ಮುಂಬೈ : ಬಾಲಿವುಡ್-ಕ್ರಿಕೆಟ್ನ ಅತ್ಯಂತ ಚರ್ಚಿತ ಪ್ರೇಮಕಥೆಗೆ ಒಂದೇ ದಿನದಲ್ಲಿ ಎಲ್ಲವೂ ತಲೆಕೆಳಗಾಯಿತು! ನವೆಂಬರ್ 23ಕ್ಕೆ ಸಂಗ್ಲಿಯಲ್ಲಿ ಭರ್ಜರಿಯಾಗಿ ನಡೆಯಬೇಕಿದ್ದ ಸ್ಮೃತಿ ಮಂಧಾನ-ಪಲಾಸ್ ಮುಚ್ಛಲ್ ಮದುವೆಯನ್ನು ಕೇವಲ ಗಂಟೆಗಳ ಮೊದಲು ರದ್ದುಗೊಳಿಸಲಾಯಿತು. ಕಾರಣ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಮದುವೆಯ ದಿನವೇ ಗಂಭೀರ ಹೃದಯಾಘಾತ! ಆ ದಿನದಿಂದ ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ “ಮದುವೆ ರದ್ದಾ?”, “ಬ್ರೇಕಪ್ ಆಯ್ತಾ?” ಎಂಬ ಪ್ರಶ್ನೆಗಳ ಸುರಿಮಳೆ.
ಇದೇ ಮೊದಲ ಬಾರಿಗೆ, ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಲಾಸ್ ಮುಚ್ಛಲ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಕಪ್ಪು ಹೂಡಿ, ಕಪ್ಪು ಗಾಗಲ್ಸ್, ಮುಖದಲ್ಲಿ ಯಾವುದೇ ಭಾವವಿಲ್ಲದೆ, ಶಾಂತವಾಗಿ ನಡೆದು ಹೋದ ಆ ಒಂದು ನಿಮಿಷದ ವೀಡಿಯೋ ಈಗ ವೈರಲ್! ಪಪಾರಾಜಿಗಳು “ಪಲಾಸ್ ಭಾಯ್, ಏನಾಯ್ತು ಸರ್?” ಎಂದು ಕೂಗಿದರೂ ಅವರು ಸಣ್ಣ ನಗು ಮಾತ್ರ ಬೀರಿ ಸೈಲೆಂಟ್ ಆಗಿ ಕಾರಿಗೆ ಹತ್ತಿ ಹೊರಟರು. ಆ ಒಂದು ನೋಟದಲ್ಲಿ ಸಾವಿರ ಕಥೆಗಳು ಅಡಗಿವೆ ಎನ್ನುತ್ತಿವೆ ಸೋಶಿಯಲ್ ಮಿಡಿಯಾದ ಕಾಮೆಂಟ್ಗಳು.
ಇನ್ನೊಂದೆಡೆ ಸ್ಮೃತಿ ತಮ್ಮ ಇನ್ಸ್ಟಾಗ್ರಾಮ್ನಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ-ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪಲಾಸ್ ತನ್ನ ಪ್ರೊಫೈಲ್ನಲ್ಲಿ ಇನ್ನೂ ಸ್ಮೃತಿ ಜೊತೆಗಿನ ಪ್ರೀ-ವೆಡ್ಡಿಂಗ್ ಚಿತ್ರಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದಲೇ ಅಭಿಮಾನಿಗಳಿಗೆ “ಇವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ” ಎಂಬ ಭರವಸೆ ಮೂಡಿದೆ.
ಇದನ್ನು ಓದಿ: ಬುಮ್ರಾ, ಮಂದಾನಗೆ ಬಿಸಿಸಿಐ ಗೌರವ
ಆದರೆ ಟ್ವಿಸ್ಟ್ ಇಲ್ಲಿಗೆ ಮುಗಿಯಲಿಲ್ಲ! ರೆಡ್ಡಿಟ್ನಲ್ಲಿ ಪಲಾಸ್ಗೆ ಸಂಬಂಧಿಸಿದ ಕೆಲವು “ಚಾಟ್ ಸ್ಕ್ರೀನ್ಶಾಟ್ಗಳು” ಸೋರಿಕೆಯಾಗಿ ಬಾಂಬ್ ಸಿಡಿದಂತಾಗಿದೆ. ಡ್ಯಾನ್ಸ್ ಕೊರಿಯೋಗ್ರಾಫರ್, ಮಾಡೆಲ್ಗಳೊಂದಿಗಿನ ಸಂದೇಶಗಳು ಎಂದು ಹೇಳಲಾದ ಆ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ. ಆದರೆ ಪಲಾಸ್ ಕುಟುಂಬಸ್ಥರು “ಇದೆಲ್ಲ ಫೇಕ್, ದಯವಿಟ್ಟು ಗಾಸಿಪ್ಗೆ ಕಿವಿಗೊಡಬೇಡಿ” ಎಂದು ಕೋರಿದ್ದಾರೆ.
ಈ ನಡುವೆ ಆಸ್ಟ್ರೇಲಿಯಾದಿಂದ ವಾಪಸ್ ಬಂದ ಸ್ಮೃತಿಯ ಬೆಸ್ಟ್ ಫ್ರೆಂಡ್ ಜೆಮಿಮಾ ರಾಡ್ರಿಗೆಸ್ ನೇರವಾಗಿ ಸ್ಮೃತಿ ಮನೆಗೆ ತೆರಳಿ ಸ್ಮೃತಿಯನ್ನು ಆಲಿಂಗನ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಕ್ಷಣವಾಗಿ ಮಾರ್ಪಟ್ಟಿದೆ.
ಈಗ ಎಲ್ಲರ ಕಣ್ಣು ಒಂದೇ ಕಡೆ – ಈ ರೊಮಾಂಟಿಕ್-ಡ್ರಾಮಾಟಿಕ್ ಕಥೆಯ ಮುಂದೇನು? ಮದುವೆ ಮತ್ತೆ ನಡೆಯಲಿದೆಯೇ? ಎಂಬ ಸುದ್ದಿಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ರಾಮನಗರ: ಬೆಂಗಳೂರು ಮತ್ತು ಮೈಸೂರು ನಡುವೆ ನಿತ್ಯ ಸಂಚರಿಸುವ ಒಡೆಯರ್ ಎಕ್ಸ್ಪ್ರೆಸ್ ರೈಲಿಗೆ ಈಗ ರಾಮನಗರ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ…
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಟಿವಿಕೆ ಪಕ್ಷವು ಇದೀಗ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಚೆನ್ನೈನ ಪಣಿಯೂರಿನಲ್ಲಿರುವ…
ಬೆಂಗಳೂರು: ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಈ ಫಲಿತಾಂಶ ತುಂಬಾ ಆಶ್ಚರ್ಯಕರವಾಗಿದೆ ಎಂದು ಸಿಎಂ…
ಚೆನ್ನೈ: ಡಿಎಂಕೆ ಅಧ್ಯಕ್ಷ ಎಂ ಕೆ ಸ್ಟಾಲಿನ್ ಅವರಿಂದು ತಮಿಳುನಾಡು ಸಿಎಂ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಲೋಕಭವನದಲ್ಲಿರುವ…
ಮೈಸೂರು: ಸೂರ್ಯ ಉದಯಿಸುವ ಮುನ್ನವೇ ಮೈಸೂರಿನ ಉದಯಗಿರಿಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಉದಯಗಿರಿ ಪೊಲೀಸ್ ಠಾಣೆಯಿಂದ ಕೇವಲ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ರಾಮಾಪುರ ವ್ಯಾಪ್ತಿಯಲ್ಲಿ ಜಮೀನುಗಳಲ್ಲಿ ಇರುತ್ತಿದ್ದ ನೀರೆತ್ತುವ ಪಂಪ್ ಸೆಟ್ ಮೋಟಾರ್ಗಳನ್ನು…