ರಾಜ್ಯ

ಅದೇ ಆನೆ ಕೊಡಿ, ಪಳಗಿಸಿ ಅಂಬಾರಿ ಹೊರಿಸುತ್ತೇನೆ : ಮಾವುತ ವಿನು

ಹಾಸನ: ಮಾವುತ ವಿನು, ಕುಟುಂಬದವರನ್ನು ಬಿಟ್ಟು ಆನೆಯ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದುದು. ಈಗಷ್ಟೇ ಸಾವಿನ ನೋವಿನಿಂದ ಹೊರಬರುತ್ತಿರುವ ವಿನು ಸಂದರ್ಶನವೊಂದರಲ್ಲಿ ಚಿನ್ನನೆ ಹೋದ ಮೇಲೆ ಬಹಳ ನೋವಾಯಿತು. ಆದರೀಗ ಸ್ವಲ್ಪ ಪರವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮಾವುತ ವಿನುಗೆ ಅರ್ಜುನನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅರ್ಜುನ ಆನೆಯ 11ನೇ ದಿನದ ಪುಣ್ಯಸ್ಮರಣೆ ದಿನದಂದು ಕೂಡ ವಿನು ಕಣ್ಣೀರು ಹಾಕತ್ತಲೇ ಅರ್ಜುನನ ಸಮಾಧಿ ಬಳಿ ಬಂದು ‘ಅಪ್ಪಾ ನನ್ನ ಸ್ವಾಮಿಯನ್ನು ಏಳಸಪ್ಪಾ, ಎದ್ದೇಳಸಪ್ಪಾ…’ ಎಂದು ಬೇಡಿಕೊಳ್ಳುತ್ತಿದ್ದರು.

ಹಾಗೆಯೇ ಯಾರೂ ಏನೂ ನೋವು ಮಾಡಿಕೊಳ್ಳಬೇಡಿ ಎಂದು ವಿನು ನಾಡಿನ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೇಕಾದರೆ ಬಳ್ಳೆಯಲ್ಲಿ ಗೋರಿ ತರಹ ಏನಾದರೂ ಮಾಡೋಣ ಎಲ್ಲರೂ ಬಂದು ಅದರ ಆಶೀರ್ವಾದ ಪಡೆದುಹೋಗಿ ಎಂದಿದ್ದಾರೆ.

ನಾಡಿನ ಜನತೆಗೆ ಕಾಡುತ್ತಿರುವ ಪ್ರಶ್ನೆಯೆಂದರೆ ವಿನು ಅವರು ಮಂದೆ ಏನು ಮಾಡುತ್ತಾರೆ? ಅಂತ. ಅವರ ತಂದೆ ಜಮೀನ್ದಾರ ಆಗು ಅಂತ ಮೊದಲಿನಿಂದಲೂ ಹೇಳುತ್ತಿದ್ದಾರೆ. ಆದರೆ ವಿನು ಅವರು ಮಾತ್ರ ಅರ್ಜುನನನ್ನು ಕೊಂದ ಅದೇ ಆನೆ ಕೊಡಿ ಎಂದು ಕೇಳುತ್ತಿದ್ದಾರೆ.

ಹೌದು, ವಿನು ಅದನ್ನು ಪಳಗಿಸಿ ದಸರಾಗೆ ತರುವ ವ್ಯವಸ್ಥೆ ಮಾಡುತ್ತೇನೆ. ದಸರಾಗೆ ಬಂದು ಅದು ಕೂಡ ಅಂಬಾರಿ ಹೊರಬೇಕು. ಆ ತರಹ ವ್ಯವಸ್ಥೆ ಮಾಡುತ್ತೇನೆ. ಕಣ್ಣ ಮುಂದೆಯೇ ಹೊಡೆದಾಡಿದ್ದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅದೇ ಆನೆ ಬೇಕು. ನಾನು ಅದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

andolanait

Recent Posts

ಭಟ್ಕಳ ದುರಂತ | ಕಪ್ಪೆ ಚಿಪ್ಪು ಆರಿಸಲು ಹೋಗಿದ್ದ 8 ಮಂದಿ ಸಾವು!

ನದಿಗೆ ಇಳಿದು ಕೊಚ್ಚಿ ಹೋದ ಕುಟುಂಬ ಭಟ್ಕಳ : ಭಟ್ಕಳದಲ್ಲಿ ಚಪ್ಪೆಕಲ್ಲು ಆರಿಸಲು ಹೋಗಿದ್ದ ಒಂದೇ ಕುಟುಂಬದ 8 ಜನರು…

3 hours ago

ಬಲೂಚಿಸ್ತಾನ | ಸೇನಾ ಸಿಬ್ಬಂದಿ ಇದ್ದ ರೈಲು ಗುರಿಯಾಗಿಸಿ ಸ್ಫೋಟ ; 24 ಸಾವು

ಪೇಶಾವರ : ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ರೈಲನ್ನು ಗುರಿಯಾಗಿಸಿಕೊಂಡು ನಡೆಸಿದ ಸ್ಪೋಟದಲ್ಲಿ 24 ಮಂದಿ ಸಾವು ಸೇರಿದಂತೆ…

6 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ | ಜನಸಂಖ್ಯೆ ಏರುಪೇರು : ಆಂಧ್ರದ ನೀತಿ ಅನುಕರಣೀಯವೇ?

ದೇಶದ ಜನಸಂಖ್ಯೆಯಲ್ಲಾಗುತ್ತಿರುವ ಏರುಪೇರು ರಾಷ್ಟ್ರೀಯ ಜನಸಂಖ್ಯೆ ನಿರ್ವಹಣೆಯ ನೀತಿಯ ದಿಕ್ಕನ್ನೇ ಬದಲಿಸುತ್ತಿದೆ. ಉತ್ತರ ಭಾರತದ ಜನಸಂಖ್ಯೆ ಪ್ರಮಾಣ ಲಂಗು ಲಗಾಮಿಲ್ಲದೆ…

8 hours ago

ಮೆಲೊಡಿ ಖಾವೋ ; ಕುಚ್‌ ಜಾನ್‌ ಜಾವೋ!

ರಾಜಾರಾಂ ತಲ್ಲೂರು ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತಿಕ್ಕಿ ಮುಖ ತೊಳೆಯಬೇಕು ಎಂದು ದೇಶದ ಸಂವಿಧಾನದಲ್ಲಿ ಬರೆದಿದೆಯೇನ್ರಿ? . .…

8 hours ago

ಭಾನುವಾರದ ಹಾಡುಪಾಡು | ಈ ಮೋಹ, ಈ ಬಯಕೆ ಮತ್ತು ಇದೆಲ್ಲಾ ಯಾಕೆ ಹೀಗೆ?

ಮೋಹಿತ್‌ ಎಸ್‌ ಗೌಡ ನಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ‘ಲಿಂಗ ಬದಲಿಸಿ ಬರೆಯಿರಿ’ ಅಥವಾ ‘ವಿರುದ್ಧ ಪದ…

8 hours ago

ಭಾನುವಾರದ ಹಾಡುಪಾಡು | ಒಂದು ಸುಂದರ ಸಂಸಾರ ಮುರಿದುಹೋದ ಕಥೆ

ರೇಣುಕಾ ನಿಡಗುಂದಿ  ಕಾಲೇಜಿನ ದಿನಗಳಲ್ಲಿ ಅವರಿಬ್ಬರೂ ಭೇಟಿಯಾದಾಗಲೇ ಆಕೆ ತಾನು ಬೈ ( Bisexual) ಎಂದು ಹೇಳಿಕೊಂಡಿದ್ದಳು. ಹೊಸತಲೆಮಾರಿನ ಹುಡುಗ…

9 hours ago