ಕ್ರೀಡೆ

400 ಮೀ. ಮೆಡ್ಲೆ ರಿಲೆ ಈಜು: ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಭಾರತ ತಂಡಕ್ಕೆ ಐದನೇ ಸ್ಥಾನ

ಹಾಂಗ್‌ಝೌ : ‘ಬ್ರೆಸ್ಟ್ ಸ್ಟೋಕ್ ದೊರೆ’ ಎನಿಸಿರುವ ಕ್ವಿನ್ ಹೈಯಾಂಗ್ ಅವರ ಅತ್ಯುತ್ತಮ ಪ್ರದರ್ಶನದ ನೆರವಿನಿಂದ ಚೀನಾ ತಂಡ ಏಷ್ಯನ್ ಗೇಮ್ಸ್‌ನ ಈಜು ಸ್ಪರ್ಧೆಯ 4×100 ಮೀ. ಮೆಡ್ಲೆ ರಿಲೆಯಲ್ಲಿ ಏಷ್ಯನ್ ದಾಖಲೆಯೊಡನೆ ಚಿನ್ನ ಗೆದ್ದುಕೊಂಡಿತು. ಬೆಳಿಗ್ಗೆ ಹೀಟ್ಸ್‌ನಲ್ಲಿ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ್ದ ಭಾರತ ತಂಡ ಮಂಗಳವಾರ ಸಂಜೆ ನಡೆದ ಈ ಸ್ಪರ್ಧೆಯ ಫೈನಲ್‌ನಲ್ಲಿ ಐದನೇ ಸ್ಥಾನಕ್ಕೆ ಸರಿಯಿತು.

ಕ್ವಿನ್, ಷು ಜಿಯಾವು, ವಾಂಗ್ ಚಾಂಗ್ ಹಾವೊ ಮತ್ತು ಪಾನ್ ಝಾನ್ ಅವರಿದ್ದ ತಂಡ 39.27.1 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರೈಸಿ ಈಜುಕೊಳದಲ್ಲಿ ಚೀನಾ ಪಾರಮ್ಯವನ್ನು ಮುಂದುವರಿಸಿತು. ದಕ್ಷಿಣ ಕೊರಿಯಾ (3:32.05) ಮತ್ತು ಜಪಾನ್ (3:32.52) ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು.

ಚೀನಾ ತೈಪೆ 3ನಿ.38.35 ಸೆ. ತೆಗೆದುಕೊಂಡರೆ, ಭಾರತ ತಂಡ (ಶ್ರೀಹರಿ ನಟರಾಜ್, ಲಿಖಿತ್ ಸೆಲ್ವರಾಜ್, ಸಜನ್ ಪ್ರಕಾಶ್ ಮತ್ತು ತನಿಶ್ ಜಾರ್ಜ್) 3ನಿ.40.20 ಸೆ.ಗಳಲ್ಲಿ ಗುರಿಮುಟ್ಟಿತು.

ಬೆಳಿಗ್ಗೆ ಒಂದನೇ ಹೀಟ್ಸ್‌ನಲ್ಲಿ ಭಾರತ ತಂಡ 3 ನಿ. 40.84 ಸೆ.ಗಳಲ್ಲಿ ಗುರಿತಲುಪಿ

ರಾಷ್ಟ್ರೀಯ ದಾಖಲೆ ಸ್ಥಾಪಿಸಿತ್ತು. ಆ ಹಾದಿಯಲ್ಲಿ ಒಟ್ಟಾರೆ ನಾಲ್ಕನೇ ಉತ್ತಮ

ಟೈಮಿಂಗ್‌ನೊಡನೆ ಫೈನಲ್‌ಗೆ ಅರ್ಹತೆ ಪಡೆದಿತ್ತು.

ಈ ಹಿಂದಿನ ದಾಖಲೆ (ನಟರಾಜ್, ಸಂದೀಪ್ ಸೆಜ್ವಾಲ್, ಸಜನ್ ಪ್ರಕಾಶ್, ಆ್ಯರನ್ ಡಿಸೋಜ ತಂಡದಿಂದ 3:44.94) 2018ರ ಕ್ರೀಡೆಗಳಲ್ಲಿ ಮೂಡಿಬಂದಿತ್ತು.

ಭಾರತದ ಪಲಕ್ ಜೋಶಿ ಮತ್ತು ಶಿವಾಂಗಿ ಶರ್ಮಾ ತಮ್ಮ ಸ್ಪರ್ಧೆಗಳಲ್ಲಿ ಫೈನಲ್‌ಗೇರಲು ವಿಫಲರಾದರು. ಪಲಕ್, ಮಹಿಳೆಯರ 200 ಮೀ. ಬ್ಯಾಕ್‌ಸ್ಟೋಕ್ ಸ್ಪರ್ಧೆಯಲ್ಲಿ (ಕಾಲ: 2:25.81) 19 ಮಂದಿ ಪೈಕಿ 14ನೇ ಸ್ಥಾನ ಪಡೆದರೆ, ಶಿವಾಂಗಿ 100 ಮೀ. ಫ್ರೀಸ್ಟೈಲ್‌ನಲ್ಲಿ 58.31 ಸೆ.ಗಳಲ್ಲಿ ಗುರಿತಲುಪಿ 17ನೇ ಸ್ಥಾನ ಗಳಿಸಿದರು.

andolanait

Recent Posts

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು 60 ಇಂಡಿಗೋ ವಿಮಾನಗಳ ಹಾರಾಟ ರದ್ದು

ಬೆಂಗಳೂರು: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇಂದು ಕೂಡ 60 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ…

2 mins ago

ಓದುಗರ ಪತ್ರ:  ನಂಜನಗೂಡಿನ ಪ್ರಮುಖ ವೃತ್ತಕ್ಕೆ ಬಿ.ವಿ.ಪಂಡಿತರ ಹೆಸರಿಡಿ

ನಂಜನಗೂಡಿನ ಸದ್ವೈದ್ಯ ಶಾಲಾ ಸಂಸ್ಥಾಪಕರಾಗಿದ್ದ ಬಿ.ವಿ.ಪಂಡಿತರು ಆಯುರ್ವೇದ ಉತ್ಪನ್ನಗಳನ್ನು ರೂಪಿಸಿದ ಹಿರಿಮೆ ಹೊಂದಿದ್ದಾರೆ. ದಂತಧಾವನ ಚೂರ್ಣ (ನಂಜನಗೂಡು ಹಲ್ಲು ಪುಡಿ)…

14 mins ago

ಓದುಗರ ಪತ್ರ:  ಭೈರಪ್ಪ ಸ್ಮಾರಕ, ತಿಮ್ಮಕ್ಕ ವಸ್ತು ಸಂಗ್ರಹಾಲಯ ಸ್ವಾಗತಾರ್ಹ

ಮೈಸೂರಿನಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕ ನಿರ್ಮಾಣ ಹಾಗೂ ಬೇಲೂರಿನಲ್ಲಿ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ವಸ್ತು ಸಂಗ್ರಹಾಲಯ…

20 mins ago

ಓದುಗರ ಪತ್ರ:  ಗೋಪಾಲಸ್ವಾಮಿ ಬೆಟ್ಟದ ಬಸ್ ಪ್ರಯಾಣ ದರ ಇಳಿಕೆ ಮಾಡಿ

ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಇತಿಹಾಸ ಪ್ರಸಿದ್ಧ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ಪ್ರವೇಶವಿರುವುದಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ…

24 mins ago

ಓದುಗರ ಪತ್ರ: ಮಸೂದೆ ಅಂಗೀಕಾರಕ್ಕಷ್ಟೇ ವಿಧಾನಸಭೆ ಅಧಿವೇಶನ ಸೀಮಿತವಾಗದಿರಲಿ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಆರಂಭವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸದನದಲ್ಲಿ ಯಾವುದೇ ವಿಷಯ, ಜನರ ಸಮಸ್ಯೆ, ಮಸೂದೆಗಳ ಬಗ್ಗೆ ರಚನಾತ್ಮಕ ಚರ್ಚೆ…

26 mins ago

ಥಿಯೇಟರ್‌ಗಳಲ್ಲಿ ಡೆವಿಲ್‌ ಅಬ್ಬರ: ದರ್ಶನ್‌ ಅಭಿಮಾನಿಗಳ ಸಂಭ್ರಮ

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಡೆವಿಲ್‌ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗಿದ್ದು, ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.…

28 mins ago