ಬರ್ಮಿಂಗ್ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ನ ಪುರುಷ ಟೇಬಲ್ ಟೆನ್ನಿಸ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಜ್ಞಾನಶೇಖರನ್ ಸತ್ಯಜಿತ್ ಕಂಚಿನ ಪದಕ ಗೆದ್ದಿದ್ದಾರೆ.
ಆತಿಥೇಯ ಇಂಗ್ಲೆಂಡ್ನ ಪೌಲ್ ಡ್ರಿಂಕ್ಹಾಲ್ ಅವರನ್ನು 4-3 (11-9, 11-3, 11-5, 11-8, 11-9, 10-12, 11-9) ಸೋಲಿಸುವ ಮೂಲಕ ಜಿ. ಸತ್ಯಜಿತ್ ಮೂರನೇ ಸ್ಥಾನ ಪಡೆದರು.
ಇದಕ್ಕೂ ಮುನ್ನ ಪಂದ್ಯದಲ್ಲಿ ಉತ್ತಮ ಆರಂಭವನ್ನು ಪಡೆದಿದ್ದ ಅವರು ಮಧ್ಯದಲ್ಲಿ ಪಾಯಿಂಟ್ಗಳನ್ನು ಕೈಚೆಲ್ಲಿದ್ದರು. ಆದರೆ, ನಿರ್ಣಾಯಕ ಗೇಮ್ನಲ್ಲಿ ತಿರುಗೇಟು ನೀಡುವ ಮೂಲ ಅಮೋಘ ಆಟ ಪ್ರದರ್ಶಿಸಿದರು. ಈ ಮೂಲಕ ಭಾರತಕ್ಕೆ ಮತ್ತೊಂದು ಪದಕವನ್ನು ತಂದುಕೊಟ್ಟಿದ್ದಾರೆ.
ಪೌಲ್ ಡ್ರಿಂಕ್ಹಾಲ್ ವಿರುದ್ದ ಅದ್ಭುತ ಆಟ ಪ್ರದರ್ಶಿಸಿದ ಸತ್ಯನ್, ಆರಂಭದಲ್ಲೇ ಸತತ ಮೂರು ಸೆಟ್ಗಳನ್ನು ಗೆದ್ದರು. ಆದರೆ ಆ ಬಳಿಕ ಕಂಬ್ಯಾಕ್ ಮಾಡಿದ ಪೌಲ್ ಕೂಡ ಮೂರು ಸೆಟ್ಗಳನ್ನು ಗೆದ್ದರು. ಈ ಮೂಲಕ 3-3 ಅಂತರದಿಂದ ಸಮಬಲ ಸಾಧಿಸಿದರು.
ಇದರಿಂದ ಪಂದ್ಯವು 7ನೇ ಸುತ್ತಿನತ್ತ ಸಾಗಿತು. ಇಲ್ಲಿ ಸತ್ಯನ್ ಉತ್ತಮ ಆರಂಭ ಪಡೆದು 7-1 ಮುನ್ನಡೆ ಪಡೆದರು. ಆದರೆ ಮತ್ತೊಮ್ಮೆ ಕಂಬ್ಯಾಕ್ ಮಾಡಿದ ಪೌಲ್ ಸ್ಕೋರ್ ಅನ್ನು 8-8 ಸಮಬಲಗೊಳಿಸಿದರು. ಅದಾಗ್ಯೂ ರೋಚಕ ಹೋರಾಟದಲ್ಲಿ ಅಂತಿಮವಾಗಿ ಕೇವಲ 2 ಪಾಯಿಂಟ್ಗಳ ಮುನ್ನಡೆಯೊಂದಿಗೆ ಸತ್ಯನ್ 11-9 ಅಂಕಗಳ ಮೂಲಕ ಜಯ ಸಾಧಿಸಿದರು. ಈ ಮೂಲಕ 4-3 ಅಂತರದಿಂದ ಗೆಲ್ಲುವ ಮೂಲಕ ಕಂಚಿನ ಪದಕಕ್ಕೆ ಕೊರೊಳ್ಳೊಡ್ಡಿದ್ದಾರೆ.
ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…
ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…
ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…
ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…
ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…