–ಪರಮಶಿವ ನಡುಬೆಟ್ಟ, ಸಾಹಿತಿ
ಆಂದೋಲನ’ ಪತ್ರಿಕೆಯ ಪ್ರಾರಂಭದಲ್ಲಿ ಕರಡು ಪ್ರತಿ ತಿದ್ದುವುದು, ಅಂಚೆಗೆ ಹೋಗುವ ಪ್ರತಿಗಳಿಗೆ ವಿಳಾಸ ಬರೆಯುವುದನ್ನೂ ಮಾಡುತ್ತಿದ್ದೆ. ಹಲವು ಕಾರ್ಯಕ್ರಮಗಳಿಗೆ ಹೋದಾಗ ಅದರ ವರದಿಯನ್ನು ಬರೆದು ಕಳುಹಿಸುತ್ತಿದ್ದೆ. ವರದಿಯನ್ನು ಓದಿ ‘ನೀವು ಪತ್ರಿಕೆಯಲ್ಲಿ ಕೆಲಸ ಮಾಡಿದವರು, ಚೆನ್ನಾಗಿ ವರದಿ ಮಾಡಬಲ್ಲಿರಿ’ ಎಂದು ಬೆನ್ನು ತಟ್ಟುತ್ತಿದ್ದರು. ‘ಆಂದೋಲನ’ದಲ್ಲಿ ಪ್ರಕಟವಾಗುತ್ತಿದ್ದ ಆಡಳಿತಶಾಹಿಗಳಿಂದ ಆಗುವ ಶೋಷಣೆ, ಸಾಮಾಜಿಕ ದೌರ್ಜನ್ಯ, ಸರ್ಕಾರದ ನ್ಯೂನತೆಯ ಸತ್ಯನಿಷ್ಠ ವರದಿಗಳು ಜನಸಾಮಾನ್ಯರಿಗೆ ಮೆಚ್ಚುಗೆಯಾದವು. ಅಂದಿನಿಂದಲೂ ಕೋಟಿಯವರ ಪತ್ರಿಕೆ ರಾಜ್ಯ ಮಟ್ಟದ ಪತ್ರಿಕೆಯಷ್ಟೇ ಪ್ರಸಿದ್ಧವಾಯಿತು.
ಜಾತಿ, ಧರ್ಮದ ಬಗ್ಗೆ ಖೇದ ವ್ಯಕ್ತಪಡಿಸುತ್ತಿದ್ದ ಕೋಟಿಯವರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಜಾತಿ, ಧರ್ಮದ ಕಾಲಮಿನ ಬಗ್ಗೆ ನೊಂದುಕೊಂಡರು. ಚಾಮುಂಡಿಬೆಟ್ಟದಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ನನಗೆ ‘ಕುಸುಮ ಬಾಲೆ’ ರಂಗರೂಪಕ್ಕಿಳಿಸಲು ಹೆಗಲಾಗಿದ್ದ ಕೋಟಿ ನನ್ನ ಜೊತೆ ಅದನ್ನು ವ್ಯಕ್ತಪಡಿಸುತ್ತ, ಆ ಕಾಲಮಿನಲ್ಲಿ ಜಾತಿ, ಧರ್ಮ ‘ಮಾನವೀಯ’ ಎಂದು ಬರೆಯಲೇ ಎಂದದ್ದು ಅವರಿಗೆ ಜಾತಿ, ಧರ್ಮದಲ್ಲಿ ನಂಬಿಕೆ ಇರಲಿಲ್ಲ ಎಂಬುದನ್ನು ತೋರುತ್ತದೆ.
ಕತೆಗಾರನಾದ ನನಗೆ ನಮ್ಮ ಆಂದೋಲನ’ ಪತ್ರಿಕೆಯಲ್ಲಿ ಸಾಪ್ತಾಹಿಕ ವಿಭಾಗವನ್ನು ಏಕೆ ಆರಂಭಿಸಬಾರದು? ಆ ಮೂಲಕ ಉದಯೋನ್ಮುಖ ಬರಹಗಾರರಿಗೆ ಆಸರೆಯಾಗಬಾರದೇಕೆ ಎಂಬೆಲ್ಲ ಚಿಂತನೆಗಳು ಬಂದು, ಕೋಟಿಯವರ ಜೊತೆ ಇದನ್ನೂ ಚರ್ಚಿಸಿದೆ. ಅವರ ಬೆನ್ನಿಗಿದ್ದ ಬರಹಗಾರರ ಸಲಹೆ ಪಡೆದು ಅದನ್ನೂ ಆರಂಭಿಸಿದರು. ಇಂದು ಸಾಪ್ತಾಹಿಕ ವಿಭಾಗ ರಾಜ್ಯ ಮಟ್ಟದ ಯಾವ ಪತ್ರಿಕೆಗೂ ಕಡಿಮೆ ಇಲ್ಲದಂತೆ ಮೂಡಿಬುರುತ್ತಿರುವುದು ಹೆಮ್ಮೆಯ ಸಂಗತಿ.
ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ ವರ್ಷದ ಕೊನೆಯ ವಾರ ತೆರೆಗೆ ಬಂದಿರುವ ಚಿತ್ರಗಳಲ್ಲಿ ಒಂದು ‘ಮಾರ್ಕ್’. ಚಿತ್ರದ ಮುಖ್ಯ ಪಾತ್ರ ಮಾರ್ಕಾಂಡೇಯ…
2025ರಲ್ಲಿ ವಿಧಿವಶರಾದ ಗಣ್ಯರ ಮಾಹಿತಿ ಜನವರಿ... ನಾ.ಡಿಸೋ’ಜಾ: ಕನ್ನಡದ ಪ್ರಸಿದ್ಧ ಬರಹಗಾರ ಮತ್ತು ಕಾದಂಬರಿಕಾರ ನಾ ಡಿ’ಸೋಜಾ ಅವರು ಜನವರಿ…
ಎಚ್.ಎಸ್.ದಿನೇಶ್ಕುಮಾರ್ ಮೈಸೂರು: ಸರ್ಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುವವರು ಎಚ್ಚರಿಕೆ ವಹಿಸಿದಲ್ಲಿ ನಡೆಯ ಬಹುದಾದ ವಂಚನೆಗಳನ್ನು ಹೇಗೆ ತಪ್ಪಿಸಬಹುದು ಎಂಬುದಕ್ಕೆ ವಿಧಾನಪರಿಷತ್…
ಮೈಸೂರು : ಪ್ರವಾಸಿಗರ ದಂಡೇ ನೆರೆಯುತ್ತಿದ್ದ ಸ್ಥಳದಲ್ಲೇ ಹೀಲಿಯಂ ಬಲೂನ್ಗಾಗಿ ಬಳಸುತ್ತಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ,…
ಕೆ.ಆರ್.ಪೇಟೆ : ರಸ್ತೆಯಲ್ಲಿ ರಾಗಿ ಒಕ್ಕಣೆ ಮಾಡುತ್ತಿದ್ದ ಸಂದರ್ಭದಲ್ಲಿ ರಾಗಿಯ ಮೇಲೆ ಕಾರು ಚಲಿಸಿದಾಗ ಕಾರು ಮಗುಚಿ ಬಿದ್ದ ಪರಿಣಾಮ…
ಮೈಸೂರು : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ವಿಜಯನಗರದ ಕೊಡವ…