ರಾಜ್ಯ

ಆರ್ಟ್‌ ಆಫ್‌ ಗೀವಿಂಗ್‌ನಲ್ಲಿ ಮಾನವೀಯತೆ ಮುಖ್ಯ : ಜಸ್ಟೀಸ್ ಸಂತೋಷ್ ಹೆಗಡೆ

ಬೆಂಗಳೂರು : ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ಮನೋಭಾವ ಬೆಳೆಸಿಕೊಂಡರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿಯ ವಾತಾವರಣ ನೆಲೆಗೊಳ್ಳಲಿದೆ ಎಂದು ಜಸ್ಟೀಸ್ ಎನ್.ಸಂತೋಷ್ ಹೆಗಡೆ ಹೇಳಿದರು.

ನಗರದ ಗಾಂಧಿ ಭವನದಲ್ಲಿ ನೆರೆಹೊರೆಯವರ ಜೊತೆ ಉತ್ತಮ ಬಾಂಧವ್ಯ ಹೊಂದುವ ಕುರಿತ ಘೋಷವಾಕ್ಯದಡಿ ಅಂತರರಾಷ್ಟ್ರೀಯ ಆರ್ಟ್ ಆಫ್ ಗೀವಿಂಗ್ ದಿನಾಚರಣೆ ಉದ್ಘಾಟಿಸಿ, ಜಾಗತಿಕ ಮಟ್ಟದಲ್ಲಿ ಸಮಾಜ ಸೇವೆ ಹಾಗೂ ಸಮಾಜದ ಪರಿವರ್ತನೆಗಾಗಿ ಮಾಜಿ ಲೋಕಸಭಾ ಸದಸ್ಯ ಹಾಗೂ ಕಿಟ್ [ಕೆಐಐಟಿ] ಮತ್ತು ಕಿಸ್ (ಕೆಐಎಸ್ಎಸ್) ವಿಶ್ವವಿದ್ಯಾಲಯಗಳ ಸ್ಥಾಪಕ ಅಚ್ಯುತ ಸಮಂತಾ ರಚಿಸಿರುವ ಕೃತಿ ಬಿಡುಗಡೆ ಮಾಡಿದರು.

ಬಳಿಕ ಬೆಂಗಳೂರಿನ ವಿವಿಧ ಭಾಗಗಳಿಂದ ಬಂದಿದ್ದ ಉತ್ತಮ ನೆರೆಹೊರೆಯವರನ್ನು ಸನ್ಮಾನಿಸಿ ಮಾತನಾಡಿದ ಅವರು, ಇದು ನಿಜಕ್ಕೂ ಅರ್ಥಪೂರ್ಣ ಮತ್ತು ಅತ್ಯಂತ ರಚನಾತ್ಮಕ ಕಾರ್ಯಕ್ರಮ. ಸಾರ್ವಜನಿಕರ ನಡುವೆ ಉತ್ತಮ ಒಡನಾಟವಿದ್ದರೆ ಸೌಹಾರ್ದತೆ ಮೂಡಲಿದೆ. ಆರ್ಟ್ ಆಫ್ ಗೀವಿಂಗ್ ನಲ್ಲಿ ಮಾನವೀಯತೆ ಅತ್ಯಂತ ಮುಖ್ಯ ಎಂದರು.

ಆರ್ಟ್ ಗೀವಿಂಗ್ ಉತ್ತಮ ಉದ್ದೇಶ ಹೊಂದಿದೆ. ಆದರೆ ಲಂಚ ಎಂಬುದು ಬಹುದೊಡ್ಡ ಪಿಡುಗು. ಹೀಗಾಗಿ ಲಂಚದ ವಿಚಾರದಲ್ಲಿ ಆರ್ಟ್ ಆಫ್ ಗೀವಿಂಗ್, ಆರ್ಟ್ ಆಫ್ ಟೇಕಿಂಗ್ ಎರಡೂ ಒಳ್ಳೆಯದಲ್ಲ. ಚೀನಾನದಲ್ಲಿ ಭ್ರಷ್ಟರಿಗೆ ಗಲ್ಲು ಶಿಕ್ಷೆ ಇದೆ. ಆದರೂ ಅಲ್ಲಿ ಭಾರತಕ್ಕಿಂತಲೂ ಹೆಚ್ಚು ಭ್ರಷ್ಟಾಚಾರವಿದೆ. ನಮ್ಮಲ್ಲಿ ಒಂದು ಭ್ರಷ್ಟಾಚಾರ ಪ್ರಕರಣ ಇತ್ಯರ್ಥವಾಗಲು ನ್ಯಾಯಾಲಯಗಳಲ್ಲಿ 45 ವರ್ಷ ತೆಗೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಕೆಲ ವರ್ಷಗಳ ಹಿಂದೆ ಹರೀಶ್ ನಂಜಪ್ಪ ಎಂಬುವರು ರಸ್ತೆ ಅಪಘಾತದಲ್ಲಿ ದೇಹ ಎರಡು ತುಂಡಾಗಿ ಬಿದ್ದಿದ್ದಾಗ ಯಾರೋಬ್ಬರೂ ಅವರಿಗೆ ಒಂದು ತೊಟ್ಟು ನೀರು ಕೊಟ್ಟು ಉಪಚರಿಸಲಿಲ್ಲ. ಸಾವಿನ ಜೊತೆ ಸೆಣಸಾಡುತ್ತಿರುವಾಗಲೂ ಹರೀಶ್ ನಂಜಪ್ಪ ಆಂಬ್ಯುಲೆನ್ಸ್ ನಲ್ಲಿ ತೆರಳುವಾಗ ನನ್ನ ಕಣ್ಣುಗಳನ್ನು ದಾನ ಮಾಡುವಂತೆ ಮನವಿ ಮಾಡುತ್ತಾನೆ. ಇದು ನಿಜವಾದ ಆರ್ಟ್ ಆಫ್ ಗೀವಿಂಗ್. ಆರ್ಟ್ ಆಫ್ ಗೀವಿಂಗ್ ನಂತಹ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಸಮಾಜ ಪ್ರೋತ್ಸಾಹಿಸಬೇಕು ಎಂದು ಜಸ್ಟೀಸ್ ಸಂತೋಷ್ ಹೆಗಡೆ ಹೇಳಿದರು.

ಅಂತಾರಾಷ್ಟ್ರೀಯ ಜಾನಪದ ಗಾಯಕಿ ಸವಿತ ಮಾತನಾಡಿ, ಆರ್ಟ್ ಆಫ್ ಗೀವಿಂಗ್ ಪರಿಕಲ್ಪನೆ ಸಾಕಾರಗೊಳ್ಳಲು ಹೃದಯವಂತಿಕೆ ಇರಬೇಕು. ನಮ್ಮ ನೆರೆ ಹೊರೆಯವರು, ತಿಳಿದಿರುವವರ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಆರ್ಥಿಕ ಸಹಾಯವೇ ಆಗಿರಬಹುದು, ಸಾಂತ್ವಾನ, ಅನುಕಂಪ ಇವೆಲ್ಲವೂ ಮನುಷ್ಯನ ಬದುಕಿನಲ್ಲಿ ಭಾರೀ ಬದಲಾವಣೆ ತರಲಿದೆ ಎಂದರು.

ಆರ್ಟ್ ಆಫ್ ಲೀವಿಂಗ್ ಸಂಸ್ಥೆಯ ರಾಜ್ಯಾಧ್ಯಕ್ಷ ಗುರುಪ್ರಸಾದ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೊಡ್ಡೇಗೌಡ ಅವರು ಕಿಟ್ [ಕೆಐಐಟಿ] ಮತ್ತು ಕಿಸ್ (ಕೆಐಎಸ್ಎಸ್) ವಿಶ್ವವಿದ್ಯಾಲಯಗಳ ಸ್ಥಾಪಕರಾದ ಅಚ್ಯುತ ಸಮಂತಾ ನಡೆದು ಬಂದ ಹಾದಿಯ ಕುರಿತು ಬೆಳಕು ಚೆಲ್ಲಿದರು. ಸಂಸ್ಥೆಯ ಸದಸ್ಯರಾದ ಮಮತಾ ಎನ್ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಆಂದೋಲನ ಡೆಸ್ಕ್

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

5 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

6 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

7 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

7 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

13 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

13 hours ago