ಮುಂಬೈ: ರೋಚಕ ಸೂಪರ್ ಓವರ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯವನ್ನು 4 ರನ್ಗಳಿಂದ ಗೆಲ್ಲುವ ಮೂಲಕ 5 ಪಂದ್ಯಗಳ ಸರಣಿ 1-1 ರಲ್ಲಿ ಸಮವಾಗಿದೆ.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. 188 ರನ್ಗಳ ಗುರಿಯನ್ನು ಪಡೆದ ಭಾರತ 20 ಓವರ್ಗಳಲ್ಲಿ 187 ರನ್ ಗಳಿಸಿತು. ಪರಿಣಾಮ ಪಂದ್ಯ ಸೂಪರ್ ಓವರ್ನತ್ತ ತಿರುಗಿತು.
ಸೂಪರ್ ಓವರ್ ಹೇಗಿತ್ತು?
ಮೊದಲು ಬ್ಯಾಟ್ ಮಾಡಿದ ಭಾರತ ಪರ ರಿಚಾ ಘೋಷ್ ಮೊದಲ ಎಸೆತವನ್ನು ಸಿಕ್ಸರ್ಗೆ ಅಟ್ಟಿದರೆ ಎರಡನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಹೀದರ್ ಗ್ರಹಾಂ ಅವರ ಮೂರನೇ ಎಸೆತದಲ್ಲಿ ಕೌರ್ 1 ರನ್ ಓಡಿದರು. ನಂತರ ಮೂರು ಎಸೆತಗಳಲ್ಲಿ ಸ್ಮೃತಿ ಮಂಧಾನ 4, 6, 3 ರನ್ ಚಚ್ಚಿದ ಪರಿಣಾಮ ಭಾರತ 20 ರನ್ ಗಳಿಸಿತು.
ಭಾರತದ ಪರ ರೇಣುಕಾ ಸಿಂಗ್ ಬೌಲಿಂಗ್ ದಾಳಿಗೆ ಇಳಿದರು. ಮೊದಲ ಎಸೆತದಲ್ಲಿ ಬೌಂಡರಿ, ಎರಡನೇ ಎಸೆತದಲ್ಲಿ ಒಂಟಿ ರನ್ ಬಂತು. ಮೂರನೇ ಎಸೆತದಲ್ಲಿ ಗಾರ್ಡ್ನರ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಒಂದು ರನ್ ಬಂದರೆ ಕೊನೆಯ ಎರಡು ಎಸೆತವನ್ನು ಹೀಲಿ ಬೌಂಡರಿ ಮತ್ತು ಸಿಕ್ಸರ್ಗೆ ಅಟ್ಟಿದರು. ಅಂತಿಮವಾಗಿ ಆಸ್ಟ್ರೇಲಿಯಾ ಸೂಪರ್ ಓವರ್ನಲ್ಲಿ 16 ರನ್ ಮಾತ್ರ ಗಳಿಸಿತು.
ಪಂದ್ಯ ಟೈ ಆಗಿದ್ದು ಹೇಗೆ?
ಹೀದರ್ ಗ್ರಹಾಂ ಅವರ 19ನೇ ಓವರ್ನಲ್ಲಿ ಕೇವಲ 4 ರನ್ ಬಂದ ಕಾರಣ ಪಂದ್ಯ ರೋಚಕ ಘಟದತ್ತ ತಿರುಗಿತ್ತು. ಭಾರತಕ್ಕೆ ಕೊನೆಯ ಓವರ್ನಲ್ಲಿ 14 ರನ್ ಬೇಕಿತ್ತು, ಕ್ರೀಸ್ನಲ್ಲಿ ರಿಚಾ ಘೋಷ್ ಮತ್ತು ದೇವಿಕಾ ವೈದ್ಯಾ ಇದ್ದರು. ಮೊದಲ ಎಸೆತದಲ್ಲಿ ಘೋಷ್ 1 ರನ್ ಓಡಿದರೆ ಎರಡನೇ ಎಸೆತವನ್ನು ವೈದ್ಯ ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ 1 ರನ್ ಬಂದರೆ 4 ಮತ್ತು ಐದನೇ ಎಸೆತದಲ್ಲಿ ಘೋಷ್ 2 ಮತ್ತು 1 ರನ್ ಓಡಿದರು. ಕೊನೆಯ ಎಸೆತವನ್ನು ದೇವಿಕಾ ಬೌಂಡರಿಗೆ ಅಟ್ಟಿದ್ದರಿಂದ ಪಂದ್ಯ ಟೈ ಆಯ್ತು.
ಮೈಸೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ, ಅನುಭವಿ, ಹಾಗೂ ವೈಚಾರಿಕ ಪ್ರಜ್ಞೆಯ ಸಮರ್ಥ ದಲಿತ ರಾಜಕಾರಣಿಯಾಗಿದ್ದ ಮಾಜಿ…
ನಾಗಮಂಗಲ : ನಾಲ್ಕನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ಸ್ವಕ್ಷೇತ್ರ ನಾಗಮಂಗಲಕ್ಕೆ ಆಗಮಿಸಿದ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ…
ಪುಷ್ಪ ವೃಷ್ಟಿ..! ಅತಿವೃಷ್ಟಿ, ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ‘ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ ಕಾರಣ, ಅಲ್ಲಿಗಿಲ್ಲ ಮಂತ್ರಿ…
ರಿಯಾಯಿತಿಗೆ ಸರ್ಕಾರ ಕ್ರಮ ಕೈಗೊಳ್ಳಲಿ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನಿರೀಕ್ಷಿಸಿದಷ್ಟು ಮಳೆಯಿಲ್ಲದ ಕಾರಣ ಕೃಷಿ ಕ್ಷೇತ್ರ…
ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ…
ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕರ್ನಾಟಕದ ರಾಜಕಾರಣ ಧ್ರುವೀಕರಣದ ನೆಲೆಗಟ್ಟಿಗೆ ಬಂದು ತಲುಪಿದೆ. ಅಂದ ಹಾಗೆ ಧ್ರುವೀಕರಣಕ್ಕೆ ಅಸಮಾ ಧಾನ,ಅತೃಪ್ತಿ,ಭಿನ್ನಾಭಿಪ್ರಾಯಗಳೇ…