ಕ್ರೀಡೆ

ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್: ಪಠಾಣ್ ತಂಡದ ವಿರುದ್ಧ ಹರ್ಭಜನ್‌ ಟೀಮ್‌ಗೆ 89 ರನ್‌ಗಳ ಜಯ

ಪ್ರಸ್ತುತ ನಡೆಯುತ್ತಿರುವ ಲೆಜೆಂಡ್ಸ್‌ ಲೀಗ್‌ ಕ್ರಿಕೆಟ್‌ನ ಆರನೇ ಲೀಗ್‌ ಪಂದ್ಯ ನಿನ್ನೆ ( ನವೆಂಬರ್‌ 24 ) ಡೆಹ್ರಾಡೂನ್‌ನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಹರ್ಭಜನ್‌ ಸಿಂಗ್‌ ನಾಯಕತ್ವದ ಟೈಗರ್ಸ್‌ ತಂಡ ಇರ್ಫಾನ್‌ ಪಠಾಣ್ ನಾಯಕತ್ವದ ಭಿಲ್ವಾರಾ ಕಿಂಗ್ಸ್‌ ತಂಡದ ವಿರುದ್ಧ 89 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಮಣಿಪಾಲ್‌ ಟೈಗರ್ಸ್‌ ತಂಡ 3 ವಿಕೆಟ್‌ ನಷ್ಟಕ್ಕೆ 211 ರನ್‌ ಕಲೆಹಾಕಿದರೆ, ಭಿಲ್ವಾರಾ ಕಿಂಗ್ಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ ಕೇವಲ 122 ರನ್‌ ಕಲೆಹಾಕಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮಣಿಪಾಲ್‌ ಟೈಗರ್ಸ್‌ ತಂಡದ ಪರ ಆರಂಭಿಕರಾಗಿ ರಾಬಿನ್‌ ಉತ್ತಪ್ಪ ಹಾಗೂ ಚಡ್‌ವಿಕ್‌ ವಾಲ್ಟನ್‌ ಕಣಕ್ಕಿಳಿದರು. ಉತ್ತಪ್ಪ 30 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 2 ಬೌಂಡರಿ ಸಹಿತ 51 ನ್‌ ಬಾರಿಸಿದರೆ, ವಾಲ್ಟನ್‌ 55 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 9 ಬೌಂಡರಿ ಸಹಿತ ಭರ್ಜರಿ 104 ರನ್‌ ಬಾರಿಸಿದರು. ಇನ್ನುಳಿದಂತೆ ಹ್ಯಾಮಿಲ್ಟನ್ ಮಸಕಾಡ್ಜಾ 37, ತಿಸಾರಾ ಪೆರೆರಾ 6, ಕೊಲಿನ್‌ ಡಿ ಗ್ರಾಂಡ್‌ಹೋಮ್‌ ಅಜೇಯ 1 ಹಾಗೂ ಏಂಜೆಲೋ ಪೆರೆರಾ ಅಜೇಯ 3 ರನ್‌ ಬಾರಿಸಿದರು. ಭಿಲ್ವಾರಾ ಕಿಂಗ್ಸ್‌ ಪರ ಕ್ರಿಸ್ಟೋಫರ್‌ ಬಾರ್ನ್‌ವೆಲ್‌ 2 ಹಾಗೂ ರಾಹುಲ್‌ ಶರ್ಮಾ ಒಂದು ವಿಕೆಟ್‌ ಪಡೆದರು.

ಮಣಿಪಾಲ್‌ ಟೈಗರ್ಸ್‌ ನೀಡಿದ ಬೃಹತ್‌ ಗುರಿಯನ್ನು ಬೆನ್ನತ್ತಲು ಯತ್ನಿಸಿದ ಭಿಲ್ವಾರಾ ಕಿಂಗ್ಸ್‌ ಪರ ತಿಲಕರತ್ನೆ ದಿಲ್‌ಶಾನ್‌ 26, ಸೊಲೊಮನ್‌ ಮೈರ್‌ 3, ಲೆಂಡ್ಲ್‌ ಸಿಮನ್ಸ್‌ ಡಕ್‌ಔಟ್‌, ರಾಬಿನ್‌ ಬಿಸ್ಟ್‌ 9, ಯೂಸುಫ್‌ ಪಠಾಣ್‌ ‌16, ಕ್ರಿಸ್ಟೋಫರ್‌ ಬಾರ್ನ್‌ವೆಲ್‌ 16, ಇರ್ಫಾನ್‌ ಪಠಾಣ್‌ 5, ಜೆಸಾಲ್‌ ಕಾರಿಯ 2, ಇಕ್ಬಾಲ್‌ ಅಬ್ದುಲ್ಲಾ ಅಜೇಯ 10 ಹಾಗೂ ಅನುರೀತ್‌ ಸಿಂಗ್‌ ಅಜೇಯ 18 ರನ್‌ ಗಳಿಸಿದರು. ಮಣಿಪಾಲ್‌ ಟೈಗರ್ಸ್‌ ತಂಡದ ಪರ ನಾಯಕ ಇಮ್ರಾನ್‌ ಖಾನ್‌ 3 ವಿಕೆಟ್‌, ಪರ್ವಿಂದರ್‌ ಅವಾನಾ 2 ವಿಕೆಟ್‌, ಮಿಚೆಲ್‌ ಮೆಕ್‌ಕ್ಲೆಗಾನ್‌, ಪ್ರವೀಣ್‌ ಗುಪ್ತಾ ಹಾಗೂ ಹರ್ಭಜನ್‌ ಸಿಂಗ್‌ ತಲಾ ಒಂದೊಂದು ವಿಕೆಟ್‌ ಪಡೆದರು.

ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ತನ್ನ ಎರಡನೇ ಜಯವನ್ನು ಸಾಧಿಸಿದ ಮಣಿಪಾಲ್‌ ಟೈಗರ್ಸ್‌ ತಂಡ ಹೆಚ್ಚು ನೆಟ್‌ ರನ್‌ ರೇಟ್‌ ಪಡೆಯುವ ಮೂಲಕ ತನ್ನಷ್ಟೇ ಅಂಕ ಪಡೆದಿದ್ದ ಅರ್ಬನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

andolana

Recent Posts

ದ್ರಾಕ್ಷಿ ತೋಟ ನೋಡಲು ಮುಗಿಬಿದ್ದ ಜನರು

ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಗುಂಡ್ಲುಪೇಟೆ- ಕೇರಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕೇರಳ ಮೂಲದ ಅಶ್ರಫ್ ಎಂಬವರು ಮಾಡಿರುವ ಒಂದು…

20 hours ago

ಓದುಗರ ಪತ್ರ: ಎಲ್‌ಇಡಿ ಪರದೆ ಮೂಲಕ ಚಾಮುಂಡಿ ದರ್ಶನ ಮಾಡಿಸಿ

ಪ್ರತಿ ಆಷಾಢ ಶುಕ್ರವಾರಗಳಂದು ಚಾಮುಂಡಿ ಬೆಟ್ಟದಲ್ಲಿ ವಿಪರೀತ ಜನಸಂದಣಿ ಉಂಟಾಗುತ್ತಿದೆ. ಇದಕ್ಕೆ ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾಡಲ್ಪಟ್ಟ ಅವೈಜ್ಞಾನಿಕ ಮಾರ್ಪಾಡುಗಳೇ…

20 hours ago

ಓದುಗರ ಪತ್ರ: ಪಾಲಿಕೆ ಆಯುಕ್ತರಾದ ಎಂ.ಕೆ. ಸವಿತಾ ನಡೆ ಶ್ಲಾಘನೀಯ

ಈ ಬಾರಿಯ ಸ್ವಾತಂತ್ರೋತ್ಸವದ ಅಂಗವಾಗಿ ೮೦ ತ್ಯಾಜ್ಯ ಹಾಕುವ ತಾಣಗಳನ್ನು ಗುರುತಿಸಿ, ಸ್ವಾತಂತ್ರೋತ್ಸವ ಸ್ವಚ್ಛತಾ ಅಭಿಯಾನ ೨೦೨೬ರ ಪ್ರಯುಕ್ತ ೮೦…

20 hours ago

ಓದುಗರ ಪತ್ರ: ಏನೇ ಓದಿದ್ದರೂ ಬೇಕು ಪಿಸಿ ಹುದ್ದೆ !

ರಾಜ್ಯದಲ್ಲಿ ೩,೭೦೦ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಹುzಗಳಿಗೆ, ೩ ಲಕ್ಷದ ೭೭ ಸಾವಿರ ಅಭ್ಯರ್ಥಿಗಳು ಇದೇ ಭಾನುವಾರ ಲಿಖಿತ ಪರೀಕ್ಷೆ…

20 hours ago

ರವಿಯ ನೋಡ ಹೋಗಿ ಶಶಿಯ ಕಂಡುಬಂದೆ

ಭಾರತಿ ಬಿ ವಿ ವ್ಯಾಲಿ ಆಫ್ ಮಾನ್ಯುಮೆಂಟ್ಸ್‌ನ ಸನ್ ಸೆಟ್ ನೋಡಬೇಕು!’ ಹಾಗಂತ ಮಗ ಸಂದೀಪ್ ಗ್ರಾಂಡ್ ಕ್ಯಾನ್ಯನ್ ಹತ್ತಿರ…

20 hours ago

ಕಾರ್ಗಿಲ್ ಕಾಲದ ಸುಬೇದಾರ್ ಹೈದರ್ ಮೈಸೂರಿನಲ್ಲಿದ್ದಾರೆ

ಅಕ್ಷತಾ ಹೈದರ್ ಅವರ ಮುತ್ತಾತ ಎಂ.ಬುಡಾನ್ ಬೇಗ್ ಮೈಸೂರಿನ ಮಹಾರಾಜರ ಪದಾತಿ ದಳದಲ್ಲಿ ಸುಬೇ ದಾರ್ ಮೇಜರ್ ಆಗಿ ಕರ್ತವ್ಯ…

20 hours ago