ಮುಂಬೈ : ಬಾಲಿವುಡ್-ಕ್ರಿಕೆಟ್ನ ಅತ್ಯಂತ ಚರ್ಚಿತ ಪ್ರೇಮಕಥೆಗೆ ಒಂದೇ ದಿನದಲ್ಲಿ ಎಲ್ಲವೂ ತಲೆಕೆಳಗಾಯಿತು! ನವೆಂಬರ್ 23ಕ್ಕೆ ಸಂಗ್ಲಿಯಲ್ಲಿ ಭರ್ಜರಿಯಾಗಿ ನಡೆಯಬೇಕಿದ್ದ ಸ್ಮೃತಿ ಮಂಧಾನ-ಪಲಾಸ್ ಮುಚ್ಛಲ್ ಮದುವೆಯನ್ನು ಕೇವಲ ಗಂಟೆಗಳ ಮೊದಲು ರದ್ದುಗೊಳಿಸಲಾಯಿತು. ಕಾರಣ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಮದುವೆಯ ದಿನವೇ ಗಂಭೀರ ಹೃದಯಾಘಾತ! ಆ ದಿನದಿಂದ ಇಲ್ಲಿಯವರೆಗೆ ಸೋಷಿಯಲ್ ಮೀಡಿಯಾದಲ್ಲಿ “ಮದುವೆ ರದ್ದಾ?”, “ಬ್ರೇಕಪ್ ಆಯ್ತಾ?” ಎಂಬ ಪ್ರಶ್ನೆಗಳ ಸುರಿಮಳೆ.
ಇದೇ ಮೊದಲ ಬಾರಿಗೆ, ಸೋಮವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಪಲಾಸ್ ಮುಚ್ಛಲ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡರು. ಕಪ್ಪು ಹೂಡಿ, ಕಪ್ಪು ಗಾಗಲ್ಸ್, ಮುಖದಲ್ಲಿ ಯಾವುದೇ ಭಾವವಿಲ್ಲದೆ, ಶಾಂತವಾಗಿ ನಡೆದು ಹೋದ ಆ ಒಂದು ನಿಮಿಷದ ವೀಡಿಯೋ ಈಗ ವೈರಲ್! ಪಪಾರಾಜಿಗಳು “ಪಲಾಸ್ ಭಾಯ್, ಏನಾಯ್ತು ಸರ್?” ಎಂದು ಕೂಗಿದರೂ ಅವರು ಸಣ್ಣ ನಗು ಮಾತ್ರ ಬೀರಿ ಸೈಲೆಂಟ್ ಆಗಿ ಕಾರಿಗೆ ಹತ್ತಿ ಹೊರಟರು. ಆ ಒಂದು ನೋಟದಲ್ಲಿ ಸಾವಿರ ಕಥೆಗಳು ಅಡಗಿವೆ ಎನ್ನುತ್ತಿವೆ ಸೋಶಿಯಲ್ ಮಿಡಿಯಾದ ಕಾಮೆಂಟ್ಗಳು.
ಇನ್ನೊಂದೆಡೆ ಸ್ಮೃತಿ ತಮ್ಮ ಇನ್ಸ್ಟಾಗ್ರಾಮ್ನಿಂದ ಮದುವೆಗೆ ಸಂಬಂಧಿಸಿದ ಎಲ್ಲಾ ಫೋಟೋ-ವೀಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ. ಆದರೆ ಪಲಾಸ್ ತನ್ನ ಪ್ರೊಫೈಲ್ನಲ್ಲಿ ಇನ್ನೂ ಸ್ಮೃತಿ ಜೊತೆಗಿನ ಪ್ರೀ-ವೆಡ್ಡಿಂಗ್ ಚಿತ್ರಗಳನ್ನು ಇಟ್ಟುಕೊಂಡಿದ್ದಾರೆ. ಇದರಿಂದಲೇ ಅಭಿಮಾನಿಗಳಿಗೆ “ಇವರಿಬ್ಬರ ನಡುವೆ ಇನ್ನೂ ಪ್ರೀತಿ ಇದೆ” ಎಂಬ ಭರವಸೆ ಮೂಡಿದೆ.
ಇದನ್ನು ಓದಿ: ಬುಮ್ರಾ, ಮಂದಾನಗೆ ಬಿಸಿಸಿಐ ಗೌರವ
ಆದರೆ ಟ್ವಿಸ್ಟ್ ಇಲ್ಲಿಗೆ ಮುಗಿಯಲಿಲ್ಲ! ರೆಡ್ಡಿಟ್ನಲ್ಲಿ ಪಲಾಸ್ಗೆ ಸಂಬಂಧಿಸಿದ ಕೆಲವು “ಚಾಟ್ ಸ್ಕ್ರೀನ್ಶಾಟ್ಗಳು” ಸೋರಿಕೆಯಾಗಿ ಬಾಂಬ್ ಸಿಡಿದಂತಾಗಿದೆ. ಡ್ಯಾನ್ಸ್ ಕೊರಿಯೋಗ್ರಾಫರ್, ಮಾಡೆಲ್ಗಳೊಂದಿಗಿನ ಸಂದೇಶಗಳು ಎಂದು ಹೇಳಲಾದ ಆ ಚಿತ್ರಗಳು ಈಗ ಎಲ್ಲೆಡೆ ಹರಿದಾಡುತ್ತಿವೆ. ಆದರೆ ಪಲಾಸ್ ಕುಟುಂಬಸ್ಥರು “ಇದೆಲ್ಲ ಫೇಕ್, ದಯವಿಟ್ಟು ಗಾಸಿಪ್ಗೆ ಕಿವಿಗೊಡಬೇಡಿ” ಎಂದು ಕೋರಿದ್ದಾರೆ.
ಈ ನಡುವೆ ಆಸ್ಟ್ರೇಲಿಯಾದಿಂದ ವಾಪಸ್ ಬಂದ ಸ್ಮೃತಿಯ ಬೆಸ್ಟ್ ಫ್ರೆಂಡ್ ಜೆಮಿಮಾ ರಾಡ್ರಿಗೆಸ್ ನೇರವಾಗಿ ಸ್ಮೃತಿ ಮನೆಗೆ ತೆರಳಿ ಸ್ಮೃತಿಯನ್ನು ಆಲಿಂಗನ ಮಾಡಿದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಕ್ಷಣವಾಗಿ ಮಾರ್ಪಟ್ಟಿದೆ.
ಈಗ ಎಲ್ಲರ ಕಣ್ಣು ಒಂದೇ ಕಡೆ – ಈ ರೊಮಾಂಟಿಕ್-ಡ್ರಾಮಾಟಿಕ್ ಕಥೆಯ ಮುಂದೇನು? ಮದುವೆ ಮತ್ತೆ ನಡೆಯಲಿದೆಯೇ? ಎಂಬ ಸುದ್ದಿಗಳಿಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…
ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…
ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…
ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…
ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…
ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…