ಕ್ರೀಡೆ

ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್: ಪಠಾಣ್ ತಂಡದ ವಿರುದ್ಧ ಹರ್ಭಜನ್‌ ಟೀಮ್‌ಗೆ 89 ರನ್‌ಗಳ ಜಯ

ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನ ಆರನೇ ಲೀಗ್‌ ಪಂದ್ಯ ನಿನ್ನೆ ( ನವೆಂಬರ್‌ 24 ) ಡೆಹ್ರಾಡೂನ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಹರ್ಭಜನ್‌ ಸಿಂಗ್‌ ನಾಯಕತ್ವದ ಟೈಗರ್ಸ್‌ ತಂಡ ಇರ್ಫಾನ್‌ ಪಠಾಣ್ ನಾಯಕತ್ವದ ಭಿಲ್ವಾರಾ ಕಿಂಗ್ಸ್‌ ತಂಡದ ವಿರುದ್ಧ 89 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಮಣಿಪಾಲ್‌ ಟೈಗರ್ಸ್‌ ತಂಡ 3 ವಿಕೆಟ್‌ ನಷ್ಟಕ್ಕೆ 211 ರನ್‌ ಕಲೆಹಾಕಿದರೆ, ಭಿಲ್ವಾರಾ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 122 ರನ್‌ ಕಲೆಹಾಕಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮಣಿಪಾಲ್‌ ಟೈಗರ್ಸ್‌ ತಂಡದ ಪರ ಆರಂಭಿಕರಾಗಿ ರಾಬಿನ್‌ ಉತ್ತಪ್ಪ ಹಾಗೂ ಚಡ್‌ವಿಕ್‌ ವಾಲ್ಟನ್‌ ಕಣಕ್ಕಿಳಿದರು. ಉತ್ತಪ್ಪ 30 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 2 ಬೌಂಡರಿ ಸಹಿತ 51 ನ್‌ ಬಾರಿಸಿದರೆ, ವಾಲ್ಟನ್‌ 55 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 9 ಬೌಂಡರಿ ಸಹಿತ ಭರ್ಜರಿ 104 ರನ್‌ ಬಾರಿಸಿದರು. ಇನ್ನುಳಿದಂತೆ ಹ್ಯಾಮಿಲ್ಟನ್ ಮಸಕಾಡ್ಜಾ 37, ತಿಸಾರಾ ಪೆರೆರಾ 6, ಕೊಲಿನ್‌ ಡಿ ಗ್ರಾಂಡ್‌ಹೋಮ್‌ ಅಜೇಯ 1 ಹಾಗೂ ಏಂಜೆಲೋ ಪೆರೆರಾ ಅಜೇಯ 3 ರನ್‌ ಬಾರಿಸಿದರು. ಭಿಲ್ವಾರಾ ಕಿಂಗ್ಸ್‌ ಪರ ಕ್ರಿಸ್ಟೋಫರ್‌ ಬಾರ್ನ್‌ವೆಲ್‌ 2 ಹಾಗೂ ರಾಹುಲ್‌ ಶರ್ಮಾ ಒಂದು ವಿಕೆಟ್‌ ಪಡೆದರು.

ಮಣಿಪಾಲ್‌ ಟೈಗರ್ಸ್‌ ನೀಡಿದ ಬೃಹತ್‌ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಭಿಲ್ವಾರಾ ಕಿಂಗ್ಸ್‌ ಪರ ತಿಲಕರತ್ನೆ ದಿಲ್‌ಶಾನ್‌ 26, ಸೊಲೊಮನ್‌ ಮೈರ್‌ 3, ಲೆಂಡ್ಲ್‌ ಸಿಮನ್ಸ್‌ ಡಕ್‌ಔಟ್‌, ರಾಬಿನ್‌ ಬಿಸ್ಟ್‌ 9, ಯೂಸುಫ್‌ ಪಠಾಣ್‌ ‌16, ಕ್ರಿಸ್ಟೋಫರ್‌ ಬಾರ್ನ್‌ವೆಲ್‌ 16, ಇರ್ಫಾನ್‌ ಪಠಾಣ್‌ 5, ಜೆಸಾಲ್‌ ಕಾರಿಯ 2, ಇಕ್ಬಾಲ್‌ ಅಬ್ದುಲ್ಲಾ ಅಜೇಯ 10 ಹಾಗೂ ಅನುರೀತ್‌ ಸಿಂಗ್‌ ಅಜೇಯ 18 ರನ್‌ ಗಳಿಸಿದರು. ಮಣಿಪಾಲ್‌ ಟೈಗರ್ಸ್‌ ತಂಡದ ಪರ ನಾಯಕ ಇಮ್ರಾನ್‌ ಖಾನ್‌ 3 ವಿಕೆಟ್‌, ಪರ್ವಿಂದರ್‌ ಅವಾನಾ 2 ವಿಕೆಟ್‌, ಮಿಚೆಲ್‌ ಮೆಕ್‌ಕ್ಲೆಗಾನ್‌, ಪ್ರವೀಣ್‌ ಗುಪ್ತಾ ಹಾಗೂ ಹರ್ಭಜನ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ತನ್ನ ಎರಡನೇ ಜಯವನ್ನು ಸಾಧಿಸಿದ ಮಣಿಪಾಲ್‌ ಟೈಗರ್ಸ್‌ ತಂಡ ಹೆಚ್ಚು ನೆಟ್‌ ರನ್‌ ರೇಟ್‌ ಪಡೆಯುವ ಮೂಲಕ ತನ್ನಷ್ಟೇ ಅಂಕ ಪಡೆದಿದ್ದ ಅರ್ಬನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

andolana

Recent Posts

ರಷ್ಯಾ ಮೇಲೆ ಉಕ್ರೇನ್‌ ಭೀಕರ ಡ್ರೋನ್‌ ದಾಳಿ: 4 ಮಂದಿ ಸಾವು

ಮಾಸ್ಕೋ: ಉಕ್ರೇನ್‌ ಶನಿವಾರ ರಾತ್ರೋರಾತ್ರಿ ಮಾಸ್ಕೋ ಸೇರಿದಂತೆ ರಷ್ಯಾದ ಅನೇಕ ಭಾಗಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ ದಾಳಿ ನಡೆಸಿದೆ. ಈ ವೈಮಾನಿಕ…

3 hours ago

ಮೈಸೂರಿನಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿದ ಕ್ಷೇತ್ರ ಎಂಬ ಖ್ಯಾತಿ ಹೊಂದಿರುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ನಡೆದ ಜನರೊಂದಿಗೆ ಜನತಾದಳ…

4 hours ago

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡ ಪರಿಣಾಮ ರಾಜ್ಯದ ಅನೇಕ ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

4 hours ago

ಕಳೆದ ಮೂರು ದಿನಗಳಿಂದ ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತದ ಮಂದಿ ಭಕ್ತರು ಭೇಟಿ

ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು : ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಮಲೆ…

4 hours ago

ಕಾಡಿನಲ್ಲಿ ಅಕ್ರಮವಾಗಿ ಚರ್ಚ್‌ ನಿರ್ಮಾಣ: 40ಕ್ಕೂ ಹೆಚ್ಚು ಜನರ ಬಂಧನ

ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಚರ್ಚ್‌ ಉದ್ಘಾಟನೆಗೆ ಬಂದಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ…

6 hours ago

ಹಾರ್ಮುಜ್‌ ದಾಟಿ ಸುರಕ್ಷಿತವಾಗಿ ಭಾರತಕ್ಕೆ ಬಂತು 20,000 ಟನ್‌ ಎಲ್‌ಪಿಜಿ ಟ್ಯಾಂಕರ್‌

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ…

6 hours ago