರು!

ಪರಮಶಿವ ನಡುಬೆಟ್ಟ, ಸಾಹಿತಿ

ಆಂದೋಲನ’ ಪತ್ರಿಕೆಯ ಪ್ರಾರಂಭದಲ್ಲಿ ಕರಡು ಪ್ರತಿ ತಿದ್ದುವುದು, ಅಂಚೆಗೆ ಹೋಗುವ ಪ್ರತಿಗಳಿಗೆ ವಿಳಾಸ ಬರೆಯುವುದನ್ನೂ ಮಾಡುತ್ತಿದ್ದೆ. ಹಲವು ಕಾರ್ಯಕ್ರಮಗಳಿಗೆ ಹೋದಾಗ ಅದರ ವರದಿಯನ್ನು ಬರೆದು ಕಳುಹಿಸುತ್ತಿದ್ದೆ. ವರದಿಯನ್ನು ಓದಿ ‘ನೀವು ಪತ್ರಿಕೆಯಲ್ಲಿ ಕೆಲಸ ಮಾಡಿದವರು, ಚೆನ್ನಾಗಿ ವರದಿ ಮಾಡಬಲ್ಲಿರಿ’ ಎಂದು ಬೆನ್ನು ತಟ್ಟುತ್ತಿದ್ದರು. ‘ಆಂದೋಲನ’ದಲ್ಲಿ ಪ್ರಕಟವಾಗುತ್ತಿದ್ದ ಆಡಳಿತಶಾಹಿಗಳಿಂದ ಆಗುವ ಶೋಷಣೆ, ಸಾಮಾಜಿಕ ದೌರ್ಜನ್ಯ, ಸರ್ಕಾರದ ನ್ಯೂನತೆಯ ಸತ್ಯನಿಷ್ಠ ವರದಿಗಳು ಜನಸಾಮಾನ್ಯರಿಗೆ ಮೆಚ್ಚುಗೆಯಾದವು. ಅಂದಿನಿಂದಲೂ ಕೋಟಿಯವರ ಪತ್ರಿಕೆ ರಾಜ್ಯ ಮಟ್ಟದ ಪತ್ರಿಕೆಯಷ್ಟೇ ಪ್ರಸಿದ್ಧವಾಯಿತು.
ಜಾತಿ, ಧರ್ಮದ ಬಗ್ಗೆ ಖೇದ ವ್ಯಕ್ತಪಡಿಸುತ್ತಿದ್ದ ಕೋಟಿಯವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿ, ಧರ್ಮದ ಕಾಲಮಿನ ಬಗ್ಗೆ ನೊಂದುಕೊಂಡರು. ಚಾಮುಂಡಿಬೆಟ್ಟದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ‘ಕುಸುಮ ಬಾಲೆ’ ರಂಗರೂಪಕ್ಕಿಳಿಸಲು ಹೆಗಲಾಗಿದ್ದ ಕೋಟಿ ನನ್ನ ಜೊತೆ ಅದನ್ನು ವ್ಯಕ್ತಪಡಿಸುತ್ತ, ಆ ಕಾಲಮಿನಲ್ಲಿ ಜಾತಿ, ಧರ್ಮ ‘ಮಾನವೀಯ’ ಎಂದು ಬರೆಯಲೇ ಎಂದದ್ದು ಅವರಿಗೆ ಜಾತಿ, ಧರ್ಮದಲ್ಲಿ ನಂಬಿಕೆ ಇರಲಿಲ್ಲ ಎಂಬುದನ್ನು ತೋರುತ್ತದೆ.
ಕತೆಗಾರನಾದ ನನಗೆ ನಮ್ಮ ಆಂದೋಲನ’ ಪತ್ರಿಕೆಯಲ್ಲಿ ಸಾಪ್ತಾಹಿಕ ವಿಭಾಗವನ್ನು ಏಕೆ ಆರಂಭಿಸಬಾರದು? ಆ ಮೂಲಕ ಉದಯೋನ್ಮುಖ ಬರಹಗಾರರಿಗೆ ಆಸರೆಯಾಗಬಾರದೇಕೆ ಎಂಬೆಲ್ಲ ಚಿಂತನೆಗಳು ಬಂದು, ಕೋಟಿಯವರ ಜೊತೆ ಇದನ್ನೂ ಚರ್ಚಿಸಿದೆ. ಅವರ ಬೆನ್ನಿಗಿದ್ದ ಬರಹಗಾರರ ಸಲಹೆ ಪಡೆದು ಅದನ್ನೂ ಆರಂಭಿಸಿದರು. ಇಂದು ಸಾಪ್ತಾಹಿಕ ವಿಭಾಗ ರಾಜ್ಯ ಮಟ್ಟದ ಯಾವ ಪತ್ರಿಕೆಗೂ ಕಡಿಮೆ ಇಲ್ಲದಂತೆ ಮೂಡಿಬುರುತ್ತಿರುವುದು ಹೆಮ್ಮೆಯ ಸಂಗತಿ.

andolanait

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

2 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

2 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

3 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

4 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

4 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

4 hours ago