ಕ್ರೀಡೆ

ಏಷ್ಯನ್‌ ಗೇಮ್ಸ್‌| ಬಾಕ್ಸಿಂಗ್: ಒಲಿಂಪಿಕ್ಸ್ ನೇರ ಅರ್ಹತೆ ಪಡೆದ ಪ್ರೀತಿ ಪವಾರ್‌

ಹಾಂಗ್‌ಝೌ : ಭಾರತದ ಪ್ರೀತಿ ಪವಾರ್ ಅವರೂ ಬಾಕ್ಸಿಂಗ್‌ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಕೋಟಾ ಗಿಟ್ಟಿಸಿದರು. ಅವರೊಂದಿಗೆ, ಲವಿನಾ ಬೋರ್ಗೊಹೈನ್ ಕೂಡ ಶನಿವಾರ ಸೆಮಿಫೈನಲ್ ತಲುಪುವ ಮೂಲಕ ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಪದಕಗಳನ್ನು ಖಚಿಪಡಿಸಿಕೊಂಡರು.

19 ವರ್ಷದ ಪ್ರೀತಿ 54 ಕೆ.ಜಿ. ವಿಭಾಗದಲ್ಲಿ ಆತ್ಮವಿಶ್ವಾಸದಿಂದ ಕಣಕ್ಕಿಳಿದು ಏಷ್ಯನ್ ಚಾಂಪಿಯನ್ ಆಗಿರುವ ಕಜಕಸ್ತಾನದ ಮೈನಾ ಶೇಖೆರ್‌ಬೆಕೋವಾ ಅವರನ್ನು ಉತ್ತಮ ಹಣಾಹಣಿಯ ಹೋರಾಟದಲ್ಲಿ 4-1 ರಿಂದ ಸೋಲಿಸಿದರು. ಶೇಖೆರ್‌ಬೆಕೋವಾ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬಾರಿ ಪದಕ ಗೆದ್ದುಕೊಂಡಿದ್ದಾರೆ.

75 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ, ಟೋಕಿಯೊ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಲವಿನಾ ನಿರೀಕ್ಷೆಯಂತೆ ದಕ್ಷಿಣ ಕೊರಿಯದ ಸಿಯೊಂಗ್ ಸುಯೋನ್ ಅವರನ್ನು 5-0 ಯಿಂದ ರೆಫ್ರಿಗಳ ಒಮ್ಮತದ ನಿರ್ಧಾರದಲ್ಲಿ ಜಯಗಳಿಸಿದರು. ಈ ವಿಭಾಗದಲ್ಲಿ ಫೈನಲ್ ತಲುಪಿದರೆ ಲವಿನಾ ಅವರೂ ಒಲಿಂಪಿಕ್ ಕೋಟಾಕ್ಕೆ ಅರ್ಹರಾಗುತ್ತಾರೆ.

ನಿಖತ್ ಝರೀನ್ ಅವರು ಶುಕ್ರವಾರ ಈ ಕೂಟದಲ್ಲಿ ಒಲಿಂಪಿಕ್ ಕೋಟಾದಡಿ ಅರ್ಹತೆ ಪಡೆದ ಭಾರತದ ಮೊದಲ ಬಾಕ್ಸರ್ ಎನಿಸಿದ್ದರು.

ಮಹಿಳೆಯರ ವಿಭಾಗದ ಸ್ಪರ್ಧೆಗಳಲ್ಲಿ 50 ಕೆ.ಜಿ., 54 ಕೆ.ಜಿ, 57 ಕೆ.ಜಿ. ಮತ್ತು 60 ಕೆ.ಜಿ. ವಿಭಾಗಗಳಲ್ಲಿ ಸೆಮಿಫೈನಲ್ ತಲುಪಿದವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ. 66 ಕೆ.ಜಿ. 75 ಕೆ.ಜಿ. ವಿಭಾಗದಲ್ಲಿ ಫೈನಲ್ ತಲುಪಿದವರು ಮಾತ್ರ ಅರ್ಹತೆ ಪಡೆಯುತ್ತಾರೆ.

ಪುರುಷರ ವಿಭಾಗದ ಏಳು ತೂಕ ವಿಭಾಗಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದ ಬಾಕ್ಸಿಂಗ್ ಪಟುಗಳು ಒಲಿಂಪಿಕ್ಸ್ ಕೋಟಾದಡಿ ಆಯ್ಕೆಯಾಗುತ್ತಾರೆ.

andolanait

Recent Posts

ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್

ಬೆಳ್ಳಿ ಖಡ್ಗ, ದೇವಿಗೆ ರೇಷ್ಮೆ ಸೀರೆ ಅರ್ಪಿಸಿ ವಿಶೇಷ ಪೂಜೆ, ಪ್ರಾರ್ಥನೆ ಉಡುಪಿ : ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್…

6 hours ago

ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಇಲ್ಲ

ಹಿಂದಿನ ವರ್ಷದ ಶುಲ್ಕವೇ ಈ ವರ್ಷಕ್ಕೂ ಅನ್ವಯ   ಬೆಂಗಳೂರು :  ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ, ದಂತ ವೈದ್ಯಕೀಯ,…

8 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ | ಪ್ರೇಕ್ಷಕ ಚಿತ್ರಮಂದಿರದಿಂದ ವಿಮುಖನಾಗುತ್ತಿದ್ದಾನೆಯೇ?

ಸಾಮಾಜಿಕ ತಾಣಗಳಲ್ಲಿ, ನವ ಮಾಧ್ಯಮಗಳಲ್ಲಿ ಅವರವರ ಭಾವಕ್ಕೆ ಅವರವರ ಅನುಭವಕ್ಕೆ ತಕ್ಕಂತೆ ಜಿಜ್ಞಾಸೆ ನಡೆದಿದೆ. ಚಿತ್ರಮಂದಿರಗಳಿಂದ ಪ್ರೇಕ್ಷಕ ದೂರವಾಗುತ್ತಿದ್ದಾನೆ; ಅವನನ್ನು…

12 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜೂನ್‌ 12 ಶುಕ್ರವಾರ

15 hours ago

ಮಳವಳ್ಳಿ | ಚಿರತೆ ಪ್ರತ್ಯಕ್ಷ ; ಆತಂಕ

ಮಳವಳ್ಳಿ: ತಾಲ್ಲೂಕಿನ ತಳಗವಾದಿ ಗ್ರಾಮಕ್ಕೆ ಹೊಂದುಕೊಂಡಂತೆ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ. ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಮೀಪವೇ…

1 day ago

ಎಚ್.ಸಿ.ಮಹದೇವಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಬೆಂಗಳೂರು : ಕರ್ನಾಟಕದ ಪ್ರಭಾವಿ ದಲಿತ ಸಮುದಾಯದ ನಾಯಕ ಹಾಗೂ ಮಾಜಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ ಅವರಿಗೆ ಮುಖ್ಯಮಂತ್ರಿ ಡಿ.ಕೆ…

1 day ago