ಕ್ರೀಡೆ

ಭಾರತ ಸೋಲುವ ಮೂಲಕ ಕ್ರಿಕೆಟ್‌ ಗೆದ್ದಿದೆ: ಅಬ್ದುಲ್‌ ರಝಾಕ್

ನವದೆಹಲಿ : ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯುದ್ದಕ್ಕೂ ಭಾರತ ವಿರೋದ್ಧ ಹಲವಾರು ಗಂಭೀರ ಆರೋಪಗಳನ್ನು ಪಾಕಿಸ್ತಾನ ಮಾಡುತ್ತಾ ಬರುತ್ತಿದೆ.

ಭಾರತ ಆತಿಥ್ಯ ವಹಿಸಿದ್ದ ಏಕದಿನ ವಿಶ್ವಕಪ್‌ 2023 ರಲ್ಲಿ ನೀರಸ ಪ್ರದರ್ಶನ ತೋರಿದ ಪಾಕಿಸ್ತಾನ ಲೀಗ್‌ ಹಂತದಲ್ಲಿ ಟೂರ್ನಿಯಿಂದ ಹೊರ ನಡೆದಿತ್ತು. ಇದರಿಂದ ಅಸಮಧಾನಗೊಂಡಿದ್ದ ಪಾಕ್‌ ಮಾಜಿ ಆಟಗಾರರು ಭಾರತ ವಿರುದ್ಧ ಒಂದಲ್ಲಾ ಒಂದು ಆರೋಪ ಮಾಡುತ್ತಲೇ ಬರುತ್ತಿದ್ದಾರೆ.

ಪಾಕ್‌ ಆಟಗಾರ ಹಸನ್‌ ರಾಜಾ ಭಾರತ ಆಟಗಾರರಿಗೆ ಬೇರೆ ಚೆಂಡು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಬಾಲಿವುಡ್‌ ನಟಿ ಐಶ್ವರ್ಯ ರೈನ್ನು ಮದುವೆಯಾಗಿ ಸುಂದರವಾದ ಮಗುವನ್ನು ಅವರಿಂದ ನಿರೀಕ್ಷಿಸಲು ಸಾಧ್ಯವೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಪಾಕ್‌ ಆಲ್‌ರೌಂಡರ್‌ ಅಬ್ದುಲ್‌ ರಝಾಕ್‌ ಇದೀಗ ಭಾರತ ವಿಶ್ವಕಪ್‌ ಸೋತಿದ್ದಕ್ಕೆ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ.

ಭಾರತ ವಿಶ್ವಕಪ್‌ ಆಡಲು ತಮಗೆ ಬೇಕಾದ ಹಾಗೆ ಪಿಚ್‌ ಕಂಡಿಷನ್‌ ಅನ್ನು ಬದಲಾಯಿಸಿಕೊಂಡಿದೆ. ಇದು ಭಾರತಕ್ಕೆ ಅನುಕೂಲವಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಜೊತೆಗೆ ಭಾರತ ತಂಡ ಏಕದಿನ ವಿಶ್ವಕಪ್‌ ಫೈನಲ್‌ ನಲ್ಲಿ ಸೋತಿದ್ದು ಒಳ್ಳೆಯದು. ಭಾರತ ಸೋತಿದ್ದಕ್ಕೆ ಕ್ರಿಕೆಟ್‌ ಗೆದ್ದಿತು ಎಂದು ಅವರು ಅಭಿಪ್ರಾಯಪಟ್ಟದ್ದಾರೆ. ಬ್ಯಾಟಿಂಗ್‌ ಬೌಲಿಂಗ್‌ ಎರಡರಲ್ಲಿಯೂ ಹೀನಾಯ ಪ್ರದರ್ಶನ ತೋರಿದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೬ ವಿಕೆಟ್‌ಗಳ ಸೋಲು ಅನುಭವಿಸಿತ್ತು. ೧೨ ವರ್ಷಗಳ ಕಪ್‌ ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು. ಇತ್ತ ಅತ್ಯುತ್ತಮ ಪ್ರದರ್ಶನ ತೋರಿದ ಆಸೀಸ್‌ ತವರು ನೆಲದಲ್ಲಿ ಭಾರತವನ್ನು ಮಣಿಸಿ ೬ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ರಝಾಕ್‌ ಹೇಳಿದೇನು? : ಪಾಕ್‌ ನ ಖಾಸಗಿ ಟಿವಿ ಶೋ ಒಂದರಲ್ಲಿ ಮಾತನಾಡಿದ್ದ ರಝಾಕ್‌, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಭಾರತ ಸೋಲಿನೊಂದಿಗೆ ಕ್ರಿಕೆಟ್‌ ಗೆದ್ದಿದೆ, ಏಕೆಂದರೆ ಭಾರತ ಅವರಿಗೆ ಬೇಕಾದ ಹಾಗೆ, ಅವರ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದರು. ಒಂದು ವೇಳೆ ಅವರು ಈ ಟೂರ್ನಿಯಲ್ಲಿ ಭಾರತ ಗೆದ್ದಿದ್ದರೇ ಕ್ರಿಕೆಟ್‌ ಮೇಲೆ ಅವರು ಪ್ರಾಬಲ್ಯ ಸಾಧಿಸುತ್ತಿದ್ದರು. ಭಾರತ ತಂಡ ಫೈನಲ್‌ ನಲ್ಲಿ ಗೆದ್ದಿದ್ದರೇ ನನಗೆ ನಿಜವಾಗಿಯೂ ಬೇಸವಾಗುತ್ತಿತ್ತು. ಕ್ರಿಕೆಟ್‌ ಧೈರ್ಯ ಮತ್ತು ಮಾನಸಿಕವಾಗಿ ಸದೃಡವಾಗಿರುವ ತಂಡಕ್ಕೆ ನೆರವಾಗುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಭಾರತ ಗೆದ್ದಿದ್ದರೆ ನಿಜವಾಗಿಯೂ ನಾವು ಪಶ್ಚಾತಾಪ ಪಡುತ್ತಿದ್ದೆವು. ಅವರಿಗೆ ಬೇಕಾದ ಹಾಗೆ ಕಂಡಿಷನ್‌ ನ್ನು ಸಂಪೂರ್ಣವಾಗಿ ಬಳಸಕೊಂಡಿದ್ದಾರೆ. ಸೆಮಿಸ್‌ ನಲ್ಲಿ ಬೃಹತ್‌ ಮೊತ್ತ ಕಲೆಹಾಕಿ, ಫೈನಲ್‌ನಲ್ಲಿ ನಿಧಾನಗತಿಯಿಂದ ಪಿಚ್‌ ಕೂಡಿತ್ತು. ಇಲ್ಲಿ ಒಂದು ತಪ್ಪು ನಡೆದಿದೆ ಎಂದು ನನಗನಿಸುತ್ತಿದೆ. ಪಿಚ್‌ಗಳು, ಅವುಗಳ ವಾತಾವರಣ ಎರಡು ತಂಡಗಳಿಗೆ ಸಮತೋಲನದಿಂದ ಕೂಡಿರಬೇಕು. ಕೊಹ್ಲಿ ಶತಕ ಸಿಡಿಸಿದ್ದರೆ ಭಾರತ ಅದರ ಲಾಭ ಟೀಂ ಇಂಡಿಯಾ ಪಡೆಯುತ್ತಿತ್ತು. ಆ ಮೂಲಕ ಕಪ್‌ ಗೆಲ್ಲುತ್ತಿದ್ದರು ಎಂದು ಅವರು ದೂರಿದ್ದಾರೆ.

ವಿಶ್ವಕಪ್‌ ಟೂರ್ನಿ ವೇಳೆ ಭಾರತದ ಮೇಲೆ ವಿಭಿನ್ನ ಚೆಂಡು ಬಳಕೆ, ಡಿಆರ್‌ಎಸ್‌, ಪಿಚ್‌ ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗಿತ್ತು.

andolanait

Recent Posts

ಡಿಕೆಶಿ ಸಂಪುಟದಲ್ಲಿ ಡಾ.ಎಚ್‌ಸಿಎಂ ಕೈ ಬಿಟ್ಟಿದ್ದಕ್ಕೆ ದಸಂಸ ತೀವ್ರ ಅಸಮಾಧಾನ

ಮೈಸೂರು:  ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ   ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…

3 hours ago

ನನ್ನ ಗೆಲುವು ಜೆಡಿಎಸ್ ಭಿಕ್ಷೆ ಅಲ್ಲ, ನಾಗಮಂಗಲ ಜನರ ಭಿಕ್ಷೆ : ಸಚಿವ ಚಲುವರಾಯಸ್ವಾಮಿ

ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…

4 hours ago

ಓದುಗರ ಪತ್ರ: ಪುಷ್ಪ ವೃಷ್ಟಿ..!

ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…

15 hours ago

ಓದುಗರ ಪತ್ರ: ರೈತ ಮಕ್ಕಳ ವಿದ್ಯಾಭ್ಯಾಸ ಶುಲ್ಕದಲ್ಲಿ

ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…

15 hours ago

ಓದುಗರ ಪತ್ರ: ಧಾರ್ಮಿಕ ಮುಖಂಡರು ರೈತರ ಬೆನ್ನಿಗೆ ನಿಲ್ಲಬೇಕು

ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…

15 hours ago

ಧ್ರುವೀಕರಣದ ನೆಲೆಗಟ್ಟಿನ ಮೇಲೆ ರಾಜ್ಯ ರಾಜಕಾರಣ

ಆರ್.‌ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ  ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…

15 hours ago