-ಸ.ರ.ಸುದರ್ಶನ
ಕನ್ನಡಪರ ಹೋರಾಟಗಾರರು
‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿಯವರು ನನಗೆ ನಿಕಟವಾಗಿದ್ದು ಗೋಕಾಕ್ ಚಳವಳಿಯಲ್ಲಿ. ಆ ಚಳವಳಿಯಲ್ಲಿ ಒಂದು ದಿನ ಆಗಿನ ಮುಖ್ಯಮಂತ್ರಿ ಗುಂಡೂರಾವ್ ವಿರುದ್ಧ ಪ್ರದರ್ಶನಕ್ಕೆ ತೀರ್ಮಾನಿಸಲಾಗಿತ್ತು. ಮಾನಸಗಂಗೋತ್ರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಸಭೆಯೊಳಗೆ ಸೇರಿದ ನಾವುಗಳು ಗುಂಡೂರಾವ್ ಬರುತ್ತಿದ್ದಂತೆ ಘೋಷಣೆ ಕೂಗಿ ಮುತ್ತಿಗೆ ಹಾಕಿದೆವು. ಆಗ ಪೊಲೀಸರು ನನ್ನನ್ನು ಎಳೆದುಕೊಂಡು ಹೋಗಿ ಒಂದು ವ್ಯಾನಿನೊಳಗೆ ದೂಡಿದರು. ನಾನು ಅದರೊಳಗಿನ ಆಸನದ ಮೇಲೆ ಕುಳಿತೆ. ಅಲ್ಲಿದ್ದ ಒಬ್ಬ ಪೇದೆ ನನ್ನನ್ನು ಕೆಳಗೆ ಕುಳಿತುಕೊಳ್ಳೋ ಎಂದು ಗದರಿಸಿದ. ಆಗ ನಾನೊಬ್ಬನೇ ವ್ಯಾನಿನೊಳಗೆ ಇದ್ದವನು. ಆ ವೇಳೆಗಾಗಲೇ ಘೋಷಣೆ ಕೂಗುತ್ತಿದ್ದಾಗ ಎತ್ತಿದ ಕೈ ಗೆ ಸೋಕಿದ ಲಾಠಿಯಿಂದ ಉರಿಯತೊಡಗಿತ್ತು. ಮತ್ತೆ ಹೊಡೆದಾನು ಎಂದು ಹೆದರಿ ಕೆಳಗೆ ಇಟ್ಟಿದ್ದ ಟೈರಿನ ಮೇಲೆ ಕುಳಿತೆ. ಆದರೆ ಅದು ನನ್ನ ಸ್ವಾಭಿಮಾನಕ್ಕೆ ಪೆಟ್ಟುಕೊಟ್ಟಿತ್ತು. ಆದರೆ ಅದೇ ಮೊದಲ ಸಲ ಪೊಲೀಸರ ಒಡನಾಟ. ಆ ಪೇದೆಯ ಮಾತು ಧಿಕ್ಕರಿಸಲು ಧೈರ್ಯ ಬರಲಿಲ್ಲ.
ಹತ್ತು ನಿಮಿಷಗಳ ನಂತರ ಘೋಷಣೆ ಕೂಗುತ್ತಿದ್ದ ಇನ್ನೊಬ್ಬ ಚಳವಳಿಗಾರನನ್ನು, ಪೊಲೀಸನೊಬ್ಬ ಕರೆತಂದು ವ್ಯಾನಿಗೆ ಹತ್ತಿಸಿದ. ಅವರೇ ರಾಜಶೇಖರ ಕೋಟಿ. ಅವರು ವ್ಯಾನಿನೊಳಗೆ ಬಂದಾಗ ನನಗೆ ನೂರು ಆನೆಬಲ ಬಂದಂತಾಯಿತು. ‘‘ನೋಡಿ ಕೋಟಿ, ಈ ಪೊಲೀಸ್ ನನ್ನನ್ನು ಆಸನದ ಮೇಲೆ ಕೂರಬೇಡ ಎನ್ನುತ್ತಾನೆ’’ ಎಂದೆ. ರೋಷಾವಿಷ್ಟರಾದ ಕೋಟಿ ಆತನನ್ನು ತರಾಟೆಗೆ ತೆಗೆದುಕೊಂಡರು. ಕೂತ್ಕೊಳ್ರಿ ಮೇಲೆ ಎಂದು ನನಗೆ ಹೇಳಿದರು.
ಸಾಮಾನ್ಯವಾಗಿ ಪತ್ರಕರ್ತರು ಹೋರಾಟದ ವರದಿಗಳನ್ನು ಮಾಡುತ್ತಾರೆ. ಆದರೆ ತಾವೇ ಭಾಗವಹಿಸುವುದಿಲ್ಲ. ಅದೇ ರೀತಿ ಕೆಲವು ದೊಡ್ಡ ಸಾಹಿತಿಗಳು ಲೇಖನ ಬರೆಯುವಲ್ಲಿ ಮಾತ್ರ ಸಕ್ರಿಯ ಹೋರಾಟಗಾರರಾಗಿದ್ದರು. ಆದರೆ ಕೋಟಿಯ ಅಂತರಾಳದ ಒಳಗಿದ್ದ ಹೋರಾಟಗಾರನೊಬ್ಬ ಅವರನ್ನು ಬೀದಿಗೆ ಎಳೆದು ತಂದಿದ್ದ. ಕೆಲವು ಹಿರಿಯ ಪತ್ರಕರ್ತರು ಅವರು ಸಕ್ರಿಯವಾಗಿ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದರು. ಆದರೆ ಕೋಟಿ ಅದಕ್ಕೆ ಸೊಪ್ಪು ಹಾಕಲಿಲ್ಲ.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯದ ಜನತೆಗೆ ಹಲವಾರು ಯೋಜನೆಗಳನ್ನು ಘೋಷಿಸಿದ್ದಾರೆ. ಬಡವರು, ರೈತರು, ಮಹಿಳೆಯರು, ವಿದ್ಯಾರ್ಥಿಗಳ…
ಶುಭಾ ಖಟಾವಕರ ಮ್ಹೆತ್ರಸ್ “ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ" ಎಂದು ಎಐನ ದೈತ್ಯ ಸಂಸ್ಥೆಯಾದ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ರಾಜ್ಯ ರಾಜಕೀಯದಲ್ಲಿ ೧೯೮೩ರ ರಾಜಕೀಯ ಸನ್ನಿವೇಶ ರೂಪುಗೊಳ್ಳುತ್ತಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಅಂದ ಹಾಗೆ…
ಎಂ.ಕೇಶವ ಎರಡು ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಕಂಗಾಲು; ಹಿರಿಯರು, ಮಹಿಳೆಯರು, ಸವಾರರಿಗೆ ಓಡಾಟವೇ ಸವಾಲು ಮೈಸೂರು: ಒಂದರ ಮೇಲೊಂದರಂತೆ ಎರಡು…
ಪ್ರಶಾಂತ್ ಎನ್.ಮಲ್ಲಿಕ್ ಸಾರ್ವಜನಿಕರಿಗೆ ತೊಂದರೆ ತಪ್ಪುತ್ತದೆ: ಸಮರ್ಥನೆ ಡಿಜೆಗೆ ಕಡಿವಾಣ ಸರಿಯಲ್ಲ: ಅಸಮಾಧಾನ ಮೈಸೂರು: ರಾಜ್ಯದಲ್ಲಿ ಗೌರಿ ಗಣೇಶ ಹಬ್ಬದ…
ಆರ್.ಶ್ರೀನಿವಾಸ್ ೪೦೦೦ ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿತ, ಕುಡಿಯುವ ನೀರಿಗೂ ಹಾಹಾಕಾರ ಕೆ.ಆರ್.ಪೇಟೆ: ಸುಮಾರು ೫೦ ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ…