ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ತಂಡದ ಅಂಡರ್-19 ವಿಭಾಗದ ನಾಯಕ ಡೇವಿಡ್ ಟೀಗರ್ ಅವರನ್ನು ಸೌಥ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ನಾಯಕನ ಸ್ಥಾನದಿಂದ ಕೆಳಗಿಳಿಸಿದೆ.
ಇಸ್ರೆಲ್ ಪರವಾಗಿ ಹೇಳಿಕೆ ನೀಡಿದ್ದರು ಎಂಬ ಹಿನ್ನಲೆ ಅವರನ್ನು ಯುದ್ಧ ವಿರೋಧಿ ಪ್ರತಿಭಟನಕಾರರು ಗುರಿಯಾಗಿಸಬಹುದು ಎಂಬ ಭೀತಿಯಲ್ಲಿ ಸಿಎಸ್ಎ ಶುಕ್ರವಾರ ಈ ಕ್ರಮವನ್ನು ತೆಗೆದುಕೊಂಡಿದೆ. ಆದರೆ, ಟೀಗರ್ ತಂಡದ ಸದಸ್ಯರಾಗಿ ಮುಂದುವರಿಯುವರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಟೀಗರ್ ಯಾವುದೇ ತಪ್ಪು ಮಾಡಿಲ್ಲ ಎಂದು ಈ ಹಿಂದೆ ತನಿಖಾ ಸಂಸ್ಥೆ ವರದಿ ನೀಡಿತ್ತು.
ಯಹೂದಿ ಸಾಧಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಟೀಗರ್,”ನಾನೀಗ ಅರಳುತ್ತಿರುವ ತಾರೆ. ಆದರೆ ಇಸ್ರೇಲ್ ನ ಯುವ ಸೈನಿಕರು ನಿಜವಾದ ಅರಳುತ್ತಿರುವ ತಾರೆಗಳು. ನಾನು ಈ ಪ್ರಶಸ್ತಿಯನ್ನು ಇಸ್ರೇಲ್ ದೇಶಕ್ಕೆ ಮತ್ತು ನಾವು ಶಾಂತಿಯಿಂದ ಬದುಕಲು ಸಾಧ್ಯವಾಗುವಂತೆ ಹೋರಾಟ ನಡೆಸುತ್ತಿರುವ ಪ್ರತಿಯೊಬ್ಬ ಸೈನಿಕನಿಗೆ ಅರ್ಪಿಸುತ್ತೇನೆ” ಎಂದು ಟೀಗರ್ ಹೇಳಿದ್ದರು.
ಇದಕ್ಕೆ ಫೆಲೆಸ್ತೀನ್ ಸಾಲಿಡಾರಿಟಿ ಅಲಯನ್ಸ್ (ಪಿಎಸ್ಎ) ಪ್ರತಿಭಟನೆ ವ್ಯಕ್ತಪಡಿಸಿತ್ತು. ಅದು ಕ್ರಿಕೆಟ್ ಆಟಗಾರನ ವಿರುದ್ಧ ದಕ್ಷಿಣ ಆಫ್ರಿಕ ಕ್ರೀಡಾ ಒಕ್ಕೂಟ ಮತ್ತು ಒಲಿಂಪಿಕ್ ಸಮಿತಿ (ಎಸ್ಎಎಸ್ಸಿಒಸಿ)ಗೆ ದೂರು ನೀಡಿತ್ತು. ಈ ಬಗ್ಗೆ ಸ್ವತಂತ್ರ ತನಿಖೆಯ ನಂತರ ಟೀಗರ್ರನ್ನು ದೋಷಮುಕ್ತಗೊಳಿಸಿದರು, ನಾಯಕತ್ವದಿಂದ ತೆಗೆಯಲಾಗಿದೆ.
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…
ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…
ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…
ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…
ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…
ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…