ಕ್ರೀಡೆ

ಇಡಿಐ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್​ಗಳ ಜಯ: ಭಾರತದೊಂದಿಗೆ ಈ ವಿಶ್ವದಾಖಲೆ ಹಂಚಿಕೊಂಡ ಜಿಂಬಾಬ್ವೆ

ಜಿಂಬಾಬ್ವೆ ತಂಡವು ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಜಿಂಬಾಬ್ವೆ ಐಸಿಸಿ ಏಕದಿನ ವಿಶ್ವಕಪ್​ ಕ್ವಾಲಿಫೈಯರ್​ ಟೂರ್ನಮೆಂಟ್​ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದೆ. ಮೊನ್ನೆ 2 ಬಾರಿಯ ವಿಶ್ವಚಾಂಪಿಯನ್​ ವಿಂಡೀಸ್​ಗೆ ಸೋಲುಣಿಸಿದ್ದ ಜಿಂಬಾಬ್ವೆ ಇದೀಗ ಯುಎಸ್​ ತಂಡದ ವಿರುದ್ಧ 304 ರನ್​ಗಳ ಜಯ ಸಾಧಿಸಿ ವಿಶ್ವದಾಖಲೆಗೆ ಪಾತ್ರವಾಗಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 300 ರನ್​ಗಳ ಅಂತರದಿಂದ ಜಯ ಸಾಧಿಸಿದ 2ನೇ ತಂಡ ಎನಿಸಿಕೊಂಡಿದೆ. ಭಾರತ ತಂಡ ಮಾತ್ರ ಏಕದಿನ ಕ್ರಿಕೆಟ್​ನಲ್ಲಿ 300 (317) ರನ್​ಗಳ ಅಂತರದ ಜಯ ಸಾಧಿಸಿದೆ.

ಇನ್ನೂ ಈ ಪಂದ್ಯಕ್ಕೆ ಬರುವುದಾದರೆ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿ 50 ಓವರ್​ಗಳಲ್ಲಿ 408 ರನ್ ​ಗಳಿಸಿತ್ತು. ಇದು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಜಿಂಬಾಬ್ವೆ ತಂಡದ ಮೊದಲ 400 ಪ್ಲಸ್​ ರನ್​ ಆಗಿದೆ.

ತಂಡದ ನಾಯಕ ಸೀನ್ ವಿಲಿಯಮ್ಸನ್​ 101 ಎಸೆತಗಳಲ್ಲಿ 174 ರನ್​ಗಳಿಸಿದರೆ, ಜೋಯ್ಲಾರ್ಡ್​ ಗುಮ್ಬೀ 78, ಸಿಕಂದರ್ ರಾಜಾ 48, ರಿಯಾನ್ ಬರ್ಲ್​ 47 ರನ್​ಗಳಿಸಿದ್ದರು. ಇದಕ್ಕುತ್ತರವಾಗಿ ಯುಎಸ್​ ತಂಡ ಕೇವಲ 104 ರನ್​ಗಳಿಗೆ ಸರ್ವಪತನಗೊಂಡಿತ್ತು. ರಿಚರ್ಡ್​ ನಗರವಾ 25ಕ್ಕೆ2, ಬ್ರಾಡ್ ಇವಾನ್ಸ್ 20ಕ್ಕೆ1, ರಾಜಾ 15ಕ್ಕೆ2, ಲ್ಯೂಕ್ ಜಾಂಗ್ವೆ 21ಕ್ಕೆ1 ಹಾಗೂ ಬರ್ಲ್​18ಕ್ಕೆ 1 ವಿಕೆಟ್ ಪಡೆದಿದ್ದರು.

ಇನ್ನು ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಗರಿಷ್ಠ ರನ್​ಗಳ ಅಂತರ ಜಯ ಸಾಧಿಸಿದ ಟಾಪ್ 5 ತಂಡಗಳನ್ನು ನೋಡುವುದಾದರೆ, ಭಾರತ 317ರನ್​ಗಳ ಜಯ vs ಶ್ರೀಲಂಕಾ, ಜಿಂಬಾಬ್ವೆ 304 ರನ್​ಗಳ ಜಯ vs ಅಮೆರಿಕಾ, ನ್ಯೂಜಿಲ್ಯಾಂಡ್​ 290ರನ್​ಗಳ ಜಯ vs ಐರ್ಲೆಂಡ್​, ಆಸ್ಟ್ರೇಲಿಯಾ 275 ರನ್​ಗಳ ಜಯ vs ಅಫ್ಭಾನಿಸ್ತಾನ, ದಕ್ಷಿಣ ಆಫ್ರಿಕಾ 272ರನ್​ಗಳ ಜಯ vs ಜಿಂಬಾಬ್ವೆ.

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

2 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

2 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

3 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

5 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

8 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

8 hours ago