ಆಂದೋಲನ 50

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 4

 

ನನ್ನ ೧೮ ವರ್ಷಗಳ ಪರಿಸರ ರಕ್ಷಣೆಯ ಹೋರಾಟದ ಬೆನ್ನೆಲುಬಾಗಿ ನಿಂತ ಪತ್ರಿಕೆ ಎಂದರೆ ಅದು ‘ಆಂದೋಲನ’. ಅಂದಿನ ಕಾಲದಿಂದಲೂ ರಾಜಶೇಖರ ಕೋಟಿಯವರು ನಮ್ಮ ಪ್ರೋತ್ಸಾಹಕ್ಕೆ ನಿಂತ ಪರಿಣಾಮ ನಾವು ಇಂದು ಪರಿಸರವಾದಿಗಳು ಎಂದು ಗುರುತಿಸಿಕೊಳ್ಳಲು ಸಾಧ್ಯವಾಯಿತು. ತನ್ನ ಪ್ರಗತಿಪರ ಆಶಯಗಳೊಂದಿಗೆ ‘ಆಂದೋಲನ’ ರಾಜ್ಯ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಲಿ – ಭಾನು ಮೋಹನ್, ಪರಿಸರ ವಾದಿ.

‘ಆಂದೋಲನ ೫೦ ಸಾರ್ಥಕ ಪಯಣ’ ನಮ್ಮ ಕಾರ್ಯಕ್ರಮ ಎಂದು ಭಾವಿಸಿದ್ದೇನೆ. ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲ ಪತ್ರಿಕೆಗಳ ಪುನಶ್ಚೇತನಕ್ಕೆ ಬೇಕಾದ ಕಾರ್ಯಕ್ರಮ. ಈ ಕಾರ್ಯಕ್ರಮ ‘ಆಂದೋಲನ’ ಮುಂದಿನ ಮೆಟ್ಟಿಲುಗಳನ್ನು ಹತ್ತಲು ಮತ್ತು ಅಲ್ಲಿ ಕೆಲಸ ಮಾಡುವ ಸಾಮಾಜಿಕ ಸ್ಥೈರ್ಯವನ್ನು ನೀಡಿದೆ. ಮುದ್ರಣ ಮಾಧ್ಯಮಗಳು ಬಹಳ ಸಂಕಷ್ಟದಲ್ಲಿ ಇರುವ ಈ ದಿನಗಳಲ್ಲಿ ‘ಆಂದೋಲನ’ ಪತ್ರಿಕೆ ಪ್ರವರ್ಧಮಾನಕ್ಕೆ ಬರಲಿ. -ಸ್ಟ್ಯಾನ್ಲಿ , ನಿರ್ದೇಶಕರು, ಒಡನಾಡಿ ಸೇವಾ ಸಂಸ್ಥೆ

‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ತುಂಬಾ ಅರ್ಥಪೂರ್ಣವಾಗಿ, ಯಶಸ್ವಿಯಾಗಿ ನೆರವೇರಿದ್ದು ತುಂಬಾ ಸಂತಸದ ವಿಷಯ. ರಾಜಶೇಖರ ಕೋಟಿ ಅವರ ಆಸೆ, ಆಶಯಗಳಿಗೆ ಅನುಗುಣವಾಗಿ ಕಾರ್ಯಕ್ರಮ ನಡೆದಿದೆ. ಶೋಷಿತರ, ಶ್ರಮಿಕರ ಹಾಗೂ ದಮನಿತರ ದನಿಯಾಗಿ ಸಮಾಜದ ಸ್ಪಷ್ಟ ಪ್ರತಿಬಿಂಬವಾಗಿ ಹೊರಬರುತ್ತಿರುವ ‘ಆಂದೋಲನ’ಕ್ಕೆ ಮತ್ತೊಮ್ಮೆ ಅಭಿನಂದನೆಗಳು. -ಡಾ.ಲತಾ ರಾಜಶೇಖರ್, ಕವಯಿತ್ರಿ

ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯದ ಭಾಗದಲ್ಲಿ ಚಾಲ್ತಿಯಲ್ಲಿ ಇರುವ ಪತ್ರಿಕೆ ‘ಆಂದೋಲನ’. ಆದರೆ, ರಾಜ್ಯ ಪತ್ರಿಕೆಗೆ ಸಮನಾಗಿದೆ. ಒಂದು ಪ್ರಾದೇಶಿಕ ಪತ್ರಿಕೆಯಾಗಿ ಜವಾಬ್ದಾರಿಯುತ ಮತ್ತು ಮಾನವೀಯತೆ ನೆಲೆಯಲ್ಲಿ ಪತ್ರಿಕೋದ್ಯಮ ಮಾಡುತ್ತಾ ಮೈಸೂರು ಭಾಗದ ಮನೆ-ಮನಗಳನ್ನು ತಲುಪಿದೆ. – ಆರ್.ಚೇತನ್, ಎಸ್.ಪಿ.ಮೈಸೂರು ಜಿಲ್ಲೆ

ರಾಜಶೇಖರ ಕೋಟಿ ಅವರ ಕಾಲದಿಂದ ಇಲ್ಲಿಯವರೆಗೂ ಪತ್ರಿಕೆಯೊಂದಿಗೆ ಉತ್ತಮ್ಮ ಒಡನಾಟವಿದೆ. ಪ್ರತಿಯೊಂದು ವಿಚಾರದಲ್ಲೂ ಆಂದೋಲನ ಬೆಂಬಲವಿತ್ತು. ‘ಆಂದೋಲನ ೫೦ ಸಾರ್ಥಕ ಪಯಣ’ ಕಾರ್ಯಕ್ರಮ ಪತ್ರಿಕೆಯ ಓದುಗರಲ್ಲಿ ಹೊಸ ಹುರುಪು ನೀಡಿದ್ದು, ಮುಂದಿನ ದಿನಗಳಲ್ಲಿ ಹೊಸತನದಿಂದ ಯಶಸ್ವಿಯಾಗಿ ಮುನ್ನಡೆಯಲಿ. -ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರಧಾನ ಕಾರ್ಯದರ್ಶಿ, ಜ್ಞಾನಬುತ್ತಿ ಸಂಸ್ಥೆ

ರಾಜಶೇಖರ ಕೋಟಿ ಅವರು ಯಾವುದೇ ಮುಲಾಜಿಗೆ ಒಳಗಾಗದ, ಪತ್ರಿಕೋದ್ಯಮವನ್ನೇ ಬದುಕು ಎಂದು ಅದಕ್ಕಾಗಿ ಜೀವನ ಸವೆಸಿದ ಸಾಧಕ. ಅವರು ಮೈಸೂರು ಭಾಗದಲ್ಲಿ ತಮ್ಮ ಅಮೂಲ್ಯವಾದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ‘ಆಂದೋಲನ ೫೦ ಸಾರ್ಥಕ ಪಯಣ’ದಲ್ಲಿ ಕೆಳ ವರ್ಗದ ಜನರಿಂದ ಹಿಡಿದು ಅನೇಕ ಗಣ್ಯರು ಭಾಗವಹಿಸಿದ್ದರು. ಇದು ಅವರು ನಡೆಸಿದ ಪತ್ರಿಕೋದ್ಯಮಕ್ಕೆ ಸಾಕ್ಷಿಯಾಗಿದೆ. – ನಾಗಣ್ಣ, ಸಂಪಾದಕ, ಪ್ರಜಾಪಗ್ರತಿ ದಿನಪತ್ರಿಕೆ

andolana

Recent Posts

ದಾವೂದ್‌ ಆಪ್ತ, ಡ್ರಗ್ಸ್‌ ಕಿಂಗ್‌ಪಿನ್‌ ಸಲೀಂ ಡೋಲಾ ಟರ್ಕಿಯಿಂದ ಭಾರತಕ್ಕೆ ಗಡಿಪಾರು

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಭೂಗತಪಾತಕಿ ಹಾಗೂ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ದಾವುದ್ ಇಬ್ರಾಹಿಂನ ಆಪ್ತ…

10 mins ago

ಮೈಸೂರಿನ ಚಲುವಾಂಬ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ ಮಿತಿಮೀರಿದ್ದು, ಕಳ್ಳನನ್ನು ಹಿಡಿಯಲು ಹೋದ ಜನರಿಗೆ ಚಾಕು ತೋರಿಸಿ ಪರಾರಿಯಾಗಿರುವ ಘಟನೆ…

31 mins ago

ವಿನಯ್‌ ಕುಲಕರ್ಣಿ ಮೇಲ್ಮನವಿ ಅರ್ಜಿ ವಿಚಾರಣೆ ಸ್ವೀಕರಿಸಿದ ಹೈಕೋರ್ಟ್‌

ಬೆಂಗಳೂರು: ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಶಾಸಕ…

49 mins ago

ಬೆಂಗಳೂರಿನ ಶ್ವಾಸತಾಣಗಳ ಸಂರಕ್ಷಣೆ, ಸಂವರ್ಧನೆಗೆ ಕ್ರಮ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ ರೂಪಿಸಲಾಗಿದ್ದು, ಇದರ…

57 mins ago

ಹನೂರು: ಪಿ.ಜಿ.ಪಾಳ್ಯ ಸಫಾರಿ ವೇಳೆ ಅಪರೂಪದ ಕರಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರು ಫುಲ್‌ ಖುಷ್‌

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯ ವಲಯ ವ್ಯಾಪ್ತಿಯಲ್ಲಿ ಸಫಾರಿ ವೇಳೆ…

2 hours ago

ಪಹಲ್ಗಾಮ್‌ ಮಾದರಿ ದಾಳಿ: ಇಬ್ಬರು ಹಿಂದೂಗಳಿಗೆ ಚಾಕು ಇರಿದ ದುಷ್ಕರ್ಮಿ

ಮುಂಬೈ: ನಿಮ್ಮ ಧರ್ಮ ಯಾವುದು ಎಂದು ಕೇಳಿ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ದೇಶದ ವಾಣಿಜ್ಯ…

2 hours ago